“ಸರ್ವರಿಗೂ ನ್ಯಾಯ – ಸತೀಶ್”
ಬೆಳಗಾವಿ: “ಶಾಸಕರಿಂದ ಪತ್ರ ಬಂದರೆ, ನಾವು ಅದನ್ನು ಅಧಿಕಾರಿಗಳಿಗೆ ಮುಂದುವರಿಸುತ್ತೇವೆ. ಇದು ಸಾಮಾನ್ಯ ಆಡಳಿತ ಪ್ರಕ್ರಿಯೆ. ಇಲ್ಲಿ ಯಾವುದೇ ಘರ್ಷಣೆ ಇಲ್ಲ!” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.

ಮಾಧ್ಯಮಗೋಷ್ಡಿಯಲ್ಲಿ ಸಚಿವರು ಹೇಳಿದ್ದಿಷ್ಟು…
- ಅಧಿಕಾರಿ ವರ್ಗಾವಣೆ ವಿವಾದದ ತಿರುಳು:
“ರಾಜಕೀಯದಲ್ಲಿ ಆರೋಪಗಳು ಸಹಜ. ಆದರೆ ನಮ್ಮ ಸರ್ಕಾರದಲ್ಲಿ ಯಾವ ಅಧಿಕಾರಿಯನ್ನೂ ಒಂದು ವರ್ಷದೊಳಗೆ ಬದಲಾಯಿಸುವ ಪದ್ಧತಿ ಇಲ್ಲ. ಪ್ರತಿಯೊಬ್ಬರೂ 4 ವರ್ಷ ಸೇವೆ ಸಲ್ಲಿಸಲಿ ಎಂಬುದು ನಮ್ಮ ನೀತಿ.”
- ದೆಹಲಿಯಲ್ಲಿ ವರ್ಗಾವಣೆ ಚರ್ಚೆ ನಡೆದಿರುವುದನ್ನು ಸಂಪೂರ್ಣವಾಗಿ ನಿರಾಕರಿಸಿದರು.

- ಜಮೀನು ಅಕ್ರಮದ ತನಿಖೆ:
ಬೈಲಹೊಂಗಲ್ ಎ.ಸಿ. ಅವರಿಂದ ಸರ್ಕಾರಿ ಜಮೀನನ್ನು ಖಾಸಗೀಕರಿಸಿದ ಆರೋಪಗಳ ಬಗ್ಗೆ ಜಿಲ್ಲಾಧಿಕಾರಿಗಳು ತನಿಖೆ ನಡೆಸಿದ್ದಾರೆ. ತಪ್ಪು ಸಾಬೀತಾದಲ್ಲಿ ಕಟ್ಟುನಿಟ್ಟಾದ ಕ್ರಮ ಖಚಿತವಾಗಿ ತೆಗೆದುಕೊಳ್ಳಲಾಗುವುದು. - ಕೇಂದ್ರಕ್ಕೆ ಕಟುವಾದ ಮನವಿ:
ಸಿಎಂ ಸಿದ್ದರಾಮಯ್ಯರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, “ರಾಜ್ಯಕ್ಕೆ ತೆರಿಗೆ ಪಾಲಿನಲ್ಲಿ ನ್ಯಾಯ ಸಿಗುತ್ತಿಲ್ಲ” ಎಂದು ವಾದಿಸಿರುವುದಾಗಿ ಖಚಿತಪಡಿಸಿದರು. - ರಸ್ತೆ ಸಮಸ್ಯೆಗೆ ತ್ವರಿತ ಭರವಸೆ:
ಹಾಳಾದ NH ರಸ್ತೆಗಳ ಬಗ್ಗೆ 24 ಗಂಟೆಗಳೊಳಗೆ ಎನ್ಎಚ್ಐಅಧಿಕಾರಿಗಳ ಗಮನಕ್ಕೆ ತರಲಿದ್ದಾರೆ. “ಗೋವಾ ರಸ್ತೆ ಸಮಸ್ಯೆಗೆ ತಕ್ಷಣ ಪರಿಹಾರ ಸಿಕ್ಕಿದಂತೆ, ಇದಕ್ಕೂ ಕ್ರಮ ಕೈಗೊಳ್ಳುತ್ತೇವೆ” ಎಂದರು. - ಹುಕ್ಕೇರಿ ಘಟನೆ: ಸತ್ಯ ಬೇರೆ!
ಇಂಗಳಗಿಯಲ್ಲಿ ಶ್ರೀರಾಮಸೇನಾ ಕಾರ್ಯಕರ್ತರನ್ನು ಥಳಿಸಿದ ಪ್ರಕರಣ “ಸಾಮುದಾಯಿಕ ಹಿಂಸೆಯಲ್ಲ, ವೈಯಕ್ತಿಕ ಜಗಳ”. ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. - ಶಾಸಕ ರಾಜು ಕಾಗೆ ಗೈರುಹಾಜರಿ ವಿವರಣೆ:
“ಬೆಳಗಾವಿಯಲ್ಲಿ ಅಧಿಕಾರಿ ಸಭೆ ಇದ್ದುದರಿಂದ ಸುರ್ಜೇವಾಲಾ ಅವರ ಸಭೆಗೆ ಹಾಜರಾಗಲಾಗಲಿಲ್ಲ. ನಾಳೆ ವೈಯಕ್ತಿಕವಾಗಿ ಭೇಟಿಯಾಗಲಿದ್ದೇವೆ.”