Latest posts

All

Popular

ದಕ್ಷಿಣವೇ ಟಾರ್ಗೆಟ್‌? ಪಿಐಡಿ ಕ್ರಮದ ಹಿಂದೆ ರಾಜಕೀಯ ನೆರಳು!
ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ…!
ಮಂಟಪದ ಬಳಿ ನಿಂತ ‘ಅಕ್ಕ ಪಡೆ’: ಬಾಲ್ಯವಿವಾಹಕ್ಕೆ ಬ್ರೇಕ್!
ಕೇಸರಿ ಅಲೆಗಳಲ್ಲಿ ತೇಲಿದ ಕುಂದಾನಗರಿ

ದಕ್ಷಿಣವೇ ಟಾರ್ಗೆಟ್‌? ಪಿಐಡಿ ಕ್ರಮದ ಹಿಂದೆ ರಾಜಕೀಯ ನೆರಳು!

ಬೆಳಗಾವಿ:ಬಾಂಡ್‌ ಆಧಾರಿತ ಪಿಐಡಿಗಳಿಗೆ ಬ್ರೇಕ್‌ ಹಾಕುವ ಹೆಸರಿನಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ದಕ್ಷಿಣ ವಲಯದಲ್ಲಿ 31 ಪಿಐಡಿಗಳನ್ನು ರದ್ದುಪಡಿಸಿರುವುದು ಈಗ ಆಡಳಿತಾತ್ಮಕ ಕ್ರಮಕ್ಕಿಂತ ಹೆಚ್ಚು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಪ್ರಶ್ನೆ ಸರಳವಾಗಿದೆ: ಬಾಂಡ್‌ ಆಧಾರಿತ ಪಿಐಡಿಗಳು ದಕ್ಷಿಣದಲ್ಲೇ ಮಾತ್ರವೇ ಇವೆ? ಉತ್ತರ ಭಾಗದಲ್ಲಿ ಇಂತಹ ಪ್ರಕರಣಗಳಿಲ್ಲವೇ? ಇದ್ದರೆ ಅವುಗಳ ಮೇಲೆ ಪಾಲಿಕೆ ಮೌನ ಏಕೆ?ಜನರಿಗೆ ತೊಂದರೆ ಉಂಟು ಮಾಡುವ ಯಾವುದೇ ಕ್ರಮ ದಕ್ಷಿಣದಿಂದಲೇ ಆರಂಭವಾಗುತ್ತದೆ; ಉತ್ತರದಲ್ಲಿ ಮಾತ್ರ ‘ಬಾರಾ ಕೂನ್ ಮಾಫ್’ ಎಂಬ ಭಾವನೆ ನಾಗರಿಕರಲ್ಲಿ ಬಲವಾಗುತ್ತಿದೆ….

Read More

ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ…!

ಅನಗೋಳ ನಾಕಾ ಬಳಿ ‘ಅಪಾಯದ ಅಗೆತ’: ಮಣ್ಣು ಕುಸಿದು ಒಬ್ಬರಿಗೆ ಗಾಯ; ಪಕ್ಕದ ಕಟ್ಟಡಗಳ ಜೀವಭದ್ರತೆ ಪ್ರಶ್ನೆ. ಸುರಕ್ಷತಾ ಕ್ರಮಗಳಿಲ್ಲದೆ ಆಳ ಅಗೆದ ಆರೋಪ | ಟಿಪಿಓ ಅನುಮತಿ ಪ್ರಕ್ರಿಯೆಯ ಮೇಲೂ ಅನುಮಾನ | ಪಾಲಿಕೆ ತಕ್ಷಣ ಸ್ಥಳ ಪರಿಶೀಲನೆ ನಡೆಸದಿದ್ದರೆ ದೊಡ್ಡ ದುರಂತದ ಭೀತಿ (Ebelagavi Report)ಬೆಳಗಾವಿ:ನಗರದ ಅನಗೋಳ ನಾಕಾ ಸಮೀಪ ಬಹುಮಹಡಿ ಕಟ್ಟಡ ನಿರ್ಮಾಣಕ್ಕಾಗಿ ಆಳವಾಗಿ ಅಗೆದಿರುವ ಜಾಗ ಈಗ ಕೇವಲ ನಿರ್ಮಾಣ ಕಾಮಗಾರಿಯ ವಿಷಯವಾಗಿ ಉಳಿದಿಲ್ಲ; ಅದು ಪಕ್ಕದ ಕಟ್ಟಡಗಳ ಸ್ಥಿರತೆ, ನಿವಾಸಿಗಳ…

Read More

ಮಂಟಪದ ಬಳಿ ನಿಂತ ‘ಅಕ್ಕ ಪಡೆ’: ಬಾಲ್ಯವಿವಾಹಕ್ಕೆ ಬ್ರೇಕ್!

ಮಂಟಪ ಕಂಡು ಅನುಮಾನಿಸಿದ ಅಕ್ಕ ಪಡೆ▪️ 17 ವರ್ಷದ ಬಾಲಕಿಯ ಮದುವೆ ತಡೆ▪️ ಬಾಲಕಿ ರಕ್ಷಣೆ; CWC ಮುಂದೆ ಹಾಜರು▪️ ತಂದೆ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ಬೆಳಗಾವಿ | ಗಸ್ತಿನಲ್ಲಿದ್ದ ‘ಅಕ್ಕ ಪಡೆ’ಯ ಜಾಗರೂಕತೆಯಿಂದ ಬೆಳಗಾವಿಯಲ್ಲಿ ಬಾಲ್ಯವಿವಾಹವೊಂದು ಕೊನೆಯ ಕ್ಷಣದಲ್ಲಿ ತಡೆಯಲ್ಪಟ್ಟಿದೆ.ಏ.20ರಂದು ವಂಟಮುರಿ ಕಾಲನಿಯಲ್ಲಿ ಪೆಟ್ರೋಲಿಂಗ್ ಮಾಡುತ್ತಿದ್ದ ಅಕ್ಕಪಡೆಯ ಸಿಬ್ಬಂದಿಗೆ ಮನೆಯೊಂದರ ಮುಂದೆ ಮದುವೆ ಮಂಟಪ ಹಾಕಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ವಿಚಾರಿಸಿದಾಗ, ಏ.21ರಂದು 17 ವರ್ಷ 4 ತಿಂಗಳ ಬಾಲಕಿಯ ಮದುವೆಯನ್ನು ಮಹಾರಾಷ್ಟ್ರದ ಪೂನಾ…

Read More

ಕೇಸರಿ ಅಲೆಗಳಲ್ಲಿ ತೇಲಿದ ಕುಂದಾನಗರಿ

ಬಸವ ಜಯಂತಿ ಮೆರವಣಿಗೆಗೆ ಜನಸಾಗರ; ವಚನಗಳ ನಾದ, ಚಂಡೆ–ಮದ್ದಳೆ ಗರ್ಜನೆ, ರೂಪಕ ವಾಹನಗಳ ರಂಗು ಬೆಳಗಾವಿ:ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವದ ಅಂಗವಾಗಿ ಭಾನುವಾರ ಬೆಳಗಾವಿ ನಗರವೇ ಬಸವಮಯವಾಗಿ ಕಂಗೊಳಿಸಿತು. ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಆರಂಭವಾದ ಭವ್ಯ ಮೆರವಣಿಗೆಗೆ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಸಾವಿರಾರು ಬಸವಭಕ್ತರು ಸಾಕ್ಷಿಯಾದರು. ಕೇಸರಿ ಧ್ವಜಗಳ ಅಲೆ, ‘ಜೈ ಬಸವ’ ಘೋಷಣೆ, ವಚನಗಳ ಪಠಣ, ಚಂಡೆ–ಮದ್ದಳೆಯ ಮೊಳಗು—ಇವೆಲ್ಲವೂ ಸೇರಿ ಕುಂದಾನಗರಿಯ ಹೃದಯದಲ್ಲಿ ಬಸವ ತತ್ವದ ಮಹೋತ್ಸವವನ್ನೇ ಸೃಷ್ಟಿಸಿತು. ನಾಗನೂರು…

Read More

ಬೆಳಗಾವೀಲಿ ಫೈರಿಂಗ್..!

ವಕೀಲೆಯ ಮನೆ ಮೇಲೆ ಗುಂಡಿನ ದಾಳಿ: ಬೆಳಗಾವಿಯಲ್ಲಿ ಆತಂಕಮಧ್ಯರಾತ್ರಿ ಮೊದಲ ಮಹಡಿ ಗುರಿಯಾಗಿಸಿ ಫೈರಿಂಗ್; ಗ್ಲಾಸ್‌ಗೆ ತಗುಲಿದ ಗುಂಡಿನ ಗುರುತುಹೈಪ್ರೊಫೈಲ್ ಪ್ರಕರಣಗಳಲ್ಲಿ ವಾದಿಸಿದ್ದ ಪೂಜಾ ಕಾಕತಕರ ಮನೆಗೆ ದಾಳಿ; ಎಫ್‌ಎಸ್‌ಎಲ್ ವರದಿಗಾಗಿ ಪೊಲೀಸರ ನಿರೀಕ್ಷೆಬೆಳಗಾವಿ:ನಗರದ ಕಾನೂನು ವಲಯದಲ್ಲಿ ಆತಂಕ ಮೂಡಿಸಿರುವ ಘಟನೆಯಲ್ಲಿ, ಪ್ರಭಾವಿ ವಕೀಲೆ ಪೂಜಾ ಕಾಕತಕರ ಅವರ ಮನೆ ಮೇಲೆ ಮಧ್ಯರಾತ್ರಿ ಗುಂಡಿನ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿ ದುಷ್ಕರ್ಮಿಗಳು ಫೈರಿಂಗ್ ನಡೆಸಿದ್ದಾರೆ ಎನ್ನಲಾಗಿದ್ದು, ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ…

Read More

ಬ್ರಾಹ್ಮಣರ ಸಹನೆ ದೌರ್ಬಲ್ಯವಲ್ಲ: ಕಾಂಗ್ರೆಸ್‌ಗೆ ಖಡಕ್ ಸಂದೇಶ

ಜನಿವಾರಕ್ಕೆ ಕೈ ಹಾಕಿದರೆ ಜನರ ತೀರ್ಪು ಕಠಿಣವಾಗಲಿದೆ!ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ಆಕ್ರೋಶ; ಕಾಂಗ್ರೆಸ್ ಸರ್ಕಾರಕ್ಕೆ ಸಮುದಾಯದ ನೇರ ಎಚ್ಚರಿಕೆ ಜನಿವಾರಕ್ಕೆ ಕೈ ಹಾಕಿದರೆ ಮತಪೆಟ್ಟಿಗೆಯಲ್ಲಿ ಉತ್ತರ! ಜನಿವಾರ ಅವಮಾನ: ಕಾಂಗ್ರೆಸ್‌ಗೆ ಬ್ರಾಹ್ಮಣರ ನೇರ ಎಚ್ಚರಿಕೆ ಬೆಂಗಳೂರು:ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಈಗ ಕೇವಲ ಪರೀಕ್ಷಾ ಕೇಂದ್ರದ ವಿವಾದವಾಗಿ ಉಳಿದಿಲ್ಲ. ಇದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಧಾರ್ಮಿಕ ಸಂವೇದನಾಶೀಲತೆ, ಆಡಳಿತದ ಹೊಣೆಗಾರಿಕೆ ಮತ್ತು ಒಂದು ಸಮುದಾಯದ…

Read More

ನಮಗೂ ಬೇರೆ ಆಯ್ಕೆಗಳಿವೆ- ಕಾಂಗ್ರೆಸ್‌ ಗೆ ಮುಸ್ಲೀಂರ ಎಚ್ಚರಿಕೆ

ಕಾಂಗ್ರೆಸ್‌ಗೆ ರಾಜ್ಯವ್ಯಾಪಿ ಎಚ್ಚರಿಕೆಯ ಗಂಟೆ ಮಂಡ್ಯದಿಂದ ಎದ್ದ ಮುಸ್ಲಿಂ ಆಕ್ರೋಶ ಈಗ ರಾಜ್ಯ ರಾಜಕಾರಣದ ಚರ್ಚೆ ನಜೀರ್ ಅಹಮ್ಮದ್, ಅಬ್ದುಲ್ ಜಬ್ಬಾರ್ ವಜಾ ನಿರ್ಧಾರಕ್ಕೆ ಕಿಡಿ ನಮಗೂ ಬೇರೆ ರಾಜಕೀಯ ಆಯ್ಕೆಗಳಿವೆ’ — 2028ರ ಚುನಾವಣೆಗೆ ಧರ್ಮಗುರುಗಳ ನೇರ ಸಂದೇಶ. (ಇ ಬೆಳಗಾವಿ ವಿಶೇಷ ವರದಿ) ಬೆಂಗಳೂರು/:ಮಂಡ್ಯದ ಜಾಮಿಯಾ ಮಸೀದಿಯಿಂದ ಕೇಳಿಬಂದ ಮುಸ್ಲಿಂ ಧರ್ಮಗುರುಗಳ ಆಕ್ರೋಶ ಈಗ ಕೇವಲ ಮಂಡ್ಯಕ್ಕೆ ಸೀಮಿತವಾಗಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಸ್ಲಿಂ ಸಮುದಾಯದ ಅಸಮಾಧಾನ ರಾಜ್ಯವ್ಯಾಪಿ ರಾಜಕೀಯ ಸಂದೇಶವಾಗಿ ರೂಪುಗೊಳ್ಳುವ ಸೂಚನೆ…

Read More

ಬೆಳಗಾವಿಯಲ್ಲಿ ಜೆಸಿಬಿ ಗರ್ಜನೆ; ಅಕ್ರಮ ಕಟ್ಟಡದ ಮೇಲೆ ಪಾಲಿಕೆ ಕ್ರಮ

ಬೆಳಗಾವಿ: ನಗರದ ಮಾರುತಿ ಗಲ್ಲಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂದು ಗುರುತಿಸಲಾದ ನಾಲ್ಕಂತಸ್ತಿನ ಕಟ್ಟಡದ ಮೇಲೆ ಬೆಳಗಾವಿ ಮಹಾನಗರ ಪಾಲಿಕೆ ಗುರುವಾರ ಜೆಸಿಬಿ ಕಾರ್ಯಾಚರಣೆ ನಡೆಸಿ ಭಾಗಶಃ ತೆರವುಗೊಳಿಸಿತು. ನಗರದ ಹೃದಯ ಭಾಗದಲ್ಲೇ ನಡೆದ ಈ ಕ್ರಮ ಸಾಕಷ್ಟು ಚರ್ಚೆಗೆ ಕಾರಣವಾಯಿತು.ಅಕ್ರಮ ಕಟ್ಟಡಗಳ ವಿರುದ್ಧ ಪಾಲಿಕೆ ಕೊನೆಗೂ ಕಠಿಣ ನಿಲುವು ತಳೆದಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿರುವ ನಡುವೆಯೇ, ಈ ಕಟ್ಟಡಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳ ಬಳಕೆ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಪ್ರಕರಣ ಮತ್ತಷ್ಟು ಗಂಭೀರತೆಯನ್ನು…

Read More

ಸ್ವಚ್ಛತೆಯ ಸೈನಿಕರಿಗೆ ಸಂತಸದ ಸಫಾರಿ

ಶಿವಜಯಂತಿ ನಿಮಿತ್ತ ವಾರ್ಡ್ 43ರ ಪೌರ ಕಾರ್ಮಿಕರಿಗೆ ಮಾಳವಣ ಪ್ರವಾಸ; ಮಾಜಿ ಉಪಮೇಯರ್ ವಾಣಿ ಜೋಶಿಯವರ ಮಾನವೀಯ ಹೆಜ್ಜೆಗೆ ಮೆಚ್ಚುಗೆ. ಬೆಳಗಾವಿ:ನಗರದ ಸ್ವಚ್ಛತೆಗಾಗಿ ಪ್ರತಿದಿನ ಬೆವರು ಚೆಲ್ಲುವ ಪೌರ ಕಾರ್ಮಿಕರ ಬದುಕಿಗೂ ಒಮ್ಮೆ ಸಂತಸದ ತಂಗಾಳಿ ತಾಗಬೇಕು, ಅವರ ಶ್ರಮಕ್ಕೂ ಗೌರವದ ಸ್ಪರ್ಶ ಸಿಗಬೇಕು ಎಂಬ ಮನದಾಳದ ಆಶಯದಿಂದ, ವಾರ್ಡ್ ನಂ. 43ರಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 25ಕ್ಕೂ ಹೆಚ್ಚು ಪೌರ ಕಾರ್ಮಿಕರನ್ನು ಮಾಜಿ ಉಪಮೇಯರ್ ವಾಣಿ ಜೋಶಿ ಅವರು ಶಿವಜಯಂತಿ ನಿಮಿತ್ತ ಮಹಾರಾಷ್ಟ್ರದ ಮಾಳವಣಕ್ಕೆ ವಿಶೇಷ…

Read More
error: Content is protected !!