ಬೆಳಗಾವಿಯಲ್ಲಿ ರಾಮನ ಟ್ಯಾಟೋ ಗುಂಗು..!

ದೀಪಾವಳಿ ಸಡಗರ ತಂದ ರಾಮಮಂದಿರ ಲೋಕಾರ್ಪಣೆ. 5 ಲಕ್ಷ ಲಾಡು ವಿತರಣೆ. ದಕ್ಷಿಣ ಕ್ಷೇತ್ರದಲ್ಲಿ ರಾಮನ ಟ್ಯಾಟೊ ಹವಾ. ದೇವಸ್ಥಾನ ಸ್ವಚ್ಚತಾ ಅಭಿಯಾನ. ವಾರ್ಡ 43 ರಲ್ಲಿ ರಾಮನ ಧ್ವಜ ವಿತರಿಸಿದ ನಗರಸೇವಕಿ.ಬೆಳಗಾವಿ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮುಂದಾಳತ್ವ ಅಂದರೆ ಅದರಲ್ಲೊಂದು ವಿಶೇಷತೆ ಇರಲೇಬೇಕು. ಅದು ಸುಳ್ಳಲ್ಲ. ಅದನ್ನು ಶಾಸಕ ಅಭಯ ಪಾಟೀಲರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಮತ್ತು ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಅವರು ತಮ್ಮ…

Read More

ರಾಮಮಂದಿರಕ್ಕೆ ಹೋಗುವೆ ಎಂದ ಸಚಿವೆ

ಉಡುಪಿ.ರಾಮಮಂದಿರ ವಿಚಾರದಲ್ಲಿ ಪಕ್ಷದ ನಡೆಯ ಬಗ್ಗೆ ನಾನು ಮಾತನಾಡಲ್ಲ. ನಾನು ಪಕ್ಷದ ಅಧ್ಯಕ್ಷೆ ಅಲ್ಲ ಅಥವಾ ದೊಡ್ಡ ಸ್ಥಾನದಲ್ಲೂ ಇಲ್ಲ. ನಾನು ದೈವೀ ಭಕ್ತಳು ಹೀಗಾಗಿ ಅಯೋಧ್ಯೆಯ ರಾಮ‌ಮಂದಿರಕ್ಕೆ ಹೋಗುವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ರಾಮಮಂದಿರ ನಿರ್ಮಾಣಕ್ಕೆ ನಾನು ದೇಣಿಗೆ ನೀಡಿದ್ದೇನೆ. ರಾಮ- ಕೃಷ್ಣ, ಪರಮೇಶ್ವರನ ಮೇಲೆ ನನಗೆ ಬಹಳ ಭಕ್ತಿ ಇದೆ. ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ಭೇಟಿ ನೀಡುವುದಾಗಿ ಸ್ಪಷ್ಟಪಡಿಸಿದರು‌.ರಾಮ ಮಂದಿರ ಅವರದ್ದೂ ಅಲ್ಲ ನಮ್ಮದೂ ಅಲ್ಲ….

Read More

ಕುಡಿಯುವ ನೀರಿಗೆ ಪ್ರಥಮ‌ ಆಧ್ಯತೆ ಕೊಡಿ

ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕು. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದ್ದು, ಈ ಪರಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾದಂದು ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಜರುಗಿದ ಮೂಡಲಗಿ ಮತ್ತು ಗೋಕಾಕ ತಾಲೂಕಾ ಮಟ್ಟದ ಟಾಸ್ಕ್ ಪೋರ್ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾರದೊಳಗೆ ಆಯಾ ಗ್ರಾಮಗಳಲ್ಲಿನ ಸ್ಥಿತಿಗತಿಗಳನ್ನು ಅರಿತು ಸಂಬಂಧಸಿದ ಅಧಿಕಾರಿಗಳಿಗೆ ವರದಿ ಮಾಡುವಂತೆ ಹೇಳಿದರು ಜನ ಮತ್ತು ಜಾನುವಾರುಗಳಿಗೆ…

Read More

ಪಾಲಿಕೆ ಜಾಗೆ ಅತಿಕ್ರಮಣ- ಕ್ರಮಕ್ಕೆ ಮನವಿ

ಬೆಳಗಾವಿ.ಮಹಾನಗರ ಪಾಲಿಕೆಗೆ ದಾನರೂಪವಾಗಿ ನೀಡಿರುವ ಜಾಗೆಯನ್ನು ಅತಿಕ್ರಮಣ ಮಾಡಿದವರ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕೆಂದು ಗಣಾಚಾರಿ ಗಲ್ಲಿಯ ನಿವಾಸಿಗಳು ಆಗ್ರಹಿಸಿದ್ದಾರೆ, ಈ ಕುರಿತಂತೆ ಮೇಯರ್, ಆಯುಕ್ತರು ಮತ್ತು ಪಿಡಬ್ಲುಡಿ ಕಮಿಟಿ ಅಧ್ಯಕ್ಷರಿಗೆ ಮನವಿ ಪತ್ರವನ್ನು ನಿವಾಸಿಗಳು ಅರ್ಪಿಸಿದರು ಗಣಾಚಾರಿ ಗಲ್ಲಿಯ ಬಕರಿ ಮಂಡಿಯಲ್ಲಿನ ಶ್ರೀಮತಿ, ಶ್ರೀಮತಿ ಶಂಕರ ಕಾಟಕರ ಇವರು ಸಮಾಜದ ಉಪಯೋಗಕ್ಕಾಗಿ 12 ಗುಂಟೆ ಜಾಗೆಯ ದುರುಪಯೋಗ ಆಗಬಾರದೆಂಬ ಉದ್ದೇಶದಿಂದ ಮಹಾನಗರ ಪಾಲಿಕೆಗೆ ದಾನದ ಸ್ವರೂಪದಲ್ಲಿ ನೀಡಿದ್ದರು.ಆದರೆ ಕೆಲವು ವರ್ಷಗಳ ಹಿಂದೆ ಅಲ್ಲಿ ಹಿಂದೂ…

Read More

ಕವಟಗಿಮಠರಿಗೆ ಉಜ್ವಲ ಭವಿಷ್ಯವಿದೆ ಎಂದ ಬಿಎಸ್ವೈ

ಬೆಳಗಾವಿ.ಸಹಕಾರಿ ಕ್ಷೇತ್ರ ಎಲ್ಲರಿಗೂ ಒಲಿಯುವುದಿಲ್ಲ. ಆದರೆ, ಕವಟಗಿಮಠರ ಮನೆತನ ಮೂರು ತಲೆಮಾರಿನಿಂದ ಸಹಕಾರಿ ಕ್ಷೇತ್ರದಲ್ಲಿ ಬೆಳೆದು ಬಂದಿರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು,ಸವದತ್ತಿಯಲ್ಲಿ ಮಹಾಂತೇಶ ಕವಟಗಿಮಠ ಪೌಂಡೇಶನ್ ಉದ್ಘಾಟನೆ, ಮಹಾಂತೇಶ ಕವಟಗಿಮಠರ 58 ನೇ ಜನ್ಮದಿನಾಚರಣೆ ಮತ್ತು ಸದನದೊಳಗೆ, ಹೊರಗೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು, ಮುಂಬೈ-ಕನರ್ಾಟಕ ಭಾಗದಲ್ಲಿ ಸಹಕಾರಿ ಕ್ಷೇತ್ರಕ್ಕೆ ಮುನ್ನುಡಿ ಬರೆದಿರುವ ಕವಟಗಿಮಠ ಮನೆತನದ ಕೊಡುಗೆ ಅಪಾರ. ತಂದೆಯವರ ಸಾಮಾಜಿಕ ಸೇವೆಯನ್ನು ಮುಂದುವರಿಸಿಕೊಂಡು…

Read More

ದೂದಗಂಗಾ ನದಿ ದಡದಲ್ಲಿ ರಾಮ ಮಂದಿರ ಪತ್ತೆ..!

ಬೆಳಗಾವಿ ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದ ಹೊರವಲಯದಲ್ಲಿ ದೂಧಗಂಗಾ ನದಿ ದಡದಲ್ಲಿ, ಹಿಂದೆ ಮಣ್ಣಲ್ಲಿ ಹುದುಗಿದ್ದ ರಾಮ ಮಂದಿರ ಪತ್ತೆಯಾಗಿದೆ. .ಎರಡು ತಲೆಮಾರುಗಳ ಹಿಂದೆ ನದಿ ದಡದಲ್ಲಿ ರಾಮ ಮಂದಿರ ಇತ್ತು. ಪ್ರವಾಹದ ವೇಳೆ ಮುಳುಗಿತ್ತು ಎಂದು ಹಿರಿಯರು ಹೇಳುತ್ತಿದ್ದರು. ಅಯೋಧ್ಯೆಯಲ್ಲಿ ರಾಮನ ಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನೆಲೆಯಲ್ಲಿ ಯುವಕರು ಸೋಮವಾರ ಇಡೀ ದಿನ ಜೆಸಿಬಿ ನೆರವಿನಿಂದ ದೇವಸ್ಥಾನಕ್ಕೆ ಶೋಧ ನಡೆಸಿದರು. ಸಂಜೆ ಪತ್ತೆಯಾಯಿತು’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಶಾಸಕಿ ಶಶಿಕಲಾ ಜೊಲ್ಲೆ ಸ್ಥಳಕ್ಕೆ ಭೇಟಿ ನೀಡಿದರು….

Read More

ದಕ್ಷಿಣದಲ್ಲೆಡೆ ರಾಮ ರಾಮ‌‌‌…!

ವಾರ್ಡ 43 ರಲ್ಲಿ ಮನೆ ಮನೆಗೆ ರಾಮನ ಭಾವಚಿತ್ರ ಇರುವ ಧ್ವಜ ವಿತರಿಸಿದ ನಗರಸೇವಕಿ ವಾಣಿ ಜೋಶಿ. ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ದೇವಸ್ಥಾನ ಸ್ವಚ್ಚತಾ ಅಭಿಯಾನ. ಶಾಸಕ ಅಭಯ ಪಾಟೀಲರು ಕೊಡಮಾಡಿದ ಮೋತಿಚೂರು ಲಾಡು ಮನೆ ಮನೆಗೆ ತಲುಪಿಸುವಲ್ಲಿ ಮಗ್ನರಾದ ರಾಮ ಭಕ್ತರು. ಬೆಳಗಾವಿ. ಅಯೋಧ್ಯಾ ರಾಮಮಂದಿರ ಲೋಕಾರ್ಪಣೆ ಮತ್ತು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇವಸ್ಥಾನ ಸ್ವಚ್ಚತಾ ಅಭಿಯಾನ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಭರ್ಜರಿ ಯಾಗಿ ನಡೆಯುತ್ತಿದೆ. ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ…

Read More

BJP ಜಿಲ್ಲಾಧ್ಯಕ್ಷರ ನೇಮಕ

ಬೆಳಗಾವಿ. ಭಾರತೀಯ ಜನತಾಪಕ್ಷದ 39 ಜಿಲ್ಲೆಗಳ ಅಧ್ಯಕ್ಷರನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆದೇಶ ಮಾಡಿದ್ದಾರೆ. ಬೆಳಗಾವಿ ಮಹಾನಗರ ಅಧ್ಯಕ್ಷರಾಗಿ ಗೀತಾ ಸುತಾರ, ಬೆಳಗಾವಿ ಗ್ರಾಮೀಣ ಅಧ್ಯಕ್ಷರಾಗಿ ಸುಭಾಷ ಪಾಟೀಲ ನೇಮಕಗೊಂಡಿದ್ದಾರೆ. ಚಿಕ್ಕೊಡಿ ಜಿಲ್ಲಾಧ್ಯಕ್ಷರಾಗಿ ಸತೀಶ ಅಪ್ಪಾಜಿಗೋಳ ನೇಮಕ ಗೊಂಡಿದ್ದಾರೆ.

Read More

ಪತ್ರಕರ್ತ ಪ್ರಶಾಂತ ಭರಡೆ ಇನ್ನಿಲ್ಲ

ಹಿರಿಯ ಪತ್ರಕರ್ತ ಪ್ರಶಾಂತ ಭರಡೆ (70) ಇಂದು ನೆಹರುನಗರದ ನಿವಾಸದಲ್ಲಿ ನಿಧನರಾದರು. ಪುಢಾರಿ ಪತ್ರಿಕೆಯಲ್ಲಿ ಬೆಳಗಾವಿ ಆವೃತ್ತಿ ಯ ಮುಖ್ಯಸ್ಥರಾಗಿ ಅವರು ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಕಳೆದ ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು . ಮೃತರ ಅಂತ್ಯಕ್ರಿಯೆ ಸಂಜೆ 7 ಕ್ಕೆ ಸದಾಶಿವನಗರದ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರ ನಿಧನಕ್ಕೆ ಬೆಳಗಾವಿ ಪತ್ರಕರ್ತರು ಸಂತಾಪ ವ್ಯಕ್ತಪಡಿಸಿದ್ದಾರೆ. Senior Journalist Prashant Tukaram Barde died today on 14th January at his Nehru…

Read More

ಬೆಳಗಾವಿ ದಕ್ಷಿಣ ‘ರಾಮ’ಮಯ.!

ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ 80 ಸಾವಿರ ಕುಟುಂಬಕ್ಕೆ 5 ಲಕ್ಷ ಲಾಡು ವಿತರಣೆ. ರಾಮಮಯ ಮಾಡುವ ನಿಟ್ಟಿನಲ್ಲಿ ಸಿದ್ಧತೆ. ಪ್ರತಿಯೊಬ್ಬರ ಕೈ ಮೇಲೆ ಶ್ರೀರಾಮನ ಟ್ಯಾಟೊ. ರಾಮನ ಸೇವೆಗೆ ಮುಂದಾದ ಬಿಜೆಪಿ ನಗರಸೇವಕರು ವಾರ್ಡ 43 ರ ನಗರ ಸೇವಕಿ ವಾಣಿ ಜೋಶಿ ಟಿಳಕವಾಡಿಯ ಹನುಮಾನ ಮಂದಿರ ಮತ್ತು ವಾರ್ಡ 24 ರ ನಗರಸೇವಕ ಗಿರೀಶ ಧೋಂಗಡಿ ಹಳೆಯ ಮಹಾತ್ಮಾ ಫುಲೆ ರೋಡದಲ್ಲಿರುವ ಸಂಕಟ ವಿಮೋಚಕ ಹನುಮಾನ ಮಂದಿರ ದಲ್ಲಿ ಸ್ವಚ್ಚತಾ ಅಭಿಯಾನ. ರಾಮನ ಭಾವಚಿತ್ರ…

Read More
error: Content is protected !!