ASP ಬರಮನಿಗೆ ತುರ್ತು ಬುಲಾವ್..!

ಬೆಳಗಾವಿ. ಪೊಲೀಸ್ ಇಲಾಖೆಯಲ್ಲಿ ಜಬರದಸ್ತ್ ಡೇರಿಂಗ್ ಅಧಿಕಾರಿ ಎಂದೇ ಹೆಸರಾದ ASP ನಾರಾಯಣ ಬರಮನಿ ಅವರಿಗೆ ತುರ್ತಾಗಿ ಬೆಳಗಾವಿಗೆ ತೆರಳುವಂತೆ ಸೂಚನೆಬನೀಡಲಾಗಿದೆ. ಬೆಳಗಾವಿ ಶಹಾಪುರದ ಅಳವಣಗಲ್ಲಿಯಲ್ಲಿ‌ಇಂದು ನಡೆದ ಮಕ್ಕಳ ಕ್ರಿಕೆಟ್ ಗಲಾಟೆ ಬೇರೆ ಬಣ್ಣ ಬಳಿದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ ಈ ಸೂಚನೆ ನೀಡಿದೆ ಎಂದು ಗೊತ್ತಾಗಿದೆ. ಈ ಹಿಂದೆ ಯಳ್ಳೂರಿನಲ್ಲಿ ಎಂಇಎಸ್ ಪುಂಡರು ಗಲಾಟೆ ನಡೆಸಿದ ಸಂದರ್ಭದಲ್ಲಿ ಹಿರಿಯ ಐಪಿಎಸ್ ಹೇಮಂತ ನಿಂಬಾಳ್ಕರ ಅವರನ್ನು ಬೆಳಗಾವಿಗೆ ಕಳಿಸಿತ್ತು.

Read More

ವಿಕೋಪಕ್ಕೆ ತಿರುಗಿದ ಮಕ್ಕಳ ಕ್ರಿಕೆಟ್ ಗಲಾಟೆ

ಬೆಳಗಾವಿ. ಮಕ್ಕಳ ಕ್ರಿಕೆಟ್ ಗಲಾಟೆ ವಿಕೋಪಕ್ಕೆ ತಿರುಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಗರದ ಶಹಾಪುರದಲ್ಲಿ ನಡೆದಿದೆ. ಶಹಾಪುರ ಪ್ರದೇಶದ ಅಳವಣಗಲ್ಲಿಯಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಬಡೆದಿದೆ. ಇದು ವಿಕೋಪಕ್ಕೆ ಹೋಗಿ ಬೇರೆ ಬಣ್ಣ ಬಡೆದುಕೊಂಡಿದೆ. ನಂತರ ಕೆಲವರು ತೆರಳಿ ಒಬ್ಬ ಹುಡುಗನ ಮನೆ ಮೇಲೆ ಇಟ್ಟಿಗೆ ತೂರಾಟ ಮಾಡಿದರೆಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಪರ, ವಿರೋಧದ ಘೋಷಣೆಗಳು ಮುಗಿಲು ಮುಟ್ಟಿದವು ಎನ್ನಲಾಗಿದೆ. ಈ ಘಟನೆಯಲ್ಲಿ ಒಂದಿಬ್ಗರಿಗೆ ಪೆಟ್ಟಾಯಿತು ಎಂದು ಗೊತ್ತಾಗಿದೆ. ಈ ಘಟನೆ ಸುದ್ದಿ…

Read More
error: Content is protected !!