ನಾಗಮಂಗಲ ಗಲಭೆ ಸೃಷ್ಟಿಸಿದವರು ‘ಅವರು’..ಅರೆಸ್ಟ್ ಆದವರು ‘ಇವರು’
ಬೆಳಗಾವಿ: ರಾಜ್ಯದ ಕಾಂಗ್ರೆಸ್ ಸಕರ್ಾರದಲ್ಲಿ ಹಣೇಶ ಭಕ್ತರೇ ಎಒನ್ ಆರೋಪಿಗಳಾಗುತ್ತಿದ್ದಾರೆಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು,
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ನಾಗಮಂಗಲದಲ್ಲಿ ಗಲಭೆ ಸೃಷ್ಟಿಸಿದವರು ಕೆಲ ಅಲ್ಪಸಂಖ್ಯಾತರು. ಆದರೆ ಕಾಂಗ್ರೆಸ್ಸ ಸರ್ಕಾರ ಗಣೇಶ ಮಂಡಳದವರನ್ನೇ ಪ್ರಥಮ ಆರೋಪಿಗಳನ್ನಾಗಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,

ಗಣೇಶ ವಿಸರ್ಜಣೆ ಸಂದರ್ಭದಲ್ಲಿ ನಡೆದಿರುವ ಗಲಭೆ ಪ್ರಕರಣ ಸಣ್ಣಪುಟ್ಟ ವಿಚಾರ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ಹಾಸ್ಯಾಸ್ಪದ. ಅಲ್ಪಸಂಖ್ಯಾತರ ತುಷ್ಟೀಕರಣದ ನೀತಿಯಿಂದಲೇ ಇಂತಹ ಗಲಭೆಗಳಾಗುತ್ತಿವೆ ಎಂದರು,

ರಾಜ್ಯದಲ್ಲಿ ಕಾಂಗ್ರೆಸ್ ಸಕರ್ಾರ ಬಂದಾಗಲೆಲ್ಲಾ ಕೋಮುಗಲಭೆಗಳು ನಡೆಯುತ್ತಿವೆ. ಗಲಭೆಗೆ ಯಾರು ಪ್ರಚೋದನೆ ಕೊಡುತ್ತಾರೋ, ಯಾರು ಕಲ್ಲು ತೂರಾಟ ನಡೆಸಿ ಹಾನಿ ಮಾಡಿದ್ದಾರೋ ಅಂತಹವರನ್ನೇ ರಕ್ಷಣೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸಕರ್ಾರ ಮಾಡುತ್ತಿದೆ ಎಂದು ದೂರಿದರು,