top of page



ಬೆಳಗಾವಿ ಬೀದಿಯಲ್ಲಿ ‘ಚವಾಟ್ ಗಲ್ಲಿ ರಾಜಾ’ ವೈಭವ
ಪ್ರಪ್ರಥಮ ಭವ್ಯ ಆಗಮನಕ್ಕೆ ಭಕ್ತಸಾಗರ; ಡೊಳ್ಳು–ತಾಳದ ನಾದ, ಬೆಳಕಿನ ಚಿತ್ತಾರ, ‘ಬಪ್ಪಾ ಮೋರಿಯಾ’ ಘೋಷಣೆಗಳಿಂದ ಮೊಳಗಿದ ನಗರ ಬೆಳಗಾವಿ: ಕಣ್ಣು ಹಾಯಿಸಿದತ್ತ ಜನಸಾಗರ... ಕಿವಿಗಪ್ಪಳಿಸಿದ ಡೊಳ್ಳು–ತಾಳದ ನಾದ... ಬಣ್ಣಬಣ್ಣದ ಬೆಳಕಿನ ನಡುವೆ ಮೊಳಗಿದ ‘ಗಣಪತಿ ಬಪ್ಪಾ ಮೋರಿಯಾ’ ಘೋಷಣೆ. ಈ ಎಲ್ಲ ಸಂಭ್ರಮದ ನಡುವೆ ಬೆಳಗಾವಿಯಲ್ಲಿ ಪ್ರಪ್ರಥಮ ಬಾರಿಗೆ ‘ಚವಾಟ್ ಗಲ್ಲಿ ರಾಜಾ’ ಗಣೇಶನ ಭವ್ಯ ಆಗಮನ ಶುಕ್ರವಾರ ನಗರবাসಿಗಳಿಗೆ ವಿಶೇಷ ಅನುಭವ ನೀಡಿತು. ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಮೆರವಣಿಗೆ ಚವಾಟ್ ಗಲ್ಲಿಯತ್ತ ಸಾಗುತ್ತಿದ್ದಂತೆ ರಸ್ತೆ ಇಕ್ಕೆಲಗಳಲ್ಲಿ ಸಾವಿರಾರು ಭಕ್ತರು ಜಮಾಯಿಸಿದರು. ಗಣೇ
vilas joshi
12 hours ago1 min read


ಮುಖದಲ್ಲಿ ಗಂಭೀರತೆ… ಮಾತಿನಲ್ಲಿ ಸರಳತೆ, ಕೆಲಸದಲ್ಲಿ ಪ್ರಾಯೋಗಿಕತೆ!
ಇಂದು ಮುದ್ರಣ ಮಾಧ್ಯಮದ ಕೆಲ ಸ್ನೇಹಿತರು ಸೇರಿಕೊಂಡು ಬೆಳಗಾವಿಯ ನೂತನ ಪೊಲೀಸ್ ಆಯುಕ್ತ ನಿಕ್ಕಂ ಪ್ರಕಾಶ್ ಅಮ್ರೀತ್ ಅವರನ್ನು ಭೇಟಿ ಮಾಡಲು ತೆರಳಿದ್ದೆವು. ಪೊಲೀಸ್ ಆಯುಕ್ತರ ಕಚೇರಿಗೆ ಹೋದಾಗ ನಮ್ಮ ಮೊದಲ ಹೆಜ್ಜೆ ಸಾಮಾನ್ಯವಾಗಿ ಆಯುಕ್ತರ ಕೊಠಡಿಯತ್ತ ಇರೋದಿಲ್ಲ. ಮೊದಲು ನಮ್ಮ ಆತ್ಮೀಯ ಸ್ನೇಹಿತ, ಡಿಸಿಪಿ ನಾರಾಯಣ ಬರಮನಿ ಅವರ ಕಚೇರಿ. ಅಲ್ಲಿ ಒಂದಿಷ್ಟು ಹರಟೆ, ನಗು–ಮಾತು, ಜೊತೆಗೆ ಎಂದಿನಂತೆ ಬ್ಲ್ಯಾಕ್ ಕಾಫಿ! ಆ ಆತ್ಮೀಯ ಕ್ಷಣಗಳ ಬಳಿಕ ಆಯುಕ್ತರ ಕೊಠಡಿಯತ್ತ ಹೆಜ್ಜೆ ಹಾಕಿದೆವು. ನಿಕ್ಕಂ ಪ್ರಕಾಶ್ ಅಮ್ರೀತ್ ಅವರನ್ನು ಮೊದಲ ನೋಟದಲ್ಲಿ ನೋಡಿದಾಗ, ‘ತುಂಬ ಖಡಕ್ ಅಧಿಕಾರಿ ಇರಬೇಕು’ ಎನ್ನುವ ಭಾವ
vilas joshi
15 hours ago1 min read


ಹಬ್ಬ ಹಬ್ಬದಂತಿರಲಿ; ಹಠಕ್ಕೆ ಅವಕಾಶವಿಲ್ಲ’
ಗಣೇಶೋತ್ಸವ ಮಂಡಳಿಗಳಿಗೆ ಪೊಲೀಸರ ಖಡಕ್ ಸಂದೇಶ | ಕೊನೆಯ ಕ್ಷಣದಲ್ಲಿ ಮಾರ್ಗ ಬದಲಾವಣೆ ಬೇಡ | ಲೇಸರ್–ಪ್ಲಾಸ್ಮಾಕ್ಕೆ ಅವಕಾಶವಿಲ್ಲ ಬೆಳಗಾವಿ: ‘ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಿ. ನಿಮ್ಮ ಸಂತೋಷಕ್ಕೆ ಅಡ್ಡಿಪಡಿಸುವುದು ಪೊಲೀಸರ ಉದ್ದೇಶವಲ್ಲ. ಆದರೆ, ಮೊದಲೇ ನಿಗದಿಪಡಿಸಿದ ನಿಯಮ, ಮೆರವಣಿಗೆ ಮಾರ್ಗವನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸಿ, “ಇದೇ ಆಗಬೇಕು” ಎಂದು ಹಠ ಹಿಡಿದರೆ ಅದಕ್ಕೆ ಅವಕಾಶವಿಲ್ಲ’ ಎಂದು ಪೊಲೀಸ್ ಆಯುಕ್ತ ನಿಕ್ಕಮ್ ಪ್ರಕಾಶ್ ಅಮ್ರೀತ ಅವರು ಗಣೇಶೋತ್ಸವ ಮಂಡಳಿಗಳಿಗೆ ಖಡಕ್ ಸಂದೇಶ ನೀಡಿದ್ದಾರೆ.. ನಗರದಲ್ಲಿ ಮಾರ್ಕೆಟ್ ಠಾಣೆ ವ್ಯಾಪ್ತಿಯ ಗಣೇಶೋತ್ಸವದ ಮಂಡಳಿಗಳ ಪದಾಧಿಕಾರ
vilas joshi
1 day ago2 min read


ಐದು ದಶಕದ ನಂಬಿಕೆ; ಹೊಸ ಎತ್ತರದತ್ತ ‘ದೇಶಪಾಂಡೆ ಇಂಡಸ್ಟ್ರಿಗಳು
’ ಮಿಕ್ಸರ್ ತಯಾರಿಕೆಯಿಂದ ಜನರೇಟರ್ ಕ್ಷೇತ್ರದವರೆಗೆ ಪಯಣ | ಮೂರು ರಾಜ್ಯಗಳಲ್ಲಿ ವಿಸ್ತಾರ | 20 ಸಾವಿರಕ್ಕೂ ಅಧಿಕ ಗ್ರಾಹಕರ ಬಲ ಬೆಳಗಾವಿ: ಸಣ್ಣ ಕೈಗಾರಿಕಾ ಪ್ರಯತ್ನವಾಗಿ ಆರಂಭವಾದ ಉದ್ಯಮವೊಂದು ಐದು ದಶಕಗಳಲ್ಲಿ ಮೂರು ರಾಜ್ಯಗಳಿಗೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಿ, 20 ಸಾವಿರಕ್ಕೂ ಅಧಿಕ ಗ್ರಾಹಕರನ್ನು ತಲುಪಿದೆ. ಬೆಳಗಾವಿಯ ದೇಶಪಾಂಡೆ ಇಂಡಸ್ಟ್ರಿಗಳು ಡೀಸೆಲ್ ಜನರೇಟರ್ ಸೆಟ್, ಎಂಜಿನಿಯರಿಂಗ್ ಸೇವೆ ಮತ್ತು ವಿದ್ಯುತ್ ಪರಿಹಾರಗಳ ಕ್ಷೇತ್ರದಲ್ಲಿ 50 ವರ್ಷಗಳನ್ನು ಪೂರೈಸಿ ಸುವರ್ಣ ಮಹೋತ್ಸವದ ಮೈಲಿಗಲ್ಲು ತಲುಪಿದೆ. ದಿವಂಗತ ದೇವರಾಜ್ ದೇಶಪಾಂಡೆ ಮತ್ತು ಕುಸುಮಾ ದೇಶಪಾಂಡೆ ಅವರು ಮಿಕ್ಸ
vilas joshi
2 days ago2 min read


ದಕ್ಷಿಣಕ್ಕೆ ಅಭಿವೃದ್ಧಿ ಬೆಳಕು; ಉತ್ತರದ ಉದ್ಯಮಗಳಿಗೆ ಇನ್ನೂ ಕತ್ತಲೆ
ಒಂದೇ ನಗರದಲ್ಲಿ ಕೈಗಾರಿಕಾ ಮೂಲಸೌಕರ್ಯಕ್ಕೆ ಎರಡು ಮಾನದಂಡ? ದಕ್ಷಿಣಕ್ಕೆ ಅಭಿವೃದ್ಧಿ; ಉತ್ತರಕ್ಕೆ ನಿರ್ಲಕ್ಷ್ಯ ಯಾಕೆ? ಐದು ವರ್ಷ ಮನವಿ ಮಾಡಿದರೂ ರಸ್ತೆ–ಚರಂಡಿ ಸರಿಯಾಗಿಲ್ಲ; ಒಂದೇ ಬೆಳಗಾವಿಯಲ್ಲಿ ಕೈಗಾರಿಕಾ ವಲಯಗಳಿಗೆ ಎರಡು ನ್ಯಾಯವೇ? E belagavi SPL Report ಬೆಳಗಾವಿ: ನಗರದ ದಕ್ಷಿಣ ಭಾಗದ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯ ತುಸು ಉತ್ತಮವಾಗಿದೆ ಎಂಬ ಅಭಿಪ್ರಾಯ ಉದ್ಯಮ ವಲಯದಲ್ಲಿದೆ. ಆದರೆ ಉತ್ತರ ಬೆಳಗಾವಿಯ ಹೊನಗಾ–ಕಾಕತಿ–ಕಂಗ್ರಾಳಿ ಕೈಗಾರಿಕಾ ವಲಯದಲ್ಲಿ ರಸ್ತೆ, ಚರಂಡಿ, ನೀರು, ಬೀದಿದೀಪದಂತಹ ಮೂಲಭೂತ ಸೌಲಭ್ಯಗಳಿಗೂ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಮುಂದುವರಿದಿದೆ. ಉತ್
vilas joshi
2 days ago1 min read


ಗಡಿ ವಿಚಾರಕ್ಕೆ ಮರುಬಾಗಿಲು ಮುಚ್ಚಿದ ಸರ್ಕಾರ
1988ರ ಸದನ ನಿರ್ಣಯವೇ ಮಾರ್ಗಸೂಚಿ; ಹೊಸ ಅಭಿಪ್ರಾಯ ಕೇಳದಂತೆ ಬೆಳಗಾವಿ ಪಾಲಿಕೆಗೆ ತಾಕೀತು. ಕನ್ನಡಪರ ಸಂಘಟನೆಗಳ ಮನವಿಗೆ ಸರ್ಕಾರದ ಸ್ಪಷ್ಟ ನಿಲುವು | . ಪಾಲಿಕೆ ಆಯುಕ್ತರ ಹೊಣೆ ಮತ್ತಷ್ಟು ಹೆಚ್ಚಳ ಇನ್ನೊಮ್ಮೆ ಈ ತಪ್ಪು ಮಾಡಬೇಡಿ- ಆಯುಕ್ತರಿಗೆ ಖಡಕ್ ಎಚ್ಚರಿಕೆ. ಕನ್ನಡ ಸಂಘಟನೆಗಳ ಪತ್ರಿಕಾಗೋಷ್ಡಿ. ಬೆಳಗಾವಿ: ಗಡಿ ವಿಚಾರದಲ್ಲಿ ಮತ್ತೊಮ್ಮೆ ಸರ್ಕಾರದ ಅಭಿಪ್ರಾಯ ಕೇಳುವ ಪ್ರಕ್ರಿಯೆಗೆ ರಾಜ್ಯ ಸರ್ಕಾರವೇ ತೆರೆ ಎಳೆದಿದೆ. 1988ರ ಮಾರ್ಚ್ 23ರಂದು ವಿಧಾನಮಂಡಲ ಕೈಗೊಂಡ ನಿರ್ಣಯದಂತೆ ಮುಂದುವರಿಯಬೇಕು ಎಂದು ಸ್ಪಷ್ಟಪಡಿಸಿರುವ ನಗರಾಭಿವೃದ್ಧಿ ಇಲಾಖೆ, ಇದೇ ಸ್ವರೂಪದ ಪ್ರಸ್ತಾವನೆಗಳನ್ನು ಇನ್ನು
vilas joshi
4 days ago2 min read


ಐದು ತಿಂಗಳ ಕನ್ನಡ ಹೋರಾಟಕ್ಕೆ ಫಲ: ಸರ್ಕಾರದಿಂದ ಅಧಿಕೃತ ಆದೇಶ
. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಗೊತ್ತುವಳಿಗೆ ಹಸಿರು ನಿಶಾನೆ | ಈಗ ಪಾಲಿಕೆ ಸಭೆಯತ್ತ ಚಿತ್ತ (ಇ ಬೆಳಗಾವಿ ವಿಶೇಷ) ಬೆಳಗಾವಿ: ಐದು ತಿಂಗಳ ಕಾಲ ಪ್ರತಿಭಟನೆ, ಮನವಿ, ಧರಣಿ ಮತ್ತು ಸಭೆಗಳ ಮೂಲಕ ಕನ್ನಡ ಸಂಘಟನೆಗಳು ಮುಂದಿಟ್ಟಿದ್ದ ಪ್ರಮುಖ ಬೇಡಿಕೆಗೆ ರಾಜ್ಯ ಸರ್ಕಾರ ಕೊನೆಗೂ ಸ್ಪಂದಿಸಿದೆ. ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಕರ್ನಾಟಕ ಪರ ಗೊತ್ತುವಳಿಯನ್ನು ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸುವ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ಹಲವು ತಿಂಗಳಿಂದ ಪಾಲಿಕೆ ಅಂಗಳದಲ್ಲಿ ಚರ್ಚೆ, ಗದ್ದಲ ಮತ್ತು ಆಡಳಿತಾತ್ಮಕ ಪತ್ರ ವ್ಯವಹಾರಕ್ಕೆ ಸ
vilas joshi
4 days ago2 min read


ಶೋಷಿತರ ಬದುಕಿಗೆ ಅಕ್ಷರದ ಧ್ವನಿ ನೀಡಿದ ಅಣ್ಣಾ ಭಾವು ಸಾಠೆ
ಬೋರಗಾಂವದಲ್ಲಿ ಜಯಂತಿ ಸಂಭ್ರಮ | ಯುವಪೀಳಿಗೆಗೆ ಅವರ ಸಾಹಿತ್ಯ–ಹೋರಾಟ ಪರಿಚಯಿಸಲು ಸತೀಶ ಜಾರಕಿಹೊಳಿ ಕರೆ. ನಿಪ್ಪಾಣಿ: ‘ಶಿಕ್ಷಣದ ಪದವಿಗಳಿಲ್ಲದಿದ್ದರೂ ಬದುಕಿನ ಅನುಭವವನ್ನೇ ಪಾಠಶಾಲೆಯಾಗಿಸಿಕೊಂಡ ಡಾ. ಅಣ್ಣಾ ಭಾವು ಸಾಠೆ, ತಮ್ಮ ಬರಹಗಳಿಂದ ಶೋಷಿತರು ಮತ್ತು ದುಡಿಯುವ ವರ್ಗದ ನೋವಿಗೆ ಧ್ವನಿಯಾದರು. ಅವರ ಸಾಹಿತ್ಯ ಹಾಗೂ ಸಾಮಾಜಿಕ ಹೋರಾಟ ಇಂದಿನ ಯುವಪೀಳಿಗೆಗೆ ಪ್ರೇರಣೆಯಾಗಬೇಕು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಬೋರಗಾಂವ ಗ್ರಾಮದಲ್ಲಿ ಆಯೋಜಿಸಿದ್ದ ಸಾಹಿತ್ಯರತ್ನ ಲೋಕಶಾಹಿರ್ ಡಾ. ಅಣ್ಣಾ ಭಾವು ಸಾಠೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಕ್
vilas joshi
5 days ago1 min read


ಪೊಲೀಸರಿಗೆ ಹೈಕೋರ್ಟ್ ಚಾಟಿ.
ನೋಟಿಸ್ ನೀಡುವ ಮೊದಲೇ ವಶಕ್ಕೆ: ವೈಟ್ಫೀಲ್ಡ್ ಪೊಲೀಸರಿಗೆ ಹೈಕೋರ್ಟ್ ಚಾಟಿ. ‘ಸಮವಸ್ತ್ರ ಮನಬಂದಂತೆ ವರ್ತಿಸುವ ಪರವಾನಗಿಯಲ್ಲ; ವೈಟ್ಫೀಲ್ಡ್ ಠಾಣೆಯನ್ನು ಡಾರ್ಕ್ಫೀಲ್ಡ್ ಎಂದು ಬದಲಿಸಿ’ (Ebelagavi Special Report) ಬೆಂಗಳೂರು: ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಮೊದಲೇ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು, ಠಾಣೆಯ ಸಮೀಪ ಕರೆತಂದ ಬಳಿಕ ನೋಟಿಸ್ ನೀಡಿದ ವೈಟ್ಫೀಲ್ಡ್ ಪೊಲೀಸರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘ಪೊಲೀಸರ ಬಂಧನಾಧಿಕಾರ ನಾಗರಿಕರ ಮೇಲೆ ದಬ್ಬಾಳಿಕೆ ನಡೆಸುವ ಅಸ್ತ್ರವಲ್ಲ. ಸಮವಸ್ತ್ರ ಧರಿಸಿದ ಮಾತ್ರಕ್ಕೆ ಮನಬಂದಂತೆ
vilas joshi
5 days ago2 min read


ಗಣೇಶೋತ್ಸವ ಅನುಮತಿಗೆ ‘ಏಕಗವಾಕ್ಷಿ’ ವ್ಯವಸ್ಥೆ
ಬೆಳಗಾವಿಯ 12 ಪೊಲೀಸ್ ಠಾಣೆಗಳಲ್ಲಿ ಕೇಂದ್ರ ಆರಂಭ; ಒಂದೇ ಕಡೆ ಅಗತ್ಯ ಅನುಮತಿ ಬೆಳಗಾವಿ: ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಅನುಮತಿ ಪ್ರಕ್ರಿಯೆಯನ್ನು ಸುಗಮಗೊಳಿಸಲು ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 12 ಪೊಲೀಸ್ ಠಾಣೆಗಳಲ್ಲಿ ಆಗಸ್ಟ್ 31ರಿಂದ ‘ಏಕಗವಾಕ್ಷಿ’ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಮಾರ್ಕೆಟ್, ಮಾಳಮಾರುತಿ, ಶಹಾಪುರ, ಎಪಿಎಂಸಿ, ಖಡೇಬಜಾರ್, ಕ್ಯಾಂಪ್, ತಿಲಕವಾಡಿ, ಉದ್ಯಮಬಾಗ, ಬೆಳಗಾವಿ ಗ್ರಾಮೀಣ, ಕಾಕತಿ, ಮಾರಿಹಾಳ ಹಾಗೂ ಹಿರೇಬಾಗೇವಾಡಿ ಠಾಣೆಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಕೇಂದ್ರಕ್ಕೂ ನೋಡಲ್ ಅಧಿಕಾರಿ ಅಥವಾ ಸಿಬ್ಬಂದಿಯನ್ನು ನೇಮಿಸಿ, ಅವರ ಮೊಬ
vilas joshi
5 days ago1 min read


12 ಸಾವಿರ ಕೋಟಿ ‘ಬಜೆಟ್ರಹಿತ’ ಕಾಮಗಾರಿ; ಗುತ್ತಿಗೆದಾರರಿಗೆ ಬಿಲ್ ಸಂಕಷ್ಟ ಹಿಂದಿನ ಬಿಜೆಪಿ ಸರ್ಕಾರದ ಅವೈಜ್ಞಾನಿಕ ನಿರ್ಧಾರವೇ ಇಕ್ಕಟ್ಟಿಗೆ ಕಾರಣ: ಸಚಿವ ಸತೀಶ ಜಾರಕಿಹೊಳಿ
ವಿಜಯಪುರ: ಬಜೆಟ್ನಲ್ಲಿ ಹಣ ಮೀಸಲಿಡದೆ ಹಿಂದಿನ ಬಿಜೆಪಿ ಸರ್ಕಾರ ₹12 ಸಾವಿರ ಕೋಟಿ ಮೊತ್ತದ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿದ್ದೇ ಗುತ್ತಿಗೆದಾರರ ಬಿಲ್ ಪಾವತಿ ವಿಳಂಬಕ್ಕೆ ಮೂಲ ಕಾರಣ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು. ನಗರದಲ್ಲಿ ನಡೆದ ಗುತ್ತಿಗೆದಾರರ ಸಂಘದ ಬೆಳ್ಳಿ ಮಹೋತ್ಸವ ಹಾಗೂ ಗುತ್ತಿಗೆದಾರರ ಭವನವನ್ನು ಕೈಗಾರಿಕಾ ಸಚಿವ ಡಾ.ಎಂ.ಬಿ. ಪಾಟೀಲ ಅವರೊಂದಿಗೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ‘ಈ ಹಿಂದೆ ಮೂರು ತಿಂಗಳಿಗೊಮ್ಮೆ ಬಿಲ್ ಪಾವತಿಯಾಗುತ್ತಿತ್ತು. ಆದರೆ, ಹಣಕಾಸಿನ ಬೆಂಬಲವಿಲ್ಲದೇ ಕಾಮಗಾರಿ ಆರಂಭಿಸಿದ ಹಿಂದಿನ ಸರ್ಕಾರದ ತಪ್ಪಿನಿಂದ ಈಗ ಗುತ್ತಿಗೆದಾ
vilas joshi
6 days ago1 min read


ನಸುಕಿನಲ್ಲೇ ರೌಡಿಗಳ ಮನೆ ಬಾಗಿಲು ತಟ್ಟಿದ ಪೊಲೀಸರು
ಉತ್ತರ ವಲಯದ 1,041 ರೌಡಿಶೀಟರ್ಗಳ ಮನೆ ಮೇಲೆ ದಿಢೀರ್ ದಾಳಿ; 27 ದಾಖಲೆರಹಿತ ವಾಹನ, 9 ಮಾರಕಾಸ್ತ್ರ ಜಪ್ತಿ ಬೆಳಗಾವಿ: ಇನ್ನೂ ಬೆಳಕು ಹರಿದಿರಲಿಲ್ಲ. ಉತ್ತರ ವಲಯದ ಐದು ಜಿಲ್ಲೆಗಳಲ್ಲಿ ಪೊಲೀಸ್ ತಂಡಗಳು ಏಕಕಾಲಕ್ಕೆ ಕಾರ್ಯಾಚರಣೆಗೆ ಇಳಿದಿದ್ದವು. ಕೆಲವೇ ಗಂಟೆಗಳಲ್ಲಿ 1,041 ಸಕ್ರಿಯ ರೌಡಿಶೀಟರ್ಗಳ ಮನೆಗಳನ್ನು ಜಾಲಾಡಿದ ಪೊಲೀಸರು, ಅವರ ಚಲನವಲನ ಹಾಗೂ ಅಪರಾಧ ಸಂಪರ್ಕಗಳ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಭಾನುವಾರ ನಸುಕಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ದಾಳಿ ವೇಳೆ ಸಮರ್ಪಕ ದಾಖಲೆಗಳಿಲ್ಲದ 27 ವಾಹನಗಳು ಮತ್ತು 9 ಮ
vilas joshi
6 days ago1 min read


ಬೆಳಗಾವಿಗೆ ₹1,276 ಕೋಟಿಯ ಅಭಿವೃದ್ಧಿ ನೀಲನಕ್ಷೆ
ಶಾಸಕ ರಾಜು ಸೇಠ್ ಅಧ್ಯಕ್ಷತೆಯಲ್ಲಿ ಬುಡಾದ ಮೊದಲ ಸಭೆ; ಕಣಬರ್ಗಿಯಲ್ಲಿ ಬೃಹತ್ ಐಟಿ ಪಾರ್ಕ್, ಕುಮಾರಸ್ವಾಮಿ ಬಡಾವಣೆಯಲ್ಲಿ 100 ಹಾಸಿಗೆ ಆಸ್ಪತ್ರೆ ನಿರ್ಮಾಣ ಪ್ರಸ್ತಾವ. ಬೆಳಗಾವಿ: ನಗರಾಭಿವೃದ್ಧಿಗೆ ಹೊಸ ವೇಗ ನೀಡಲು ಮುಂದಾಗಿರುವ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು (ಬುಡಾ), ಶಾಸಕ ರಾಜು ಸೇಠ್ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲೇ ₹1,276 ಕೋಟಿ ಮೊತ್ತದ ಮಹತ್ವಾಕಾಂಕ್ಷಿ ಕಾಮಗಾರಿಗಳ ನೀಲನಕ್ಷೆಯನ್ನು ಮುಂದಿಟ್ಟಿದೆ. ಕಣಬರ್ಗಿ ಯೋಜನೆ ಸಂಖ್ಯೆ–61ರಲ್ಲಿ 24 ಎಕರೆ ಪ್ರದೇಶದಲ್ಲಿ ಮೂರು ಹಂತಗಳಲ್ಲಿ ಏಳು ಗೋಪುರಗಳನ್ನು ಒಳಗೊಂಡ ಬೃಹತ್ ಐಟಿ ಪಾರ್ಕ್ ನಿರ್ಮಿಸುವುದು ಯೋಜನೆಯ ಪ್ರಮುಖ
vilas joshi
6 days ago1 min read


ಮುಸ್ಲಿಮರು ಬೇಡ ಎನ್ನುವವನು ಹಿಂದುವಾಗಿ ಉಳಿಯಲಾರ’
ನ್ಯೂಯಾರ್ಕ್ನಲ್ಲಿ ಮೋಹನ್ ಭಾಗವತ್ ವೈವಿಧ್ಯದಲ್ಲಿನ ಏಕತೆಯೇ ಭಾರತದ ಡಿಎನ್ಎ ನ್ಯೂಯಾರ್ಕ್: ‘ಭಾರತದಲ್ಲಿ ಮುಸ್ಲಿಮರು ಇರಬಾರದು ಎಂದು ಯಾವುದೇ ಹಿಂದೂ ಭಾವಿಸಿದರೆ, ಆತ ಹಿಂದುವಾಗಿ ಉಳಿಯಲಾರ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಶನಿವಾರ ನಡೆದ ‘ಯುನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್’ ಹಾಗೂ ಧಾರ್ಮಿಕ ಮುಖಂಡರ ಸಮಾವೇಶದಲ್ಲಿ ಮಾತನಾಡಿದ ಅವರು, ಧರ್ಮ ಮತ್ತು ಆರಾಧನೆಯ ಮಾರ್ಗಗಳು ಬೇರೆಬೇರೆಯಾಗಿದ್ದರೂ ಮಾನವೀಯತೆ ಒಂದೇ ಎಂದು ಪ್ರತಿಪಾದಿಸಿದರು. ಸುಮಾರು 5 ಸಾವಿರ ಭಾರತೀಯ–ಅಮೆರಿಕನ್ನರು ಪಾಲ್ಗೊಂಡಿದ್ದ ಕಾರ್ಯಕ್
vilas joshi
6 days ago1 min read


ಬೆಳಗಾವಿಗೆ ನಿಕ್ಕಂ; ಹುಬ್ಬಳ್ಳಿ–ಧಾರವಾಡಕ್ಕೆ ಬೋರಸೆ
ಪೊಲೀಸ್ ಆಯುಕ್ತರ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ; ಕೇಂದ್ರ ನಿಯೋಜನೆಯಿಂದ ಮರಳಿದ ಡಿಐಜಿ ನಿಕ್ಕಂ ಪ್ರಕಾಶ್ ಅಮೃತ್ಗೆ ಗಡಿನಗರಿಯ ಹೊಣೆ. ಬೆಳಗಾವಿ: ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಬದಲಾವಣೆ ಮಾಡಿದ್ದು, ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ್ ಬೋರಸೆ ಅವರನ್ನು ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತರನ್ನಾಗಿ ವರ್ಗಾವಣೆ ಮಾಡಿದೆ. ಕೇಂದ್ರ ನಿಯೋಜನೆಯಲ್ಲಿದ್ದ 2012ನೇ ಬ್ಯಾಚ್ನ ಐಪಿಎಸ್ ಅಧಿಕಾರಿ ನಿಕ್ಕಂ ಪ್ರಕಾಶ್ ಅಮೃತ್ ಅವರನ್ನು ಬೆಳಗಾವಿಯ ನೂತನ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗಿದೆ. ಬೋರಸೆ ಅವರು ಬೆಳಗಾವಿಯಲ್ಲಿ ಕಾನೂನು–ಸುವ್ಯವಸ್ಥೆ ನಿರ್ವಹಣೆ
vilas joshi
7 days ago2 min read


ನಾಗೇಂದ್ರರದ್ದು ಅನ್ಯಾಯದ ಕಣ್ಣೀರಲ್ಲ; ಕರ್ಮದ ಕಣ್ಣೀರು
‘ ‘ಶಂಭೂಕ–ಮನುಸ್ಮೃತಿಯ ಪರದೆ ಹಾಕಿ ಹಗರಣ ಮುಚ್ಚಲಾಗದು’ ‘ಮೂರು ಮುಂಬೈ ನಂಟುಗಳ ಬಗ್ಗೆ ಉತ್ತರಿಸಲಿ; 10 ಶಾಸಕರ ರಾಜೀನಾಮೆ ಕೊಡಿಸಿ ಚುನಾವಣೆ ಎದುರಿಸಲಿ’ (Ebelagavi Report) ಬಳ್ಳಾರಿ: ‘ ಶಂಭೂಕ, ಮನುಸ್ಮೃತಿ, ಮನುವಾದ, ಜಾತಿ, ಕಣ್ಣೀರು—ಇವೆಲ್ಲವೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಮರೆಮಾಚಲು ಶಾಸಕ ಬಿ. ನಾಗೇಂದ್ರ ನಡೆಸುತ್ತಿರುವ ನಾಟಕ. ಅವರು ಸುರಿಸಿದ್ದು ಅನ್ಯಾಯಕ್ಕೊಳಗಾದ ಕಣ್ಣೀರಲ್ಲ; ವಾಲ್ಮೀಕಿ ಸಮಾಜಕ್ಕೆ ಮಾಡಿದ ದ್ರೋಹದ ಕರ್ಮದ ಕಣ್ಣೀರು’ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ಖಡಕ್ಕಾಗಿ ವಾಗ್ದಾಳಿ ನಡೆಸಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ನಾಗೇಂದ್ರ ವಿರುದ್ಧ ಏಕವಚನದ
vilas joshi
7 days ago3 min read


ನಾಗೇಂದ್ರ ರಾಜೀನಾಮೆ; ಗುರಿ ಡಿಕೆ ?
. 25 ದಿನದಲ್ಲೇ ಸಚಿವರ ನಿರ್ಗಮನ; ವಾಲ್ಮೀಕಿ ನಿಗಮ ಪ್ರಕರಣ ಮುಂದಿಟ್ಟುಕೊಂಡು ಮುಖ್ಯಮಂತ್ರಿ ವಿರುದ್ಧ ರಾಜಕೀಯ ಸಮರ ತೀವ್ರಗೊಳಿಸಿದ ಬಿಜೆಪಿ–ಜೆಡಿಎಸ್. ವಿಶೇಷ ವರದಿ ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟಕ್ಕೆ ಸೇರ್ಪಡೆಯಾದ ಕೇವಲ 25 ದಿನಗಳಲ್ಲೇ ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿರುವುದು, ಒಬ್ಬ ಸಚಿವರ ನಿರ್ಗಮನಕ್ಕೆ ಸೀಮಿತವಾಗದೆ ಸರ್ಕಾರದ ನಾಯಕತ್ವವನ್ನೇ ಪ್ರಶ್ನಿಸುವ ರಾಜಕೀಯ ಅಸ್ತ್ರವಾಗಿ ಪರಿಣಮಿಸಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಸುಮಾರು ₹89.63 ಕೋಟಿ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಆರೋಪಪಟ
vilas joshi
7 days ago2 min read


Deshpande Industries marks 50 years of engineering growth
Belagavi-based enterprise expands from mixer manufacturing to power solutions; new office and factory inaugurated at Udyambag BELAGAVI Deshpande Industries, a Belagavi-based enterprise engaged in diesel generator sets and engineering solutions, is celebrating its golden jubilee this year, marking five decades of operations and expansion across Karnataka, Goa and Maharashtra. Founded by the late Devraj Deshpande and Kusum Deshpande, the enterprise began as a mixer-manufacturin
vilas joshi
Aug 282 min read


ರಾಹುಲ್ ಶಿಂಧೆ ಹೆಗಲಿಗೆ ರಾಜ್ಯದ ಹೊಣೆ
ಬೆಳಗಾವಿ ಜಿಪಂ ಸಿಇಒಗೆ ಪಂಚಾಯತ್ ರಾಜ ಆಯುಕ್ತಾಲಯದ ವಿಶೇಷ ಅಧಿಕಾರಿ ಜವಾಬ್ದಾರಿ. ಬೆಳಗಾವಿ: ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರ ಆಡಳಿತ ಕಾರ್ಯವ್ಯಾಪ್ತಿ ಈಗ ರಾಜ್ಯಮಟ್ಟಕ್ಕೆ ವಿಸ್ತರಿಸಿದೆ. ಹಾಲಿ ಹುದ್ದೆಯೊಂದಿಗೆ ಪಂಚಾಯತ್ ರಾಜ ಆಯುಕ್ತಾಲಯದ ವಿಶೇಷ ಅಧಿಕಾರಿಯಾಗಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆಗಸ್ಟ್ 27ರಂದು ಅಧಿಸೂಚನೆ ಹೊರಡಿಸಿದೆ. ಪಂಚಾಯತ್ ರಾಜ ಆಯುಕ್ತಾಲಯದಲ್ಲಿನ ಸಾಂಸ್ಥಿಕ ಬದಲಾವಣೆ ಮತ್ತು ಖಾಲಿ ಹುದ್ದೆಗಳ ಹಿನ್ನೆಲೆಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ತಾಂತ್ರಿಕ ನೆರವು ಹಾಗೂ ಪರಿಣಾಮಕಾರಿ ಸಮನ್ವಯ ಒದಗಿಸಲು ಈ ಕ್ರಮ ಕೈಗೊಳ್
vilas joshi
Aug 281 min read


ಬರದ ಬೇಗುದಿ ಕಾಣದ ಸರ್ಕಾರದ ಕಣ್ಣು!
ಬರದ ಬೇಗುದಿ ಕಾಣದ ಸರ್ಕಾರದ ಕಣ್ಣು! 101 ತಾಲ್ಲೂಕುಗಳ ಪಟ್ಟಿಯಲ್ಲಿ ಬೆಳಗಾವಿಗೆ ಶೂನ್ಯ; ಹೊಲಕ್ಕಿಳಿದ ಜನಪ್ರತಿನಿಧಿಗಳ ವರದಿಗೂ ಸಿಗದ ಮನ್ನಣೆ. ಸವದತ್ತಿ–ರಾಮದುರ್ಗದಲ್ಲಿ ಬೆಳೆ ಹಾನಿ ಪರಿಶೀಲಿಸಿದ್ದ ಸಚಿವರ ತಂಡ; ಪರಿಹಾರದ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತ ಬೆಳಗಾವಿ: ಮಳೆ ಕೈಕೊಟ್ಟು ಬೆಳೆ ಬಾಡಿದೆ. ಸವದತ್ತಿ, ರಾಮದುರ್ಗ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರು ಬೆಳೆ ಹಾನಿಯ ಗೋಳು ತೋಡಿಕೊಂಡಿದ್ದಾರೆ. ಬಿಜೆಪಿ ನಿಯೋಗ ಹೊಲಗಳಿಗೆ ಭೇಟಿ ನೀಡಿ ಪ್ರತಿಭಟನೆಯನ್ನೂ ನಡೆಸಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ತಂಡವೂ ಹಾನಿಯನ್ನು ಕಣ್ಣಾರೆ ಕಂಡಿದೆ. ಇಷ್ಟೆಲ್ಲ ನಡೆದರೂ ರಾಜ್ಯ
vilas joshi
Aug 272 min read


ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ*
ಬೆಂಗಳೂರು, ಆಗಸ್ಟ್ 27 : ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹ (ಫ್ಲ್ಯಾಶ್ ಫ್ಲಡ್ಸ್) ದುರಂತಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮೂಲದ ಪ್ರವಾಸಿಗರು ಅಥವಾ ನಾಗರಿಕರು ಯಾರಾದರೂ ನಾಪತ್ತೆಯಾಗಿದ್ದರೆ ಅಥವಾ ಸಂಪರ್ಕಕ್ಕೆ ಸಿಗದೇ ಇದ್ದಲ್ಲಿ, ತಕ್ಷಣವೇ ಅವರ ವಿವರಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರವು ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಕೇಂದ್ರ ಗೃಹ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ರಾಜ್ಯ ಸರ್ಕಾರವು ಸತತ ಸಂಪರ್ಕದಲ್ಲಿದ್ದು, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡಲು ಮತ್ತು ನಾಪತ್ತೆಯಾದವರನ್ನು ಪತ್ತೆಹಚ್ಚಲು ಸಮರಪಾದಾದಿಯಲ್ಲಿ ಕ್ರಮ
vilas joshi
Aug 271 min read


ಎಸ್ಐಆರ್: 43 ಲಕ್ಷ ಮತದಾರರಿಗೆ ನೋಟಿಸ್-
,ಆಕ್ಷೇಪಣಾ ಅರ್ಜಿ ಸಮರ್ಪಕ ನಿರ್ವಹಣೆಗೆ ಮನವಿ. ಮುಖ್ಯ ಚುನಾವಣಾ ಆಯುಕ್ತರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರ. ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. SIR ಪ್ರಕ್ರಿಯೆಯಲ್ಲಿ 1.08 ಕೋಟಿಗೂ ಅಧಿಕ ಮತದಾರರನ್ನು ASDDO ಅಡಿಯಲ್ಲಿ ಗುರುತಿಸಲಾಗಿದ್ದು, ಸುಮಾರು 43 ಲಕ್ಷ ಮತದಾರರಿಗೆ ತಾರ್ಕಿಕ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ನಿಜವಾದ
vilas joshi
Aug 251 min read


₹5,000 ಕೋಟಿ ಎಲ್ಲಿ ಹೋಯಿತು? ಸದನದಲ್ಲೇ ಉತ್ತರಿಸಿ’
‘ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಬಿಜೆಪಿ ಗ್ರಾಮೀಣ ಘಟಕ ತಿರುಗೇಟು ಬೆಳಗಾವಿ: ‘ಗೃಹಲಕ್ಷ್ಮಿ ಯೋಜನೆಗೆ ಬಜೆಟ್ನಲ್ಲಿ ಮೀಸಲಿಟ್ಟಿದ್ದ ಎರಡು ತಿಂಗಳ ಕಂತಿನ ಸುಮಾರು ₹5,000 ಕೋಟಿ ಎಲ್ಲಿ ಹೋಯಿತು? ಈ ಕುರಿತು ವಿಧಾನಸಭೆಯಲ್ಲೇ ಉತ್ತರ ನೀಡಿ, ರಾಜ್ಯದ ಮಹಿಳೆಯರಿಗೆ ಸತ್ಯ ತಿಳಿಸಿ’ ಎಂದು ಬಿಜೆಪಿ ಗ್ರಾಮೀಣ ಘಟಕವು ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಆಗ್ರಹಿಸಿದೆ. ‘ಗೃಹಲಕ್ಷ್ಮಿ ಯೋಜನೆಯ ಹಣದ ಕುರಿತ ಆರೋಪಗಳ ಬಗ್ಗೆ ಚರ್ಚೆಗೆ ಸಿದ್ಧ ಎಂದು ಹೆಬ್ಬಾಳಕರ ಹೇಳಿರುವುದು ಸ್ವಾಗತಾರ್ಹ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಚರ್ಚೆ ನಡೆಯುವುದು ಆರೋಗ್ಯಕರ ಬೆಳವಣಿಗೆ. ಆದರೆ, ಈ ಚರ್ಚ

EBelagavi
Aug 251 min read


ಮಗಳು ಹೇಳಿದ ಆ ಒಂದು ಮಾತಿಗೆ... ಬದುಕನ್ನೇ ಮಕ್ಕಳಿಗೆ ಬರೆದಿಟ್ಟ ಉಮಾಶ್ರೀ.
Mlc ಉಮಾಶ್ರೀ ಭಾವುಕ ಮಾತು
vilas joshi
Aug 212 min read


ಗೊತ್ತುವಳಿ ಇಲ್ಲದೆ ಸಭೆ ನಡೆದರೆ ಪಾಲಿಕೆ ಸಭಾಂಗಣಕ್ಕೆ ನುಗ್ಗುತ್ತೇವೆ.
ಆ.18ರ ಪಾಲಿಕೆ ಸಭೆಗೂ ಮುನ್ನ ಕನ್ನಡ ಸಂಘಟನೆಗಳ ಎಚ್ಚರಿಕೆ. ‘ಸೂಕ್ತ ಕ್ರಮ’ದ ಭರವಸೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಕರ್ನಾಟಕ ಪರ ಗೊತ್ತುವಳಿಯನ್ನು ಮಹಾನಗರ ಪಾಲಿಕೆಯಲ್ಲಿ ಅಂಗೀಕರಿಸಬೇಕೆಂಬ ಐದು ತಿಂಗಳ ಹೋರಾಟ ಇದೀಗ ಮತ್ತೊಂದು ನಿರ್ಣಾಯಕ ಹಂತ ತಲುಪಿದೆ. ಆಗಸ್ಟ್ 18ರಂದು ನಡೆಯಲಿರುವ ಪಾಲಿಕೆ ಪರಿಷತ್ ಸಭೆಯ ಕಲಾಪ ಪಟ್ಟಿಯಲ್ಲಿ ಗೊತ್ತುವಳಿ ಸೇರಿಸದಿದ್ದರೆ ಸಭಾಂಗಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಮಾನ ಮನಸ್ಕ ಕನ್ನಡ ಸಂಘಟನೆಗಳ ಮುಖಂಡರು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅ
vilas joshi
Aug 162 min read
bottom of page

