
ಅಡಿವೇಶಾಚಾರ್ಯ ಜೋಶಿಯವರ ಜನ್ಮ ಶತಮಾನೋತ್ಸವ
ಅಥಣಿ.ಅಡಿವೇಶಾಚಾರ್ಯ ಜೋಶಿಯವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅಥಣಿಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಪಾಠ, ಪ್ರವಚನ, ನಿತ್ಯ ಪಾರಾಯಣ, ಅನ್ನ ದಾನದಂತಹ ವಿವಿಧ ಧಾರ್ಮಿಕ ಕಾರ್ಯಗಳ ಜೊತೆಗೆ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಬೆಂಗಳೂರಿನ ವಿದ್ಯಾಧೀಶ ಸಂಸ್ಕೃತ ಶೋಧ ಕೇಂದ್ರದ ನಿರ್ದೇಶಕರಾದ ಡಾ.ಕೃಷ್ಣಾಚಾರ್ಯ ಉಪಾಧ್ಯಾಯ ಹೇಳಿದರು.ಅವರು ಅಡಿವೇಶಾಚಾರ್ಯ ಜೋಶಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ನರಸಿಂಹ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜ್ಞಾನ ಸತ್ರದ ಮಂಗಲೋತ್ಸವದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅಡಿವೇಶಾಚಾರ್ಯರು ನಿವೃತ್ತಿಯ ನಂತರ ತಮ್ಮ ಸಂಪೂರ್ಣ ಸಮಯವನ್ನು ದೇವಸ್ಥಾನಕ್ಕಾಗಿ ಮತ್ತು…