ಪಾಲಿಕೆಯಲ್ಲಿ PID ಬಾಂಬ್…!
ಅಕ್ರಮ ಆಸ್ತಿಗಳಿಗೆ ಸಂಖ್ಯೆ ಕೊಟ್ಟವರು ಯಾರು?ಅಧಿಕಾರಿಗಳಷ್ಟೇ ಅಲ್ಲ, ಒತ್ತಡದ ಸೂತ್ರಧಾರರ ಮೇಲೂ ಕ್ರಮಕ್ಕೆ ಆಗ್ರಹ ಬೆಳಗಾವಿ: ಅಕ್ರಮ ಆಸ್ತಿಗಳಿಗೆ ಪಿಐಡಿ…
ಅಕ್ರಮ ಆಸ್ತಿಗಳಿಗೆ ಸಂಖ್ಯೆ ಕೊಟ್ಟವರು ಯಾರು?ಅಧಿಕಾರಿಗಳಷ್ಟೇ ಅಲ್ಲ, ಒತ್ತಡದ ಸೂತ್ರಧಾರರ ಮೇಲೂ ಕ್ರಮಕ್ಕೆ ಆಗ್ರಹ ಬೆಳಗಾವಿ: ಅಕ್ರಮ ಆಸ್ತಿಗಳಿಗೆ ಪಿಐಡಿ ನೀಡಿದ ಪ್ರಕರಣ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಗದ್ದಲ ಎಬ್ಬಿಸಿದೆ. ಅಧಿಕಾರಿಗಳಿಗೆ ನೋಟಿಸ್ ನೀಡಿರುವುದಾಗಿ ಆಡಳಿತ ತಿಳಿಸಿದರೂ, ಸದಸ್ಯರು ಇದನ್ನು ಸಾಲದು ಎಂದಿದ್ದಾರೆ. “ಅಕ್ರಮ ಪಿಐಡಿ ಹಿಂದೆ ಯಾರು ಇದ್ದಾರೆ, ಯಾರ ಒತ್ತಡ ಕೆಲಸ ಮಾಡಿದೆ, ನಕಲಿ ದಾಖಲೆ ನೀಡಿದವರು ಯಾರು?” ಎಂಬ ಪ್ರಶ್ನೆಗಳನ್ನು ಸಭೆಯಲ್ಲಿ ತೀವ್ರವಾಗಿ ಎತ್ತಲಾಯಿತು. ತಪ್ಪಿತಸ್ಥ ಅಧಿಕಾರಿಗಳ ಜೊತೆಗೇ ಅಕ್ರಮ ಪಿಐಡಿ ಮಾಡಿಸಿಕೊಂಡ…
ಏಕೆ ಈ ನಿರ್ಣಯ?.2005ರ ಮಹಾರಾಷ್ಟ್ರ ಪರ ಗೊತ್ತುವಳಿಗೆ ಪ್ರತಿರೋಧದ ರಾಜಕೀಯ ಉತ್ತರ.ಸುಪ್ರೀಂ ಕೋರ್ಟ್ಗೆ ಕರ್ನಾಟಕದ ಪರ ಸ್ಪಷ್ಟ ಸ್ಥಳೀಯ ಸಂದೇಶ.“ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಘೋಷಣೆಗೆ ಸಂಸ್ಥಾತ್ಮಕ ಬಲ.ಕನ್ನಡಿಗರ ಭಾವನೆಗೆ ಪಾಲಿಕೆಯಿಂದ ಅಧಿಕೃತ ಮುದ್ರೆ ಬೆಳಗಾವಿ ಪಾಲಿಕೆಯಲ್ಲಿ ಕನ್ನಡದ ಘೋಷಣೆ ಮೊಳಗಲಿ..!. ಮಹಾಜನ ವರದಿಯೇ ಅಂತಿಮ’, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ನಿರ್ಣಯಕ್ಕೆ ಒತ್ತಾಯ ಬೆಳಗಾವಿ,ಕರ್ನಾಟಕ–ಮಹಾರಾಷ್ಟ್ರ ಗಡಿವಿವಾದ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹೊತ್ತಿನಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯ ಸರ್ವಸಾಧಾರಣ ಸಭೆಯಲ್ಲೇ ಕರ್ನಾಟಕ ಪರ ಘನ…
ಸತೀಶ್ ಜಾರಕಿಹೊಳಿ–ಅಭಯ ಪಾಟೀಲ ಅಕ್ಕಪಕ್ಕ; ರಾಜಕೀಯ ವಲಯದಲ್ಲಿ ಕುತೂಹಲದ ಚರ್ಚೆ. ಒಂದೇ ವೇದಿಕೆ… ಅಕ್ಕಪಕ್ಕ ಆಸನ… ಆದರೆ ಮನಸ್ಸಿನ ಅಂತರ ಯಥಾಸ್ಥಿತಿ!. (e belagavi SPL report). ಬೆಳಗಾವಿ,ಗಡಿನಾಡ ಬೆಳಗಾವಿ ರಾಜಕೀಯದಲ್ಲಿ ಪರಸ್ಪರ ವಿರುದ್ಧ ಧ್ರುವಗಳೆಂದೇ ಗುರುತಿಸಿಕೊಂಡಿರುವ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಅಭಯ ಪಾಟೀಲ ಇಂದು ಸುವರ್ಣಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಂದೇ ವೇದಿಕೆಯಲ್ಲಿ, ಅದೂ ಅಕ್ಕಪಕ್ಕ ಕಾಣಿಸಿಕೊಂಡ ಕ್ಷಣ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ.ಸಾಮಾನ್ಯವಾಗಿ ಬೇರೆ ಬೇರೆ ರಾಜಕೀಯ ಹಾದಿಗಳಲ್ಲಿ ನಡೆಯುವ, ಹಲವು…
ಬೆಳಗಾವಿ: ಬೆಳಗಾವಿಯ ಮಹತ್ವಾಕಾಂಕ್ಷಿ CITIIS 2.0 ಯೋಜನೆ ಅನುಷ್ಠಾನ ಮತ್ತೆ ಗಂಭೀರ ಗೊಂದಲಕ್ಕೆ ಸಿಲುಕಿದೆ. ಯೋಜನೆಯ ಕ್ರಿಯಾ ಯೋಜನೆ ಇನ್ನೂ ಅಂತಿಮಗೊಂಡಿಲ್ಲ, ಕೆಯುಐಡಿಎಫ್ಸಿ ಕಚೇರಿಗೂ ಸಲ್ಲಿಕೆಯಾಗಿಲ್ಲ ಎಂಬ ಸಂಗತಿ ಅಧಿಕೃತವಾಗಿ ಹೊರಬಿದ್ದ ಹಿನ್ನೆಲೆಯಲ್ಲಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (KUIDFC) ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ಗೆ ಕಠಿಣ ಎಚ್ಚರಿಕೆ ನೀಡಿದೆ. ಈ ಕೂಡಲೇ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಿ ಸಲ್ಲಿಸಬೇಕು. ಇಲ್ಲವಾದರೆ ಯೋಜನೆ ವಿಳಂಬಕ್ಕೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಕೆಯುಐಡಿಎಫ್ಸಿ ತನ್ನ ಪತ್ರದಲ್ಲಿ…
ಯುದ್ಧದ ಭೀತಿ… ಬೆಳಗಾವಿಯಲ್ಲೂ ಪೆಟ್ರೋಲ್ ಪಂಪ್ಗಳ ಮುಂದೆ ವಾಹನಗಳ ಸಾಲು ಸಾಲು. ಇಂಧನ ಕೊರತೆ ವದಂತಿಗೆ ಜನರಲ್ಲಿ ಆತಂಕ; “ಮೊದಲು ಟ್ಯಾಂಕ್ ಫುಲ್” ಮನೋಭಾವದಿಂದ ಪಂಪ್ಗಳತ್ತ ದೌಡು. ಬೆಳಗಾವಿ: ಯುದ್ಧದ ಭೀತಿ, ಇಂಧನ ಕೊರತೆ ಉಂಟಾಗಬಹುದು ಎಂಬ ಅನುಮಾನ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಂದೇಶಗಳು—ಈ ಎಲ್ಲದರಿಂದ ಬೆಳಗಾವಿಯಲ್ಲೂ ಪೆಟ್ರೋಲ್ ಪಂಪ್ಗಳ ಮುಂದೆ ವಾಹನಗಳ ಸಾಲುಗಳು ಕಾಣಿಸತೊಡಗಿವೆ. “ನಾಳೆ ಇಂಧನ ಸಿಗದಿದ್ದರೆ?” ಎಂಬ ಆತಂಕದಲ್ಲಿ ವಾಹನ ಸವಾರರು ಪಂಪ್ಗಳತ್ತ ಧಾವಿಸುತ್ತಿರುವ ದೃಶ್ಯ ಹಲವೆಡೆ ಗಮನಸೆಳೆದಿದೆ. ನಗರದ ಪ್ರಮುಖ ಪೆಟ್ರೋಲ್…
ರಾಜ್ಯದ ಜಿಲ್ಲಾ, ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಆದೇಶ. ಬೇಸಿಗೆಯ ಹಿನ್ನೆಲೆ; ಶ್ವೇತ ಉಡುಪು, ಸೊಬರ ಬಣ್ಣದ ಸೀರೆ/ಸಲ್ವಾರ್-ಕಮೀಜ್ಗೆ ಅವಕಾಶ ಬೆಂಗಳೂರು, ಮಾ.23:ರಾಜ್ಯದ ಜಿಲ್ಲಾ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳಲ್ಲಿ ವಾದ ಮಂಡಿಸುವ ವಕೀಲರು ಮೇ 31, 2026ರವರೆಗೆ ಕಪ್ಪು ಕೋಟ್ ಧರಿಸುವುದರಿಂದ ವಿನಾಯಿತಿ ಪಡೆದಿದ್ದಾರೆ. ಈ ಕುರಿತು ಕರ್ನಾಟಕ ಹೈಕೋರ್ಟ್ ಸೋಮವಾರ ವೃತ್ತಪತ್ರ ಹೊರಡಿಸಿದೆ.ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರು ಹಾಗೂ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರು ಸಲ್ಲಿಸಿದ್ದ ಮನವಿಗಳನ್ನು ಪರಿಗಣಿಸಿ, ಈ ತೀರ್ಮಾನ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ…
ಇದು ebelagavi ಡಿಜಿಟಲ್ ವರದಿ ತಾಕತ್ತು. ಡಿಜಿಟಲ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿದ ebelagavi ಸ್ಮಾರ್ಟ ಸಿಟಿ ಸಿಟೀಜ್ ೨.೦ ಸಂಬಂಧ ವಿಶೇಷ ವರದಿ ಪ್ರಕಟಿಸಿತ್ತು. ಅದರಲ್ಲಿ ಸಭೆಗೂ ಮುನ್ನವೇ ಪ್ರೊಸಿಡಿಂಗ್ಸ್ ಸಿದ್ಧ ಎನ್ನುವುದನ್ನು ಉಲ್ಲೇಖಿಸಿತ್ತು. ಅಷ್ಟೇ ತಡ ಇಂದು ನಡೆಯಬೇಕಿದ್ದ ಸಭೆ ರದ್ದಾಗಿದೆ. ಅಷ್ಟೇ ಅಲ್ಲ ಖುದ್ದು ಡಿಸಿಯವರೇ ಪಾರದರ್ಶಕ ವಾಗಿ ಎಲ್ಲರಿಗೂ ತಿಳಿಸಿ ಸಭೆ ನಡೆಸಲು ಸೂಚನೆ ನೀಡಿದ್ದಾರೆ. ಅಂದರೆ ಡಿಜಿಟಲ್ ಮಾಧ್ಯಮ ಕೂಡ ವಾಸ್ತವತೆ ಆಧಾರದಲ್ಲಿ ಸುದ್ದಿ ಬರೆದರೆ ಸರ್ಕಾರ ಅದನ್ನು…
ಬೆಳಗಾವಿ: ಇನ್ನೂ ಸಭೆಯೇ ನಡೆದಿಲ್ಲ. ಆದರೆ ಅದರ ಕಾರ್ಯವಿವರದ ಕರಡು ಈಗಾಗಲೇ ಸಿದ್ಧವಾಗಿದೆ. ಈ ಒಂದು ಸಂಗತಿಯೇ ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ನ ಕಾರ್ಯವೈಖರಿಯ ಮೇಲೆ ಗಂಭೀರ ಅನುಮಾನ ಹುಟ್ಟಿಸುವಂತಾಗಿದೆ. ಮಾರ್ಚ್ 23ರಂದು ಸಿಟೀಜ್ 2.0 ಯೋಜನೆ ಕುರಿತು ಸ್ಟೇಕ್ಹೋಲ್ಡರ್ ಸಭೆ ನಿಗದಿಯಾಗಿದೆ. ಆದರೆ, ಸಭೆಗೆ ಮುನ್ನವೇ ಪ್ರೊಸಿಡಿಂಗ್ಸ್ ಸಿದ್ಧವಾಗಿರುವುದು ನೈಜ ಸಮಾಲೋಚನೆಗಿಂತ ಕಾಗದದ ಪ್ರಕ್ರಿಯೆಗೂ ಹೆಚ್ಚು ಆದ್ಯತೆ ನೀಡಲಾಗಿದೆಯೇ ಎಂಬ ಪ್ರಶ್ನೆ ಎಬ್ಬಿಸಿದೆ.ಲಭ್ಯವಾದ ಕರಡು ದಾಖಲೆಯ ಪ್ರಕಾರ, ಸಭೆಯ ದಿನಾಂಕ, ಸಮಯ, ಸ್ಥಳ ಹಾಗೂ ಭಾಗವಹಿಸುವ…
ಬೆಳಗಾವಿ: ತುರ್ಮುರಿ ತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುದಿಯುತ್ತಿದ್ದ ಆಕ್ರೋಶಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಹಲವು ವರ್ಷಗಳಿಂದ ಡಿಪೋ ರದ್ದತಿಗೆ ಆಗ್ರಹಿಸುತ್ತಿದ್ದ ಗ್ರಾಮಸ್ಥರ ಹೋರಾಟಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಹಿರಂಗ ಬೆಂಬಲ ನೀಡಿದ್ದು, ವಿಷಯ ಮತ್ತೆ ರಾಜಕೀಯ ಮತ್ತು ಸಾಮಾಜಿಕ ಮಟ್ಟದಲ್ಲಿ ಚರ್ಚೆಗೆ ಬಂದಿದೆ. ಹಿಂಡಲಗಾದಿಂದ ಹೆಬ್ಬಾಳ್ಕರ್ ನಿವಾಸದವರೆಗೆ ನಡೆದ ಭಾರಿ ಪ್ರತಿಭಟನಾ ಮೆರವಣಿಗೆಯಲ್ಲಿ ತುರ್ಮುರಿ ಸೇರಿದಂತೆ ಸುತ್ತಲಿನ ಅನೇಕ ಗ್ರಾಮಗಳ ಜನರು ಭಾಗವಹಿಸಿ, ತ್ಯಾಜ್ಯ ಘಟಕವನ್ನು ತಕ್ಷಣವೇ ಮುಚ್ಚಬೇಕು ಎಂದು ಒತ್ತಾಯಿಸಿದರು….
ಸಿಟೀಸ್ 2.0 ಮೇಲೆ ರಾಜ್ಯದ ನಿರ್ಧಾರವೇ ಸಂಕಟ?. ಸ್ಮಾರ್ಟ್ ಸಿಟಿ ಕಂಪನಿ ಮುಚ್ಚಿದರೆ ಬೆಳಗಾವಿಯ ಅವಕಾಶಕ್ಕೂ ಕತ್ತರಿ: ಕೇಂದ್ರದ ಖಡಕ್ ಎಚ್ಚರಿಕೆ. ಸಿಟೀಸ್ 2.0 ಉಳಿಸಬೇಕೆಂದರೆ ಸ್ಮಾರ್ಟ್ ಸಿಟಿ ಕಂಪನಿ ಉಳಿಯಲಿ; ಇಲ್ಲದಿದ್ದರೆ ಬದಲಿ ನಗರ: ಕೇಂದ್ರದ ಖಡಕ್ ಎಚ್ಚರಿಕೆ. ಸಂಸ್ಥೆ ಮುಚ್ಚುವ ಆತುರ ಏಕೆ? ಬೆಳಗಾವಿಯ ಅವಕಾಶದ ಮೇಲೆ ಯಾರ ಕಣ್ಣು? ಬೆಳಗಾವಿ:ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿರುವ ವಿಚಾರಕ್ಕೆ ಕೇಂದ್ರ ಸರ್ಕಾರವೇ ಈಗ ಕಠಿಣ ತಡೆ ನೀಡಿದಂತಾಗಿದೆ. ಸಿಟೀಸ್ 2.0…