Headlines

7.5 ಲಕ್ಷ ಫಲಾಭವಿಗಳಿಗೆ ಒಂದೇ ಮೊಬೈಲ್ ನಂಬರ

ಮೋದಿ ಸರ್ಕಾರವು ಪ್ರಾರಂಭಿಸಿದ ಅತ್ಯಂತ ಮಹತ್ವಾಕಾಂಕ್ಷೆಯ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಒಂದಾದ, “ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ” (AB-PMJAY)ಯಡಿ ಅವ್ಯವಹಾರ ನಡೆದಿದೆ ಎಂದು ಸಿಎಜಿ ವರದಿ ತಿಳಿಸಿದೆ. ಭಾರತದ ಕಂಟ್ರೋಲರ್ – ಆಡಿಟರ್ ಜನರಲ್ (ಸಿಎಜಿ) ಆಯುಷ್ಮಾನ್ ಭಾರತ್ – ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಬಹುದೊಡ್ಡ ಅವ್ಯವಹರಾದ ಬಗ್ಗೆ ಉಲ್ಲೇಖಿಸಿದ್ದು, 7.5 ಲಕ್ಷ ಫಲಾನುಭವಿಗಳು ಎಂದು ಹೇಳಲಾದ ವ್ಯಕ್ತಿಗಳು “ಒಂದೇ ಮೊಬೈಲ್” ಸಂಖ್ಯೆಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಇದಲ್ಲದೆ ದಾಖಲೆ…

Read More

ಕ್ಷಮೆ ಕೇಳಿದ್ರಾ ಹೆಸ್ಕಾಂ?

ಬೆಳಗಾವಿ. ಕಾರ್ಯಕ್ರಮlಕ್ಕೆ ಆಹ್ವಾನಿಸದೆ ಹಕ್ಕುಚ್ಯುತಿ ಉಲ್ಲಂಘನೆ ಮಾಡಿದ ಹೆಸ್ಕಾಂ ಅಧಿಕಾರಿಗಳು ಶಾಸಕ ಅಭಯ ಪಾಟೀಲರ ಕ್ಷಮೆ ಕೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಚ್ಚೆಯಲ್ಲಿ ನಡೆದ ವಿದ್ಯುತ್ ಉಪಕೇಂದ್ರದ ಉದ್ಘಾಟನೆಗೆ ಆಹ್ವಾನಿಸಿಲ್ಲ ಎಂದು ಹೇಳಿ ಶಾಸಕ ಅಭಯ ಪಾಟೀಲರುಹೆಸ್ಕಾಂ ಅಧಿಕಾರಿಗಳ ವಿರುದ್ಧ ಹಕ್ಕು ಚ್ಯುತಿ ಪತ್ರವನ್ನು ಸಭಾಧ್ಯಕ್ಷರಿಗೆ ಪತ್ರವನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಯಬಿದ್ದ ಅಧಿಕಾರಿಗಳು ಕ್ಷಮಾಪಣೆ ಪತ್ರವನ್ನು ನೀಡಿದ್ದಾರೆಂದು ಗೊತ್ತಾಗಿದೆ.

Read More

ಲಂಚಬಾಕ ಸಂತೋಷ‌ ಲೋಕಾ ಬಲೆಗೆ.

*ಬೆಳಗಾವಿ.ಲಂಚ ತಿಂದು ಅಕ್ರಮ ಆಸ್ತಿ ಸಂಪಾದಿಸಿದ್ದ ಆರೋಪ ಹೊತ್ತ ಸಂತೋಷ ಅನಿಶೆಟ್ಟರಗೆ ಲೋಕಾಯುಕ್ತರು ದಾಳಿ ಅಸಂತೋಷ ಮೂಡಿಸಿದ್ದಾರೆ.ಧಾರವಾಡದ ಅಪಾರ್ಟಮೆಂಟ ಕುಸಿದ ಪ್ತಕರಣದಲ್ಲಿ ಇವರನ್ನು ಬೆಳಗಾವಿಗೆ ವರ್ಗಾವಣೆ ಮಾಡಲಾಗಿತ್ತು. ಸಂತೋಷ ಆನಿಶೆಟ್ಟರ್ ಅವರ ಧಾರವಾಡ ಮನೆ ಮತ್ತು ಬೆಳಗಾವಿಯ ಪ್ಲಾಟ್ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ..ಬೆಳಗಾವಿಯ ಸುಭಾಷ ನಗರದ ಅಪಾರ್ಟಮೆಂಟ್ ಮೇಲೆ ದಾಳಿಯಲ್ಲಿ .ಕೆಲವು ದಾಖಲಾತಿಗಳನ್ನು ಜಪ್ತಿ ಮಾಡಿದ್ದಾರೆ.ಸಂತೋಷ ಆನಿಶೆಟ್ಟರ್ ನನ್ನು ಮಹಾನಗರ ಪಾಲಿಕೆ ಕಛೇರಿಗೆ ಕರೆತಂದ ಲೋಕಾಯುಕ್ತ ಅಧಿಕಾರಿಗಳು ಅಲ್ಲಿಯೂ ತಪಾಸಣೆ ಮಾಡಿದರು.ಮನೆಯಲ್ಲಿಟ್ಟಿದ್ದ ಪಾಲಿಕೆಗೆ ಸಂಬಂಧಿಸಿದ ದಾಖಲೆಗಳನ್ನು…

Read More

ವೀರಯೋಧರ ಬಗ್ಗೆ ಹೆಮ್ಮೆ ಪಡೋಣ- ಶಾಸಕ ಬಾಲಚಂದ್ರ ಜಾರಕಿಹೊಳಿ

ರಾಜಾಪೂರ ಗ್ರಾಮದಲ್ಲಿ ನಮ್ಮ ನೆಲ, ನಮ್ಮ ದೇಶ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿಮೂಡಲಗಿ: ನಮ್ಮ ರಾಷ್ಟ್ರದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಕ್ಕಾಗಿ ಹುತಾತ್ಮರಾದ ವೀರಯೋಧರನ್ನು ಗೌರವಿಸಲು ಇಡೀ ರಾಷ್ಟ್ರಾಧ್ಯಂತ ನಮ್ಮ ನೆಲ, ನಮ್ಮ ದೇಶ ಅಭಿಯಾನಕ್ಕೆ ಕರೆ ನೀಡಿದ್ದು, ಪ್ರತಿಯೊಬ್ಬ ಭಾರತೀಯನು ನಮ್ಮ ಯೋಧರ ಬಗ್ಗೆ ಅಭಿಮಾನ ಮತ್ತು ಗೌರವವನ್ನು ಹೊಂದಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ತಾಲೂಕಿನ ರಾಜಾಪೂರ ಗ್ರಾಮದ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಜರುಗಿದ ನಮ್ಮ ನೆಲ, ನಮ್ಮ…

Read More

ಸಂಪಾದಕೀಯ

ನಿಮ್ಮೊಂದಿಗೆ ನಾವು…..   ಆತ್ಮೀಯರೆ ನಮಸ್ಕಾರ ಮಾದ್ಯಮ ಕ್ಷೇತ್ರ ಈಗ ಹಿಂದಿನಂತಿಲ್ಲ ಎಂಬ ಅಪವಾದ ಇತ್ತೀಚೆಗೆ ಹೆಚ್ಚಾಗಿ ಕೇಳುತ್ತಲೇ ಬಂದಿದ್ದೇವೆ. ಅದ್ಯಾಕೆ ಹಾಗಿದೆ ಎಂಬುದಕ್ಕೆ ಕಾರಣವೂ ಸಾಕಷ್ಟಿದೆ ಬಿಡಿ. ಅದ್ಯಾವುದೂ ಗುಟ್ಟಾಗಿ ಉಳಿದಿಲ್ಲ. ಆದರೆ ಮಾದ್ಯಮ ಉಳ್ಳವರ ಸೊತ್ತು ಎಂಬ ಅಪವಾದವನ್ನು ತೊಡೆದು ಹಾಕಿ ಇದು ಜನಸಾಮಾನ್ಯರ ಹಕ್ಕು ಎಂದು ಜಗಜ್ಜಾಹೀರು ಮಾಡುವುದಕ್ಕಾಗಿಯೆ ಇ ಬೆಳಗಾವಿ ಸುದ್ದಿ ಜಾಲ ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಭ್ರಷ್ಟರ ಬೇಟೆ, ಜನಸಾಮಾನ್ಯರ ಸ್ಯೆಗೆ ತುರ್ತು ಪರಿಹಾರ ಒದಗಿಸಿಕೊಡುವುದರ ಜತೆ ಜತೆಗೆ ತಪ್ಪು…

Read More

ನಿಮಗೆ ಅನುಭವ ಕಡಿಮೆ

ಬೆಳಗಾವಿ. ಮಾತಿಗೆ ನಿಂತರೆ ಶಾಸಕ ಅಭಯ ಪಾಟೀಲ ಹಿಂದೆ ಮುಂದೆ ನೋಡಲ್ಲ ಎನ್ನುವುದು ಇಂದಿಲ್ಲಿ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರೂವ್ ಆಗಿದೆ. ಮರಾಠಿಯಲ್ಲಿ ದಾಖಲೆ ಕೇಳಿ ರಾಜಕಾರಣ ಶುರುಹಚ್ಚಿಕೊಂಡ‌ ಎಂಇಎಸ್ ಅಷ್ಟೇ ಅಲ್ಲ‌ವಿರೋಧ ಪಕ್ಷದವರಿಗೆ ಮಾತಿನ‌ ಮೂಲಕವೇ ಚಾಟಿ ಏಟು ಕೊಡುವ ಕೆಲಸವನ್ಬು ಶಾಸಕ ಅಭಯ ಪಾಟೀಲರು ಮಾಡಿದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮೇಯರ್ ಅನುಮತಿಯೊಂದಿಗೆ ಅಭಯ ಪಾಟೀಲ ಮಾತನಾಡಲು ಎದ್ದು ನಿಂತಾಗ ಉತ್ತರ ಕ್ಷೇತ್ರದ ಶಾಸಕ ಆಸೀಪ್ ಶೇಠ ಮಾತನಾಡತೊಡಗಿದರು. ಈ ಸಂದರ್ಭದಲ್ಲಿಆಸೀಫ್ ಶೇಠ…

Read More

ಕೆನಡಾದಲ್ಲಿ ಬೆಳಗಾವಿ ಸಿಪಿಐ ಸಾಧನೆ

1:54ಗಂಟೆಯಲ್ಲಿ 21ಕೀಮಿ ಮ್ಯಾರಾಥಾನ್ ಗಿಟ್ಟಿಸಿದ ಇನ್ಸಪೆಕ್ಟರ್ ನಿರಂಜನ ಪಾಟೀಲ* ಬೆಳಗಾವಿ/ವಿನಿಪೆಗ್:ಆಧುನಿಕ ಜಗತ್ತಿನ ಪೊಲೀಸ್ ವ್ಯವಸ್ಥೆಯನ್ನು ಕ್ರೀಡಾಕೂಟದ ಮೂಲಕ ಒಟ್ಟುಗೂಡಿಸುವ ಸದುದ್ದೇಶದಿಂದ  (ವರ್ಲ್ಡ್ ಪೊಲೀಸ್ ಆ್ಯಂಡ್ ಫೈರ್ ಗೇಮ್ಸ್) ಕೆನಡಾದ ವಿನಿಪೆಗ್ ನಗರದಲ್ಲಿ ನಡೆದಿದೆ. 45ರ ವಯೋಮಿತಿಯ ಮ್ಯಾರಾಥಾನ್ ಓಟದಲ್ಲಿ 21ಕಿಮೀ ಓಡುವ ಮೂಲಕ ಭಾರತದ ಪರವಾಗಿ ಬೆಳಗಾವಿಯ ಲೋಕಾಯುಕ್ತ ಸಿಪಿಐ ನಿರಂಜನ ಪಾಟೀಲ ಯಶಸ್ವಿಯಾಗಿದ್ದಾರೆ. ಪ್ರತಿ ಎರಡು ವರ್ಷಕೊಮ್ಮೆ ಜರುಗುವ ಈ ಕ್ರೀಡಾಕೂಟ ಈ ಭಾರಿ  ವಿನಿಪೆಗ್ ನಲ್ಲಿ ಜುಲೈ 28 ರಿಂದ ಆಗಸ್ಟ್ 6ರ ವರೆಗೆ…

Read More

ಖಾಕಿ ದೌರ್ಜನ್ಯ ACTION ಗೆ ನಾಳೆ ಬಾ..!

ಕೇಸ್ ವರ್ಕರ್ ಇಲ್ಲ. ರಜೆ‌ ರಜೆ..!’ ಏನೇ ಕ್ರಮದ ಬಗ್ಗೆ ಸೋಮವಾರದವರೆಗೆ ವೇಟ್. ಸಚಿವೆ ಹೆಬ್ಬಾಳಕರ ಅವರಿಂದ ಗೃಹ ಮಂತ್ರಿಗಳಿಗೆ ಪತ್ರ. ಸಚಿವರು ಗಂಭೀರ, ಅಧಿಕಾರಿಗಳು‌ ನಿರಾಳ. ಎತ್ತ ಸಾಗಿದೆ ಸರ್ಕಾರದ ಆಡಳಿತ ಯಂತ್ರ.   ಸರ್ಕಾರ ನಡಿಸೋರು ಯಾರು?

Read More

ರಜಾ ದಿನದಂದೂ ಆಯುಕ್ತರ ಸಿಟಿ‌ ರೌಂಡ್..!

ರಾಮತೀರ್ಥ ನಗರಕ್ಕೆ ಆಯುಕ್ತರ ಭೆಟ್ಟಿ ಸನಸ್ಯೆಗಳಿಗೆ ಸ್ಪಂದನೆ, ನಗರಸೇವಕ‌ ಕೊಂಗಾಲಿ ಉಪಸ್ಥಿತಿ. ಬೆಳಗಾವಿ. ಸರ್ಕಾರಿ ಅಧಿಕಾರಿಗಳಿಗೆ ರಜೆ  ಬಂದರೆ ಸಾಕು ಇನ್ನುಳಿದ ಸರ್ಕಾರಿ ಕೆಲಸಕ್ಕೂ ರಜೆ ಘೋಷಣೆ ಮಾಡಿ ಬಿಡುತ್ತಾರೆ. ಆದರೆ ಬೆಳಗಾವಿ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಈ‌ ಸರ್ಕಾರಿ ರಜೆ‌ ವಿಷಯದಲ್ಲಿ ತದ್ವಿರುದ್ಧ.! ರಜೆ ದಿನದಂದೂ ಕೂಡ ಬೆಳಗಾವಿ‌ ಮಹಾನಗರ ಪಾಲಿಕೆಯ ವಿವಿಧ ವಾರ್ಡಗಳಿಗೆ ಹಠಾತ್ ಭೆಟ್ಟಿ‌ನೀಡಿ ಅಲ್ಲಿನ‌ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಇಂದು ರಾಮತೀರ್ಥ ನಗರ (ವಾರ್ಡ್ ನಂ 46)…

Read More
error: Content is protected !!