ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಬರಮನಿ ದಂಪತಿಗಳಿಗೆ, ಡಾ. ಗಿರೀಶ್ ಸೋನವಾಲ್ಕರ ಮುಂತಾದ ದಾನಿಗಳಿಗೆ ಸನ್ಮಾನ
ದೇವಾಲಯ, ಧ್ಯಾನ ಮಂದಿರ, ಕಲ್ಯಾಣ ಮಂಟಪ ಸಮೇತ ಭವ್ಯ ಯೋಜನೆಗೆ ಭೂಮಿಪೂಜೆ – ಧಾರ್ಮಿಕ ಶ್ರದ್ಧೆಗೂ, ಶೈಕ್ಷಣಿಕ ಪ್ರಗತಿಗೂ ಸಮಾನ ತೂಕವಿರಲಿ ಎಂಬ ಒಗ್ಗೂಡಿದ ಸಂದೇಶ
ಬೆಳಗಾವಿ, ರಡ್ಡಿ ಸಮುದಾಯ ಇಂದು ಧಾರ್ಮಿಕ ಉತ್ಸಾಹದ ಜೊತೆಗೆ ಶೈಕ್ಷಣಿಕ ಬೆಳವಣಿಗೆಗೂ ನಿಷ್ಠೆ ತೋರಿಸುತ್ತಿದೆ. ಬೆಳಗಾವಿ ತಾಲ್ಲೂಕಿನ ಕೆ.ಕೆ.ಗುಡ್ಡದ ಮೇಲೆ ನಿರ್ಮಾಣವಾಗುತ್ತಿರುವ ಶ್ರೀ ವೆಂಕಟೇಶ್ವರ ದೇವಸ್ಥಾನ, ಹೇಮರಡ್ಡಿ ಮಲ್ಲಮ್ಮ ಧ್ಯಾನ ಮಂದಿರ ಮತ್ತು ಕಲ್ಯಾಣ ಮಂಟಪ ಯೋಜನೆಗೆ ಭೂಮಿಪೂಜೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು. ಈ ಭವ್ಯ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖ ನಾಯಕರು, ಸಮುದಾಯದ ಮುಖಂಡರು, ಹಾಗೂ ಭಕ್ತರು ಭಕ್ತಿ-ಭಾವಪೂರ್ಣವಾಗಿ ಭಾಗವಹಿಸಿದ್ದರು.
ರೆಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ,
“ಪ್ರತಿ ವರ್ಷ ತಿಮ್ಮಪ್ಪನ ದರ್ಶನಕ್ಕೆ ತಿರುಪತಿಗೆ ತೆರಳುವ ಈ ಭಾಗದ ಭಕ್ತರಿಗೆ, ಈಗ ತಮ್ಮ ಊರಲ್ಲೇ ತಿರುಪತಿಯ ಅನುಭವ ಸಿಗಲಿದೆ. ದೇವಾಲಯ ಮಾತ್ರವಲ್ಲ, ಶೈಕ್ಷಣಿಕ ಕ್ಷೇತ್ರಕ್ಕೂ ಆದ್ಯತೆ ನೀಡುವುದು ಸಮುದಾಯದ ನೈತಿಕ ಜವಾಬ್ದಾರಿ,” ಎಂದು ಹೇಳಿದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾತನಾಡಿ
R Ramalinga Reddy
“ಯುವಕರಿಗೆ ಹಾಸ್ಟೆಲ್ಗಳ ಅಗತ್ಯ ಇದೆ, ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಸಮುದಾಯದ ಮುಖಂಡರು ಮುಂದೆ ಬರಲಿ. ಈ ದೇವಾಲಯ ಭವಿಷ್ಯದಲ್ಲಿ ಐತಿಹಾಸಿಕ ತಾಣವಾಗಿ ಹೆಸರು ಮಾಡಲಿದೆ. ಸರ್ಕಾರದ ಪರವಾಗಿ ಸಂಪೂರ್ಣ ಸಹಕಾರ ನೀಡಲಾಗುವುದು,” ಎಂದು ಭರವಸೆ ನೀಡಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು,ಮಾತನಾಡಿ
“ಧರ್ಮಾಸಕ್ತಿಯ ಜೊತೆಗೆ ಸಮಾಜದ ಮಕ್ಕಳಿಗೆ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಕೇಂದ್ರಗಳು ಅವಶ್ಯಕ. ಸಮುದಾಯದ ಮುಂದಿನ ತಲೆಮಾರಿಗೆ ಬೆಳಕಿನ ದಾರಿ ತೋರಬೇಕು,” ಎಂದು ಸಲಹೆ ನೀಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಮಾತನಾಡಿ,
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಈ ದೇವಸ್ಥಾನ ನಿರ್ಮಾಣವಾಗುತ್ತಿರುವುದು ನನ್ನ ಅದೃಷ್ಟ ಎಂದರು. *ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಮಾತನಾಡಿ,
ಲಸಮುದಾಯದ ಏಳಿಗೆಗೆ ನನ್ನ ಸಂಪೂರ್ಣ ಬೆಂಬಲವಿದೆ. ದೇವಸ್ಥಾನ ನಿರ್ಮಾಣಕ್ಕೆ ರಾಜ್ಯಸಭಾ ನಿಧಿಯಿಂದ ₹25 ಲಕ್ಷ ಹಾಗೂ ವೈಯಕ್ತಿಕವಾಗಿ ₹1 ಲಕ್ಷ ನೀಡುತ್ತಿದ್ದೇನೆ” ಎಂದು ಘೋಷಿಸಿದರು.
ಈ ಭೂಮಿಪೂಜೆ ಕಾರ್ಯಕ್ರಮದಲ್ಲಿ ಶಾಸಕ ಆಸಿಫ್ ಸೇಠ್, ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಆರ್.ವಿ.ಪಾಟೀಲ, ಬೆಳಗಾವಿ ರಡ್ಡಿ ಸಂಘದ ಪೋಷಕಿ ಇಂದಿರಾಬಾಯಿ ಮಳಲಿ, ಟ್ರಸ್ಟ್ ಅಧ್ಯಕ್ಷ ರಾಮಣ್ಣ ಮುಳ್ಳೂರ, ಉಪಾಧ್ಯಕ್ಷ ಕಾಂತು ಜಾಲಿಬೇರಿ, ಡಾ. ಗಿರೀಶ ಸೋನವಾಲ್ಕರ್, ನಾರಾಯಣ ಭರಮನಿ, ಮಂಜುನಾಥ ಪಾಟೀಲ, ನಾರಾಯಣ ಕೆಂಚರಡ್ಡಿ, ಶ್ರೀನಿವಾಸ ಬೀಸನಕೊಪ್ಪ, ಬಸನಗೌಡ ಕಾಮನಗೌಡರ, ಪಾಂಡುರಂಗ ರಡ್ಡಿ, ರಮೇಶ್ ಜಂಗಲ, ಸಂಜೀವ ಸೊನ್ನದ, ಲತಾ ಅರಕೇರಿ, ಶಾಂತಾ ಜಂಗಲ, ಕಸ್ತೂರಿ ಭರಮನಿ, ಸುಜಾತಾ ಪಾಟೀಲ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.