ಬೆಂಗಳೂರು
ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯರಿಬ್ಬರ ಸದಸ್ಯತ್ವ ಅನರ್ಹ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಯುಡಿ ಸೆಕ್ರೆಟರಿ ಕೋರ್ಟ ವಿಚಾರಣೆ ಪೂರ್ಣಗೊಳಿಸಿದೆ.

ಆದರೆ ತೀರ್ಪನ್ನು ಸಂಜೆಯವರೆಗೆ ಕಾಯ್ದಿರಿಸಿದೆ. ಇಬ್ಬರು ನಗರಸೇವಕರ ಸದಸ್ಯತ್ವ ಅನರ್ಹ ಪ್ರಕರಣವನ್ಬು ಇಂದು ಮಧ್ಯಾಹ್ನ 3 ಕ್ಕೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಯಿತು

ಎರಡೂ ಕಡೆಯ ಪ್ರಭಲವಾದವನ್ನು ಆಲಿಸಿ ನಂತರ ತೀರ್ಪನ್ನು ಸಂಜೆವರೆಗೆ ಕಾಯ್ದಿರಿಸಿದರು. ಹೀಗಾಗಿ ಇದು ತೀವ್ರ ಕುತೂಹಲ ಕೆರಳಿಸಿದೆ
ಬೆಳಗಾವಿ ಬಿಜೆಪಿಯ ಜಯಂತ ಜಾಧವ ಮತ್ತು ಮಂಗೇಶ ಪವಾರ ಅನರ್ಹಗೊಂಡ ನಗರ ಸೇವಕರು.
ನ್ಯಾಯ ನಮ್ಮ ಪರವಾಗಿಯೇ ಬರಲಿದೆ ಎಂದು ಶಾಸಕ ಅಭಯ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
0