Headlines

ರೇಲ್ವೆ ಬಳಕೆದಾರರ ಸಮಿತಿಗೆ ನೇಮಕ

ಬೆಳಗಾವಿ.ನೈರುತ್ಯ ರೇಲ್ವೆ ವಲಯ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ಪ್ರಸಾದ ಕುಲಕರ್ಣಿ ಅವರನ್ನು ನೇಮಕ‌ ಮಾಡಲಾಗಿದೆ. ಬಿಜೆಪಿ ಮಹಾನಗರ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಅವರು ಕಳೆದ ಹಲವು ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿ ಕೊಂಡಿದ್ದಾರೆ. 2025 ಜನೇವರಿ 1 ರವೆರೆಗೆ ಚಾಲ್ತಿಯಲ್ಲಿರುತ್ತದೆ.

Read More

ಗಣೇಶ ತಯಾರಿ ಅಗತ್ಯ ಸೂಚನೆ

ಬೆಳಗಾವಿ. ಗಡಿನಾಡ ಬೆಳಗಾವಿ ಗಣೇಶೋತ್ಸವ‌ ಸಂದರರ್ಭದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಪಾಲಿಕೆಯ ಮೇಯರ್ ಶೋಭಾ ಸೋಮನ್ನಾಚೆ ಅಧಿಕಾರಿಗಳಿಗೆ ಸೂಚಿಸಿದರು. ಪಾಲಿಕೆಯಲ್ಲಿ ಕಳೆದ ದಿನ‌ ನಡೆದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಗಣೇಶ ಉತ್ಸವ ಸಂದರ್ಭದಲ್ಲಿ ಪಾಲಿಕೆಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಿದರು. ಸ್ವಚ್ಚತೆ ಸೇರಿದಂತೆ ಮೆರವಣಿಗೆ ಸಾಗುವ ಮಾರ್ಗದಲ್ಲಿ ಅಡ್ಡಲಾಗಿ ಬಂದಿರುವ. ಟೊಂಗೆ, ವಾಯರ್ ಗಳನ್ನು ತೆರವು ಮಾಡಬೇಕು ಎಂದರು. ಅಷ್ಟೇ ಅಲ್ಲ ರಸ್ತೆ ಮಧ್ಯದಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳನ್ನು ಮುಚ್ವುವ ಕೆಲಸವನ್ಬು ತ್ವರಿತವಾಗಿ…

Read More

ಗಟ್ಟಿ ಧ್ವನಿ ಕಣ್ಮರೆಯಾಗಿ ಇಂದಿಗೆ ಒಂದು ವರ್ಷ..

ಬೆಳಗಾವಿ.ಉತ್ತರ ಕರ್ನಾಟಕದ ನೇರ ನುಡಿಯ ಗಟ್ಟಿ ರಾಜಕಾರಣಿ ಎಂದರೆ ಥಟ್ಟನೆ ನೆನಪಿಗೆ ಬರುವ ಹೆಸರು ಉಮೇಶ್ ಕತ್ತಿ,ಅಂತಹ ರಾಜಕಾರಣಿ ಕಣ್ಮರೆಯಾಗಿ ನಾಳೆ ದಿ. 6 ರಂದು ಬರೊಬ್ಬರಿ ಒಂದು ವರ್ಷ, ಈಗಲೂ ಉತ್ತರ ಕರ್ನಾಟಕ ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಉಮೇಶ್ ಕತ್ತಿ ಅವರ ಹೆಸರನ್ನು ನೆನಪಿಸಿಕೊಳ್ಳುತ್ತಾರೆ. ಪ್ರತ್ಯೇಕ ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ಯಾವುದೇ ಸರ್ಕಾರವಿದ್ದರೂ ತಮ್ಮ ಕೂಗನ್ನು ಎಂದಿಗೂ ತಗ್ಗಿಸುವ ಕೆಲಸ ಮಾಡಲೇ ಇಲ್ಲ. ಕೆಲವರು ಪ್ರತ್ಯೇಕತೆಯ ಕೂಗಿನ ಬಗ್ಗೆ ಅಪಸ್ವರ ಎತ್ತಿದರೂ ಅದಕ್ಕೆ…

Read More

ಲಕ್ಷ್ಮೀಗೆ ಹೆಚ್ವುವರಿ ಜವಾಬ್ದಾರಿ ಕೊಟ್ಟ ಸರ್ಕಾರ

ಬೆಳಗಾವಿ., ಬೆಳಗಾವಿ ಮಹಾನಗರ ಪಾಲಿಕೆ ಯ ಅಧೀಕ್ಷಕ ಅಭಿಯಂತ ಶ್ರೀಮತಿ ಲಕ್ಷ್ಮೀ ನಿಪ್ಪಾಣಿಕರ ಅವರಿಗೆ ಈಗ ಸರ್ಕಾರ‌ ಮತ್ತೊಂದು ಹೆಚ್ಚುವರಿ ಜವಾಬ್ದಾರಿ ನೀಡಿ‌ ಆದೇಶ ಹೊರಡಿಸಿದೆ. ಸಧ್ಯ ಈಗಿರುವ ಹುದ್ದೆಯ ಜೊತೆಗೆ ಬೆಳಗಾವಿ ಸ್ಮಾರ್ಟ್ ಸಿಟಿಯ ಪ್ರಧಾನ ವ್ಯವಸ್ಥಾಪಕರು {ತಾಂತ್ರಕ) ಮುಖ್ಯ ಇಂಜನೀಯರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ‌ಹಾಗು ಮುಂದಿನ‌ ಆದೇಶದವರೆಗೆ ಅಧಿಕ ಪ್ರಭಾರದಲ್ಲಿರಿಸಿ ಆದೇಶ ಮಾಡಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಆಧೀನ ಕಾರ್ಯದರ್ಶಿ ಎನ್ಮ ಮಂಗಳಗೌರಿ ಈ‌ ಆದೇಶ ಮಾಡಿದ್ದಾರೆ.

Read More

7 IPS ವರ್ಗಾವಣೆಗೆ ತಡೆ

ಬೆಳಗಾವಿ ಎಸ್ಪಿ ಮತ್ತು ಡಿಸಿಪಿ ಶೇಕರನ್ ವರ್ಗಾವಣೆಗೆ ಬ್ರೆಕ್ ಬೆಂಗಳೂರು:  ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ, ಒಟ್ಟು 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ  ಹೊರಡಿಸಿತ್ತು. ಸದ್ಯ ಇದೀಗ 7 ಐಪಿಎಸ್​ ಅಧಿಕಾರಿಗಳ ವರ್ಗಾವಣೆಗೆ ಸರ್ಕಾರ ತಾತ್ಕಾಲಿಕ ತಡೆ ನೀಡಿ ಆದೇಶ ಹೊರಡಿಸಿದೆ. ಕೂಡಲೇ ಡಿಜಿ-ಐಜಿಪಿ ಕಚೇರಿಗೆ ವರದಿ ಮಾಡಿಕೊಳ್ಳುವಂತೆ ಐಪಿಎಸ್​ ಅಧಿಕಾರಿಗಳಾದ ಅಕ್ಷಯ್​ ಮಚೀಂದ್ರ, ಅಬ್ದುಲ್ ಅಹದ್, ಭೀಮಾಶಂಕರ್ ಗುಳೇದ್​, ಶೇಖರ್​ ಟೆಕ್ಕಣನವರ್​, ಸೈದುಲ್ಲಾ ಅಡಾವತ್, ನಿರಂಜನ್ ರಾಜೇ ಅರಸ್, ಬದರೀನಾಥ್​ಗೆ…

Read More

ನಾನೇ MP CANDIDATE..!

ನಾನು ಎಂಪಿ ಎಲೆಕ್ಷನ್ ನಿಲ್ಲುವೆ: ಅನಿಲ ಬೆನಕೆ, ಬಿಜೆಪಿಯಲ್ಲಿ ಕುತಂತ್ರಿಗಳು ಹೆಚ್ಚು, ನಾನು ಶೆಟ್ಟರ್ ಸಂಪರ್ಕದಲ್ಲಿಲ್ಲ ಬೆಳಗಾವಿ: ಲೋಕಸಭಾ ಚುನಾವಣೆ ತಯಾರಿ ಮಾಡಿಕೊಳ್ಳುತ್ತೇವೆ. ಪಕ್ಷದ ನಾಯಕರು ಅವಕಾಶ ನೀಡಿದರೆ ಸ್ಪರ್ಧೆ ಮಾಡುವೆ. ಪಕ್ಷ ಬೇರೆಯವರಿಗೂ ಟಿಕೆಟ್ ನೀಡಿದರೂ ಬೆಂಬಲ ಕೊಟ್ಟು ಗೆಲ್ಲಿಸಲು ಶ್ರಮಿಸಲಾಗುವುದು ಎಂದು ಮಾಜಿ ಶಾಸಕ ಅನಿಲ ಬೆನಕೆ ಅವರು ತಿಳಿಸಿದ್ದಾರೆ. ಇಂದು ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಚುನಾವಣೆಯಲ್ಲಿ ೧.೩೦ ಲಕ್ಷ ಮತ ಪಡೆದಿರುವ ಕುರಿತು ಪಕ್ಷದಲ್ಲಿ ಚರ್ಚೆ ಆಗಬಹುದು….

Read More

IPS ವರ್ಗಾವಣೆ. ಸಂಜೀವಕುಮಾರ ಬೆಂಗಳೂರಿಗೆ

ಬೆಂಗಳೂರು. ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಸುಗ್ಗಿ ಸಧ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಕಳೆದ ಎರಡು ದಿನಗಳ ಹಿಂದೆಯಷ್ಟೆ ಐಪಿಎಸ್ ಅಧಿಕಾರಿಗಳನ್ಬು ವರ್ಗಾವಣೆ ಮಾಡಲಾಗಿತ್ತು.‌ಈಗ‌ ಮತ್ತೊಂದು ಪಟ್ಟಿ ಕಳೆದ ದಿನ ಹೊರಬಿದ್ದಿದೆ. ಈ ಬಗ್ಗೆ ಮುಂಚಿತವಾಗಿ ಇ ಬೆಳಗಾವಿ ಡಾಟ್ ಕಾಮ್ ವರದಿ‌ಮಾಡಿತ್ತು. ಎರಡನೇ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಮತ್ತು‌ವಿಶೇಷವಾಗಿ ಮಾಧ್ಯಮಗಳ ಪ್ರೀತಿಯ ಎಸ್ಪಿ ಎಂದೇ ಹೆಸರಾಗಿರುವ ಸಂಜೀವಕುಮಾರ ಪಾಟೀಲರ ವರ್ಗಾವಣೆಯಾಗಿದೆ. ಅವರನ್ನು ಬೆಂಗಳೂರು‌ ವೈಟ್ ಫೀಲ್ಡ್ ಡಿಸಿಪಿ ಆಗಿ ನೇಮಕ ಮಾಡಲಾಗಿದೆ ಭೀಮಾಶಂಕರ…

Read More

ಟಿಪ್ಪರಗೆ ಮಹಿಳೆ ಬಲಿ

ಬೆಳಗಾವಿ. ನಗರದ ಗೋವಾವೇಸ ವೃತ್ತದ ಬಳಿ‌ ಟಿಪ್ಪರಗೆ ಮಹಿಳೆ ಬಲಿಯಾಗಿದ್ದಾಳೆ. ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಮಹಿಳಗೆ ಟಿಪ್ಪರ ಡಿಕ್ಕಿ ಹೊಡೆದಿದೆ. ಈ ಘಟನೆ ಇದೀಗ ನಡೆದಿದೆ. ಮೃತಳ ಹೆಸರು ವಿಖಾಸ ಗೊತ್ತಾಗಿಲ್ಲ. ಪೊಲೀಸರು ಸ್ಥಳಕ್ಕರ ದೌಡಸಯಿಸಿದ್ದಾರೆ

Read More

ಮೆಘಾ ಗ್ಯಾಸ್‌ ದರದಲ್ಲಿ ಇಳಿಕೆ

ಮೆಗಾ ಗ್ಯಾಸ್ ಬಳಕೆದಾರರಿಗೊಂದು ಖುಷಿ ಸುದ್ದಿ ಬೆಂಗಳೂರು, ರಾಜ್ಯದ ತುಮಕೂರು ಮತ್ತು ಬೆಳಗಾವಿಯಲ್ಲಿ ಮನೆ ಮನೆಗೆ ನೈಸರ್ಗಿಕ ಅಡುಗೆ ಅನಿಲ ಸರಬರಾಜು ಮಾಡುತ್ತಿರುವ ಮೆಘಾ ಗ್ಯಾಸ್‌ ಅನಿಲ ದರಗಳಲ್ಲಿ ಇಳಿಕೆ ಮಾಡಿದೆ. ಸೆಪ್ಟೆಂಬರ್‌ 3ರಿಂದಲೇ ಈ ಇಳಿಕೆ ಜಾರಿ ಆಗಲಿದೆ ಎಂದಿರುವ ಮೆಘಾ ಗ್ಯಾಸ್‌, ತಾನು ಸರಬರಾಜು ಮಾಡುತ್ತಿರುವ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ (ಯೂನಿಟ್‌) ಅನಿಲದ ಬೆಲೆಯಲ್ಲಿ 2 ರೂ. ಕಡಿತ ಮಾಡಿದ್ದು, ಇನ್ನು 50 ರೂ.ಗಳಿಗೆ ಲಭ್ಯವಾಗಲಿದೆ ಎಂದು ಹೇಳಿದೆ. ಹುಷಾರು ..ಇವರು ನಿಮ್ಮ…

Read More
error: Content is protected !!