Headlines

ರೆವಿನ್ಯೂ ಕಮಿಟಿ ಸಭೆಯಿಂದ ಹೊರ ನಡೆದ ಜೀರಗ್ಯಾಳ

ಬೆಳಗಾವಿ. ಮಹಾನಗರ ಪಸಕಿಕೆಯಲ್ಲಿ ನಡೆದ ರೆವಿನ್ಯು ಕಮಿಟಿ ಸಭೆಯಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂದು ಹೇಳಿ ಸದಸ್ಯ ಸಂದೀಪ ಜೀರಗ್ಯಾಳ ಅರ್ಧಕ್ಕೆ ಎದ್ದು ಹೋದರು. ಸಭೆಯಲ್ಲಿ ವಾರ್ಡ ನಂಬರ ೩೨ ರಲ್ಲಿ ಬರುವ ನೂರಾಣು ಅಪಾರ್ಟ್ಮೆಂಟ್ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪ್ರಸ್ತಾಪ ಮಾಡಿದರೂ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು‌ ಅಷ್ಟೇ ಅಲ್ಲ ಸಭೆಯಿಂದ ಕೂಡ ಹೊರನಡೆದರು. ಇನ್ನು ಕಮೀಡಿ ಸದಸ್ಯರಲ್ಲದ ಸದಸ್ಯರೊಬ್ವರು ಅಶೋಕ ನಗರದ PID ವಿಷಯ ಪ್ರಸ್ತಾಪಿಸಿದರು. ನಗರಸೇವಕ್ ಪುತ್ರರೊಬ್ವರು…

Read More

ಬೆಳಗಾವಿ ಪಾಲಿಕೆಯಲ್ಲಿ ‘ಇನ್ಸುರನ್ಸ್ ಇಲ್ಲ ಲಾರಿ ಓಡಾಟ.

ಬೆಳಗಾವಿ ಪಾಲಿಕೆಗೆ ಮಹಾ ಮೇಲೆ ಪ್ರೀತಿ. ಇನ್ಸುರನ್ಸ್ ಮುಗಿದ ಪಾಲಿಕೆಯ ಲಾರಿ ಓಡಾಟ. ವರ್ಷದಿಂದ ಇನ್ಸುರನ್ಸ ತುಂಬಿಲ್ಲ. ಹೇಳೊರು, ಕೇಳೊರು ಇಲ್ಲವೆ? ಇವರಿಗೆ ಕರ್ನಾಟಕ ಪಾಸಿಂಗ್ ವಾಹನ ಸಿಗಲ್ಲವೇ? ವಾಹನ ತಪಾಸಣೆ ಮಾಡದ ಪೊಲೀಸರು, ಆರ್ ಟಿಓ. ಬೆಳಗಾವಿ. ಗಡಿ ವಿಷಯದಲ್ಲಿ ಕಾಲು ಕೆದರಿ ಜಗಳಕ್ಕೆ ನಿಂತಿದ್ದ ಮಹಾರಾಷ್ಟ್ರಕ್ಕೆ ಬೆಳಗಾವಿ ಕಂಡರೆ ಅದೆಷ್ಡು ಪ್ರೀತಿ ಗೊತ್ತಿಲ್ಲ. ಏಕೆಂದರೆ ಬೆಳಗಾವಿ ಪಾಲಿಕೆಯವರು‌ ಮಹಾರಾಷ್ಟ್ರ ಪಾಸಿಂಗ್ ಹೊಂದಿರುವ ವಾಹನಗಳನ್ನು ಓಡಿಸುತ್ತಿದ್ದಾರೆ. ಇದು ಈಗ ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಉದ್ಯೋಗ ವಿಷಯದಲ್ಲಿ…

Read More

ಅಥಣಿ ತಾಲೂಕಿನ 95% ಪ್ರತಿಶತ ಪ್ರದೇಶಕ್ಕೆ ನೀರಾವರಿ ಸೌಲಭ್ಯ

ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಅಥಣಿ ತಾಲೂಕಿನ 95% ಪ್ರತಿಶತ ಪ್ರದೇಶಕ್ಕೆ ನೀರಾವರಿ ಸೌಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ. : ಅಥಣಿ ತಾಲೂಕಿನ ರೈತರ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ತೆಲಸಂಗ, ಖಿಲಾರದಡ್ಡಿ, ಬೊಸಲೆವಾಡಿ, ಕನ್ನಾಳ, ಪಡತರವಾಡಿ, ಬನ್ನೂರು, ಕಕಮರಿ, ಕೊಟ್ಟಲಗಿ ಹಾಗೂ ಕರಿಮಸೂತಿ ಗ್ರಾಮಗಳನ್ನು ಒಳಗೊಂಡಂತೆ ಸುಮಾರು 19274.00 ಹೆಕ್ಟೇರ್ ಪ್ರದೇಶಕ್ಕೆ ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿ…

Read More

ಬೆಂಬಲ ಬೆಲೆ ಕಾಯ್ದೆ ಜಾರಿ: CM

ಕೃಷಿಕರಿಗೆ ಕೃಷಿ ಸಲಕರಣೆಗಳ ವಿತರಣೆ ಬೆಂಬಲ ಬೆಲೆ ಕಾಯ್ದೆ ಜಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಬೆಳಗಾವಿ, “ದೇಶದ ಆಹಾರ ಸ್ವಾವಲಂಬನೆಗೆ ಶ್ರಮಿಸುತ್ತಿರುವ ರೈತರಿಗೆ ಬೆಂಬಲ ಬೆಲೆ‌ ಕೊಡುವುದು ಸರಕಾರದ ಕರ್ತವ್ಯವಾಗಿದೆ. ದೇಶದಾದ್ಯಂತ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ಕಾಯ್ದೆ ಜಾರಿಗೆ ರೈತರು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಎಂ.ಎಸ್.ಪಿ. ಕಾಯ್ದೆ ಜಾರಿಗೆ ತರಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕೃಷಿ ಇಲಾಖೆಯ ಆಶ್ರಯದಲ್ಲಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಗುರುವಾರ(ಮಾ‌….

Read More

ಅಂಗಡಿ‌ ಕುಟುಂಬಕ್ಕೆ ನಡ್ಡಾ ಕೊಟ್ಟ ಸಂದೇಶ ಏನು?

ಬೆಳಗಾವಿ .ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಚಿಕ್ಕೋಡಿ ಮತ್ತು ಬೆಳಗಾವಿ ಸಭೆ ಮುಗಿಸಿ ಸಂಸದೆ ಅಂಗಡಿ ಮನೆಗೆ ಭೆಟ್ಟಿ ಕೊಟ್ಟು ನೀಡಿದ ಸಂದೇಶವಾದರೂ ಏನು? ಚಿಕ್ಕೋಡಿಯಲ್ಲಿ ಸಭೆ ಮುಗಿಸಿ ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಕೇವಲ ಅರ್ಧ ತಾಸಿನಲ್ಲಿ ಕಾರ್ಯಕಾರಿಣಿ ಸಭೆ ಮುಗಿಸಿ ಸಂಸದೆ ಅಂಗಡಿಯವರ ಮನೆಗೆ ನಡ್ಡಾ ಹೋದರು. ಸಹಜವಾಗಿ ಬೆಳಗಾವಿಗೆ ಬರುವ ಗಣ್ಯರು ಡಾ. ಪ್ರಭಾಕರ ಕೋರೆ ಮನೆಗೆ ಹೋಗುತ್ತಾರೆ. ಆದರೆ ಇಲ್ಲಿ ನಡ್ಡಾ ಅವಸರದಲ್ಲಿ ಅಂಗಡಿ ಮಬೆಗೆ ಹೋಗಿ ಏನು…

Read More

ಪಾಕ್ ಪರ ಇದ್ದವರನ್ನು ಯಾರೂ‌ ಕ್ಷಮಿಸಲ್ಲ

ಪಾಕ್ ಪರ ಘೋಷಣೆ ಕೂಗುವವರನ್ನು ರಾಜ್ಯದಜನತೆ ಕ್ಷಮಿಸುವುದಿಲ್ಲ: ಜೆ.ಪಿ.ನಡ್ಡಾಬೆಳಗಾವಿ. :ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದು ಸೇರಿದಂತೆ ವಿವಿಧ ಭರವಸೆಗಳನ್ನು ಈಡೇರಿಸಿ ಬಿಜೆಪಿ ನುಡಿದಂತೆ ನಡೆದಿದೆ. ದೂರದೃಷ್ಟಿಯಿರುವ ಬಿಜೆಪಿಯನ್ನು ಜನತೆ ಬೆಂಬಲಿಸುವ ವಿಶ್ವಾಸವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಿಳಿಸಿದರು.ಚಿಕ್ಕೋಡಿಯಲ್ಲಿ ಇಂದು ಬಿಜೆಪಿ ಬೂತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನದ ಪರ ಇರುವವರನ್ನು ಭಾರತಮಾತೆ ಎಂದೂ ಕ್ಷಮಿಸುವುದಿಲ್ಲ ಎಂದರು. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವ ರಾಜ್ಯಸಭಾ ಸದಸ್ಯರಿರುವ…

Read More

ನಡ್ಡಾ ಅಧ್ಯಕ್ಷತೆಯಲ್ಲಿ ಹೈಲೆವೆಲ್ ಸಭೆ

ಬೆಳಗಾವಿ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬೆಳಗಾವಿಗೆ ಆಗಮಿಸಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಅವರನ್ನು ಪಕ್ಷದ ಅಧ್ಕಕ್ಷ ಬಿ.ವೈ. ವಿಜಯೇಂದ್ರ ಸ್ವಾಗತಿಸಿದರು‌. ಮಾಜಿ ಶಾಸಕ ಸಂಜಯ ಪಾಟೀಲ ಸೇರಿದಂತೆ ಜಿಲ್ಲೆಯ ನಾಯಕರೂ ಸಹ ಈ ಸಂದರ್ಭದಲ್ಲಿ ಹಾಜರಿದ್ದರು. ನಡ್ಡಾ ಅವರು ಚಿಕ್ಕೊಡಿಗೆ ತೆರಳಿ ಅಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸುವರು. ನಂತರ ಬೆಳಗಾವಿಯ ಕಾಕತಿಗೆ ಆಗಮಿಸಿ ಅಲ್ಲಿನ ಖಾಸಗಿ ಹೊಟೇಲ್ ನಲ್ಲಿ ಕಾರ್ಯಕಾರಿಣಿ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳ…

Read More

ಬಿಜೆಪಿ ಟಿಕೆಟ್ಗೆ ರೈತರ ಡಿಮ್ಯಾಂಡ್

ರೈತ ಹೋರಾಟಗಾರೊಬ್ಬರಿಗೆ ಬಿಜೆಪಿ ಟಿಕೆಟ್ ಕೋಡಿ: ಪ್ರಕಾಶ ನಾಯಕ ಬೆಳಗಾವಿ:ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಒಂದು ಟಿಕೆಟ್ ರೈತ ಮುಖಂಡರಿಗೆ ನೀಡಬೇಕೆಂದು ಬೆಳಗಾವಿಗೆ ಬರುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಒತ್ತಾಯಿಸಲಾಗುವುದು ಎಂದು ರಾಷ್ಟ್ರೀಯ ರೈತರ ಸಂಘದ ಮುಖಂಡ ಪ್ರಕಾಶ ನಾಯಕ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರೈತರು ಎಲ್ಲವನ್ನು ಹೋರಾಟದ ಮೂಲಕವೇ ಪಡೆಯುವ ಪರಿಪಾಟ ನಿರ್ಮಾಣವಾಗಿದೆ‌. ನಮ್ಮ ಹೋರಾಟಕ್ಕೆ ಅಷ್ಟು ಗಂಭೀರವಾಗಿ ಪ್ರತಿಕ್ರಯಿಸದ ಭ್ರಷ್ಟ ವ್ಯವಸ್ಥೆಯಿಂದ ರೈತ ಹೋರಾಟಗಾರರು ಸಂಸದ ಭವನದಲ್ಲಿರುವುದು ಅನಿವಾರ್ಯವಾಗಿದೆ ಎಂದರು….

Read More

ಲೋಕ ಸಮರಕ್ಕೆ ನಾನೂ ರೆಡಿ..!

BJP ಯಲ್ಲಿ ಹೆಚ್ಚಿದ ಪೈಪೋಟಿ., ಮೂವರು ಮಹಿಳೆಯರಿಂದ ಅರ್ಜಿ. ಹಾಲಿ ಸಂಸದೆ ಮಂಗಲಾ ಅಂಗಡಿ, ಮಾಜಿ ಸಂಸದ ರಮೇಶ ಕತ್ತಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ನ್ಯಾಯವಾದಿ ವಿದ್ಯಾ ಪಾಟೀಲರಿಂದ ಅರ್ಜಿ. ಬೆಳಗಾವಿ. ಜಿಲ್ಲೆಯ ಬೆಳಗಾವಿ ಲೋಕಸಮರದಲ್ಲಿ ಆಖಾಡಕ್ಕಿಳಿಯಲು ಬಿಜೆಪಿ ಯಲ್ಲಿ ಭಾರೀ ಪೈಪೋಟಿ ಶುರುಚಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬೆಳಗಾವಿಗೆ ಆಗಮಿಸುವ ಮುನ್ನಾ ದಿನವೇ ಆಕಾಂಕ್ಷಿಗಳು ತಮ್ಮ ಅರ್ಜಿಯನ್ನು ಪಕ್ಷದ ಜಿಲ್ಲಾಧ್ಯಕ್ಷರಿಗೆ ಇಂದು ಸಲ್ಲಿಸಿದ್ದಾರೆ. ನಗರದ ಖಾಸಗಿ ಹೊಟೇಲ ನಲ್ಲಿ‌…

Read More

ಟಿಎಪಿಸಿಎಂಎಸ್ ಗೆ ಅಶೋಕ ನಾಯಿಕ ಅಧ್ಯಕ್ಷ ವಿಠ್ಠಲ ಪಾಟೀಲ ಉಪಾಧ್ಯಕ್ಷ ರಾಗಿ ಪುನರಾಯ್ಕೆ

ಟಿಎಪಿಸಿಎಂಎಸ್ ಗೆ ಅಶೋಕ ನಾಯಿಕ ಅಧ್ಯಕ್ಷವಿಠ್ಠಲ ಪಾಟೀಲ ಉಪಾಧ್ಯಕ್ಷ ರಾಗಿ ಪುನರಾಯ್ಕೆ ಗೋಕಾಕ ಮಾ 3 : ಗೋಕಾಕ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಅಶೋಕ ನಾಯಿಕ ಹಾಗೂ ಉಪಾಧ್ಯಕ್ಷರಾಗಿ ವಿಠ್ಠಲ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ರವಿವಾರದಂದು ಸಂಘದ ಸಭಾ ಗೃಹದಲ್ಲಿ ಜರುಗಿದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಗೋಖಲೆ ಪ್ರಕಟಿಸಿದರು. ಈ…

Read More
error: Content is protected !!