Latest posts

All

Popular

A unique moment… l a meeting filled with warmth…
ಅನನ್ಯ ಕ್ಷಣ… ಅನುರಾಗದ ಭೇಟಿ…
ಮಹಿಳಾ ಮೀಸಲಾತಿ ಕಾಯ್ದೆ ಜಾರಿ: ರಾಜಕೀಯ ಲೆಕ್ಕಾಚಾರಕ್ಕೆ ಹೊಸ ತಿರುವು
ಮೋದಿ ಹೆಸರಿನಲ್ಲಿ ಮುಗಿಲು ಮುಟ್ಟಿದ ಜೈಕಾರ

ಅನನ್ಯ ಕ್ಷಣ… ಅನುರಾಗದ ಭೇಟಿ…

ವಿಲಾಸ ಜೋಶಿ.ಮುಖ್ಯವರದಿಗಾರ.ಸಂಯುಕ್ತ ಕರ್ನಾಟಕ. ಬೆಳಗಾವಿ. ಪತ್ರಕರ್ತನ ಬದುಕಿನಲ್ಲಿ ಅನೇಕ ಮುಖಗಳನ್ನು ನೋಡಲು ಸಿಗುತ್ತದೆ. ಅನೇಕ ವೇದಿಕೆಗಳನ್ನು ಕಾಣಲು ಸಿಗುತ್ತದೆ. ಅನೇಕ ಗಣ್ಯರನ್ನು ಭೇಟಿ ಮಾಡುವ ಅವಕಾಶವೂ ಬರುತ್ತದೆ. ಆದರೆ, ಕೆಲವು ಭೇಟಿಗಳು ಮಾತ್ರ ಮನಸ್ಸಿನೊಳಗೆ ಅಚ್ಚಳಿಯದೇ ಉಳಿಯುತ್ತವೆ. ಇಂದಿನ ದಿನವೂ ಅಂತಹದೇ ಒಂದು ಅಪೂರ್ವ ನೆನಪಿನ ಪುಟವಾಗಿ ಉಳಿಯಿತು.ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ಹಾಗೂ ಸಿದ್ಧಾರೂಢ ಮಠದ ಟ್ರಸ್ಟ್ ಸಮಿತಿ ಹಮ್ಮಿಕೊಂಡಿದ್ದ “ವಸಂತ ಋತುಗಾನ ಕಲಾಯಾನ” ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರನ್ನು ಭೇಟಿಯಾದ ಕ್ಷಣ ನಿಜಕ್ಕೂ ಅನನ್ಯ…

Read More

ಮಹಿಳಾ ಮೀಸಲಾತಿ ಕಾಯ್ದೆ ಜಾರಿ: ರಾಜಕೀಯ ಲೆಕ್ಕಾಚಾರಕ್ಕೆ ಹೊಸ ತಿರುವು

ನವದೆಹಲಿ:ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನ ಮೀಸಲು ನೀಡುವ ಬಹು ನಿರೀಕ್ಷಿತ ಮಹಿಳಾ ಮೀಸಲಾತಿ ಕಾಯ್ದೆ-2023ಕ್ಕೆ ಕೇಂದ್ರ ಸರ್ಕಾರ ಅಧಿಕೃತ ಚಾಲನೆ ನೀಡಿದೆ. ಕೇಂದ್ರ ಕಾನೂನು ಸಚಿವಾಲಯ ಬುಧವಾರ ಅಧಿಸೂಚನೆ ಹೊರಡಿಸುವ ಮೂಲಕ, ಏಪ್ರಿಲ್ 16ರಿಂದ ಈ ಕಾಯ್ದೆ ಜಾರಿಗೆ ಬಂದಿದೆ ಎಂದು ಘೋಷಿಸಿದೆ. ಮಹಿಳಾ ರಾಜಕೀಯ ಸಬಲೀಕರಣದ ದಿಕ್ಕಿನಲ್ಲಿ ಇದು ಐತಿಹಾಸಿಕ ಹೆಜ್ಜೆಯಾದರೂ, ಅನುಷ್ಠಾನದ ನಿಜವಾದ ಕಾಲಸರಣಿ ಮತ್ತು ಅದರ ಹಿಂದಿನ ರಾಜಕೀಯ-ತಾಂತ್ರಿಕ ಅರ್ಥಗಳ ಬಗ್ಗೆ ಹೊಸ ಚರ್ಚೆಗಳಿಗೆ ದಾರಿ ತೆರೆದಿದೆ. 2023ರ…

Read More

ಮೋದಿ ಹೆಸರಿನಲ್ಲಿ ಮುಗಿಲು ಮುಟ್ಟಿದ ಜೈಕಾರ

15 ಕಿ.ಮೀ. ಸಂಚರಿಸಿದ ಮಹಿಳೆಯರ ಬೃಹತ್ ಬೈಕ್ ರ್ಯಾಲಿ ಬೆಳಗಾವಿ:ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಸೂಚಿಸುವ ಉದ್ದೇಶದಿಂದ, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ಮಹಿಳೆಯರ ಬೃಹತ್ ಬೈಕ್ ರ್ಯಾಲಿ ನಗರದಲ್ಲಿ ಅದ್ದೂರಿಯಾಗಿ ನಡೆಯಿತು. ಶಹಾಪುರದ ಶಿವಚರಿತ್ರೆಯಿಂದ ಆರಂಭವಾದ ಈ ಭವ್ಯ ಮೆರವಣಿಗೆ, ದಕ್ಷಿಣ ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜನರ ಗಮನಸೆಳೆಯಿತು.ಸುಮಾರು 15 ಕಿಲೋಮೀಟರ್ ದೂರ ಕ್ರಮಿಸಿದ ಬೈಕ್ ರ್ಯಾಲಿ ನಗರ ರಾಜಕೀಯ ಹಾಗೂ…

Read More

ಭೈರವ್ ಇನ್ನು ನೆನಪು ಮಾತ್ರ…!

ಮನೆಯ ಕಾವಲಿಗ, ಎಲ್ಲರ ಮುದ್ದಿನ ಸಂಗಾತಿ,ವಾಹನ ಸವಾರಿ ಪ್ರಿಯ ಭೈರವನ ವಿದಾಯ ಬೆಳಗಾವಿಕೆಲವು ಜೀವಿಗಳು ಮನೆಯೊಳಗೆ ಕಾಲಿಡುವುದಿಲ್ಲ, ನೇರವಾಗಿ ಮನಸ್ಸಿನೊಳಗೆ ಬಂದು ನೆಲೆಸುತ್ತವೆ.ಅಂಥದೇ ಒಂದು ಹೆಸರು ಭೈರವ. ಸುಮಾರು ಹನ್ನೆರಡು ವರ್ಷಗಳ ಹಿಂದೆ ಮನೆಗೆ ಬಂದ ಭೈರವ, ಕೇವಲ ಶ್ವಾನವಾಗಿರಲಿಲ್ಲ; ಮನೆಯವರ ಜೊತೆ ಬದುಕಿದ, ನಕ್ಕ, ಕಾಯ್ದ, ಮಮತೆಯಲ್ಲಿ ಬೆರೆತು ಹೋದ ಕುಟುಂಬದ ಆತ್ಮೀಯ ಸದಸ್ಯನಾಗಿದ್ದ. ಕಳೆದ 12 ವರ್ಷಗಳಿಂದ ಮನೆಗೆ ಕಾವಲಾಗಿ ನಿಂತಿದ್ದ ಭೈರವ ಇಂದು ಇಲ್ಲ. ಆದರೆ ಅವನ ನೆನಪು ಮಾತ್ರ ಮನೆಯ ಪ್ರತಿಯೊಂದು…

Read More

ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲದ ಹೆಜ್ಜೆ; ಬೆಳಗಾವಿಯಲ್ಲಿ ಇಂದು ಭವ್ಯ ಮಹಿಳಾ ಸವಾರಿ

ಅಭಯ ಪಾಟೀಲರ ಹೊಸ ರಾಜಕೀಯ ಸ್ಪರ್ಶ: ಮಹಿಳಾ ಶಕ್ತಿಗೆ ಬೈಕ್‌ ರ್ಯಾಲಿಯ ಬಲಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲದ ಹೆಜ್ಜೆ; ಬೆಳಗಾವಿಯಲ್ಲಿ ಇಂದು ಭವ್ಯ ಮಹಿಳಾ ಸವಾರಿಮೊದಲ ಬಾರಿಗೆ ವಿಶೇಷ ಆಯೋಜನೆ; ಮಹಿಳಾ ಸಂಘಟನೆ, ರಾಷ್ಟ್ರಭಕ್ತಿ ಮತ್ತು ರಾಜಕೀಯ ಸಂದೇಶಕ್ಕೆ ಒಂದೇ ವೇದಿಕೆ. ಬೆಳಗಾವಿ:ರಾಜಕೀಯದಲ್ಲಿ ವಿಭಿನ್ನ ಹೆಜ್ಜೆ ಇಡಲು ಸದಾ ಪ್ರಯತ್ನಿಸುತ್ತಿರುವ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು, ಇದೀಗ ಮಹಿಳಾ ಶಕ್ತಿಯನ್ನು ಮುಂಚೂಣಿಗೆ ತರುವ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಮಹಿಳೆಯರನ್ನು ಕೇವಲ ಸಭೆಗಳಲ್ಲಿನ ಹಾಜರಾತಿ…

Read More

ಕೋರ್ಟ್ ಆವರಣದಲ್ಲೇ ದರ್ಪ!

ಕೊಲೆ ಕೇಸಿನ ದೋಷಿಗಳಿಂದ ಕ್ಯಾಮೆರಾಮನ್‌ಗಳ ಮೇಲೆ ದರ್ಪ. ಅವಾಚ್ಯ ನಿಂದನೆ, ಕ್ಯಾಮೆರಾ ತಳ್ಳಾಟ; ಬೆಳಗಾವಿ:ಕೊಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ, ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲೇ ದೋಷಿಗಳ ದರ್ಪ ಸಿಡಿದ ಘಟನೆ ಬುಧವಾರ ಸಂಜೆ ಆತಂಕ ಮೂಡಿಸಿತು. ನ್ಯಾಯಾಲಯದಿಂದ ವಾಪಸ್ ಕರೆದುಕೊಂಡು ಹೋಗುವ ವೇಳೆ ಆರೋಪಿಗಳ ದೃಶ್ಯ ಸೆರೆಹಿಡಿಯಲು ಮುಂದಾದ ಟಿವಿ ಕ್ಯಾಮೆರಾಮನ್‌ಗಳ ಮೇಲೆ ದರ್ಪ ಮೆರೆದ ಘಟನೆ ಮಾಧ್ಯಮ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕರಣದಲ್ಲಿ ದಡ್ಡಿ ವಿರುದ್ಧ ದೋಷ…

Read More

ಹೆತ್ತವರ ಕಣ್ಮುಂದೆ ಮಗಳ ಸಾವು: ಸಹೋದರಿಯ ನೋವಿಗೆ ಕರಗಿದ ಸಂತೋಷ

ಪ್ರಾರ್ಥನೆ, ಚಿಕಿತ್ಸೆ, ನಿರೀಕ್ಷೆ… ಎಲ್ಲವೂ ಕೊನೆಗೆ ವಿಧಿಯ ಮುಂದೆ ಮೌನ. ಒಬ್ಬ ಸಹೋದರನ ಹೋರಾಟಕ್ಕೆ ವಿಧಿಯೇ ಕೊಟ್ಟ ಕ್ರೂರ ಉತ್ತರ ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲೇ ಕುಳಿತು ಸಹೋದರಿಗಾಗಿ ಜೀವ ಕಾದ ಸಂತೋಷ. “ಮತ್ತೆ ಮನೆಗೆ ಕರೆದುಕೊಂಡು ಹೋಗಬೇಕು” ಎನ್ನುವ ಕನಸು ಕಣ್ಣೀರಿನಲ್ಲಿ ಕರಗಿತು. ಬೆಳಗಾವಿ:ಮನೆಯೊಳಗೆ ನಗುವಿನ ಧ್ವನಿಯಾಗಿದ್ದ ಮಗಳು, ಹೆತ್ತವರ ಕಣ್ಮುಂದೆಯೇ ಜೀವ ಕಳೆದುಕೊಂಡ ಕ್ಷಣ—ಅದು ಒಂದು ಕುಟುಂಬಕ್ಕೆ ಮಾತ್ರವಲ್ಲ, ಸುತ್ತಮುತ್ತಲಿನವರ ಮನವನ್ನೇ ನಡುಗಿಸುವ ದೃಶ್ಯ.ಆ ನೋವಿನ ಮಧ್ಯೆ ಸಹೋದರಿವ ರತ್ನಾ ಮಡಗಿನಾಳ ಆಸ್ಪತ್ರೆಯ ಹಾಸಿಗೆಯ ಪಕ್ಕದಲ್ಲೇ…

Read More

ಪ್ರಭುದ್ಧ ರಾಜಕೀಯ ಮುಖಗಳ ಸಂಗಮ

:ರಾಜಕೀಯ ಮಾತಿಲ್ಲ… ಆದರೆ ಸಾನ್ನಿಧ್ಯವೇ ಸಾಕಾಯಿತು!. ಒಂದೇ ಖಾಸಗಿ ಕಾರ್ಯಕ್ರಮದಲ್ಲಿ ಡಾ. ಪ್ರಭಾಕರ ಕೋರೆ – ಫಿರೋಜ್ ಸೇಠ್ ಪ್ರಭುದ್ಧ ರಾಜಕೀಯ ಮುಖಗಳ ಅಪರೂಪದ ಸಂಗಮ ಬೆಳಗಾವಿಯಲ್ಲಿ ಕುತೂಹಲಕ್ಕೆ ಕಾರಣ e belagavi SPL report ಬೆಳಗಾವಿ ರಾಜಕೀಯ ವಲಯದಲ್ಲಿ ಕೆಲವು ಭೇಟಿಗಳು ಶಬ್ದ ಮಾಡದೆ ಸಂಚಲನ ಮೂಡಿಸುತ್ತವೆ. ಅವುಗಳಲ್ಲಿ ರಾಜಕೀಯ ಘೋಷಣೆಗಳು ಇರದಿರಬಹುದು, ವೇದಿಕೆಯ ಮೇಲೆ ಭಾಷಣಗಳಿರದಿರಬಹುದು, ಹೊಸ ಸಮೀಕರಣಗಳ ಸುಳಿವುಗಳೂ ಬಹಿರಂಗವಾಗದೇ ಇರಬಹುದು. ಆದರೂ ಆ ಭೇಟಿಯಲ್ಲಿರುವ ವ್ಯಕ್ತಿತ್ವಗಳೇ ಅದರ ತೂಕವನ್ನು ಹೆಚ್ಚಿಸುತ್ತವೆ. ಇಂತಹದ್ದೇ…

Read More

‘ಕೈ ವಿರುದ್ಧ ಮುಸ್ಲಿಂ ಅಸಮಾಧಾನ ಭುಗಿಲು?.

ದಾವಣಗೆರೆ ಟಿಕೆಟ್ ವಿವಾದದ ಕಿಡಿ ಈಗ ಕಾಂಗ್ರೆಸ್ ಅಲ್ಪಸಂಖ್ಯಾತ ರಾಜಕಾರಣದ ದಿಕ್ಕೇ ಪ್ರಶ್ನಿಸುವ ಹಂತಕ್ಕೆ. ಕಾಂಗ್ರೆಸ್ಗೆ ಕೈ ಕೊಟ್ರಾ ಅಲ್ಪಸಂಖ್ಯಾತರು?. ದಾವಣಗೆರೆ ಟಿಕೆಟ್ ಕಿಚ್ಚು ರಾಜ್ಯ ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ. ಪ್ರತಿನಿಧಿತ್ವ ಪ್ರಶ್ನೆಯಲ್ಲಿ ಅಲ್ಪಸಂಖ್ಯಾತರ ಅಸಮಾಧಾನ ಬಹಿರಂಗ. ಉಪಚುನಾವಣೆ ಬೆನ್ನಲ್ಲೇ ಕೈ ಪಾಳಯದಲ್ಲಿ ಒಳಬಿರುಕು ಸ್ಪಷ್ಟ. ಟಿಕೆಟ್ ಹಂಚಿಕೆಯಿಂದಲೇ ಶುರುವಾದ ಅಸಮಾಧಾನ ಈಗ ರಾಜೀನಾಮೆ ಹಂತಕ್ಕೆ. ಮತಬ್ಯಾಂಕ್‌ ರಾಜಕಾರಣದ ವಿರುದ್ಧ ಮುಸ್ಲಿಂ ಸಮುದಾಯದ ಮೌನ ಸಿಡಿತ. ದಾವಣಗೆರೆಯ ಕಿಡಿ ರಾಜ್ಯಮಟ್ಟದ ಅಲ್ಪಸಂಖ್ಯಾತ ಅಶಾಂತಿಗೆ ಸಂಕೇತವೇ?. ಕಾಂಗ್ರೆಸ್ ಅಹಿಂದಾ…

Read More
error: Content is protected !!