ಹಾರನಹಳ್ಳಿ ಬಣ ದಿಗ್ವಿಜಯ..!
ಬೆಳಗಾವಿ ಸೇರಿ 8 ಜಿಲ್ಲೆಗಳಲ್ಲಿ ಅವಿರೋಧ.
ಘೋಷಣೆಯೊಂದೇ ಬಾಕಿ.
ಹಾರನಹಳ್ಳಿ ಬೆಂಬಲಿತ ಡಾ. ಭಾನುಪ್ರಕಾಶ ಶರ್ಮಾರಿಗೆ ಹೆಚ್ಚುತ್ತಿರುವ ಬೆಂಬಲ.

ಬೆಂಗಳೂರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಅಶೋಕ ಹಾರನಹಳ್ಳಿ ಬಣ ಭರ್ಜರಿ ಮೇಲುಗೈ ಸಾಧಿಸಿದೆ.
ಎಂಟು ಜಿಲ್ಲೆಯಲ್ಲಿ ಹಾರನಹಳ್ಳಿ ಬಣದ ಪ್ರತಿನಿಧಿಗಳು ಅವಿರೋಧ ಆಯ್ಕೆಯಾಗಿದ್ದಾರೆ.ಆದರೆ ಘೊಷಣೆಯೊಂದೇ ಬಾಕಿ ಉಳಿದಿದೆ.

ಬೆಳಗಾವಿಯ ಅಕ್ಷಯ ಕುಲಕರ್ಣಿ
ಕೊಡಗಿನ ದುರ್ಗಾಪ್ರಸಾದ್
ಮಂಗಳೂರಿನ ಮಹೇಶ್ ಕಜೆ
ಬಳ್ಳಾರಿಯ ಡಾ.ಶ್ರೀನಾಥ್
ವಿಜಯನಗರದ ಕೆ.ದಿವಾಕರ್
ಚಿಕ್ಕಮಗಳೂರಿನ ಜೆ.ಎಸ್.ಮಹಾಬಲ
ಗದಗನ ಶ್ರೀನಿವಾಸ ಹುಯಿಲಗೋಳ
ಉತ್ತರ ಕನ್ನಡದ ಶ್ರೀಪಾದ ನಾರಾಯಣ ರಾಯಸದ್. ಇವರು ಆಯ್ಕೆಯಾದವರು.

ಗಮನಿಸಬೇಕಾದ ಸಂಗತಿ ಎಂದರೆ, ಇನ್ನೂ ಕೆಲ ಜಿಲ್ಲೆಗಳಲ್ಲಿ ಕೆಲವರು ಕಣದಿಂದ ಹಿಂದೆ ಸರಿದು ಹಾರನಹಳ್ಳಿ ಬೆಂಬಲಿತರನ್ನು ಬೆಂಬಲಿಸುವ ಸಾಧ್ಯತೆಗಳಿವೆ.

ಅಧ್ಯಕ್ಷೀಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಾರನಹಳ್ಳಿ ಬೆಂಬಲಿತ ಅಭ್ಯರ್ಥಿ ವೇದಮೂರ್ತಿ ಡಾ. ಭಾನುಪ್ರಕಾಶ ಶರ್ಮಾ ಅವರಿಗೂ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಸಧ್ಯ ಬಂದಿರುವ ಮಾಹಿತಿ ಪ್ರಕಾರ ವಿರೋಧಿ ಬಣ ಧೂಳಿಪಟವಾಗುವ ಎಲ್ಲಾ ಮುನ್ಸೂಚನೆ ವ್ಯಕ್ತವಾಗುತ್ತಿದೆ.