Headlines

ಬೆಳಗಾವಿಗೆ ಬರುವ ಐಟಿಗಳಿಗೆ ಎಳ್ಳು ನೀರು

ಬೆಳಗಾವಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಗಾವಿಗೆ ಐಟಿಗಳು ಬರಬೇಕು ಎನ್ನುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನಕ್ಕೆ ಕಾಂಗ್ರೆಸ್ ಸರ್ಕಾರ ಎಳ್ಳುನೀರು ಬಿಡುತ್ತಿದೆ ಎಂದು ಶಾಸಕ ಅಭಯ ಪಾಟೀಲ ಆರೋಪಿಸಿದರು. ಇಲ್ಲಿನ ವಿದ್ಯಾವಂತ ಯುವಕರು ಐಟಿ ಉದ್ಯಮದಲ್ಲಿ ಉದ್ಯೋಗಕ್ಕಾಗಿ ಪುಣೆ, ಮುಂಬೈ, ಬೆಂಗಳೂರು, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಹೋಗುತ್ತಿದ್ದಾರೆ. ಅವರಿಗೆ ಬೆಳಗಾವಿಯಲ್ಲಿಯೇ ಐಟಿ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಯತ್ನ ಮಾಡಲಾಗಿತ್ತು ಎಂದು ಶಾಸಕ ಅಭಯ ಪಾಟೀಲರು ಹೇಳಿದರು,. ಮುರುಗೇಶ್ ನಿರಾಣಿ ಕೈಗಾರಿಕಾ ಸಚಿವರಾಗಿದ್ದಾಗ ಬೆಳಗಾವಿಯಲ್ಲಿ ಐಟಿ…

Read More

ಅಭಯ `ಉಸಾಬರಿ’ ಕಟ್ಟೆಗಳು.!

ದಕ್ಷಿಣ ಶಾಸಕ ಅಭಯ ಪಾಟೀಲರ ಹೊಸ ಪರಿಕಲ್ಪನೆ. ಬೆಳಗಾವಿ ದಕ್ಷಿಣದ ವಾರ್ಡಗಳಲ್ಲಿನ್ನು ಉಸಾಬರಿ ಕಟ್ಟೆ ಸ್ಥಾಪನೆ.‌ ಮನಸೋ ಇಚ್ಚೆ ನಾತಾಡಿ, ಬಿಪಿ, ಶುಗರದಿಂದ ದೂರವಾಗಿರಿ. ರಾಜ್ಯದಲ್ಕಿಯೇ ಮೊದಲ ಉಸಾವರಿ ಕಟ್ಟೆಗಳು. ಬೆಳಗಾವಿಸದಾ ವಿನೂತನ ಯೋಜನೆಗಳ ಬಗ್ಗೆ ಚಿಂತನೆ ಮಾಡುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಉಸಾಬರಿ ಕಟ್ಟೆ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ,ಅಂದಹಾಗೆ ಉಸಾಬರಿ ಕಟ್ಟೆ ಎಂದಾಕ್ಷಣ ಇದು ಕೆಟ್ಟದ್ದು ಎನ್ನುವ ಚಿಂತೆ ಮಾಡಬೇಡಿ. ಎಲ್ಲರೂ ಒಂದೆಡೆ ಕುಳಿತು ಮುಕ್ತವಾಗಿ ಹರಟೆ ಹೊಡೆದು ಮನಸ್ಸಿನ…

Read More

ಬೆಳಗಾವಿಗೆ ಲಿಂಗಾಯತ. ಚಿಕ್ಕೋಡಿಗೆ ಕುರುಬ ಸಮಾಜಕ್ಕೆ ಟಿಕೆಟ್..!

ಬೆಳಗಾವಿಯಲ್ಲಿ ಸತೀಶ್ ಜಾರಕಿಹೊಳಿ ಹೇಳಿಕೆಬೆಳಗಾವಿಗೆ ಲಿಂಗಾಯತ.ಚಿಕ್ಕೊಡಿಗೆ ಕುರುಬ ಸಮಾಜಕ್ಕೆ ಟಿಕೆಟ್ಬೆಳಗಾವಿ:ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಲಿಂಗಾಯತ, ಚಿಕ್ಕೋಡಿ ಕ್ಷೇತ್ರಕ್ಕೆ ಕುರುಬ ಸಮಾಜದ ಅಭ್ಯಥರ್ಿಗೆ ಟಿಕೆಟ್ ನೀಡಲು ಚಿಂತನೆ ನಡೆದಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು,ರಾಜ್ಯದ 20 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಗೆಲುವಿಗೆ ಗುರಿ ಇಟ್ಟುಕೊಳ್ಳಲಾಗಿದೆ ಎಂದರು. ಈಗಾಗಲೇ ಲೋಕಸಭೆ ಚುನಾವಣೆಗೆ ತಯಾರಿ ನಡೆದಿದೆ. ಕಾರ್ಯಕರ್ತರು ಚುನಾವಣೆ ಎದುರಿಸಲು ಸಿದ್ದರಾಗಿದ್ದು, ಎಲ್ಲಾ ರೀತಿಯ ಮಾನದಂಡಗಳನ್ನು ಅನುಸರಿಸಿ, ಮೂರು ಹಂತಗಳಲ್ಲಿ ಚರ್ಚಸಿದ…

Read More

ವಿಜಯೇಂದ್ರ 15 ರಂದು ಅಧಿಕಾರ ಸ್ವೀಕಾರ

ತುಮಕೂರು. ನವೆಂಬರ್ 15ರಂದೇ ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಹಿರಿಯರ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸುತ್ತೇನೆಂದು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು. ಪಕ್ಷದ ಅಧ್ಯಕ್ಷರಾದ ನಂತರ ಇಲ್ಲಿನ ಸಿದ್ಧಗಂಗಾ ಮಠಕ್ಜೆ ಭೆಟ್ಟಿ ನೀಡಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ವಿಪಕ್ಷ ನಾಯಕ ಆಯ್ಕೆ ನಂತರ ದೆಹಲಿಗೆ ಭೇಟಿ ನೀಡಲಾಗುವುದು ಎಂದು ವಿಜಯೇಂದ್ರ ಮಾಹಿತಿ ನೀಡಿದರು. 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕರ್ತ ಸಭೆ ಆಯೋಜಿಸಲಾಗುವುದು ಎಂದು ತಿಳಿಸಿದರು. ಅಂದೇ ಶಾಸಕಾಂಗ ಪಕ್ಷ ಸಭೆ ಸಹ‌ನಡೆಸಲಾಗುವುದು ಎಂದರುಸದ್ಯ ದೇಶದ ಐದು…

Read More

ವಿಜಯೇಂದ್ರ ವಿಜಯದ ಸಂಕೇತ..!

ಬಿಜೆಪಿಗೆ ವಿಜಯೇಂದ್ರ ಸಾರಥ್ಯ-ಕೆಲವರಿಗೆ ಇಷ್ಟ- ಕಷ್ಟ. ವಿಜಯೇಂದ್ರ ಮುಂದೆ ಹತ್ತಾರು ಸವಾಲುಗಳು., ವಿಜಯೇಂದ್ರ ಅಂದರೆ ವಿಜಯದ ಸಂಕೇತ. ಹಲವು ಪದಾಧಿಕಾರಿಗಳ ಬದಕಾವಣೆ ಸಾಧ್ಯತೆ ಬೆಳಗಾವಿ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವಾಗಲೇ ಕಿರಿಯ ಎನಿಸಿಕೊಂಡ ರಾಜಾಹುಲಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ಹೈಕಮಾಂಡ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ದೊಡ್ಡ ಜವಾಬ್ದಾರಿ ನೀಡಿದೆ. ವಿಜಯೇಂದ್ರ ಅವರ ವರ್ಚಸ್ಸು, ಪ್ರಭಾವ, ಸಾಮರ್ಥ್ಯ ಏನೇ ಇದ್ದರೂ ರಾಜ್ಯ ಬಿಜೆಪಿಯ ಚುಕ್ಕಾಣಿ ಹಿಡಿದು ಮುನ್ನಡೆಸುವುದು ಅಷ್ಟು ಸುಲಭದ ಸಂಗತಿಯಲ್ಲ ಎನ್ನುವುದು ವಾಸ್ತವ. ಬಿಜೆಪಿ ಕಾರ್ಯಕರ್ತರ…

Read More

ಸುದ್ದಿ ಸಾರ ಮರೆಯದಿರಿ..!

ಬೆಳಗಾವಿ.ಬೆರಳ ತುದಿಯಲ್ಲಿ ಮಾಹಿತಿ ಲಭ್ಯವಾಗಿಸುವ ತಂತ್ರಜ್ಞಾನದ ಯುಗದಲ್ಲಿ ಸುದ್ದಿ ಬಿತ್ತರಿಸುವ ಭರದಲ್ಲಿ ಸುದ್ದಿಯ ಸಾರವನ್ನು ಪತ್ರಕರ್ತರು ಮರೆಯುವಂತಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಣಸ ಜಾರಕಿಹೊಳಿ ಹೇಳಿದರು.ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್, ಗಿರೀಶ ಕೋಟೆ ಅವರಿಗೆ ಹಮ್ಮಿಕೊಂಡಿದ್ದ ಅಭಿಮಾನದ ಅಭಿವಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿನ ಸಮಸ್ಯೆಗಳತ್ತ ಬೆಳಕು ಚೆಲ್ಲುವ ಕೆಲಸವಾಗಬೇಕು. ಮುಖ್ಯವಾಗಿ ಪತ್ರಿಕಾ ರಂಗದಲ್ಲಿ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಗುರುತಿಸುವ ಕಾರ್ಯವಾಗಬೇಕೆಂದರು….

Read More

ಸಿಎಂ ಮಾಧ್ಯಮ ಸಲಹೆಗಾರರಿಗೆ ಅಭಿಮಾನದ ಅಭಿವಂದನೆ

ಸಿಎಂ ಮಾಧ್ಯಮ ಸಲಹೆಗಾರರಿಗೆ ಅಭಿಮಾನದ ಅಭಿವಂದನೆ ಬೆಳಗಾವಿ :ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಘಟಕದ ವತಿಯಿಂದ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ. ವಿ.‌ಪ್ರಭಾಕರ & ಗಿರೀಶ ಕೋಟೆ ಅವರಿಗೆ ಅಭಿಮಾನದ ಅಭಿವಂದನೆ ನೀಡಿ ಇಂದು ಸನ್ಮಾನಿಸಲಾಯಿತು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಗದಗ ಡಂಬಳ ತೋಂಟದಾರ್ಯ ಮಠದ ಶ್ರೀ ಡಾ. ಸಿದ್ದರಾಮ ಸ್ವಾಮೀಜಿ, ಎಸ್ಪಿ ಡಾ. ಭೀಮಾಶಂಕರ ಗುಳೇದ, ಶಾಸಕ ರಾಜು ಸೇಠ್, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ,…

Read More

ಇದು ವೈದ್ಯರಿಲ್ಲದ ಆಸ್ಪತ್ರೆ..!

ಬೆಳಗಾವಿ ಪಾಲಿಕೆ ತುಂಬಅಪರೇಶನ್’ ಮಾತು..! ಇಲ್ಲಿ ಆಪರೇಶ್ ಮಾಡಲು ವೈದ್ಯರೇ ಬರ್ತಿಲ್ಲ. ಆದರೂ 9 ರೋಗಿಗಳು ಬೆಡ್ ಮೇಲೆ ಮಲಗಿದ್ದಾರೆ. ಒಬ್ಬ ರೋಗಿಯಿಂದಲೇ ಉಳಿದವರ ಆರೋಗ್ಯದ ಮೇಲೆ ದುಷ್ಪರಿಣಾಮ.. ಈಗ MLA ABHAY PATIL ರು Dr Abhay patil ಆಗಬೇಕಿದೆ. ಇವರು ರೋಗಿಗೆ ಹೈ ಡೋಸ್ ಗುಳಿಗೆ ಕೊಡದೇ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಇ ಬೆಳಗಾವಿ ವಿಶೇಷ ಬೆಳಗಾವಿ. ಇಲ್ಲಿ ರೋಗಿಗಳು ಒಂದಿಷ್ಟು ಬೇಸರ ಮಾಡಿಕೊಂಡು ಬೆಡ್ ಮೇಲೆ ಮಲಗಿದ್ದಾರೆ. ಆದರೆ ಅವರನ್ನು ಯಾರೂ ಏನಾಗಿದೆ…

Read More

ಅಭಿನಂದನಾ ಸಮಾರಂಭ

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ಅವರ ಅಭಿನಂದನೆ ಸಮಾರಂಭ. ಬೆಳಗಾವಿ. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ರವರನ್ನು ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಕೋಟೆ, ಶ್ರೀ ಕೆ ಪಿ ಪುಟ್ಟಸ್ವಾಮಯ್ಯ, ಶ್ರೀ ಕೆ ಎಸ್ ನಾಗರಾಜ್ ಸೇರಿದಂತೆ , ಮಾಧ್ಯಮ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ಈಗ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ, ಬೆಳಗಾವಿ ಪತ್ರಕರ್ತರಿಂದ ಅಭಿಮಾನದ ಅಭಿನಂದನೆ ಜರುಗಲಿದೆ. ಕರ್ನಾಟಕ ಕಾರ್ನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲೆಯ ಘಟಕ ಮತ್ತು…

Read More

ಬರ ನಿರ್ವಹಣೆಗೆ ಸೂಚನೆ

ಬೆಳಗಾವಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಬರ ನಿರ್ವಹಣೆ, ಕುಡಿಯುವ ನೀರು ಪೂರೈಕೆ; ನರೇಗಾ ಸಮರ್ಪಕ ಅನುಷ್ಠಾನಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಕಟ್ಟುನಿಟ್ಟಿನ ಸೂಚನೆ ಬೆಳಗಾವಿ,ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದರಿಂದ ನಗರ-ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಕೆ, ನರೇಗಾ ಯೋಜನೆಯಡಿ ಎಲ್ಲರಿಗೂ ಉದ್ಯೋಗ ಹಾಗೂ ಜಾನುವಾರುಗಳಿಗೆ ಮೇವು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ…

Read More
error: Content is protected !!