ಪ್ರಿಯಾಂಕಾ ಮತದಾರರ ಮನ ಗೆದ್ದಿದ್ದು ಹೇಗೆ ಗೊತ್ತಾ?
ಬೆಳಗಾವಿ: ಇದು ಚುನಾವಣೆ ಕಾಲ. ಕಾವೇರಿದ ಬಿಸಿ ಬಿಸಿ ವಾತಾವರಣ. ಜತೆಗೆ ಸಂಸ್ಕೃತಿ ಸಂಸ್ಕಾರಗಳ ಅನಾವರಣ.ಪ್ರಚಾರದ ಭರಾಟೆಯಲ್ಲಿ ಪರಸ್ಪರ ಕೆಸರೆರಚಾಟ. ವೈಯಕ್ತಿಕ ನಿಂದನೆ, ಚಾರಿತ್ರ್ಯವಧೆ ಎಲ್ಲವೂ ಈಗ ಸಾಮಾನ್ಯ. ಈ ಎಲ್ಲ ಬೆಳವಣಿಗೆಗಳ ನಡುವೆ ತೀರಾ ಅಪರೂಪದ ಅಭ್ಯರ್ಥಿ ಯಾಗಿ ಕಾಣಿಸಿಕೊಳ್ಳುವುದು ಚಿಕ್ಕೋಡಿ ಕೈ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿಜಾರಕಿಹೊಳಿ ಮನೆತನದ ಕುಡಿಯಾದರೂ ವಿನಯ ವಿಧೇಯತೆಯ ಪ್ರತಿರೂಪವಾಗಿ ಪ್ರಿಯಾಂಕಾ ಗಮನ ಸೆಳೆಯುತ್ತಾರೆ. ಚಿಕ್ಕೋಡಿ ಲೋಕಸಭಾ ಅಭ್ಯರ್ಥಿ ಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ಸುತ್ತಾಡಿ ಪ್ರಚಾರ ನಡೆಸುತ್ತಿರುವ ಪ್ರಿಯಾಂಕಗೆ…