ಲಿಂಗಾಯತರೆಂದ್ರೆ ಕಾಂಗ್ರೆಸ್ಗೆ ಅಲರ್ಜಿ..!

ಧಾರವಾಡ.

ಲಿಂಗಾಯತರು ಅಂದ್ರೆ ಕಾಂಗ್ರೆಸ್ ಪಕ್ಷ ಕ್ಕೆ ಅಲರ್ಜಿ. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರೇ ಈ ಮಾತನ್ನು ಹೇಳಿದ್ದರು.. ಬೇಕಿದ್ದರೆ ನಾನು ವೀರರಾಣಿ ಚನ್ನಮ್ಮನ ಪ್ರತಿಮೆ ಮುಂದೆ ಆಣೆ ಮಾಡ್ತೆನಿ..!

ಪಂಚಮಸಾಲಿ ಹೋರಾಟದಲ್ಲಿ ಸಕ್ರೀಯಚಾಗಿ ಭಾಗವಹಿಸಿದ್ದ ವಿಜಯಪುರ ಶಾಸಕ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಧಾರವಾಡದಲ್ಲಿ ಹೇಳಿದ ಮಾತಿದು..!

ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಪ್ರಚಾರ ಸಭೆಯಲ್ಲಿ ಯತ್ನಾಳರು ಬಹಿರಂಗವಾಗಿ ಈ ಮಾತನ್ನು ಹೇಳಿದರು.

ಬೆಳಗಾವಿಯಲ್ಲಿ ಅದಿವೇಶನ ಸಂದರ್ಭದಲ್ಲಿ ನಾನು‌ ಮೀಸಲಾತಿ ಸಂಬಂಧ‌ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೆಟ್ಟಿ‌ಮಾಡಲು ಬನ್ನಿ ಎಂದು ಸಚಿವೆ ಹೆಬ್ಬಾಳಕರ ಅವರಿಗೆ ಕರೆದಿದ್ದೆ. ಆಗ ಹೆಬ್ಬಾಳಕರ ಅವರು ಈ ಮಾತನ್ನು ಆಡಿದ್ದರು ಎಂದು ಯತ್ನಾಳ ಹೇಳಿದರು.‌ಯತ್ನಾಳ ಆಡಿದ ಮಾತು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಯತ್ನಾಳರ ಮಾತಿನ ವಿಡಿಯೊ.. ಟಿವಿಯಲ್ಲಿ ಪ್ರಸಾರವಾಗಿದ್ದು…ಕೇಳಿ

Leave a Reply

Your email address will not be published. Required fields are marked *

error: Content is protected !!