ಬಿಜೆಪಿ ಹೋರಾಟಕ್ಕೆ ಜನಸಾಗರ.
ಬೆಳಗಾವಿ. ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಸಲುವಾಗಿ ಬಿಜೆಪಿ ಹಮ್ಮಿಕೊಂಡ ಹೋರಾಟಕ್ಕೆ ಜನಸಾಗರ ಹರಿದು ಬರ್ತಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಜಿಲ್ಲೆಯಿಂದ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರ್ತಿದ್ದಾರೆ ಬೆಳಗಾವಿ ದಕ್ಷಿಣಕ್ಷೇತ್ರದಿಂದ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಬರುತ್ತಿದ್ದರೆ ಇನ್ನುಳಿದ ಕಡೆಯಿಂದ ವಾಹನಗಳಲ್ಲಿ ಸಮಾವೇಶದತ್ತ ಹೊರಟಿದ್ದು ಕಂಡು ಬರುತ್ತಿದೆ