Latest posts

All

Popular

ಕಾರ್ಯಕರ್ತನೇ ಬಿಜೆಪಿಯ ಶಕ್ತಿ, ನಾಯಕತ್ವದ ಮೂಲ: ಡಾ. ರವಿ ಸಿ.ಟಿ
ನಾವಿದ್ದೀವಿ..ಟಕ್ಕರ್ ಕೊಡ್ತೀವಿ…!
ಬೆಳಗಾವಿಯಲ್ಲಿ ಸೈಬರ್ ಜಾಲ ಬಯಲು: 72 ಖಾತೆಗಳಿಂದ ₹1.27 ಕೋಟಿ ವಂಚನೆ!
ಅವಳ‌ ಸಾವಿಗೆ ಬರೀ ಅನುಕಂಪ ಬೇಡ…!

ಕಾರ್ಯಕರ್ತನೇ ಬಿಜೆಪಿಯ ಶಕ್ತಿ, ನಾಯಕತ್ವದ ಮೂಲ: ಡಾ. ರವಿ ಸಿ.ಟಿ

ಹುಕ್ಕುಂದದಲ್ಲಿ ನಡೆದ ಕಾರ್ಯಕ್ರಮ .ಚಿಕ್ಕಮಗಳೂರು:“ಬಿಜೆಪಿ ಎಂದರೆ ಕಾರ್ಯಕರ್ತರ ಪಕ್ಷ. ಇಲ್ಲಿ ಕಾರ್ಯಕರ್ತರೇ ಬೆಳೆದು ನಾಯಕತ್ವದ ಹಂತಕ್ಕೇರುತ್ತಾರೆ” ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ ಹೇಳಿದರು.ಚಿಕ್ಕಮಗಳೂರು ಗ್ರಾಮಾಂತರ ಮಂಡಲದ ನೇತೃತ್ವದಲ್ಲಿ ಹುಕ್ಕುಂದದಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗದ ಸಮಾರೋಪದಲ್ಲಿ ಅವರು ಮಾತನಾಡಿದರು. ನಾನು 1988ರಲ್ಲಿ ಬೂತ್ ಕಮಿಟಿ ಅಧ್ಯಕ್ಷನಾಗಿದ್ದೆ. ಪಕ್ಷ ಕೊಟ್ಟ ಜವಾಬ್ದಾರಿಗಳೇ ನನ್ನನ್ನು ಬೆಳೆಸಿವೆ. ಯಡಿಯೂರಪ್ಪ, ನರೇಂದ್ರ ಮೋದಿ, ಎಲ್.ಕೆ. ಅಡ್ವಾಣಿ, ದೇವೇಂದ್ರ ಫಡ್ನವಿಸ್ ಮೊದಲಾದವರು ಕಾರ್ಯಕರ್ತರ ಹಂತದಿಂದಲೇ ಮೇಲಕ್ಕೆ ಬಂದವರು”…

Read More

ನಾವಿದ್ದೀವಿ..ಟಕ್ಕರ್ ಕೊಡ್ತೀವಿ…!

ಎಂಇಎಸ್ ಸದ್ದು ಹೆಚ್ಚಾದಷ್ಟೂ ಪಾಲಿಕೆಯಲ್ಲಿ ಗಟ್ಟಿಯಾಗುತ್ತಿದೆ ಕನ್ನಡಪರ ಪ್ರತಿಧ್ವನಿ. ರಮೇಶ ಸೊಂಟಕ್ಕಿ-ಡಾ. ದಿನೇಶ ನಾಶಿಪುಡಿ ಸ್ಪಷ್ಟ ಘೋಷಣೆ. ನಾವ್ ರೆಡಿ… ಈಗ ಹಿಂಜರಿಯೋದಿಲ್ಲ” ಕನ್ನಡ ನಾಡು-ನುಡಿ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಪಾಲಿಕೆಯಲ್ಲಿ ಮಂಡಿಸಲು ನಾವು ಸಿದ್ಧ. ಮಹಾಜನ ವರದಿಯೇ ಅಂತಿಮ ಎಂಬ ನಿಲುವು ವಿಧಾನಮಂಡಲದಲ್ಲಿ ಈಗಾಗಲೇ ದಾಖಲಾಗಿದೆ. ಅದೇ ಧ್ವನಿಯನ್ನು ಪಾಲಿಕೆಯೊಳಗೂ ಸ್ಪಷ್ಟವಾಗಿ ದಾಖಲಿಸುವ ಸಮಯ ಬಂದಿದೆ.— ರಮೇಶ ಸೊಂಟಕ್ಕಿ— ಡಾ. ದಿನೇಶ ನಾಶಿಪುಡಿನಾಮನಿರ್ದೇಶಿತ ಸದಸ್ಯರು,…

Read More

ಬೆಳಗಾವಿಯಲ್ಲಿ ಸೈಬರ್ ಜಾಲ ಬಯಲು: 72 ಖಾತೆಗಳಿಂದ ₹1.27 ಕೋಟಿ ವಂಚನೆ!

ಬೆಳಗಾವಿ ನಗರ ಸೈಬರ್ ಅಪರಾಧ ಪೊಲೀಸರು ಭಾರೀ ಸೈಬರ್ ವಂಚನೆ ಜಾಲವನ್ನು ಭೇದಿಸಿದ್ದು, ಅಮಾಯಕ ಜನರ ಹೆಸರಲ್ಲಿ ತೆರೆದಿದ್ದ 72 ಬ್ಯಾಂಕ್ ಖಾತೆಗಳನ್ನು ‘ಮ್ಯೂಲ್ ಅಕೌಂಟ್’ಗಳಾಗಿ ಬಳಸಿ ₹1.27 ಕೋಟಿ ವಂಚನೆ ನಡೆಸಿರುವುದು ಪತ್ತೆಯಾಗಿದೆ.‘ವರ್ಕ್ ಫ್ರಾಂ ಹೋಮ್’ ಉದ್ಯೋಗ, ಸರ್ಕಾರದ ಸಾಲ ಸೌಲಭ್ಯ ಕೊಡಿಸುತ್ತೇವೆ ಎಂದು ನಂಬಿಸಿ ಖಾತೆಗಳನ್ನು ತೆರೆಸಲಾಗುತ್ತಿತ್ತು. ಬಳಿಕ ಆ ಖಾತೆಗಳ ಮೂಲಕ ಮೋಸದ ಹಣ ವರ್ಗಾವಣೆ ಮಾಡಲಾಗುತ್ತಿತ್ತು. 22 ಫೆಬ್ರವರಿ 2026ರಂದು ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ ಈ ಜಾಲ ಬೆಳಕಿಗೆ ಬಂದಿದೆ. ಪೊಲೀಸರು…

Read More

ಅವಳ‌ ಸಾವಿಗೆ ಬರೀ ಅನುಕಂಪ ಬೇಡ…!

ಇ ಬೆಳಗಾವಿ‌ ವಿಶೇಷ ಅವ್ವಕ್ಕ ಕೋಲಕಾರ ಅವರ ಸಾವಿನ ಬಳಿಕ ಉಳಿದಿರುವುದು ಕೇವಲ ಖಾಲಿ ಸ್ಥಾನವಲ್ಲ;ಅದು ಒಂದು ಮನೆಯ ನಿಶ್ಶಬ್ದ ಕಳವಳ. ಪ್ರತಿದಿನ ದುಡಿದು ಮನೆಗೆ ಆಧಾರವಾಗಿದ್ದ ಕೈಗಳು ಏಕಾಏಕಿ ನಿಂತುಹೋದಾಗ, ಆ ಮನೆಯೊಳಗೆ ಮೊದಲು ಕೇಳಿಬರುವುದು ಅಳುವ ಧ್ವನಿಯಲ್ಲ — “ಇನ್ನು ಮುಂದೆ ಏನು?” ಎಂಬ ಭಯದ ಪ್ರಶ್ನೆ. ಬಡ ಕುಟುಂಬಗಳಿಗೆ ಬದುಕು ದಿನಗೂಲಿ ಮೇಲೆ ನಿಂತಿರುತ್ತದೆ. ಅಂಥ ಮನೆಯ ಒಂದು ಜೀವ ಕರ್ತವ್ಯದ ನಡುವೆ ಕಳೆದುಹೋದರೆ, ಅದರ ಪರಿಣಾಮ ಕುಟುಂಬದ ಊಟದ ತಟ್ಟೆಯಿಂದ ಮಕ್ಕಳ…

Read More

ಮಹಾ ಪರ ಭಂಡರಿಗೆ ಬೆಳಗಾವಿಯ ಕನ್ನಡಿಗರು ಕೊಡುವ ಉತ್ತರ ಯಾವಾಗಲೂ ಕಠಿಣವೇ…!

ಎಂಇಎಸ್ ಮತ್ತೆ ಮಹಾ ಪರ ಠರಾವ್ ಹೆಸರಿನಲ್ಲಿ ಉದ್ರೇಕದ ರಾಜಕಾರಣ ವಿಜಯ ಮೋರೆ ಪ್ರಕರಣ ಇನ್ನೂ ಬೆಳಗಾವಿಯ ರಾಜಕೀಯ ನೆನಪಿನಲ್ಲಿ ಜೀವಂತ. ಹಿಂದೆ ಸವಾಲು ಹಾಕಿದವರಿಗೆ ಇತಿಹಾಸವೇ ಉತ್ತರ ಕೊಟ್ಟಿದೆ. ಈಗ ಮತ್ತೆ ಅದೇ ಆಟ ಆಡಿದರೆ ಕನ್ನಡಿಗರ ಮನಸ್ಸೇ ಅಂತಿಮ ತೀರ್ಪು ನೀಡಲಿದೆ. ಬೆಳಗಾವಿ:ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಎಂಇಎಸ್ ನಗರಸೇವಕರಿಂದ ಕೇಳಿಬಂದಿರುವ ಮಹಾ ಪರ ಠರಾವ್ ಸವಾಲು ಸಾಮಾನ್ಯ ರಾಜಕೀಯ ಹೇಳಿಕೆ ಅಲ್ಲ. ಅದು ಕನ್ನಡಿಗರ ಸಹನೆಯನ್ನು ಕೆಣಕುವ, ಬೆಳಗಾವಿಯ ಶಾಂತ ವಾತಾವರಣವನ್ನು ರಾಜಕೀಯ…

Read More

ಸ್ವಚ್ಚತಾ ಕರ್ತವ್ಯದಲ್ಲೇ ಜೀವ ಬಲಿ

ಸ್ವಚ್ಚತಾ ಕರ್ತವ್ಯದಲ್ಲೇ ಜೀವ ಬಲಿಅನಗೋಳ ನಾಕಾ ಬಳಿ ಪಾಲಿಕೆ ಪೌರಕಾರ್ಮಿಕಿ ಅವ್ವಕ್ಕ ಕೋಲಕಾರ ದುರ್ಮರಣ ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾಗಿದ್ದ ಚಾಲಕ; ಬಳಿಕ ಪೊಲೀಸ್ ವಶಕ್ಕೆ. ಬೆಳಗಾವಿ: ನಗರದ ಸ್ವಚ್ಚತೆಗೆ ಮುಂಜಾನೆಲೇ ರಸ್ತೆಗಿಳಿದಿದ್ದ ಪಾಲಿಕೆ ಪೌರಕಾರ್ಮಿಕಿ ಅವ್ವಕ್ಕ ಕೋಲಕಾರ ಅವರು, ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಅನಗೋಳ ನಾಕಾ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.ಮಾಹಿತಿಯ ಪ್ರಕಾರ, ಅವ್ವಕ್ಕ ಕೋಲಕಾರ ಅವರು ಎಂದಿನಂತೆ ಬೆಳಿಗ್ಗೆ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದಾಗ…

Read More

ಮೋರೆ ಠರಾವ್ಗೆ ‘ಪ್ರೀತಿ’ ಪ್ರತ್ಯುತ್ತರ ಏನು?

ಏಕೆ ಈ ನಿರ್ಣಯ?.2005ರ ಮಹಾರಾಷ್ಟ್ರ ಪರ ಗೊತ್ತುವಳಿಗೆ ಪ್ರತಿರೋಧದ ರಾಜಕೀಯ ಉತ್ತರ.ಸುಪ್ರೀಂ ಕೋರ್ಟ್‌ಗೆ ಕರ್ನಾಟಕದ ಪರ ಸ್ಪಷ್ಟ ಸ್ಥಳೀಯ ಸಂದೇಶ.“ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಘೋಷಣೆಗೆ ಸಂಸ್ಥಾತ್ಮಕ ಬಲ.ಕನ್ನಡಿಗರ ಭಾವನೆಗೆ ಪಾಲಿಕೆಯಿಂದ ಅಧಿಕೃತ ಮುದ್ರೆ ಬೆಳಗಾವಿ ಪಾಲಿಕೆಯಲ್ಲಿ ಕನ್ನಡದ ಘೋಷಣೆ ಮೊಳಗಲಿ..!. ಮಹಾಜನ ವರದಿಯೇ ಅಂತಿಮ’, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ನಿರ್ಣಯಕ್ಕೆ ಒತ್ತಾಯ ಬೆಳಗಾವಿ,ಕರ್ನಾಟಕ–ಮಹಾರಾಷ್ಟ್ರ ಗಡಿವಿವಾದ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹೊತ್ತಿನಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯ ಸರ್ವಸಾಧಾರಣ ಸಭೆಯಲ್ಲೇ ಕರ್ನಾಟಕ ಪರ ಘನ…

Read More

ಸುವರ್ಣ ಸೌಧದಲ್ಲಿ ಬದ್ಧ ‘ವೈರಿಗಳ’ ಸಂಗಮ

ಸತೀಶ್ ಜಾರಕಿಹೊಳಿ–ಅಭಯ ಪಾಟೀಲ ಅಕ್ಕಪಕ್ಕ; ರಾಜಕೀಯ ವಲಯದಲ್ಲಿ ಕುತೂಹಲದ ಚರ್ಚೆ. ಒಂದೇ ವೇದಿಕೆ… ಅಕ್ಕಪಕ್ಕ ಆಸನ… ಆದರೆ ಮನಸ್ಸಿನ ಅಂತರ ಯಥಾಸ್ಥಿತಿ!. (e belagavi SPL report). ಬೆಳಗಾವಿ,ಗಡಿನಾಡ ಬೆಳಗಾವಿ ರಾಜಕೀಯದಲ್ಲಿ ಪರಸ್ಪರ ವಿರುದ್ಧ ಧ್ರುವಗಳೆಂದೇ ಗುರುತಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಅಭಯ ಪಾಟೀಲ ಇಂದು ಸುವರ್ಣಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ, ಅದೂ ಅಕ್ಕಪಕ್ಕ ಕಾಣಿಸಿಕೊಂಡ ಕ್ಷಣ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ.ಸಾಮಾನ್ಯವಾಗಿ ಬೇರೆ ಬೇರೆ ರಾಜಕೀಯ ಹಾದಿಗಳಲ್ಲಿ ನಡೆಯುವ, ಹಲವು…

Read More

ಸ್ಮಾರ್ಟ ಸಿಟಿಗೆ ಖಡಕ್ ವಾರ್ನಿಂಗ್..

ಬೆಳಗಾವಿ: ಬೆಳಗಾವಿಯ ಮಹತ್ವಾಕಾಂಕ್ಷಿ CITIIS 2.0 ಯೋಜನೆ ಅನುಷ್ಠಾನ ಮತ್ತೆ ಗಂಭೀರ ಗೊಂದಲಕ್ಕೆ ಸಿಲುಕಿದೆ. ಯೋಜನೆಯ ಕ್ರಿಯಾ ಯೋಜನೆ ಇನ್ನೂ ಅಂತಿಮಗೊಂಡಿಲ್ಲ, ಕೆಯುಐಡಿಎಫ್‌ಸಿ ಕಚೇರಿಗೂ ಸಲ್ಲಿಕೆಯಾಗಿಲ್ಲ ಎಂಬ ಸಂಗತಿ ಅಧಿಕೃತವಾಗಿ ಹೊರಬಿದ್ದ ಹಿನ್ನೆಲೆಯಲ್ಲಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (KUIDFC) ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್‌ಗೆ ಕಠಿಣ ಎಚ್ಚರಿಕೆ ನೀಡಿದೆ. ಈ ಕೂಡಲೇ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಿ ಸಲ್ಲಿಸಬೇಕು. ಇಲ್ಲವಾದರೆ ಯೋಜನೆ ವಿಳಂಬಕ್ಕೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಕೆಯುಐಡಿಎಫ್‌ಸಿ ತನ್ನ ಪತ್ರದಲ್ಲಿ…

Read More

ಬೆಳಗಾವಿಯಲ್ಲೂ ಪೆಟ್ರೋಲ್ ಪಂಪ್‌ಗಳ ಮುಂದೆ ವಾಹನಗಳ ಸಾಲು ಸಾಲು

ಯುದ್ಧದ ಭೀತಿ… ಬೆಳಗಾವಿಯಲ್ಲೂ ಪೆಟ್ರೋಲ್ ಪಂಪ್‌ಗಳ ಮುಂದೆ ವಾಹನಗಳ ಸಾಲು ಸಾಲು. ಇಂಧನ ಕೊರತೆ ವದಂತಿಗೆ ಜನರಲ್ಲಿ ಆತಂಕ; “ಮೊದಲು ಟ್ಯಾಂಕ್ ಫುಲ್” ಮನೋಭಾವದಿಂದ ಪಂಪ್‌ಗಳತ್ತ ದೌಡು. ಬೆಳಗಾವಿ: ಯುದ್ಧದ ಭೀತಿ, ಇಂಧನ ಕೊರತೆ ಉಂಟಾಗಬಹುದು ಎಂಬ ಅನುಮಾನ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಂದೇಶಗಳು—ಈ ಎಲ್ಲದರಿಂದ ಬೆಳಗಾವಿಯಲ್ಲೂ ಪೆಟ್ರೋಲ್ ಪಂಪ್‌ಗಳ ಮುಂದೆ ವಾಹನಗಳ ಸಾಲುಗಳು ಕಾಣಿಸತೊಡಗಿವೆ. “ನಾಳೆ ಇಂಧನ ಸಿಗದಿದ್ದರೆ?” ಎಂಬ ಆತಂಕದಲ್ಲಿ ವಾಹನ ಸವಾರರು ಪಂಪ್‌ಗಳತ್ತ ಧಾವಿಸುತ್ತಿರುವ ದೃಶ್ಯ ಹಲವೆಡೆ ಗಮನಸೆಳೆದಿದೆ. ನಗರದ ಪ್ರಮುಖ ಪೆಟ್ರೋಲ್…

Read More
error: Content is protected !!