Headlines

3.45 ಕ್ಕೆ ಗೌರ್ನರ್ ಭೆಟ್ಟಿ

ಬೆಳಗಾವಿ. ನಗರದ ವಿಟಿಯುದಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೆಟ್ಟಿ ಮಾಡಲಿದೆ. ಬೆಳಗಾವಿ ಪಾಲಿಕೆ ಮೇಯರ್ ಪತ್ರದ ಹಿನ್ನೆಲೆಯಲ್ಲಿ ನಿಯೋಗ ರಾಜ್ಯಪಾಲರನ್ನು ಭೆಟ್ಟಿ ಮಾಡಲಿದೆ. ಶುಕ್ರವಾರ ಮಧ್ಯಾಹ್ನ 3.45 ಕ್ಕೆ ರಾಜ್ಯಪಾಲರು ಭೆಟ್ಟಿಗೆ ಸಮಯ ನಿಗದಿ ಮಾಡಿದ್ದಾರೆ. ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅನಿಲ ಬೆನಕೆ , ಮೇಯರ್ ಸೇರಿದಂತೆ ಬಿಜೆಪಿಯ ಎಲ್ಲ ನಗರಸೇವಕರು ಈ ಸಂದರ್ಭದಲ್ಲಿ ಹಾಜರಿರುವರು ಎಂದು ಗೊತ್ತಾಗಿದೆ.

Read More

ರಮಾಕಾಂತ ವಿರುದ್ಧ ಕೇಸ್..!

ಬೆಳಗಾವಿ. ಮಹಾನಗರ ಪಾಲಿಕೆ‌ ಬಿಜೆಪಿ ನಗರಸೇವಕ ರಾಜು ಭಾತಖಾಂಡೆ ಅವರಿಗೆ ಬೆದರಿಕೆ‌ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 18 ಜನರ ವಿರುದ್ಧ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಬೆಳಗಿನ‌ ಜಾವ 3.10 ಕ್ಕೆ ಪ್ರಕರಣ ದಾಖಲಾಗಿದೆ. ಪಾಲಿಕೆ ಎದುರು ನಡೆಯುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ರಮಾಕಾಂತ ಕೊಂಡುಸ್ಕರ ಅವರು ಬಿಜೆಪಿ ಶಾಸಕ ಅಭಯ ಪಾಟೀಲ ವಿರುದ್ಧ ಹೇಳಿಕೆ ನೀಡಿದ್ದರು.ಇದಕ್ಕೆ ಪ್ರತಿಯಾಗಿ‌ ಬೂಡಾ ಮಾಜಿ ಅಧ್ಯಕ್ಷ ಸಂಜಯ ಬೆಳಗಾಂವಕರ ಮತ್ತು ನಗರಸೇವಕ ರಾಜು ಭಾತಖಾಂಡೆ ಪ್ರತಿ ಹೇಳಿಕೆ ನೀಡಿದ್ದರು….

Read More

ಆತಂಕದಲ್ಲಿ ಬೆಳಗಾವಿ..!

FB WAR ದೀರ್ಘ ಕ್ಕೆ ಹೊಗುವ ಯತ್ನ. ಭಾತಖಾಂಡೆ ಗಲ್ಲಿಯಲ್ಲಿ ಕೆಲ ಹೊತ್ತು ವಾತಾವರಣ ಗರಂ.ಮಧ್ಯರಾತ್ರಿ ಠಾಣೆಗೆ ಧಾವಿಸಿದ ಬಿಜೆಪಿ ನಗರ ಸೇವಕ ಬೆಳಗಾವಿ. ಗಡಿನಾಡ ಬೆಳಗಾವಿ ಜನ ಒಂದು ರೀತಿಯಲ್ಲಿ ಆತಂಕದ ಕ್ಷಣಗಳನ್ನು ಎದುರಿಸುವಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಉತ್ತರಕ್ಕೆ ಪ್ರತ್ಯುತ್ತರ ಕೊಡುವುದು ಸಹಜ. ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅದೇ ರೀತಿ ಮುಂದುವರೆಸಬೇಕು. ಆದರೆ ಇಲ್ಲಿ ಫೇಸಬುಕ್ ದಲ್ಲಿ ಉತ್ತರಕ್ಕೆ ಪ್ರತ್ಯುತ್ತರ ಕೊಡುವ ಬದಲು ಹೆದರಿಸುವ ತಂತ್ರಗಾರಿಕೆ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತವೆ. ಬೆಳಗಾವಿ ಮಹಾನಗರ…

Read More

ಬೆಳಗಾವಿ ಪಾಲಿಕೆ ವಿವಾದ- ಇಂದೇ ಗೌರ್ನರ್ ಭೆಟ್ಟಿ

ಎಲ್ಲರ ಚಿತ್ತ ಗೌರ್ನರರತ್ತ. ಬೆಳಗಾವಿಗೆ ಆಗಮಿಸಲಿರುವ ಗೌರ್ನರ್. ಅಭಯ ಪಾಟೀಲ‌ ನೇತೃತ್ವದ ನಿಯೋಗದ ಭೆಟ್ಟಿ.ಗೌರ್ನರ ಸಮಯಕ್ಕೆ ಕಾದು‌ ಕುಳಿತ ಮೇಯರ್. ಶಾಸಕರು. ಬೆಳಗಾವಿ.ಶಾಸಕ ಅಭಯ ಪಾಟೀಲ ನೇತೃತ್ವದ ಏಳು ಜನರ ನಿಯೋಗ ನಾಳೆ ದಿ 27 ರಂದು ಪಾಲಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರನ್ನು ಭೆಟ್ಟಿ ಆಗಲಿದೆ,.ವಿಟಿಯು ಕಾರ್ಯಕ್ರಮಕ್ಕೆ ಆಗಮಿಸುವ ರಾಜ್ಯಪಾಲರನ್ನು ಬೆಳಗಾವಿಯಲ್ಲಿಯೇ ಭೆಟ್ಟಿ ಮಾಡಿ ಪಾಲಿಕೆಯಲ್ಲಿ ನಡೆದಿರುವ ಘಟನೆಗಳನ್ನು ವಿವರಿಸಲಿದೆ ಎಂದು ಗೊತ್ತಾಗಿದೆ, ಕಳೆದ ದಿನವಷ್ಟೇ ರಾಜ್ಯಪಾಲರ ಸಮಯ ಕೋರಿ ಮೇಯರ್ ಬರೆದ ಪತ್ರವು ರಾಜಭವನ ತಲುಪಿತ್ತು,…

Read More

RCU ಕಾಮಗಾರಿ ಅಯ್ಯಯ್ಯೊ..!

ಹಿರೇಬಾಗೇವಾಡಿ ಬಳಿಯ. RCU ಕಾಮಗಾರಿ ಬಗ್ಗೆ ಅಸಮಾಧಾನ‌. ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಚಿವರು.ಕಾಮಗಾರಿ ಈ ರೀತಿ ಕಳಪೆ ಆದರೆ ಹೇಗೆ? ಹೊಸದಾಗಿ ಯೋಜನೆ ರೂಪಿಸಿ, ಸಚಿವೆ ಹೆಬ್ಬಾಳಕರ್ ಮಾರ್ಗದರ್ಶನದಲ್ಲೇ ಕಾಮಗಾರಿ ಕೈಗೊಳ್ಳುವಂತೆ ಸಚಿವ ಡಾ.ಸುಧಾಕರ ಆದೇಶ ಬೆಳಗಾವಿ: ರೈತರನ್ನು ಶೋಷಿಸುತ್ತ ಹಿರೇಬಾಗೇವಾಡಿ ಬಳಿ ಕಾಮಗಾರಿ ನಡೆಸಿದ್ದ ರಾಣಿ ಚನ್ನಮ್ಮ ವಿವಿಯವರನ್ನು ಬೆಂಡೆತ್ತುವ ಕೆಲಸವನ್ನು ಸಚಿವದ್ವಯರು ಮಾಡಿದರು. ಈ ಭಾಗದಲ್ಲಿ ರೈತರಿಗೆ ನೀರಾವರಿ ಯೋಜನೆ ರೂಪಿಸಬೇಕೆಂದು ಕನಸು ಕಂಡಿದ್ದ ಸಚಿವೆ ಹೆಬ್ಬಾಳಕರ್ ಅವರು ಉನ್ನತ ಶಿಕ್ಷಣ ಸಚಿವರ ಸನ್ನುಖದಲ್ಲಿಯೇ…

Read More

ರಾಜ್ಯಪಾಲರಂಗಳಕ್ಕೆ ಪಾಲಿಕೆ ಚೆಂಡು..!

ಬೆಳಗಾವಿ. ಪಾಲಿಕೆ ರಾಜಕಾರಣ ವಿಕೋಪಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿಯೇ ಮೇಯರ್ ಶೋಭಾ ಸೋಮನ್ನಾಚೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಪಾಲಿಕೆ ವಿವಾದದ ಚೆಂಡು ಈಗ ರಾಜ್ಯಪಾಲರ ಅಂಗಳಕ್ಕೆ ಹೋದಂತಾಗಿದೆ. ಮೇಯರ್ ಪತ್ರದಲ್ಲಿ ಏನಿದೆ?ಇಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಶೋಭಾ ಸೋಮನ್ನಾಚೆ ಅವರು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದು ಈಗ ಚರ್ಚಯ ವಸ್ತುವಾಗಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಕರ್ತವ್ಯ ಲೋಪಗಳ ಬಗ್ಗೆ ಸದಸ್ಯರುಗಳು ಕಳೆದ ದಿ. 21 ರಂದು…

Read More

ಸೂಪರ್ ಸೀಡ ಇಲ್ಲ ಎಂದ ಸಚಿವರು..!

ಇಲ್ಲಿ ಜಾತಿ ಸಂಬಂಧವೇ ಇಲ್ಲ ಎಂದ ಸತೀಶ್, ಅಭಯ ವಿರುದ್ಧ ದಲಿತಾಸ್ತ್ರ, ಸತೀಶ ವಿರುದ್ಧ ಮರಾಠಾಸ್ತ್ರ, ಸಚಿವರ ವಿರುದ್ಧವೇ ರಾಜ್ಯಪಾಲರಿಗೆ ಪತ್ರ ಬರೆದ ಮೇಯರ್. ವಿರೋಧ ಪಕ್ಷಕ್ಕೆ ಮೇಯರ್ ಪತ್ರ ಕಾಣೆ ಬಗ್ಗೆ ಹೇಳಿದ್ದು ಯಾರು?. 138 ಪಿಕೆ ನೇಮಕ ವಿರುದ್ಧ ಕ್ರಮ ಎಂದ ಸಚಿವರು (ಇ ಬೆಳಗಾವಿ ವಿಶೇಷ) ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಅಭಿವೃದ್ಧಿ ಬದಲು ಈಗ ವಿವಾದಾಸ್ಪದ ವಿಷಯವೇ ಹೆಚ್ಚು ಚರ್ಚೆ ಆಗುತ್ತಿದೆ, ಹಿಂದೆ ಕನ್ನಡ, ಮರಾಠಿ ವಿವಾದ ನಡೆಯುತ್ತಿತ್ತು, ಈಗ ಬಿಜೆಪಿ-…

Read More

ಸತೀಶ್ ವಿರುದ್ಧ ಮರಾಠಾ ಅಸ್ಸ್ರ..!

ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಜಾತಿ ಸಂಘರ್ಷಕ್ಕೆ ತಿರುಗುವ ಲಕ್ಷಣಗಳು ಕಾಣ ಸಿಗುತ್ತಿವೆ ಆದರೆ ಈಗ ಸತೀಶ್ ಜಾರಕಿಹೊಳಿ ವಿರುದ್ಧವೇ ಮರಾಠಾಸ್ತ್ರ ಪ್ರಯೋಗಿಸಲಾಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆ ಅಥವಾ ಬೂಡಾದಲ್ಲಿ ಅವ್ಯವಹಾರ ಆಗಿದ್ದರೆ ತನಿಖೆ ಮಾಡಿಸಿದರೆ ಅದನ್ನು ಸ್ವಾಗತಿಸುತ್ತೇವೆ ಎಂದು ಬೂಡಾ ಮಾಜಿ ಅಧ್ಯಕ್ಷ ಸಂಜಯ ಬೆಳಗಾಂವಕರ ಹೇಳಿದ್ದಾರೆ ಆದರೆ ಮೇಯರ್ ಅವರು ಮರಾಠಾ ಸಮುದಾಯಕ್ಕೆ ಸೇರಿದ್ದಾರೆಂದು ತಿಳಿದು ಅದನ್ನು ಸೂಪರ್ ಸೀಡ್ ಮೂಲಕ ಅನಗತ್ಯವಾಗಿ ತೊಂದರೆ ಕೊಡುವುದನ್ನು ಮರಾಠಾ ಸಮುದಾಯ ಸಹಿಸುವುದಿಲ್ಲ ಎಂದು ಹೇಳಿದ್ದಾರೆ….

Read More

ರಾಜ್ಯದ ತುಂಬ ಜೈ ಶ್ರೀರಾಮ

ಬೆಳಗಾವಿ. . ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕರೆಯ ಮೇರೆಗೆ ರಾಜ್ಯದ ತುಂಬ ವಿಜಯದಶಮಿಯಂದು ಜೈ ಶ್ರೀರಾಮ ಘೋಷಣೆಗಳು ಕೇಳಿ ಬಂದವು. ಅಯೋಧ್ಯೆಯ ಶ್ರೀ ರಾಮಚಂಸ್ರ ಸ್ವಾಮಿಯ ಪುನಃ ಪ್ರತಿಷ್ಟಾಪನೆ ಅಂಗವಾಗಿ ಶತಕೋಟಿ ರಾಮತಾರಕ ಮಗಾಯಜ್ಞ ಶ್ರೀರಾಮ ಮಹಾಯಾಗ ಇಂದಿನಿಂದ ಆರಂಭವಾಯಿತು. ಬೆಳಗಾವಿ, ಹುಬ್ಬಳ್ಳಿ ಧಾರವಾಡ, ವಿಜಯಪುರ, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ತಾಲುಕು ಮತ್ತು ಜಿಲ್ಲಾ ಕೇಂದ್ರದಲ್ಲಿ ರಾಮನಾಮ ಜಪ ಆರಂಭವಾಯಿತು. ಬೆಳಗಾವಿಯ ಶ್ರೀ ಚಿದಂಬರೇಶ್ವರ ದೇವಸ್ಥಾನದಲ್ಲಿ ಈ ನಿಮಿತ್ತ ಕಾರ್ಯಕ್ರಮ ನಡೆಯಿತು. ಚಿದಂಬರ ನಗರ…

Read More

ಪಾಲಿಕೆಯಲ್ಲಿ “ತನಿಖೆ” ನಾಟಕ ಶುರು..!

ಬೆಳಗಾವಿ ಮಹಾನಗರ ಪಾಲಿಕೆ. ಅಧೀನ ಅಧಿಕಾರಿಗಳಲ್ಲಿ ಹಿಡಿತವೇ ಇಲ್ಲ. ಕ್ರಮಕ್ಕೆ ಹಿಂಜರಿಕೆ ಏಕೆ?. ಪಾಲಿಕೆ ಆರ್ಥಿಕ ಕುಸಿತಕ್ಕೆ ಯಾರು ಹೊಣೆ?. ದೊಡ್ಡವರ ರಾಜಕಾರಣಕ್ಕೆ ಸಣ್ಣವರು ಅಪ್ಪಚ್ಚಿ‌. ಆಯುಕ್ತರ ಕೋರ್ಟ್ ಗೆ ಗೌರವ ಬೇಡವೇ,? ಕೌನ್ಸಿಲ್ ಠರಾವಿನ ಪಾಲನೆ ಯಾರ ಹೊಣೆ?. ಅಕ್ರಮ‌ ಕಟ್ಟಡದಲ್ಲಿಯೇ ವಾಣಿಜ್ಯ‌ಮಳಿಗೆ ತೆರೆಯಲು ಅನುಮತಿ ಕೊಟ್ಟವರು ಯಾರು? ಬೆಳಗಾವಿ.. ಗಂಡ ಹೆಂಡಿರ ಜಗಳದಲ್ಲಿ ಕೂಸು ಘಾಸಿ ಎನ್ನುವ ರೂಢಿ ಮಾತು ಕೇಳಿರಬಹುದು. ಅದು ಈಗ ಬೆಳಗಾವಿ ಮಹಾನಗರ ಪಾಲಿಕೆಗೆ ಸರಿ ಹೊಂದುತ್ತದೆ. ಬೆಳಗಾವಿ ಪಾಲಿಕೆಯಲ್ಲಿ…

Read More
error: Content is protected !!