ಅಭಯ ತಾನೂ ಕುಣಿದ ಎಲ್ಲರನ್ನೂ ಕುಣಿಸಿದ..!

ರಾಜಕಾರಣ ಮೀರಿ ಕುಣಿದ ಅಭಯ.‌ ತಾನೂ ಕುಣಿದು ಬೆಳಗಾವಿಗರನ್ನು ಕುಣಿಸಿದ ಶಾಸಕರು. ನಗರ ಸೇವಕರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ಅಭಯ ಪಾಟೀಲ. 11 ,ವರ್ಷಗಳಿಙದ ನಡೆದ ದಾಂಡಿಯಾ ಉತ್ಸವ. ಶಾಸಕರೇ ಆಯೋಜನೆ ಮಾಡಿದ ದಾಂಡಿಯಾ. ಬೆಳಗಾವಿ. ರಾಜ್ಯದಲ್ಲಿ ಈಗ ಎಲ್ಲಿ ನೋಡಿದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿದ್ದೇ ಸುದ್ದಿ. ಅಂತಹುದರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ‌ ನಗರದಲ್ಲಿ ಅದೇ ಅಭಯ ಪಾಟೀಲ ತಾನೂ ಕುಣಿದಿದ್ದಲ್ಲದೇ ಇನ್ನುಳಿದ ಬಿಜೆಪಿ‌…

Read More

AKBMS ಆಧ್ಯಕ್ಷರಿಗೆ ಮಾತೃ ವಿಯೋಗ

ಬೆಂಗಳೂರು ರಾಜ್ಯದ ಮಾಜಿ ಸಚಿವರಾದ ಹಾಗೂ ಹಾಸನ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದ ದಿವಂಗತ ಹಾರನಹಳ್ಳಿ ರಾಮಸ್ವಾಮಿ ಅವರ ಧರ್ಮ ಪತ್ನಿ ಶ್ರೀಮತಿ ಸುಶೀಲಮ್ಮನವರು(92) ಇಂದು ಸಂಜೆ (23/10/2023 ) ದೈವಾಧೀನರಾದರು. ಮೃತರ ಅಂತ್ಯ ಕ್ರಿಯೆಯನ್ನು ನಾಳೆ 24 ರಂದು ಚಾಮರಾಜಪೇಟೆಯ T R ಮಿಲ್ ರುದ್ರಭೂಮಿಯಲ್ಲಿ ಮಧ್ಯಾಹ್ನ 11:45 ಕ್ಕೆ ನಡೆಸಲಾಗುವುದು. ಮೃತರಿಗೆ ಇಬ್ಬರು ಗಂಡು ಮಕ್ಕಳು ಹಿರಿಯ ಸುಪುತ್ರರಾದ ಅರವಿಂದ ಹಾರನಹಳ್ಳಿ ಅವರು ಅಮೆರಿಕಾದ ಇಂಟೆಲ್ನಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬೆಂಗಳೂರಿನಲ್ಲಿ…

Read More

MP ಗೆ ಅವರಾ? ಇವರಾ?

ಬೆಳಗಾವಿಯಲ್ಲಿ ಈಗ ಲೋಕಸಭೆ ಚುನಾವಣೆ ಕಾವು. ಟಿಕೆಟ್ ಅವರಿಗಾ, ಇವರಿಗಾ? ಕಾಂಗ್ರೆಸ್ ಗೆ ಶಾಕ್ ಕೊಡ್ತಾರಾ ಜನ? ಜಾತಿ ಲೆಕ್ಕಾಚಾರ ಶುರು.ಬಿಜೆಪಿಯಲ್ಲಿ ಟಿಕೆಟ್ ಗೆ ಪೈಪೋಟಿ, ಡಾಕ್ಟರ್, ನಿವೃತ್ತ ಐಎಎಸ್ ಅಧಿಕಾರಿ ಕೂಡ ರೇಸ್ ನಲ್ಲಿ. ಬೆಳಗಾವಿ. ಜಿಲ್ಲೆಯ ರಾಜಕಾರಣವೇ ವಿಚಿತ್ರ. ಇಲ್ಲಿನ ರಾಜಕಾಣಿಗಳ ಒಳ ಹೊಡೆತವೇ ಗೊತ್ತಾಗಲ್ಲ.‌ ಮೇಲ್ನೋಟಕ್ಕೆ ಎಲ್ಲಾ ಒಂದೇ.‌! ಆದರೆ ರಾಜಕಾರಣ ಅಸಲಿ ಆಟ ಶುರುವಾದಾಗ ಯಾರು ಯಾರ ಪರ ಎನ್ನುವುದು ಗೊತ್ತಾಗುತ್ತದೆ. ರಾಜ್ಯ ರಾಜಕಾರಣದಲ್ಲಿ ಈಗ ಏನಿದ್ದರೂ ಲೋಕಸಭೆ ಚುನಾವಣೆದ್ದೇ ಮಾತು….

Read More

ಮೇಯರ್ ವಿರುದ್ಧ ಕೇಸ್ ಆಗಲ್ಲ ಅಂದ ಪೊಲೀಸ್..!

ಮೊದಲ ಹಂತದಲ್ಲೇ ಮುಗ್ಗರಿಸಿದ ಕಾಂಗ್ರೆಸ್. ಮೇಯರ್ ವಿತುದ್ಧ ಕೇಸ್ ಆಗಲ್ಲ ಎಂದ ಪೊಲೀಸ್.. ಮಧ್ಯರಾತ್ರಿ ವರೆಗೆ ನಡೆದಿತ್ತು ಪ್ರಯತ್ನ. ಕೇಸ್ ದಾಖಲಿಸಲು ಬೆಂಗಳೂರಿನಿಂದಲೇ‌ ಬಂದಿತ್ತು ನಿರ್ದೇಶನ. ಆದರೆ 138 pk ಕೇಸ್ ಉರುಳಾಗುವ ಸಾಧ್ಯತೆ. ಈ ಬಗ್ಗೆ ಜಿಲ್ಲಾಮಂತ್ರಿ ಜೊತೆ ಮಾತಾಡಲು ಹೋಗಿದ್ದ ಆ ‘ಶ್ಯಾಣ್ಯಾ’ ಯಾರು? ಪಿಕೆ ಭಾನಗಡಿ ಅಭಯ ಸಹ ಗರಂ. ತನಿಖೆಗೆ ಸೈ ಅಂದಿದ್ದ ಅಭಯ. ಬೆಳಗಾವಿ. ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ಮೂಲಕವೇ ಮೇಯರ್ ಶೋಭಾ ಸೋಮನ್ನಾಚೆ ವಿರುದ್ಧ ಕೇಸ್ ಕೊಡಿಸುವ…

Read More

ರಾಜಕೀಯ ಯುದ್ಧದಲ್ಲಿ ಅಧಿಕಾರಿಗಳೇ ಬಲಿಪಶು

ಬೆಳಗಾವಿ. ರಾಜಕಾರಣದಲ್ಲಿ ಯಾರು ಶತ್ರುನೂ ಅಲ್ಲ, ಮಿತ್ರನೂ ಅಲ್ಲ. ಆದರೆ ಅಂತಹ ರಾಜಕಾರಣಿಗಳ ಮಾತು ಕೇಳಿ ಏನಾದರೂ ಮಾಡ ಹೊರಟರೆ ಬಲಿ ಪಶು ಆಗುವವರು ಅಧಿಕಾರಿಗಳೇ..! ಇದನ್ನು ಎಲ್ಲರೂ ಒಪ್ಪುವ ಮಾತು. ಅನುಮಾನವೇ ಇಲ್ಲ. ಹೇಗಿದೆ ಎಂದರೆ ,ಎಲ್ಲವೂ ಸುಸೂತ್ರವಾಗಿ ದಾಟಿದರೆ ನೂರು ವರ್ಷ ಆಯಸ್ಸು. ಅಕಸ್ಮಾತ ಯಾರಾದರೂ ಸ್ವಲ್ಪ ಕಿರಿಕ್ ಮಾಡಿದರೆ ಖೇಲ್ ಖತಂ.! ಟಾರ್ಗೆಟ್ ಫಿಕ್ಸ್. ಸಧ್ಯ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಅಧಿಕಾರಿಗಳಿಗೆ ಸರ್ಕಾರಿ ನೌಕರಿ ಮಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ…

Read More

ಬೆಳಗಾವಿಯಲ್ಲಿ‌ ಯಾರಿಗಾಗಿ ನಡೆಯಿತು ಈ ಕುಸ್ತಿ…!

, ಕೌನ್ಸಿಲ್ ಗೊತ್ತುವಳಿ ತಿದ್ದಪಡಿ. ಸಭೆಯಲ್ಲಿ ಕೋಲಾಹಲ. ತನಿಖೆಗೆ ಅಸ್ತು. ಮೇಯರ್ ಸಹಿ ಬಗ್ಗೆಯೂ ತನಿಖೆ 138 ಪಿಕೆ ವಿವಾದ ತನಿಖೆಗೆ ಜಿಲ್ಲಾ ಮಂತ್ರಿ ಸೂಚನೆ. ಬಿಜೆಪಿಗೆ ಮುಜುಗುರ ತಂದ ಪಿಕೆ ವಿವಾದ. ಡಿಸಿ, ಪೊಲೀಸ್ ಆಯುಕ್ತರ ಮೂಲಕ ತನಿಖೆಗೆ ಅಸ್ತು. ಆ ವಿವಾದ ಮರೆಮಾಚಲು ಇದನ್ನು ಹುಟ್ಟು ಹಾಕಿದರಾ? ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ರಾಜಕೀಯ ಸಂಘರ್ಷಕ್ಕೆ ಕಾರಣವಾಯಿತು. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಕೊಟ್ಟ ಒಂದು ನೋಟೀಸ್ ಈ ಸಂಘರ್ಷಕ್ಕೆ ಕಾರಣ…

Read More

ಪಾಲಿಕೆ ಸಭೆ- ಜಂಗಿ ಕುಸ್ತಿ

ಬೆಳಗಾವಿ.ಗಡಿನಾಡ ಬೆಳಗಾವಿ ಮಹಾ ನಗರ ಪಾಲಿಕೆಯಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದಿದ್ದರೂ ಕೂಡ ಸಕಾರಣವಿಲ್ಲದ ನೋಟೀಸ್ ಕೊಟ್ಟ ಸರ್ಕಾರ ಮಹಾನಗರ ಪಾಲಿಕೆ ಬಗ್ಗೆನೇ ಜನ ಸಂಶಯದಿಂದ ನೋಡುವ ಹಾಗೆ ಮಾಡಿದೆ.ಆಡಳಿತಾಧಿಕಾರಿಯ ಅವಧಿಯಲ್ಲಿ ಆದ ಲೋಪಕ್ಕೆ ಈಗ ಪಾಲಿಕೆಯ ಎಲ್ಲ 58 ಜನ ನಗರಸೇವಕರು ಅನಗತ್ಯವಾಗಿ ತಮ್ಮ ತೆಲೆ ಬಿಸಿವಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ.ಮೂಲಗಳ ಪ್ರಕಾರ ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಪಾಲಿಕೆಗೆ ನೋಟೀಸ್ ಕೊಟ್ಟಿದ್ದರ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇಲ್ಲಿ ಪಾಲಿಕೆಯ ಪರಿಷತ್ ಸಭೆಯ…

Read More

4 ರಿಂದ ಬೆಳಗಾವಿಯಲ್ಲಿ ಅಧಿವೇಶನ.

ಬೆಂಗಳೂರು. ಗಡಿನಾಡ ಬೆಳಗಾವಿಯಲ್ಲಿ ಡಿಸೆಂಬರ 4 ರಿಂದ 15 ರವೆರೆಗೆ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಕಳೆದ ದಿನ ನಡೆದ ಸಚಿವ ಸಂಪುಟದಲ್ಲಿ ಈ ತೀರ್ಮಾನ ಮಾಡಲಾಗಿದೆ. ಹೀಗಾಗಿ ಜಿಲ್ಲಾಡಳಿತಕ್ಕೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ಕೂಡ ನೀಡಲಾಗಿದೆ. ಈ ಬಾರಿ ಅಧಿವೇಶನಕ್ಕೆ ಯಾವ ಯಾವ ಪ್ರತಿಭಟನೆಗಳು ಬಿಸಿ ಮುಟ್ಟಲಿವೆ ಎನ್ನುವುದನ್ನು ಕಾದು ನೋಡಬೇಕು.

Read More

ದಾಂಡಿಯಾದಲ್ಲೂ ಅನಂತ ನೆನಪು..!

ಬೆಳಗಾವಿ. ರಾಜಕಾರಣದಲ್ಲಿ ಕೆಲವೊಂದು ಸಲ ಗುರು ಶಿಷ್ಯರ ಸಂಬಂಧ ಅಧಿಕಾರ ಸಿಗೋತನಕ ಅಥವಾ ಅವರು ಇರೋತನಕ.! ಇಷ್ಟೆಲ್ಲ ಹೇಳಿದ ಮೇಲೆ ರಾಜಕೀಯದಲ್ಲಿ ಅಂತಹ ಗುರುವನ್ನು ಹೊಂದಿದ ಶಿಷ್ಯ ಯಾರು ಎಂಬ ಚಿಂತೆ ಸಹಜವಾಗಿ ಬರಬಹುದು. ಅವರೇ ಅಭಯ ಪಾಟೀಲ !. ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕರು.! ಅನಂತಕುಮಾರ ಅವರು ಲೋಕಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನರೇಂದ್ರ ಮೋದಿ ಸರಕಾರದಲ್ಲಿ ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವರಾಗಿ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾಗಿ ಸೇವೆ ಸಲ್ಲಿಸಿದ್ದರು., ಆಗಲೂ…

Read More

ನನ್ನ ಮೌನ ದೌರ್ಬಲ್ಯವಲ್ಲ….!

ಹೆಬ್ಬಾಳಕರ ಜೊತೆ ಕಿರಿಕಿರಿಯಿಲ್ಲ. ಅವರನ್ನು ಮೀರಿ ಬೆಳೆದಿದ್ದೇವೆ. ನಾನು 6 ಬಾರಿ ಶಾಸಕ, ಅವರು 2 ಬಾರಿ. ನಿಗಮ ಮಂಡಳಿ ಶಾಸಕರ ಬದಲು ಕಾರ್ಯಕರ್ತರಿಗೆ ಕೊಡಿ ಎಂದಿದ್ದೇನೆ. ಸವದಿಗೆ ಕಾರ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಅಡ್ಡಿಯಿಲ್ಲ. ಬೆಂಗಳೂರುನನ್ನ ಮೌನವನ್ನು ದೌರ್ಬಲ್ಯ ಎಂದು ಭಾವಿಸಬೇಡಿ. ಕಳೆದ ನಾಲ್ಕು ತಿಂಗಳಲ್ಲಿ ಸಾಕಷ್ಟು ಬಾರಿ ವರ್ಗಾವಣೆ ವಿಷಯದಲ್ಲೂ ಸಾಕಷ್ಟು ಹಸ್ತಕ್ಷೇಪವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.ಪರೋಕ್ಷವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಅಸಮಾಧಾನ ಹೊರ ಹಾಕಿದ ಅವರು, ನಾನೂ…

Read More
error: Content is protected !!