Headlines

ಅಯೋಧ್ಯೆ ಕೇವಲ‌ ಮಂದಿರವಲ್ಲ…!

ರಥಯಾತ್ರೆ ರೂವಾರಿ‌ಲಾಲ್ ಕೃಷ್ಣ ಆಡ್ವಾಣಿ ಅವರಿಗೆ 96 ವರ್ಷದ ಹುಟ್ಡು ಹಬ್ಬ ಆಚರಣೆ ಅಯೋಧ್ಯೆ ಎಂದರೆ ಕೇವಲ ಮಂದಿರ ಕಟ್ಟುವುದಲ್ಲ. ..! ರಾಷ್ಟ್ರೀಯತೆ, ದೇಶಪ್ರೇಮ. ಮತ್ತು ಸಕಾರಾತ್ಮಕ ಜಾತ್ಯತೀತತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸ್ವಾತಂತ್ರ್ಯದ ಉದಯದಿಂದಲೂ ನಿರ್ಮಿಸಲಾದ ದೋಷಪೂರಿತ ನಿರೂಪಣೆಯನ್ನು ಮರುಹೊಂದಿಸುವುದು , ಲಾಲ್ ಕೃಷ್ಣ ಅಡ್ವಾಣಿ ಅವರು ಸೋಮನಾಥದಲ್ಲಿ ಐತಿಹಾಸಿಕ ಅಯೋಧ್ಯೆ ರಥಯಾತ್ರೆಯ ತಮ್ಮ ಮೊದಲ ಭಾಷಣದಲ್ಲಿ ಹೇಳಿದ ಮಾತಿದು, ಇಲ್ಲಿ ಅಯೋಧ್ಯೆ ವಿಷಯ ಬಂದಾಗ ಎಲ್ಲರಿಗೂ ಮೊಟ್ಟ ಮೊದಲು ನೆನಪಿಗೆ ಬರುವ ಹೆಸರು ಉಕ್ಕಿನ…

Read More

ರನ್ ವೇ ಟರ್ಮಿನಲ್ ವಿಸ್ತರಣೆಗೆ ಜಮೀನು

ಸಾಂಬ್ರಾ ವಿಮಾನ ನಿಲ್ದಾಣದ ರನ್ ವೇ, ಟರ್ಮಿನಲ್ ವಿಸ್ತರಣೆಗೆ ಜಮೀನು ಒದಗಿಸಲು ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, : ಬೆಳಗಾವಿಯ ಸಾಂಬ್ರಾ ವಿಮಾನ‌ ನಿಲ್ದಾಣದ ರನ್ ವೇ ಮತ್ತು ಟರ್ಮಿನಲ್ ವಿಸ್ತರಣೆಗಾಗಿ ಅಗತ್ಯವಿರುವ ಅಂದಾಜು 57 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ವಿಮಾನ ನಿಲ್ದಾಣಕ್ಕೆ ಒದಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಜಮೀನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ನ.8) ನಡೆದ ಸಭೆಯ…

Read More

ಪಾಲಿಕೆಯಲ್ಲಿ ತಿಳಿದವರ ತಪ್ಪುಗಳು..!

ಪಾಲಿಕೆ ಬಿಜಿಪಿ ಹಿಡಿತ ತಪ್ಪಿಸಲು ಕಾಂಗ್ರೆಸ್ ಮತ್ತೇ ಸ್ಕೆಚ್. ಅಧಿವೇಶನ ಸಂದರ್ಭದಲ್ಲಿಯೇ ಮುಹೂರ್ತ ಫಿಕ್ಸ್ ಮಾಡಿತಾ ಕಾಂಗ್ರೆಸ್.? ಶಾಸಕ ಅಭಯ ಪಾಟೀಲ ಮಧ್ಯಪ್ರವೇಶದಿಂದ ತಪ್ಪಿದ ಸೂಪರ್ ಸೀಡ್. ಹೀಗಾಗಿ ಎರಡನೇ ಹಂತದ ಹೋರಾಟಕ್ಕೆ ಸಜ್ಜಾದ ಕಾಂಗ್ರೆಸ್. ಬಿಜಿಪಿಯಲ್ಲಿ ‘ತಿಳಿದವರ’ ತಪ್ಪುಗಳೇ ಕಂಟಕವಾಗುವ ಸಾಧ್ಯತೆ.. ಬಿಜೆಪಿಯನ್ನು ಖೆಡ್ಡಾಕ್ಕೆ ಕೆಡವಲು ರೆಡಿಯಾದ ಕಾಂಗ್ರೆಸ್ ನೇತೃತ್ವದ ರಹಸ್ಯ ತಂಡ. ಪ್ರತಿ ಹಂತದಲ್ಲೂ ತಪ್ಪು ಹುಡುಕುತ್ತಿರುವ ಪೌರಾಡಳುತ ಇಲಾಖೆ. ಸ್ಥಾಯಿ ಸಮಿತಿಯಲ್ಲೂ‌ ನಡೆಯದ ನಿಯಮಾವಳಿಗಳು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ…

Read More

ಸೌಧ ನಿರ್ವಹಣೆಗೆ ಶಾಶ್ವತ ಯೋಜನೆ

ಬೆಳಗಾವಿ ಸುವರ್ಣಸೌಧ ನಿರ್ವಹಣೆಗೆ ಶಾಶ್ವತ ಯೋಜನೆಗೆ ಚಿಂತನೆ ಬೆಳಗಾವಿ, ಸುಮಾರು‌ 450 ಕೋಟಿ ರೂ ವೆಚ್ಚದಲ್ಲಿ‌ ನಿರ್ಮಾಣವಾಗಿರುವ ಸುವರ್ಷ ಸೌಧ ನಿರ್ವಹಣೆಯೇ ಈಗ ಒಂದು‌ ದೊಡ್ಡ ಸಮಸ್ಯೆಯಾಗಿ ಬಿಟ್ಟಿದೆ‌ ಸರ್ಕಾರ ಈ ಸೌಧಕ್ಕೆ ಅಗತ್ಯ ಕೆಲ ಪ್ರಮುಖ ಕಚೇರಿ ಸ್ಥಳಾಂತರ ಮಾಡಿದ್ದರೆ ಹತ್ತರಲ್ಲಿ ಹನ್ನೊಂದು ಎನ್ನುವಂತೆ ಸ್ವಚ್ಚತೆ ಆಗುತ್ತಿತ್ತು. ಆದರೆ ಪ್ರತಿ ವರ್ಷಕ್ಕೊಮ್ಮೆ ಚಳಿಗಾಲ ಅಧಿವೇಶನಕ್ಕೊಮ್ಮೆ ಹಿಂಡು ಕಟ್ಟಿಕೊಂಡು ಜಾತ್ರೆಗೆ ಬಂದಂತೆ ಸರ್ಕಾರ ಬಂದರೆ ಅದರ ನಿರ್ವಹಣೆ ಬಲು ಕಷ್ಟವೇ ಸರಿ. ಒಂದು ರೀತಿಯಲ್ಲಿ ಸೌಧ ನಿರ್ವಹಣೆ…

Read More

ಆ ಧ್ವನಿ ಅಡಗಿಸಿದ ಸುವರ್ಣ ಸೌಧ

ಸುವರ್ಣಸೌಧ ನಿರ್ಮಾಣದಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಕ್ಷೀಣ: ಸಭಾಪತಿ ಬಸವರಾಜ್ ಹೊರಟ್ಟಿ ಬೆಳಗಾವಿ, ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದಿಂದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಕ್ಷೀಣವಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು. ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ(ನ.7) ಅಧಿವೇಶನ ಪೂರ್ವಸಿದ್ಧತೆ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗಡಿಜಿಲ್ಲೆಯಲ್ಲಿ ವಿಧಾನಸೌಧ ನಿರ್ಮಾಣದಿಂದ ಕನ್ನಡಕ್ಕೆ ಸ್ಫೂರ್ತಿ ಬಂದಂತಾಗಿದೆ. ಅನೇಕ ಸರಕಾರಿ ಕಚೇರಿಗಳು ಕೂಡ ಸ್ಥಳಾಂತರಗೊಂಡಿವೆ. ಇದರಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು…

Read More

ಬೆಳಗಾವಿ ಕುಣಿಸುತ್ತಿರುವ BAR ಗಳು

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಬಾರ್ ರೆಸ್ಟೋರೆಂಟ್, ವೈನ್ ಶಾಪ್ ಗಳು ಹೇಳಿದಂತೆ ಅಬಕಾರಿ ಮತ್ತು ಪೊಲೀಸ್ ಇಲಾಖೆಯವರು ಕೇಳುತ್ತಾರೋ ಅಥವಾ ಇವರು ಹೇಳಿದಂತೆ ಅವರು ಕೇಳುತ್ತಾರೋ? ಸಹಜವಾಗಿ ಇಂತಹುದೊಂದು ಪ್ರಶ್ನೆ ಬೆಳಗಾವಿಗರನ್ನು ಅಷ್ಟೇ ಅಲ್ಲ ರಾಜ್ಯದ ಜನರನ್ನು ಕಾಡುತ್ತಿದೆ.ಆದರೆ ಇದಕ್ಕೆಲ್ಲ ಸ್ಪಷ್ಟ ಉತ್ತರ ಕೊಡಬೇಕಾದವರು ಜಾಣ ಕಿವುಡತನ ತೋರಿದ್ದು ಪರಿಸ್ಥಿಗೆ ಹಿಡಿದ ಕೈಗನ್ನಡಿ. ಬೆಳಗಾವಿಯ ವಾಸ್ತವತೆಯನ್ನು ಗಮನಿಸಿದರೆ, ಇಲ್ಲಿ ಮದ್ಯದ ಅಂಗಡಿಗಳು, ರೆಸ್ಟೋರೆಂಟ್ ಗಳು ಹೇಳಿದಂತೆ ಅದರ ಮೇಲೆ‌ ನಿಯಂತ್ರಣ ಹೊಂದಿದ ಅಬಕಾರಿ‌ ಮತ್ತು ಪೊಲೀಸ್‌ ಇಲಾಖೆಯವರು…

Read More

200 ರೈತರ ಆತ್ಮಹತ್ಯೆ..!

ಬೆಳಗಾವಿ. ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಸುಮಾರು 200 ಕ್ಕಿಂತಲೂ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ದುರ್ದೈವದ ಸಂಗತಿಯಾಗಿದೆ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಿಲ್ಲಾ ಮಂತ್ರಿಗಳು ನಾಪತ್ತೆ*ವಿದ್ಯುತ್ ಅಭಾವ, ರೈತರ ಆತ್ಮಹತ್ಯೆ ಹಾಗೂ ಬರ ಪೀಡಿತ ಪ್ರದೇಶದ ರೈತರ ಸಹಾಯಕ್ಕೆ ಬರಬೇಕಾದ ಸರ್ಕಾರ ಮತ್ತು ಉಸ್ತುವಾರಿ ಮಂತ್ರಿಗಳು ಯಾವುದೇ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ. ರೈತರಿಗೆ ಧೈರ್ಯ ತುಂಬುವ…

Read More

ಬೈಲಹೊಂಗಲದಲ್ಲಿ ಜೂಜು ಅಡ್ಡೆ ಮೇಲೆ ದಾಳಿ-72 ಜನರ ವಿರುದ್ಧ ಕೇಸ್

ಬೆಳಗಾವಿ.ಬೈ;ಲಹೊಂಗಲದಲ್ಲಿ ರಾಜಾರೋಷವಾಗಿ ನಡೆಸುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ಮಾಡಿದ ಸಿಇಎನ್ ಪೊಲೀಸ್ ತಂಡವು 72 ಜನರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದೆ. ಬೈಲಹೊಂಗಲ ಪಟ್ಟಣದ ರಿಕ್ರಿಯೇಶನ್ ಪಕ್ಕದಲ್ಲಿರುವ ಕೊಠಡಿಯಲ್ಲಿ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭಾನುವಾರ ರಾತ್ರಿ ಸಿಇಎನ್ ಇನ್ಸ್ಪೆಕ್ಟರ್ ಬಿ.ಆರ್.ಗಡ್ಡೇಕರ ನೇತೃತ್ವದ ತಂಡವು ದಾಳಿ ಮಾಡಿತ್ತು, ಆರೋಪಿಗಳಿಂದ 2,20,190 ರೂ ನಗದು, 4 ಲಕ್ಷ 69 ಸಾವಿರ ರೂ ಮೌಲ್ಯದ 62 ಮೊಬೈಲ್ಗಳನ್ನು ಪೊಲೀಸರು ಈ ಸಂದರ್ಭದಲ್ಲಿ ಪೊಲಿಸರು ಜಪ್ತಿ ಮಾಡಿಕೊಂಡಿದ್ದಾರೆ….

Read More

ಸೈನಿಕನ‌ ಮೇಲೆಯೇ ಪುಂಡರ ಅಟ್ಟಹಾಸ

ಬೆಳಗಾವಿ. ಗಡಿನಾಡ ಬೆಳಗಾವಿ ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾಗಿದೆ. ಕಳೆದ ಬಾರಿ ಅಂಗವಿಕಲನ ಮೇಲೆ ಖಾಕಿ ದೌರ್ಜನ್ಯ ನಡೆದ ಪ್ರಕರಣ ಮಾಸುವ ಮುನ್ನವೇ ಅದೇ ಬೆಳಗಾವಿಯಲ್ಲಿ ದೇಶ ರಕ್ಷಣೆಯಲ್ಲಿ ತೊಡಗುವ ಸೈನಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶಪುರದ ಬಳಿಯ ಬಾರ್ ಮುಂದೆ ಈ ಘಟನೆ ನಡೆದಿದೆ. ಸೈನಿಕನ ಮೇಲೆ ಹತ್ತಾರು ಜನ ಗುಂಪು ಹಲ್ಲೆ ಮಾಡುತ್ತಿರುವ ಘಟನೆ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿವೆ. ಸೈನಿಕನ ತಲೆಗೆ ರಕ್ತ ಸೋರುತ್ತಿರುವುದು ಇಲ್ಲಿ…

Read More
error: Content is protected !!