Headlines

ಸತೀಶ್ ಸಂಧಾನ- ಪ್ರತಿಭಟನೆ ವಾಪಸ್

ಸಚಿವ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಸಂಧಾನ ಸಭೆ; ಧರಣಿ ಕೈ ಬಿಟ್ಟ ರೈತರು ಬೆಳಗಾವಿ: ಹಿಡಕಲ್ ಡ್ಯಾಮ್ ಹಿನ್ನೀರಿಗೆ ಜಮೀನು ಕಳೆದುಕೊಂಡ ರೈತರು ನೀರಾವರಿ ಇಲಾಖೆಯಿಂದ ಪರಿಹಾರ ನೀಡುವಂತೆ ಆಗ್ರಹಿಸಿ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ಸೋಮವಾರದಿಂದ ಮುತ್ತಿಗೆ ಹಾಕಿ ನಡೆಸುತ್ತಿರುವ ಧರಣಿಯನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮಾಸ್ತಿಹೊಳಿ ಗ್ರಾಮದ ರೈತರು ಧರಣಿಯನ್ನು ಇಂದು ಕೈ ಬಿಟ್ಟಿದ್ದಾರೆ.ಸೋಮವಾರ ಚನ್ನಮ್ಮಾ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಾಸ್ತಿಹೊಳಿ…

Read More

ಪಾಲಿಕೆ ಪರಿಷತ್ ಕಾರ್ಯದರ್ಶಿ ಅಮಾನತ್

ಬೆಳಗಾವಿ. ಮಹಾನಗರ ಪಾಲಿಕೆಯ ಬಿಜೆಪಿ ಮೊದಲ ಅವಧಿಯಲ್ಲಿ ನಡೆದ ಕಡತ ನಾಪತ್ತೆ ಮತ್ತು ದಾಖಲೆ ತಿದ್ದುಪಡಿ ಮಾಡಿದ ಪ್ರಕರಣಕ್ಜೆ ಸಂಬಂಧಿಸಿದಂತೆ ಪರಿಷತ್ ಕಾರ್ಯದರ್ಶಿ ಉಮಾ ಬಡಿಗೇರ್ ಅವರನ್ನು ಅಮಾನತ್ ಮಾಡಿ ಆದೇಶ ಹೊರಡಿಸಲಾಗಿದೆ. ಬಿಜೆಪಿ ಮೇಯರ ಶೋಭಾ ಸೋಮನ್ನಾಚೆ ಅವಧಿಯಲ್ಲಿ ಈ ಪ್ರಕರಣ ನಡೆದಿತ್ತು. ಮೇಲ್ನೋಟಕ್ಕೆ ಇದರಲ್ಲಿ ಪರಿಷತ್ ಕಾರ್ಯದರ್ಶಿ ಅವರನ್ನು‌ ಬಲಿಕಾ ಬಕರಾ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Read More

‘ಬಿ ಫಾರ್ಮ ಬರೋವರೆಗೆ ಏನೂ ‘ಗ್ಯಾರಂಟಿ’ ಅಲ್ಲ

ಬೆಳಗಾವಿ. ರಾಜಕಾರಣದಲ್ಲಿ ಪಕ್ಷ ನಿಷ್ಠೆ , ಕಾರ್ಯಕರ್ತರೇ ನಮ್ಮ‌ ದೇವರು ಎನ್ನುವುದು ಬರೀ ಬೊಗಳೆ. ರಾಜಕೀಯ ನಾಯಕರಿಗೆ ಭಾಷಣಕ್ಕೆ ಸಿಮೀತ. ಅದನ್ಬು ಬಿಟ್ಟರೆ ಎಲ್ಲವೂ ಬರೀ ಓಳು ಸಾರ್ ಬರೀ ಓಳು..! ಸಹಜವಾಗಿ ಚುನಾವಣೆ ಬಂದಾಗ ನಿಷ್ಠಾವಂತ ಕಾರ್ಯಕರ್ತರಿಗೆ ಆಧ್ಯತೆ ಎನ್ನುವ ಮಾತುಗಳು ಈಗ ಒಂದು ರೀತಿಯಲ್ಲಿ ಹಾಸ್ಯಾಸ್ಪದವಾಗುತ್ತಿವೆ. ಆದರೆ ಟಿಕೆಟ್ ಕೊಡುವಾಗ ಕುಟುಂಬ ವರ್ಗ, ತಪ್ಪಿದರೆ ಹಣಬಲ, ತೋಳ್ಬಲ ಉಳ್ಳವರಿಗೆ ಟಿಕೇಟು ಹೋಗುತ್ತದೆ ಎನ್ನುವುದು ಸುಳ್ಳಲ್ಲ. ಸಧ್ಯ ಮುಂಬರುವ ಲೋಕಸಭೆ‌ ಚುನಾವಣೆ ಮುಂದಿಟ್ಟುಕೊಂಡು ಕೆಲವರು ನಡೆಸಿದ…

Read More

KMF ಗೆ ಬಾಲಚಂದ್ರ ಸೇರಿ 13 ಜನ‌ ಅವಿರೋಧ ಆಯ್ಕೆ

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ಇನ್ನು ಅಥಣಿ, ಬೈಲಹೊಂಗಲ, ರಾಮದುರ್ಗ ತಾಲೂಕುಗಳ 3 ಸ್ಥಾನಗಳಿಗೆ ಬರುವ ಭಾನುವಾರದಂದು ಚುನಾವಣೆ ಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ ರೂವಾರಿ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ: ಬರುವ ದಿನಾಂಕ 17 ರಂದು ಜರುಗುವ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ….

Read More

ಸರ್ಕಾರಿ ಕಚೇರಿಯಲ್ಲೇ ಹುಟ್ಟು ಹಬ್ಬ ಆಚರಣೆ- ವಿವಾದಕ್ಕೊಳಗಾದ ಪಿಡಿಓ

ಕಚೇರಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡು ವಿವಾದಕ್ಕೊಳಗಾದ ಅಧಿಕಾರಿ ಖಾನಾಪುರ. ಅಧಿಕಾರ ಮತ್ತು ಅದಕ್ಕೆ ತಕ್ಕಂತೆ ಕುರ್ಚಿ ಸಿಕ್ಕರೆ ಸಾಕು ಕೆಲವರು ಸರ್ಕಾರವೇ ನಾವ್ ಹೇಳಿದಂತೆ ನಡೆಯುತ್ತದೆ ಎಂದು ಭಾವಿಸುತ್ತಾರೆ. ಅವರಿಗೆ ಸರ್ಕಾರದ ಆದೇಶಗಳು ಲೆಕ್ಕಕ್ಕೇ ಬರಲ್ಲ ಬ ಇನ್ನು ಅವರ ಮೇಲಾಧಿಕಾರಿಗಳ ಮಾತು ಎಷ್ಟರ ಮಟ್ಟಿಗೆ ಕೇಳಬಹುದು ಎನ್ನುವ ಊಹೆ ತಮಗೆ ಬಿಟ್ಟಿದ್ದು. ಸರ್ಕಾರಿ ಕಚೇರಿಗಳಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಬಾರದು ಎನ್ನುವುದು ಸರ್ಕಾರದ ಆದೇಶ. ಹಿಂದೆ ಅಂತಹ ಘಟನೆಗಳು ನಡೆದಾಗ ಸರ್ಕಾರ ಹಿಂದೆ ಮುಂದೆ ನೋಡದೇ…

Read More

ಹೊಸ ಟರ್ಮಿನಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ

ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳಗಾವಿ, ಕೇಂದ್ರ ಸರ್ಕಾರ ಕೇವಲ ಘೋಷಣೆಗೆ ಮಾತ್ರ ಸೀಮಿತವಲ್ಲ; ನಿರಂತರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ದೇಶದಲ್ಲಿನ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ರೈಲ್ವೆ ನಿಲ್ದಾಣ, ರೈಲು ಮಾರ್ಗ ನಿರ್ಮಾಣ, ಹೊಸ ಶಿಕ್ಷಣ ನೀತಿ ಜಾರಿ, ಕಿಸಾನ್ ಸಮ್ಮಾನ ಯೋಜನೆ ಸೇರಿದಂತೆ ಸರ್ಕಾರ ದೇಶದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ…

Read More

ವಾರ್ಡ ಅಭಿವೃದ್ಧಿಗೆ ಬದ್ಧ- ಅಭಯ

ಬೆಳಗಾವಿ.ದಕ್ಷಿಣ ವಿಧಾನಸಭಾ ಕ್ಷೇಡತ್ರದಲ್ಲಿ ಬರುವ ಎಲ್ಲ ವಾರ್ಡಗಳ ಅಭಿವೃದ್ಧಿ ಕಟಿಬದ್ಧನಿರುವುದಾಗಿ ಶಾಸಕ ಅಭಯ ಪಾಟೀಲರು ಭರವಸೆ ನೀಡಿದರು. ಮಹಾನಗರ ಪಾಲಿಕೆ ವಾರ್ಡ ನಂಬರ 43 ರಲ್ಲಿ ಬರುವ ಅನಗೋಳ ನಾಕಾದಲ್ಲಿ 9 ಲಕ್ಷ ರೂ ವೆಚ್ಚದ ಕಮಾನ್ ಮತ್ತು ಮೃತ್ಯುಂಜಯನಗರದ ಬಿಪಿಯಲ್ಲಿ 11 ಲಕ್ಷ ರೂ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಅವರು ಚಾಲನೆ ನೀಡಿದರು, ಈ ಸಂದರ್ಭದಲ್ಲಿ ನಗರಸೇವಕಿ ಮತ್ತು ನಗರ ಯೋಜನೆ ಹಾಗೂ ಅಭಿವೃದ್ಧಿ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ಅವರು ಹಾಜರಿದ್ದರು,ಈ…

Read More

ಕರಿ ಗೊಂಬೆಗೆ ಜೋಡಿ ಹಲ್ಲು- ಬೆಚ್ವಿದ ಜನ

ಬೆಳಗಾವಿ ಪಾಲಿಕೆ ಕಟ್ಟಡಕ್ಕೆ ಕರಿಗೊಂಬೆ ಕಾಟ. ಕರಿಗೊಂಬೆಗೆ ಇವೆ ಅಂತೆ ಜೋಡಿ ಹಲ್ಲು ಒಂದು ಫುಟ ಉದ್ದದ ಕರಿಗೊಂಬೆ. ಮರಕ್ಕೆ ನೇತಾಕಿದ್ದ ಕರಿಗೊಂಬೆ. ಬೆಳಗಾವಿ.ಮಹಾನಗರ ಪಾಲಿಕೆಗೆ ಕಟ್ಟಡ ಹಳೆಯದ್ದಾದರೂ ಅಷ್ಟೇ ಹೊಸದಾದರೂ ಅಷ್ಟೇ, ಅಲ್ಲಿ ಕಾಟ ತಪ್ಪಿದ್ದಲ್ಲ ಎನ್ನುವುದು ವಾಸ್ತವ.ಹೊಸ ಕಟ್ಟಡದಲ್ಲಿ ಒಂದು ರೀತಿಯ ಕಾಟ ಇದ್ದರೆ, ಹಳೆಯ ಕಟ್ಟಡದಲ್ಲಿ ಮತ್ತೊಂದು ರೀತಿಯ ಕಾಟ ಶುರುವಾಗಿದೆ, ಅದೂ ಅಮವಾಸ್ಯೆ ಹತ್ತಿರದ ದಿನಗಳಲ್ಲಿ ಅಂತಹ ಅಂದರೆ ಕರಿ ಗೊಂಬೆ ಕಾಟ ಶುರುವಾಗಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈಗ ನಾವು…

Read More

ಶ್ರೀರಾಮ ಮಂದಿರದಲ್ಲಿ ಅಲ್ಲಾಹು ಅಕ್ಬರ್ ಪತ್ರ. ಸ್ಫೊಟಿಸುವ ಬೆದರಿಕೆ

ಶ್ರೀರಾಮ‌ ಮಂದಿರ ಸ್ಪೋಟಿಸುವ ಪತ್ರ ಬೆದರಿಕೆ ಪತ್ರ. ಹೈ ಅಲರ್ಟ್ ಆದ ಪೊಲೀಸರು. ಮುಂದಿನ ೨೦,೨೧ ತಾರೀಖು ಒಳಗಡೆ ಸ್ಪೋಟಿಸುತ್ತೇವೆ ಎಂದು ಪತ್ರ . ಮಂದಿರದ ಆವರಣದಲ್ಲಿ ೧೪ ಸಿಸಿಟಿವಿ ಅಳವಡಿಕೆ. ನಿಪ್ಪಾಣಿ ಬಳಿಯ ಶ್ರೀರಾಮ‌ ಮಂದಿರ. ಬೆಳಗಾವಿ. ಬೆಂಗಳೂರಿನ ರಾಮೇಶ್ವರ ಕೆಫೆ ಸ್ಪೋಟಿಸಿದ ನಂತರ ಆತಂಕವಾದಿಗಳ ಕಣ್ಣು ಈಗ ನಿಪ್ಪಾಣಿಯ ಶ್ರೀರಾಮ ಮಂದಿರ ಮೇಲೆ ಬಿದ್ದಿದೆ. ನೂರು ವರ್ಷ ಇತಿಹಾಸ ಹೊಂದಿರುವ ಈ‌ಎಅಮ.ಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಪೋಟಿಸುವ ಬಗ್ಗೆ ಎರಡು ಪತ್ರಗಳನ್ನು ಆಗಂತುಕರು ಪತ್ರವನ್ನು ಬರೆದಿದ್ದಾರೆ….

Read More

ವಾರ್ಡ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳಿಗೆ ನಗರಸೇವಕರು ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ಇಂದು ಚಾಲನೆ ನೀಡಲಿದ್ದಾರೆ ಈ‌ ಕ್ಷೇತ್ರದಲ್ಲಿ ಬರುವ ವಾರ್ಡಗಳಲ್ಲಿ ಇಂದು ಬಹುತೇಕ ಕಾಮಗಾರಿಗಳು ಆರಂಭಗೊಳ್ಳಲಿವೆ. ವಾರ್ಡ ನಂಬರ 43 ರಲ್ಲಿ ಬರುವ ಅನಗೋಳ ನಾಕಾದಲ್ಲಿ ಸುಮಾರು 9 ಲಕ್ಷ ರೂ ಮೊತ್ತದ ಕಮಾನ್ ನಿರ್ಮಾಣ ಕಾಮಗಾರಿಗೆ ಮದ್ಯಾಹ್ನ 12 ಕ್ಕೆ ಶಾಸಕ ಅಭಯ ಪಾಟೀಲರು ಚಾಲನೆ ನೀಡುವರು. ನಂತರ ಮಧ್ಯಾಹ್ನ 12 ,20 ಕ್ಕೆ ಅನಗೋಳ ಮೃತ್ಯುಂಜಯ…

Read More
error: Content is protected !!