ಸೌಧದಲ್ಲಿ ಪೂಜೆಗೆ ಅರಿಷಿನ ಬಳಸುವಂತಿಲ್ಲ

ಬೆಂಗಳೂರು. ಹಿಂದೂ ಧರ್ಮದಲ್ಲಿ ಕುಂಕುಮ ಮತ್ತು ಅರಿಶಿನಕ್ಕೆ ಪವಿತ್ರ ಸ್ಥಾನವಿದೆ. ಯಾವುದೇ ಪೂಜೆ ಅಥವಾ ಇನ್ನಿತರ ಶುಭ ಸಮಾರಂಭಗಳಲ್ಲಿ ಇವುಗಳನ್ನು ವಿಶೇಷವಾಗಿ ಬಳಸಲಾಗುತ್ತದೆ. ಮತ್ತು ಪೂಜನೀಯ ಸ್ಥಾನವನ್ನು ನೀಡುತ್ತಾರೆ. ವಿವಾಹಿತ ಸ್ತ್ರೀಯರು ತಮ್ಮ ಕೆನ್ನೆಗೆ ಅರಿಶಿನವನ್ನು ಹಣೆಗೆ ಕುಂಕುಮದ ಸಿಂಧೂರವನ್ನಿಟ್ಟು ತಮ್ಮ ಮುತ್ತೈದೆತನವನ್ನು ಸಂಕೇತಿಸುತ್ತಾರೆ.ಅಲ್ಲದೆ ಕುಂಕುಮ ಮತ್ತು ಅರಿಶಿನ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ಅರಿಶಿನವು ಬರಿಯ ಅಲಂಕಾರಿಕ ಇಲ್ಲವೇ ಪೂಜನೀಯ ಸಾಮಾಗ್ರಿಯಾಗಿ ಹೆಸರು ಪಡೆದುಕೊಂಡಿರುವುದು ಮಾತ್ರವಲ್ಲದೆ ಆರೋಗ್ಯ ಕ್ಷೇತ್ರದಲ್ಲಿ ಕೂಡ ಅರಿಶಿನ ಗಣನೀಯ ಸ್ಥಾನವನ್ನು ಪಡೆದುಕೊಂಡಿದೆ….

Read More

ಅಭಯ ದಾಂಡಿಯಾಗೆ ಭರಪೂರ ರಿಸ್ಪಾನ್ಸ್..!

ನಗರ ಸೇವಕರ ಭರ್ಜರಿ ಸ್ಟೆಪ್ಸ್..! ಶಾಸಕರ ಕುಟುಂಬ ಸಹ ದಾಂಡಿಯಾದಲ್ಲಿ ಭಾಗಿ. ರಾಣಿ ಚೆನ್ನಮ್ಮ ನಗರದಲ್ಲಿ ಹೆಚ್ಚುತ್ತಿರುವ ಜನ. ಅಚ್ಚುಕಟ್ಟಾದ ವ್ಯವಸ್ಥೆ. ಬೆಳಗಾವಿನವರಾತ್ರಿ ಸಂದರ್ಭದಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಆಯೋಜನೆ ಮಾಡಿದ ದಾಂಡಿಯಾಗೆ ಭರಪೂರ ರಿಸ್ಪಾನ್ಸ್ ಸಿಗುತ್ತಿದೆ. ಬೆಳಗಾವಿ ದಕ್ಷಿಣ ಕ್ಷೇತ್ರ ಅಷ್ಟೇ ಅಲ ಸಲ್ಲ ಉತ್ತರ, ಗ್ರಾಮೀಣ ಕ್ಷೇತ್ರದ ಜನ ಕೂಡ ಇಲ್ಲಿ ಬರುತ್ತಿದ್ದಾರೆ. ಹೀಗಾಗಿ ದಿನ ಕಳೆದಂತೆ ದಟ್ಟನೆ ಹೆಚ್ಚಾಗುತ್ತಿದೆ. ರಾಣಿ ಚನ್ನಮ್ಮ ನಗರದಲ್ಲಿರುವ ವಿಶಾಲವಾದ ಮೈದಾನದಲ್ಲಿ ಅಭಯ ಪಾಟೀಲರು ದಾಂಡಿಯಾವನ್ನು…

Read More

ಲಕ್ಷ್ಮೀ- ಸತೀಶ ಕದನದಲ್ಲಿ ಡಿಕೆ ‘ಗೃಹ’ ಪ್ರವೇಶ..!

ಆಗ PLD . ಈಗ ವರ್ಗಾವಣೆ ಸಮರ. ದಶಕಗಳ ಹಿಂದೆ ನಡೆದ ಕದನ ಮತ್ತೇ ಶುರು. ಸತೀಶ- ಲಕ್ಷ್ಮೀ ಕದನಕ್ಕೆ ಡಿಕೆಶಿ ಎಂಟ್ರಿ. ಸತೀಶ ಇಲ್ಲದಾಗ ಬೆಳಗಾವಿಗೆ ಬಂದ ಡಿಕೆ. ಸತೀಶ ಜಾರಕಿಹೊಳಿ ಶಿಫಾರಸ್ಸು ಮಾಡಿದ ವರ್ಗಾವಣೆ ಪತ್ರಕ್ಕೆ ಕಿಮ್ಮತ್ತೇ ಇಲ್ಲದಂತಾಯಿತಾ?. ಪಾಲಿಕೆ, ಕಂದಾಯ, ಪೊಲೀಸ್ ಮತ್ತು ಸಬ್ ರಿಜಿಸ್ಟ್ರಾರ್ ದಲ್ಲಿ ಯಾರದ್ದಿದೆ ಹಸ್ತಕ್ಷೇಪ? ತರಕಾರಿ ಹರಾಜಿನಂತಾದ ಅಧಿಕಾರಿಗಳ ವರ್ಗಾವಣೆ ದಂಧೆ. ಒಂದು ರೀತಿಯಲ್ಲಿ ರಾಜಕೀಯ ಹೈಡ್ರಾಮಾ ಸೃಷ್ಟಿಯಾಗಿತ್ತು, ನಂತರ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಬ್ಬಿನ…

Read More

ಕಟೀಲ್, ಕುಮಾರಸ್ವಾಮಿ ನ್ಯಾಯಾಧೀಶರಲ್ಲ: ಡಿ.ಕೆ.

ಬೆಳಗಾವಿ“ನನ್ನನ್ನು ಜೈಲಿಗೆ ಕಳುಹಿಸಲು ನಳೀನ್ ಕುಮಾರ್ ಕಟೀಲ್ ಆಗಲಿ, ಕುಮಾರಸ್ವಾಮಿ ಅವರಾಗಲಿ ನ್ಯಾಯಾಧೀಶರಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಿವಕುಮಾರ್ ಅವರು ಎರಡನೇ ಬಾರಿಗೆ ತಿಹಾರ್ ಜೈಲಿಗೆ ಹೋಗಲು ಸಿದ್ಧತೆ ಮಾಡಿಕೊಳ್ಳಲಿ” ಎಂಬ ಕಟೀಲ್ ಅವರ ಹೇಳಿಕೆ ಬಗ್ಗೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದರು. “ ಇನ್ನು ಸಿ.ಟಿ.ರವಿಗೆ ಲೂಟಿ ರವಿ ಎಂದು ಹೆಸರು ಕೊಟ್ಟಿದ್ದೇ ಅವರ ಪಾರ್ಟಿ. ಯಾರು ಯಾರು ಏನೇನು ಮಾತನಾಡಿದ್ದಾರೆ ಎಂಬ ದಾಖಲೆ ನನ್ನ…

Read More

ಸಿಎಂ ಗಿಂತ UD ಮಿನಿಸ್ಟರ್ ಪಾವರ್ ಫುಲ್..!

,ಸಿಎಂ ಸಿದ್ಧರಾಮಯ್ಯರಿಗಿಂತ ಯುಡಿ ಮಿನಿಸ್ಟರ್ ಪಾವರ್ ಫುಲ್. ವರ್ಗಾವಣೆಗೆ ಪತ್ರಕ್ಕೆ ಸಿಎಂ ಸಮ್ಮತಿ ಕೊಟ್ಟರೂ ಯುಡಿ ಮಿನಿಸ್ಟರ್ ತಡೆ.. ಬೆಳಗಾವಿ ಪಾಲಿಕೆ ಕಿರಿಯ ಅಧಿಕಾರಿಯೊಬ್ಬರ ವರ್ಗಾವಣೆ ವಿವಾದ. ಮುನಿಸಿಕೊಂಡ ಸತೀಶ್ ಜಾರಕಿಹೊಳಿ. ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆಗೆ ಸಿಎಂ ಸಿದ್ಧರಾಮಯ್ಯ ಅವರ ಪರಮಾಪ್ತ ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಮಂತ್ರಿ.. ಆದರೆ ಒಬ್ನ ಪಾಲಿಕೆ ಕಿರಿಯ ಅಧಿಕಾರಿ ವರ್ಗಾವಣೆಗೆ ಸತೀಶ ಜಾರಕಿಹೊಳಿ ಅಷ್ಟೇ ಅಲ್ಲ ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮ್ಮತಿ ಕೊಟ್ಟರೂ ನಗರಾಭಿವೃದ್ಧಿ ಸಚಿವರು ಅದನ್ನು ಕಣ್ಣೆತ್ತಿ…

Read More

ಇದು ಲೂಟಿ ಸರ್ಕಾರ

ಬೆಳಗಾವಿ : ರಾಜ್ಯ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಾಣಿ ಚೆನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಇದು ಲೂಟಿ ಸರ್ಕಾರ, 80 ಪರ್ಸೆಂಟ್ ಕಮಿಷನ್ ಸರ್ಕಾರ, ಎಟಿಎಂ ಸರ್ಕಾರ ಎಂದೆಲ್ಲ ಆರೋಪಿಸಿ ತಮ್ಮ ಸಿಟ್ಟನ್ನು ಹೊರ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಸದೆ ಮಂಗಲಾ ಅಂಗಡಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು…

Read More

ಮಹಿಳೆ ಮೇಲೆ ದೌರ್ಜನ್ಯ ಎಚ್ಚರಾಯ್ತು ಖಾಕಿ ಪಡೆ

ದಲಿತ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣಘಟಪ್ರಭಾ ಪೊಲೀಸರಿಗೆ ಎಸ್ಪಿ ಬುಲಾವ್ಬೆಳಗಾವಿ. ಅ ಘಟನೆ ಕಂಡು ನಾಗರಿಕ‌ ಸಮಾಜ ಅಯ್ಯೋ ಅಂದ್ರು ಕೂಡ ಬೆಳಗಾವಿ ಜಿಲ್ಲಾ ಪೊಲೀಸ್ ಮಾತ್ರ ಕರುಣೆ ಇಲ್ಲದ ಕಲ್ಲು ಬಂಡೆಯಂತಿತ್ತು. ಆದರೆ ಮಾಧ್ಯಮದಲ್ಲಿ ವಿಶೇಷವಾಗಿ ಇ ಬೆಳಗಾವಿ ಡಾಟ್ ಕಾಂ ಪ್ರಕಟಿಸಿದ ವರದಿ ಪೊಲೀಸ್ ಪಡೆಯನ್ನು ನಿದ್ರೆಯಿಂದ ಎಬ್ಬಿಸಿದಂತಾಗಿದೆ. ಘಟಪ್ರಭಾ ಠಾಣೆಯ ಪೊಲೀಸರ ಸಮ್ಮುಖದಲ್ಲಿಯೇ ದಲಿತ ಮಹಿಳೆಯನ್ನು ಎಳೆದಾಡಿದರೂ ಕೂಡ ರಕ್ಷಣೆ ಕೊಡದವರ ಮೇಲೆ ಎಸ್ಪಿಯವರು ಮೊದಲು ಕ್ರಮಬತೆಗೆದು ಕೊಳ್ಳಬೇಕಾದ ಅನುವಾರ್ಯತೆ ಇದೆ. ಕಳೆದ…

Read More

ಬೆಳಗಾವಿಯಲ್ಲಿ ಹೂವಿನ ರಸ್ತೆಗಳು..!

ಬೆಳಗಾವಿ. ನವರಾತ್ರಿ ಸಂದರ್ಭದಲ್ಲಿ ಬೆಳ್ಳಂ ಬೆಳಿಗ್ಗೆ ಬೆಳಗಾವಿಯಲ್ಲಿ ಹೂವಿನ ರಸ್ತೆಗಳು ಕಾಣಸಿಗುತ್ತವೆ. ಆ ರಸ್ತೆಯ ಮೇಲೆ ಜೈ ಕಾರದ ಘೋಷಣೆಗಳನ್ನು ಕೂಗುತ್ತ ಸಾವಿರಾರು ಜನ‌ ಹೋಗುತ್ತಿರುವ ದೃಶ್ಯ ನೋಡಲು ಎರಡು ಕಣ್ಣು ಸಾಲದು. ನವರಾತ್ರಿ ಹಬ್ಬದ ಪ್ರಯುಕ್ತ ಬೆಳಗಾವಿಯಲ್ಲಿ ನಡೆಯುವ ದೌಡ್ ನಲ್ಲಿ ಕಂಡು ಬಂದ ದೃಶ್ಯವಿದು. . ಭಾರತ ಮಾತಾ ಕಿ ಜೈ, ದುರ್ಗಾ ಮಾತಾಕಿ ಜೈ, ಭಜರಂಗ ಬಲೀಕಿ ಜೈ, ಶಿವಾಜಿ ಮಹಾರಾಜಕೀ ಜೈ ಎನ್ನುವ ಘೋಷಣೆಗಳನ್ನು ಕೂಗುತ್ತ ಶಿಸ್ತು ಬದ್ಧವಾಗಿ ದೌಡ್ ನಡೆಯುತ್ತದೆ…

Read More

16 ನಿಮಿಷದ 40 ಸೆಕೆಂಡಿನ ಆಡಿಯೋದಲ್ಲಿ ಏನಿದೆ ಗೊತ್ತಾ?

ಹಲ್ಲೆಗೊಳಗಾದ ದಲಿತ ಮಹಿಳೆ ಆ16 ನಿಮಿಷ 40 ಸೆಕೆಂಡಿನ ಅಡಿಯೋದಲ್ಲಿ ಹೇಳಿದ್ದೇನು? ಎಸ್ಪಿ ಅವರು ಮಹಿಳೆಗೆ ರಕ್ಷಣೆ ಕೊಡಿ ಅಂತ ನಿರ್ದೇಶನ ನೀಡಿದರೂ ಸಿಪಿಐ ರಕ್ಷಣೆ ಏಕೆ ಕೊಡಲಿಲ್ಲ ಏಕೆ? ಘಟಪ್ರಭಾ ಸಿಪಿಐ ನಾಲ್ಕು ಬಿಳಿ ಖಾಲಿ ಹಾಳೆಯ ಮೇಲೆ ಅವಸರದಲ್ಲಿ ಸಹಿ ಮಾಡಿಸಿಕೊಂಡಿದ್ದೇಕೆ? ಪೊಲೀಸ್ ಸಮ್ಮುಖದಲ್ಲಿಯೇ ಮಹಿಳೆಯನ್ನು ಎಳೆದಾಡಿದ್ರಾ? ದಲಿತ ಮಹಿಳೆ ಮೇಲೆ ಇಷ್ಟೆಲ್ಲ ಕ್ರೌರ್ಯ ನಡೆದರೂ ಮಹಿಳಾ ಆಯೋಗ ಯಾಕೆ ವಿಚಾರಣೆ ಮಾಡುತ್ತಿಲ್ಲ? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಏನ್ ಮಾಡ್ತಿದೆ.? ತುಟಿ…

Read More

ಅಭಯ ದಾಂಡಿಯಾಗೆ‌ 11 ವರ್ಷದ ಇತಿಹಾಸ.!

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಈ ವಾರಿ ದಾಙಡಿಯಾ ಉತ್ಸವದಲ್ಲಿ ಕುಣಿದು ಕುಪ್ಪಳಿಸಬೇಕಿದ್ದರೆ ಬೇರೆ ಎಲ್ಲೂ ಹೋಗಲೇಬೇಡಿ. ನವರಾತ್ರಿ ಮುಗಿಯುವವರೆಗೆ ಪ್ರತಿ ದಿನ ಸಂಜೆ 7 ರಿಂದ ದಾಂಡಿಯಾ ಕುಣಿತ ಆರಂಭವಾಗುತ್ತದೆ. ಅಂದ ಹಾಗೆ ಇಲ್ಲಿ ಯಾವುದೇ ಪ್ರವೇಶ ಶುಲ್ಕವಿಲ್ಲ. FREE FREE FREE.. ಉಚಿತ ಉಚಿತ ಉಚಿತ. ಅಭಯ ಪಾಟೀಲರು ಕಳೆದ‌ 11 ವರ್ಷದಿಂದ ರಾಣಿ ಚನ್ನಮ್ಮ ನಗರದ ಮೈದಾನದಲ್ಲಿ ದಾಂಡಿಯಾವನ್ನು ಆಯೋಜನೆ ಮಾಡುತ್ತ ಬಂದಿದ್ದಾರೆ. ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿರುತ್ತದೆ. ಹೀಗಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ…

Read More
error: Content is protected !!