ನಗರಸೇವಕರ ಮೇಲೆ ಹಲ್ಲೆಗೆ ರಾಜಕೀಯ ತಿರುವು..!

ಬೆಳಗಾವಿ ಅಕ್ರಮವಾಗಿ ಮನೆಯ ಮೇಲೆ ಮೊಬೈಲ್ ಟಾವರ್ ಅಳವಡಿಸುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಗರಸೇವಕರ ಮೇಲೆ ನಡೆದ ಹಲ್ಲೆ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಳ್ಳತೊಡಗಿದೆ. ಬಿಜೆಪಿಯವರು ಮತ್ತು ಅಲ್ಲಿನ ನಿವಾಸಿಗಳು ಹಲ್ಲೆ ಮಾಡಿದ ಆರೋಪ ಹೊತ್ತ ರಮೇಶ್ ಪಾಟೀಲ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಮೇಲಾಗಿ ಹಲ್ಲೆಗೊಳಗಾದ ನಗರಸೇವಕ. ಅಭಿಜಿತ್ ಜವಳಕರ ನೀಡಿದ ದೂರಿನ ಹಿನ್ನೆಲೆಯಲ್ಲಿ ರಮೇಶ್ ಪಾಟೀಲರನ್ನು ಪೊಲೀಸರು ಬಂಧಿಸಿದ್ದರು. ಆದರೆ ಇವತ್ತು ಹಿಂದುಸ್ತಾನ ಶ್ರೀರಾಮ ಸೇನೆ ಮುಖಂಡ ರಮಾಕಾಂತ ಕೊಂಡುಸ್ಕರ ನೇತೃತ್ವದಲ್ಲಿ ಎಂಇಎಸ್ನ ಮಾಜಿ…

Read More

ಸಂವಿಧಾನ ಸಮಾನತೆಯ ಅಡಿಪಾಯ- ಸತೀಶ್

ಭಾರತದ ಸಂವಿಧಾನ ಸಮಾನತೆಯ ಅಡಿಪಾಯ: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ, : ಭಾರತ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ನೀಡಿದೆ. ಭಾರತದ ಸಂವಿಧಾನವನ್ನು ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದ್ದು, ಸಂವಿಧಾನ ದೇಶದ ಪ್ರಜೆಗಳ ಸಮಾನತೆಯ ಅಡಿಪಾಯವಾಗಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು. ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ರವಿವಾರ (ನ.26) ನಡೆದ “ಸಂವಿಧಾನ ದಿನ” ಆಚರಣೆಯ ನಿಮಿತ್ಯ…

Read More

ಅದಕ್ಕೂ ಗ್ಯಾರಂಟಿಗೂ ಸಂಬಂಧವಿಲ್ಲ

ರೇಷ್ಮೆ ಇಲಾಖೆ-ಕೃಷಿ ಇಲಾಖೆ ವಿಲೀನಕ್ಕೂ ಗ್ಯಾರಂಟಿ ಯೋಜನೆಗಳಿಗೂ ಯಾವುದೇ ಸಂಬಂಧವಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆ ಹತ್ತು ವರ್ಷಗಳ ಹಿಂದೆಯೇ ನಡೆದಿದೆ. ಗ್ಯಾರಂಟಿ ಯೋಜನೆಗಳಿಗೂ ರೇಷ್ಮೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ತಿಳಿಸಿದರು. ನಗರದ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಉದ್ಯಾನವನ ಬಳಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಎಲ್ಲ ಸರ್ಕಾರಗಳಲ್ಲಿ ಕೆಲ ಇಲಾಖೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ…

Read More

ನಮಗೆ ರಕ್ಷಣೆ ಕೊಡಿ

ನಗರಸೇವಕರ ನೇತೃತ್ವದಲ್ಲಿ ಸಿಪಿಐಗೆ ಮನವಿಭಾಗ್ಯನಗರಕ್ಕೆ ವಿಶೇಷ ರಕ್ಷಣೆ ಕೊಡಿ. ಬೆಳಗಾವಿ.ಮಹಾನಗರ ಪಾಲಿಕೆಯ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಮೇಲೆ ನಡೆದ ಹಲ್ಲೆಯಿಂದ ಭಯ ಭೀತಗೊಂಡಿರುವ 9 ನೇ ಕ್ರಾಸ್ ನ ಭಾಗ್ಯನಗರ ನಿವಾಸಿಗಳು ರಕ್ಷಣೆ ಕೋರಿ ಶನಿವಾರ ಪೊಲೀಸ್ ಅಧಿಕಾರಿಗೆ ಮನವಿ ಪತ್ರ ಅಪರ್ಿಸಿದರು.ಪಾಲಿಕೆಯ ಅನುಮತಿ ಇಲ್ಲದೇ ಕಾನೂನು ಬಾಹಿರವಾಗಿ ಅಲ್ಲಿನ ನಿವಾಸಿ ರಮೇಶ ಪಾಟೀಲ ಎಂಬುವರು ತಮ್ಮ ಮನೆಯ ಮೇಲೆ ಮೊಬೈಲ್ ಟಾವರ್ ಕೂಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ನಗರಸೇವಕ ಜವಳಕರ…

Read More

No SUNDAY, No MONDAY..24X7

ಈ ಅಧಿಕಾರಿಗಳಿಗೆ ದಿನದ 24 ತಾಸು ಸಾಕಾಗುತ್ತಿಲ್ಲ. ಇವರಿಗೆ ಸಂಡೇ, ಮಂಡೇ ಎರಡೂ ಅಷ್ಟೆ. ಗಡಿಯಾರ ಕಟ್ಟಿದ್ದರೂ ಸಮಯ ನೋಡಲ್ಲ. ಸರ್ಕಾರದ ಸ್ವಾಗತಕ್ಕೆ‌ಸಕಲ ಸಜ್ಜು. ಬೆಳಗಾವಿ. ಅಧಿವೇಶನ‌ ನೆಪದಲ್ಲಿ ಇಡೀ ಸರ್ಕಾರ ಗಡಿನಾಡ ಬೆಳಗಾವಿಗೆ ಬರಲಿದೆ.‌ಡಿಸೆಂಬರ 4 ರಿಂದ ಬರೊಬ್ಬರಿ ಹತ್ತು ದಿನಗಳ ಕಾಲ ಗಣ್ಯಾತಿ ಗಣ್ಯರು ಬೆಳಗಾವಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಆ ಸಂದರ್ಭದಲ್ಲಿ ಹೊರಗೆ ಯಾವುದೇ ರೀತಿಯ ಕಿರಿಕ್ ಆಗದಂತೆ ನೋಡಿಕೊಳ್ಳುವ ಮಹತ್ತರ ಜವಾಬ್ದಾರಿ ಈ ಮೂರು ಅಧಿಕಾರಿಗಳ ಮೇಲಿದೆ. ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪಾಲಿಕೆ…

Read More

ಕ್ಯಾಪ್ಟನ್ ಎಂವಿ ಪ್ರಾಂಜಲ್ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರೊಡನೆ ನಡೆದ ಗುಂಡಿನ ಚಕಮಕಿಯಲ್ಲಿ ಕ್ಯಾಪ್ಟನ್ ಎಂವಿ ಪ್ರಾಂಜಲ್ ಸೇರಿದಂತೆ ಇಬ್ಬರು ಸೇನಾಧಿಕಾರಿಗಳು ಹಾಗು ಮೂವರು ಯೋಧರು ಹುತಾತ್ಮರಾದ ವಿಷಯ ಸಿಡಿಲಿನಂತೆ ಬಂದೆರಗಿದೆ, ಈ ಸಂದರ್ಭದಲ್ಲಿ ಹುತಾತ್ಮರಾದ ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ರ್ತಿಯಾಗಲಿ ಅವರ ಕುಟುಂಬ ವರ್ಗಕ್ಕೆ ಹಾಗು ಬಂಧು ಮಿತ್ರರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಮಸ್ತ ಪದಾಧಿಕಾರಿಗಳು ಹಾಗು ಕಾರ್ಯಕಾರಿಣಿ ಸದಸ್ಯರು ಆ…

Read More

ಹಲ್ಲೆಕೋರ ಅರೆಸ್ಟ್ .ನಗರಸೇವಕರ ಪ್ರತಿಭಟನೆ ಅಂತ್ಯ

ಬೆಳಗಾವಿ. ನಗರಸೇವಕ ಅಭಿಜಿತ್ ಜವಳಕರ ಮೇಲೆ ಹಲ್ಲೆ ಮಾಡಿದ ರಮೇಶ ಪಾಟೀಲ ಸೇರಿದಂತೆ ಇಬ್ಬರನ್ಬು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ಠಾಣೆ ಮುಂದೆ ಪ್ರತಿಭಟನೆ ಯನ್ನು ನಗರಸೇವಕರು ಕೈಬಿಟ್ಟರು. ಆರೋಪಿಯನ್ನು ಬಂಧಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದು ನಗರಸೇವಕರು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದರು. ಟಿಳಕವಾಡಿ ಸಿಪಿಐ ಪೂಜಾರಿ ಸೇರಿದಂತೆ ಎಸಿಪಿ ಖಡೇಬಜಾರ ಅವರು ಭರವಸೆ ನೀಡಿದ್ದರು. ಟಾವರ್ ವಿವಾದಕ್ಕೆ ಸಂಬಂಧಿಸಿದಂತೆ ನಗರಸೇವಕ ಜವಳಕರ ಮೇಲೆ ಸುಮಾರು ಹತ್ತಕ್ಕೂ ಹೆಚ್ಚು ಜನ‌ ಹಲ್ಲೆ ಮಾಡಿದ್ದರು.

Read More

ಬಿಜೆಪಿ ನಗರಸೇವಕರ ಪ್ರತಿಭಟನೆ

ಬೆಳಗಾವಿ. ಮಹಾನಗರ ಪಾಲಿಕೆ ಬಿಜೆಪಿ‌ ನಗರಸೇವಕ ಅಭಿಜಿತ್ ಜವಳಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಪಾಲಿಕೆಯ ಬಿಜೆಪಿ ನಗರಸೇವಕರು ಟಿಳಕವಾಡಿ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಅಕ್ರಮವಾಗಿ ಮೊಬೈಲ್ ಟಾವರ್ ಕೂಡಿಸಲು ವಿರೋಧ ವ್ಯಕ್ತಪಡಿಸಿದ ಎನ್ನುವ ಕಾರಣದಿಂದ ರಮೇಶ ಪಾಟೀಲ ಸೇರಿದಂತೆ ಹತ್ತಕ್ಕೂ ಹೆಚ್ಚು ಜನ‌ ಜವಳಕರ ಮೇಲೆ ತೀವೃಸ್ವರೂಒದ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಹಲ್ಲೆ ಕೋರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ನಗರಸೇವಜರು ಪ್ರತಿಭಟನೆ ನಡೆಸಿದರು.

Read More

BJP ನಗರಸೇವಕನ ಮೇಲೆ ಹಲ್ಲೆ

ಬೆಳಗಾವಿ. ಕಾನೂನು ಬಾಹಿರವಾಗಿ ಮೊಬೈಲ್ ಟವರ್ ಕೂಡಿಸುತ್ತಿದ್ದುದನ್ಬು ಪ್ರಶ್ನಿಸಿದ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಮೇಲೆ ಕಿಡಿಗೇಡಿಗಳ ಗುಂಪೊಂದು ಹಲ್ಲೆ ಮಾಡಿದ ಘಟನೆ ಇಂದು ಮಧ್ಯಾಹ್ನ ಭಾಗ್ಯನಗರದಲ್ಲಿ ನಡೆದಿದೆ. ಬಾಗ್ಯನಗರ 9 ನೇ ಕ್ರಾಸ್ ನ ಮಬೆಯೊಂದರ ಮೇಲೆ ರಮೇಶ್ ಎಂಬುವರು ಯಾವುದೇ ಪೂರ್ವಾನುಮತಿ ಇಲ್ಲದೇ ಮೊಬೈಲ್ ಟವರ್ ಕೂಡಿಸುತ್ತಿದ್ದರು. ಇದರ ಬಗ್ಗೆ ಅಲ್ಲಿನ ನಿವಾಸಿಗಳು ನಗರಸೇವಕ ಅಭಿಜಿತ್ ಜವಳಕರ ಮೂಲಕ ದೂರು ಸಹ ನೀಡಿದ್ದರು. ಈ ದೂರನ್ನು ಪರಿಗಣಿಸಿದ ಪಾಲಿಕೆಯವರು ಅದಕ್ಕೆ ಅನುಮತಿ ನೀಡಿರಲಿಲ್ಲ. ಆದರೆ…

Read More

ಜಾರಕಿಹೊಳಿ- ವಿಜಯೇಂದ್ರ ಮಾತು’ಕತೆ’

ಮಾಜಿ ಸಚಿವ ರಮೇಶ ಜಾರಕಿಹೊಳಿ‌ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೆಟ್ಟಿ. ಅರ್ಧ ತಾಸು ಮಾತುಕತೆ. ಅಸಮಾಧಾನ ಹೋಗಲಾಡಿಸಿದ ವಿಜಯೇಂದ್ರ, ಲೋಕಸಭೆ ಮುಂದಿನ ಟಾರ್ಗೆಟ್. ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸದಾಶಿವನಗರದ ಅವರ ನಿವಾಸದಲ್ಲಿಂದು ಭೇಟಿಯಾದರು. ಎಲ್ಲರ ವಿಶ್ವಾಸ ಪಡೆದು ಕಾರ್ಯನಿರ್ವಹಣೆ- ಬಿ.ವೈ.ವಿಜಯೇಂದ್ರ ಬೆಂಗಳೂರು: ಪಕ್ಷದ ಹಿರಿಯರು ಏನೇ ಹೇಳಿಕೆ ಕೊಟ್ಟರೂ ಅದನ್ನು ಗಂಭೀರವಾಗಿ ಪರಿಗಣಿಸುವೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವೆ. ಯಾರು ಏನೇ ಹೇಳಿಕೆ ಕೊಟ್ಟರೂ ಅದನ್ನು…

Read More
error: Content is protected !!