ಫೆ.4ರಂದು ಬೃಹತ್ ಜನ ಜಾಗೃತಿ ಸಮಾವೇಶ:

ಅಂಬಿಗರ ಚೌಡಯ್ಯನವರ 904ನೇ ಜಯಂತಿ ಆಚರಣೆ.

ಫೆ.4ರಂದು ಬೃಹತ್ ಜನಜಾಗೃತಿ ಸಮಾವೇಶ: ಸಾಯಬಣ್ಣಾ ತಳವಾರ

ಬೆಳಗಾವಿ: ನಿಜಶರಣ ಅಂಬಿಗರ ಚೌಡಯ್ಯ ನವರ 904ನೇ ಜಯಂತಿ ನಿಮಿತ್ತ ಫೆ. 4ರಂದು ನಗರದ ಸರ್ದಾ‌ರ್ ಮೈದಾನದಲ್ಲಿ ಬೃಹತ್ ಜನಜಾಗೃತಿ ಸ್ವಾಭಿಮಾನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕೋಳಿ-ಬೆಸ್ತ ಸಮಾಜದ ಸಂಘದ ಜಿಲ್ಲಾ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಸಾಯಿಬಣ್ಣ ತಳವಾರ ತಿಳಿಸಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ. 4ರಂದು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುಲ ಬಾಂಧವರ ಸಹಯೋಗದೊಂದಿಗೆ ನಿಜಶರಣ ಅಂಬಿಗರ ಚೌಡಯ್ಯ ಅವರ 904 ನೇ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಬೃಹತ್ ಜನಜಾಗೃತಿ ಸ್ವಾಭಿಮಾನ ಸಮಾವೇಶ ನಡೆಯಲಿದೆ ಎಂದರು.


ರಾಜ್ಯದ ಬಹುತೇಕ ಜಿಲ್ಲೆಯಲ್ಲಿ ಜ.21ರಂದೇ ಜಯಂತಿಯನ್ನು ಆಚರಿಸಿದ್ದಾರೆ. ಆದರೆ ಛತ್ರಪತಿ ಶಿವಾಜಿ ಮಹಾರಾಜರ ಸೈನ್ಯದ ವೀರ ಧೀರ ಕೋಳಿ ಸಮಾಜದ ಹೆಮ್ಮಯ ಪುತ್ರ ತಾನಾಜಿ ಮಾಲಸೂರೆ ಅವರು ಮೊಘಲರ ಸೈನ್ಯದೊಂದಿಗೆ ಹೋರಾಡಿ ಮಡಿದ ದಿನವಾಗಿದ್ದರಿಂದ ಅವರ ಪುಣ್ಯ ದಿನವಾದ ಫೆ.4ಕ್ಕೆಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕೋಳಿ – ಬೆಸ್ತ ಸಮಾಜ ಬಾಂಧವರಿದ್ದರೂ ಅಸಂಘಟಿತವಾಗಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಸಂಘ ಬಲಗೊಳಿಸಲು ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು, ಕೋಳಿ, ಟೋಕರಿ ಕೋಲಿ, ಕಬ್ಬಲಿಗ, ಗಂಗಾತಮ, ಬೆಸ್ತ ಸಮಾಜವು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಸಮಾಜದ ಕೆಲವು ಪರ್ಯಾಯ ಪದಗಳು ಪರಿಶಿಷ್ಟ ಪಂಗಡದಲ್ಲಿದ್ದು, ಇವುಗಳಿಂದ ಬಿಟ್ಟು ಹೋದ ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ, ಗಂಗಾಮತಗಳನ್ನೂ ಕರ್ನಾಟಕದಲ್ಲಿರುವ ಕೋಲಿ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ಈ ಸಮಾವೇಶದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗಿ…
ಗಂಗಾಮತಸ್ಥರ ಸಮಾಜ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರುಂದವಾಡೆ ಮಾತನಾಡಿ, ಫೆ.4ರಂದು ಬೆಳಗ್ಗೆ 8 ಗಂಟೆಗೆ ಎರಡು ಸಾವಿರ ಶರಣೆಯರಿಂದ ಕುಂಭ ಮೇಳ, ಕಿಲ್ಲಾ ಕೆರೆಯಿಂದ ಸರ್ದಾರ್ ಮೈದಾನದ ವರೆಗೆ ಬೃಹತ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಡೊಳ್ಳು, ಜಾಂಜಪದಕ, ಕಂಸಾಳೆ, ಆನೆ, ಒಂಟೆ ಕುದುರೆ ವಾದ್ಯ ಮೇಳ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಈ ಸಮಾವೇಶದಲ್ಲಿ ಉತ್ತರ ಕರ್ನಾಟಕ 35 ಸಾವಿರ ಜನ ಸೇರುವ ನಿರೀಕ್ಷೆಯಿದೆ. ಈ ಸಮಾವೇಶಕ್ಕೆ ಬರುವ ಜನರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಸಿಪಿಎಡ್ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದ ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಪಾಟೀಲ ಕೋಳಿ-ಬೆಸ್ತ ಸಮಾಜ ಮುಖಂಡರಾದ ದಿಲೀಪ್ ಕುರಂದವಾಡೆ, ಅಮರೇಶ್ ಕಾಮನಕೇರಿ, ಬೆಳಗಾವಿ ಮಾಜಿ ಉಪ ಮಹಾಪೌರರು ಮದುಶ್ರೀ ಪೂಜಾರಿ, ಅಪ್ಪಾರಾವ, ಗಿರಿರಾಜ ಸಿರಗೆ ಸೇರಿದಂತೆ ಹಲವು ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!