ಈಶ್ವರಪ್ಪ ಮೆರವಣಿಗೆಯಲ್ಲಿ ಮೋದಿ ಹವಾ..!
ಶಿವಮೊಗ್ಗ. ಯಾರ ಮಾತಿಗೂ ಬಗ್ಗದ ಕೆ.ಎಸ್. ಈಶ್ವರಪ್ಪ ಕೊಬೆಗೂ ಶಿವಮೊಗ್ಗದಿಂದಲೇ ಬಿಜೆಪಿ ಬಂಡಾಯ ಅಭ್ಯರ್ಥಿ ಯಾಗಿ ಕಣದಲ್ಲಿ ಉಳಿದು ತಮ್ಮ ನಾಮಪತ್ರವನ್ನು ಇಂದು ಸಲ್ಲಿಸಿದರು. ಕಳೆದ ಹಲವು ದಿನಗಳಿಂದ ಕಣದಿಂದ ಹಿಂದೆ ಸರಿಯಬಹುದು ಎನ್ನುವ ಗಾಳಿ ಸುದ್ದಿಗೆ ಈಶ್ವರಪ್ಪ ನಾಮಪತ್ರ ಸಲ್ಲಿಸುವ ಮೂಲಕ ಸ್ಪರ್ಧೆಯನ್ನು ಖಚಿತಪಡಿಸಿದರು. ಸಾವಿರಾರು ಸಂಖ್ಯೆಯಲ್ಲಿದ್ದ ನಾಮಪತ್ರ ಸಲ್ಲಿಸಲು ಹೊರಟ ಮೆರವಣಿಗೆಯಲ್ಲಿ ಭಗವಾ ಧ್ವಜಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿಜಿಯವರ ಪೊಟೊ ರಾರಾಜಿಸುತ್ತಿತ್ತು. ಅಷ್ಟೇ ಅಲ್ಲ ಜೈ ಶ್ರೀರಾಮ ಘೋಷಣೆಗಳು ಕಿವಿಗಡಚಿಕ್ಕುವಂತೆ ಕೇಳಿ ಬಂದವು….