ಬೆಳಗಾವಿಗೆ ಮೋದಿ

ಬೆಳಗಾವಿ. ಲೋಕಸಮರದ ಕಾವು ಏರುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ದಿ.‌28 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಅಂದು ಸಂಜೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುವ ಯಡಿಯೂರಪ್ಪ ಮಾರ್ಗದ ಬಳಿ ಇರುವ ಮಾಲಿನಿ ಸಿಟಿಯ ಮೈದಾನದಲ್ಲಿ ಆಯೋಜಿಸಲಾದ ಪ್ರಚಾರ ಸಭೆಯಲ್ಕಿ ಅವರು ಭಾಗವಹಿಸುವರು‌. ಈ ಕಾರ್ಯಕ್ರಮಕ್ಕೆ ಕನಿಷ್ಟ ಒಂದು ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಬಿಜೆಪಿಯವರು ಹೊಂದಿದ್ದಾರೆ.

Read More

ಚಲೋ ಮಾರುತಿ‌ ಮಂದಿರ

ಬೆಳಗಾವಿ. ಹುಬ್ಬಳ್ಳಿ ನೇಹಾ ಹಿರೇಮಠ ಭೀಕರ ಹತ್ಯೆಯನ್ನು ಖಂಡಿಸಿ ಮಹಿಳಾ ಜಾಗ್ರತಿ ವೇದಿಕೆಯವರು ಸೋಮವಾರ ನಡೆಸುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬೆಳಗಾವಿ ಮಾರುತಿ ಗಲ್ಲಿಯ ಮಾರುತಿ‌ ಮಂದಿರದಿಂದ ಬೆಳಿಗ್ಗೆ 1೦.3೦ ಕ್ಕೆ ಪ್ರತಿಭಟನಾ ಮೆರವಣಿಗೆ ಹೊರಡಲಿದೆ. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಲಿದೆ. ಈ ಪ್ರತಿಭಟನೆಗೆ ಎಲ್ಲ ಸಮಾಜದವರು ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಸಹ ತನ್ನ ಬೆಂಬಲ ವ್ಯಕ್ತಪಡಿಸಿದೆ.

Read More

LOVE JIHAD..ಆರದ ಕಿಚ್ಚು.. ಬೆಳಗಾವಿಗೂ ಬಂತು

ಬೆಳಗಾವಿ. ಕಾಲೇಜು ಯುವತಿಯರಿಗೆ ಮಾತ್ರ ಸಿಮೀತವಾಗಿದ್ದ ಲವ್ ಜಿಹಾದ್ ನ‌ ಮತ್ತೊಂದುನ ಕರಾಳ ಮುಖ ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ನೇಹಾ ಹಿರೇಮಠ ಸಾವಿನ ಕಿಚ್ಚು ಈಗ ರಾಜ್ಯವ್ಯಾಪಿ ಹಬ್ಬಿದೆ. ಈಗ ಬೆಳಗಾವಿಯಲ್ಲೂ ಕೂಡ ಲವ್ ಜಿಹಾದ ಘಟನೆ ನಡೆದ ವರದಿಯಾಗಿವೆ. ಹುಬ್ವಳ್ಳಿ ಘಟನೆಯ ಪ್ರಮುಖ‌ ಆರೋಪಿಫಯಾಜ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ‌ಮುನವಳ್ಖಿಯವನು ಇಲ್ಲಿ ಕೂಡ ವಿವಾಹಿತೆಗೆ ಲೈಂಗಿಕ ದೌರ್ಜನ್ಯ ಕೊಟ್ಟು ಮತಾಂತರಕ್ಕೆ ಪೀಡಿಸಿದವರೂ ಸಹ‌ ಸವದತ್ತಿ ತಾಲೂಕಿನ ಮುನವಳ್ಳಿಯವರೇ.! ಏನಿದು ಪ್ರಕರಣ…

Read More

ಚಿಕ್ಕೋಡಿಯಲ್ಲಿ ಯಾರ ಹವಾನೂ ಇಲ್ಲ…!

ಚಿಕ್ಕೋಡಿಯಲ್ಲಿ ಯಾವ ಮೋದಿ ಹವಾನೂ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹವಾ ಇದೆ ಹೊರತು ಪ್ರಧಾನಿ ಮೋದಿ ಅವರ ಹವಾ ಇಲ್ಲ. ಮೋದಿ ಅವರ 10 ವರ್ಷದ ವೈಫಲ್ಯಗಳಿಂದ ಜನ ಬೇಸತ್ತು ಜನ ಕಾಂಗ್ರೆಸನತ್ತ ಮುಖ ಮಾಡುತ್ತಿದ್ದಾರೆ. ಚಿಕ್ಕೋಡಿಯಲ್ಲಿ ಏನೆ ಇದ್ದರೂ ಕ್ಯಾಂಡೆಟ್ ವರ್ಸಿಸ್ ಕ್ಯಾಂಡೆಟ್ ಅಷ್ಟೆ ಎಂದು ಲೋಕೊಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಯಮಕನಮರಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅನೇಕ ಜನಪರ ಯೋಜನೆಗಳನ್ನೂ ಜಾರಿಗೆ…

Read More

ರೈತರ ಸಾಲ‌ ಮನ್ನಾ ಮಾಡಿದ್ದೇ ಕಾಂಗ್ರೆಸ್..!

ರಾಜ್ಯದಲ್ಲಿ ಎರಡು, ಕೇಂದ್ರದಲ್ಲಿ ಒಂದು ಬಾರಿ ರೈತರ ಸಾಲ ಮನ್ನಾ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ: ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ರೈತರ, ಬಡವರ, ಹಿಂದುಳಿದವರ, ದೀನ ದಲಿತರ ಪಕ್ಷ- ಕಾಂಗ್ರೆಸ್ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಿ ಹುಕ್ಕೇರಿ: ಕಾಂಗ್ರೆಸ್ ರೈತರ, ಬಡವರ, ಹಿಂದುಳಿದವರ, ದೀನ ದಲಿತರ ಪಕ್ಷ. ಅದಕ್ಕಾಗಿಯೇ ರಾಜ್ಯದಲ್ಲಿ ಎರಡು ಬಾರಿ, ಕೇಂದ್ರದಲ್ಲಿ ಒಂದು ಬಾರಿ ರೈತರ ಸಾಲವನ್ನು ಮನ್ನಾ ಮಾಡಿದೆ ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ…

Read More

ಕುಂಕುಮ ರಕ್ಷಿಸದ ಕಾಂಗ್ರೆಸ್ ಸರ್ಕಾರ

ಇಲ್ಲಿ ಹಿಂದೂ ಮಹಿಳೆಯರೇ ಟಾರ್ಗೆಟ್. ಕುಂಕುಮ ಉಳಿಸಿ ಹೋರಾಟಕ್ಕೆ ಸಿದ್ಧರಾದ ಹಿಂದೂಗಳು. ಬೇಜವಾಬ್ದಾರಿ ಉತ್ತರ ಕೊಟ್ಟು ಕ್ಷಮೆ ಕೇಳಿದ ಗೃಹ ಸಚಿವರು ಆಗ ಶೀತಲ್. ಈಗ ನೇಹಾ..ಮುಂದೆ..!ಬೆಳಗಾವಿ ಪೊಲೀಸರ ಧೈರ್ಯಹುಬ್ಬಳ್ಳಿಯವರಿಗೆ ಏಕೆ ಬರಲಿಲ್ಲ ? ಬೆಳಗಾವಿ.ಎತ್ತ ಸಾಗುತ್ತಿದೆ ಕರ್ನಾಟಕ, ಹೆಣ್ಣಿಗೆ ಕೈ ಮುಗಿದು ಗೌರವಿಸುವ ನಾಡಿದು. ಹೆಣ್ಣಿನ ಅರಿಶಿನ ಕುಂಕುಮವನ್ನೇ ನಾಡ ಧ್ವಜವನ್ನಾಗಿ ಮಾಡಿದ ನಾಡಿದು, ಸದಾ ಕನ್ನಡಾಂಬೆಯ ಪೂಜಿಸೊ ನಾಡಿದು.ಈಗ ಹೇಳಿ.. ಎಲ್ಲಿದೆ ನಮ್ಮ ಸರ್ವಜನಾಂಗದ ಶಾಂತಿಯ ತೋಟ…! ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಎಂಸಿಎ ಮೊದಲ…

Read More

ನೇಹಾ ಕೊಲೆ-ಎಬಿವಿಪಿ ಪ್ರತಿಭಟನೆ

ಬೆಳಗಾವಿ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಅವಳನ್ನು ಜಿಹಾದಿ ಮನಸ್ಥಿತಿಯ ಫಯಾಜ್ ಎಂಬಾತ ಭೀಕರ ಹತ್ಯೆ ಮಾಡಿರುವುದನ್ನು ಖಂಡಿಸಿ ಶುಕ್ರವಾರ ಎಬಿವಿಪಿ ಕಾರ್ಯಕರ್ತರು ಇಲ್ಲಿನ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.ಶಾಲಾ, ಕಾಲೇಜುಗಳು ಜ್ಞಾನದ ದೇಗುಲಗಳು. ಇಂತಹ ದೇಗುಲದಲ್ಲಿ ಹಾಡಹಗಲೇ ವಿದ್ಯಾರ್ಥಿನಿ ನೇಹಾಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಿಜಕ್ಕೂ ವಿದ್ಯಾರ್ಥಿ ಸಮುದಾಯದಲ್ಲಿ ಭಯದ ವಾತಾವರಣ ಮೂಡಿಸಿದೆ. ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಎಂಸಿಎ…

Read More

ಮಂಗಲಾ ಅಂಗಡಿ ಕಣ್ಣೀರಿಗೆ ಭಾವುಕರಾದ ಮತದಾರರು..!

ಸಂಸದೆ ಮಂಗಲಾ ಅಂಗಡಿ ಕಣ್ಣೀರು ಹಾಕಿದ್ದೇಕೆ? ಬೆಳಗಾವಿ:ಚುನಾವಣೆ ಅಥವಾ ಮತ್ತೊಂದು ಏನೇ ಇರಲಿ .ವ್ಯಕ್ತಿ ಜೀವಿತವಾಗಿದ್ದಾಗ ಏನು ಬೇಕಾದರೂ ಆರೋಪ ಮಾಡಬಹುದು, ಅದನ್ನು ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಲ್ಲ.ಆದರೆ ಸತ್ತು ಹೋದ ವ್ಯಕ್ತಿ ಬಗ್ಗೆ ಚುನಾವಣೆಯಲ್ಲಿ ಆರೋಪ ಮಾಡುತ್ತ ಹೋದರೆ ಅದನ್ನು ಜನ ಸಹಿಸಿಕೊಳ್ಳುತ್ತಾರಾ? ಅದನ್ನು ಒಪ್ಪುವುದೇ ಇಲ್ಲ.ಏಕೆಂದರೆ ಬೆಳಗಾವಿ ಲೋಕಸಭೆ ಕ್ಷೇತ್ರದ ಪ್ರಜ್ಞಾವಂತ ಮತದಾರರು ಭಾವನಾ ಜೀವಿಗಳು, ಸತ್ತ ವ್ಯಕ್ತಿ ಬಗ್ಗೆ ಇಲ್ಲ ಸಲ್ಕದ್ದನ್ನು ಮಾತನಾಡಿದರೆ ಸಹಿಸಿಕೊಳ್ಳಲ್ಲ ಎನ್ನುವುದು ಸ್ಪಷ್ಡ. ಇಲ್ಲಿ ಸ್ಪಷ್ಟವಾಗಿ ಹೇಳಬೇಕೆಂದರೆ ಕಳೆದ…

Read More

ಭಂಡಾರದಲ್ಲಿ ಮಿಂದೆದ್ದ ಹಿರೇಬಾಗೇವಾಡಿ’

ಬೆಳಗಾವಿ. ಎತ್ತ ನೋಡಿದರತ್ತ ಭಂಡಾರ ತೂರಾಟ. ಭಕ್ತಿಯ ಪರಾಕಾಷ್ಠೆ ಮೆರೆದ ಜನ ಸಮೂಹ. ಗ್ರಾಮ ದೇವಿಯ ಮೂತರ್ಿಯನ್ನು ಹೊತ್ತು ಸಾಗುತ್ತಿರುವ ಭಕ್ತರು…! ಅಬ್ಬಾ ಇದೆಲ್ಲವನ್ನು ನೋಡಲು ನಿಜವಾಗಿಯೂ ಎರಡು ಕಣ್ಣು ಸಾಲದು. ಈ ಎಲ್ಲ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮ.! ಸುತ್ತಲಿನ ಹತ್ತೂರ ಹಳ್ಳಿಗಳ ಒಡೆಯ’ ಎಂದು ಕರೆಯಿಸಿಕೊಳ್ಳುವ ಹಿರೇಬಾಗೇವಾಡಿಯಲ್ಲಿ ಕಳೆದ 25 ವರ್ಷಗಳ ನಂತರ ಗ್ರಾಮದೇವತೆ ಜಾತ್ರೆ ನಡೆಯುತ್ತಿದೆ, ಇದರ ಜೊತೆಗೆ ಫಡೀಬಸವೇಶ್ವರ ಜಾತ್ರೆ ನಡೆಯುತ್ತಿದೆ.ಕಳೆದ ದಿ 12 ರಿಂದ ಆರಂಭಗೊಂಡ ಈ…

Read More

ಅತ್ಯಂತ ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

ಚಿಕ್ಕೊಡಿಯಲ್ಲಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ. ಆಡಂಬರ ಇಲ್ಲ, ವಾದ್ಯ ಮೇಳಗಳೂ ಇಲ್ಲ. ಹಾಗೇ ಬಂದು ನಾಮಪತ್ರ ಕೊಟ್ಟು ಹೋದರು. ಪ್ರಿಯಾಂಕಾಗೆ ಸಹೋದರ ರಾಹುಲ್ ಮತ್ತು ತಂದೆ ಸತೀಶ್ ಜಾರಕಿಹೊಳಿ ಸಾಥ್. ಸರಳತೆಗೆ ಮತ್ತೊಂದು ಹೆಸರು ಪ್ರಿಯಾಂಕಾ. ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿಯವರು ಇಂದು ಚಿಕ್ಕೋಡಿಯ ಎಸಿ ಕಚೇರಿಯಲ್ಲಿ ಚುನಾವಣಾಧಿಕಾರಿಗಳಾದ ರಾಹುಲ್ ಶಿಂಧೆ ಅವರಿಗೆ ಅತ್ಯಂತ ಸರಳವಾಗಿ ನಾಮಪತ್ರ ಸಲ್ಲಿಸಿದರು.ತಂದೆ, ಸಚಿವರಾದ ಸತೀಶ್ ಜಾರಕಿಹೊಳಿಯವರ ಹಾದಿಯಲ್ಲಿ ಸಾಗುತ್ತಿರುವ ಪ್ರಿಯಂಕಾ…

Read More
error: Content is protected !!