Headlines

ಕಾಂಗ್ರೆಸ್ ಪರ ಕ್ರೈಸ್ತರು- ಸತೀಶ್

ಬೆಳಗಾವಿ:

  • ವಿಧಾನಸಭೆ ಚುನಾವಣೆಯಲ್ಲಿ ಕ್ರೈಸ್ತ, ಮುಸ್ಲಿಂ, ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲಾ ಸಮಾದವರು ಅಪಾರ ಸಂಖ್ಯೆಯಲ್ಲಿ ಬೆಂಬಲ ನೀಡಿದ್ದರಿಂದ 136 ಸೀಟು ಗೆದ್ದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚಿಸಲು ಸಾಧ್ಯವಾಗಿದೆ ಅಂದರೆ ತಪ್ಪಾಗಲ್ಲ. ವಿಶೇಷವಾಗಿ ಕ್ರೈಸ್ತ ಸಮುದಾಯ ಬಾಂಧವರು ಕಾಂಗ್ರೆಸ್‌ ಪಕ್ಷದ ಮೇಲೆ ಅಪಾರ ಪ್ರೀತಿ, ಗೌರವ ಇಟ್ಟಿದ್ದಾರೆ ಎಂದು ಲೋಕೋಪಯೋಗಿ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.


ನಗರದ ಡಾ. ಜೆ.ಟಿ. ಸಿಮಂಡ್ಸ ಹಾಲ್ ನಲ್ಲಿ ಬೆಳಗಾವಿ ಜಿಲ್ಲಾ ಕ್ರೈಸ್ತ ಸಮಾಜ ಹಮ್ಮಿಕೊಂಡಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ರೈಸ್ತ ಸಮಾಜದ ಮುಖಂಡರು ಹಲವು ಬೇಡಿಕೆಗಳನ್ನು ಈಡೇರಿಸಲು ಮನವಿ ನೀಡಿದ್ದು, ಸರ್ಕಾರದಿಂದ ದೊರಕುವ ಸೌರ್ಕರ್ಯಗಳನ್ನು ಶಾಸಕ ಆಶೀಪ್‌ ಸೇಠ್‌ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು ಕ್ರೈಸ್ತ ಸಮುದಾಯಕ್ಕೆ ಅನುಕೂಲ ಕಲ್ಪಿಸುವ ಕಾರ್ಯ ಮಾಡುತ್ತೇವೆಂದು ಭರವಸೆ ನೀಡಿದರು.
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಷ್ಟು ಕ್ರೈಸ್ತ ಸಮಾಜವನ್ನು ಗೌರವದಿಂದ ಕಾಣುವ ಸರ್ಕಾರ ಇನ್ನೊಂದಿಲ್ಲ. ಆದ್ದರಿಂದ ನಮ್ಮ ಚಿಂತನೆಗಳು ಬದಲಾಗಬೇಕು. ಎಲ್ಲವನ್ನೂ ಸರ್ಕಾರ ಮಾಡಲು ಸಾಧ್ಯವಿಲ್ಲ. ಒಳ್ಲೆಯ ಶಿಕ್ಷಣ ಪಡೆದು, ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಬದುಕನ್ನು ನಾವೇ ಕಟ್ಟಿಕೊಳ್ಳಬೇಕೆಂದು ಸಲಹೆ ನೀಡಿದರು.

ಕ್ರೈಸ್ತ ಸಮಾಜಕ್ಕೆ ಒಂದು ಎಂಎಲ್‌ಸಿ ಸ್ಥಾನ ನೀಡಬೇಕೆಂಬ ಚರ್ಚೆ ನಡೆದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕ್ರೈಸ್ತ ಸಮುದಾಯಕ್ಕೆ ರಾಜಕೀಯ ಸ್ಥಾನ ಮಾನ ನೀಡಲಾಗುವುದು ಎಂದ ಅವರು, ಈ ಸಮಾವೇಶ ಸಡೆಯುವ ಸ್ಥಳವನ್ನು ಕಿತ್ತು ಕೊಳ್ಳಲು ಕೆಲವರು ಸಂಚು ರೂಪಿಸಿದ್ದಾರೆ. ನಿಮ್ಮ ಜತೆ ನಾವು ಇದ್ದೇವೆ. ನಿಮ್ಮ ಸಮಾಜ ಒಗ್ಗಟ್ಟು ಇದ್ದರೆ ಮಾತ್ರ ಈ ಜಾಗ ಪಡೆಯಲು ಸಾಧ್ಯವಿದೆ. ಸದ್ಯ ಕಾನೂನು ಹೋರಾಟ ನಡೆಯುತ್ತಿದ್ದು, ನಿಮ್ಮ ಕಷ್ಟಕ್ಕೆ ಸದಾ ಸ್ಪದಿಸುವ ಕಾರ್ಯವನ್ನು ನಾನು ಮಾಡುತ್ತೇನೆಂದು ತಿಳಿಸಿದರು.
ಶಾಸಕ ಆಶೀಪ್ ( ರಾಜು) ಸೇಠ್ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾಗಲು ಕ್ರೈಸ್ತ ಸಮುದಾಯದರು ಬೆಂಬಲಿಸಿದ್ದಾರೆ. ಸಮುದಾಯದ ಮುಖಂಡರಿಗೆ, ಸಮಾಜದ ಫಾಸ್ಟರ್ ಗಳಿಗೆ ಧನ್ಯವಾದಗಳು. ಕ್ರೈಸ್ತ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಮುಂದೆವರೆದಿದೆ. ತಮ್ಮ ಜತೆ ಎಲ್ಲ ಸಮಾಜವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ನಿಮಗೋಸ್ಕರ ಸಚಿವ ಸತೀಶ್ ಜಾರಕಿಹೊಳಿ ಅವರು ಸಾಕಷ್ಟು ಶ್ರಮಿಸಿದ್ದಾರೆ. ಮುಂದೊಂದು ದಿನ ಸತೀಶ್ ಜಾರಕಿಹೊಳಿಯವರು ರಾಜ್ಯದ ಮುಖ್ಯಮಂತ್ರಿಯಾಗುದು ಖಚಿತವೆಂದರು.
ಮಾಜಿ ಉಪ ಸಭಾಪತಿ ದೇವಿಡ್ ಸೊಮಿಯೋನ್‌ ಮಾತನಾಡಿ, ಕ್ರೈಸ್ತ ಸಮಾಜದವರು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಬಹಳ ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕೆಂದು ಮನವಿ ಮಾಡಿದರು.

ಕ್ರೈಸ್ತರ ಋಣ ನಮ್ಮ‌ಮೇಲಿದೆ..!

ಸಚಿವೆ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ ಮಾತನಾಡಿ, ಈ ಕಾರ್ಯಕ್ರಮಕ್ಕೆ ನಮ್ಮ ತಾಯಿಯವರು ಬರಬೇಕಿತ್ತು , ಅವರು ಗೃಹ ಲಕ್ಷ್ಮೀ ಯೋಜನೆ ಕಾರ್ಯಕ್ರಮದಲ್ಲಿ ಇರುವುದರಿಂದ ಬರಲು ಆಗಿಲ್ಲ , ಈ ಕಾರ್ಯಕ್ರಮಕ್ಕೆ ಬಂದಿರುವುದಕ್ಕೆ ನನಗೆ ಸಂತಸವಾಗಿದೆ , ಕ್ರೈಸ್ತರ ಋಣ ನಮ್ಮ ಮೇಲಿದೆ , ಕ್ರೈಸ್ತ ಸಮುದಾಯವನ್ನು ನಮ್ಮ ತಾಯಿಯವರು ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ ನಮ್ಮ ಸರಕಾರ ಎಲ್ಲಾ ಜಾತಿಯ ಭಾಂದವರನ್ನು ಜೊತೆಯಾಗಿಸಿಕೊಂಡು ಮುನ್ನಡೆಯುತ್ತದೆ ಎಂದರು.

ಕಾಂಗ್ರೆಸ್ ಗೆ ಕ್ರೈಸ್ತರ ಬೆಂಬಲ


ರಾಹುಲ್ ಕಾಂಗ್ರೆಸ್ ಜಾರಕಿಹೊಳಿ ಮಾತನಾಡಿ ಕಾಂಗ್ರೆಸ್ ಸರ್ಕಾರಕ್ಕೆ ಕ್ರೈಸ್ತ ಬೆಂಬಲವಿದೆ ಸಮುದಾಯದ ಸಹಕಾರ ನಮಗೆವಿದೆ , ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಿ . ನಮ್ಮ ತಂದೆಯವರು ಬುದ್ಧ ಬಸವ ಅಂಬೇಡ್ಕರ ಅವರ ಆದರ್ಶ ಇಟ್ಟುಕೊಂಡು ಸಮಾಜದಲ್ಲಿ ಸಮಾನತೆ ಜಾರಿಯಾಗಲು ಮಾನವ ಬಂದುತ್ವ ವೇದಿಕೆ ಸ್ಥಾಪಿಸಿ ನಿರಂತರವಾಗಿ ಕಾರ್ಯ ಮಾಡುತ್ತಿದ್ದಾರೆ ಎಂದರು

0

Leave a Reply

Your email address will not be published. Required fields are marked *

error: Content is protected !!