Headlines

ಇದು ಡಿಸಿಸಿ ADJUSTMENT..!

ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆ ರಾಜಕಾರಣವೇ ವಿಚಿತ್ರ. ಇಲ್ಲಿ ಯಾರೂ ಶತ್ರುನೂ ಅಲ್ಲ, ಮಿತ್ರನೂ ಅಲ್ಲ. ಅಂದರೆ ಒಂದು ರೀತಿಯ ಹೊಂದಾಣಿಕೆ ರಾಜಕಾರಣ;,! ಹೀಗಾಗಿ ಈ ಜಿಲ್ಲೆಯ ರಾಜಕಾರಣದ ಒಳಸುಳಿವು ಯಾರಿಗೂ ಬೇಗ ಅರ್ಥ ಆಗೋದೇ ಇಲ್ಲ. ಈ ಹಿಂದಿನ ರಾಜಕಾರಣವನ್ನು ಗಮನಿಸಿದರೆ, ಕತ್ತಿ, ಸವದಿ, ಕೋರೆಯವರದ್ದು ಒಂದು ಗುಂಪಾಗಿದ್ದರೆ, ಜಾರಕಿಹೊಳಿ ಸಹೋದರರದ್ದು ಒಂದು ಗುಂಪು. ಆದರೂ ಎರಡೂ ಗುಂಪುಗಳು ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಬಲವಾದ ಹಿಡಿತ ಬಿಟ್ಟು‌ಕೊಟ್ಟಿರಲಿಲ್ಲ. ಈ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಯಾವಾಗಲೂ…

Read More

ಪಾಪಿಗಳಿಗೆ ಉತ್ತರ ಕೊಡುವ ಕಾಲವಿದು..!

ಈ ದಾಳಿ ಒಂದು ಕಣ್ಣು ಕಳೆಯುವ ಘಟನೆಯಾಗಿದ್ದರೆ, ದೇಶ ಶತ್ರುವಿನ ಎರಡೂ ಕಣ್ಣುಗಳನ್ನು ಕಿತ್ತು ಹಾಕುವ ಕೆಲಸ ಮಾಡಬೇಕು. . ಶಕ್ತಿ ಇದೆಯೆಂದು ತೋರಿಸಬೇಕಾದ ಸಮಯ ಈಗ. ನಡವಳಿಕೆ ಇಲ್ಲದ ನಡತೆ ದೇಶಕ್ಕೆ ದ್ರೋಹದಷ್ಟೇ ಅಪಾಯಕಾರಿಯಾಗಿರುತ್ತದೆ! ಪೆಹಲ್ಗಾಮದ ದಾಳಿ – ದೇಶದ ಹೃದಯಕ್ಕೆ ಹೊಡೆಯಲಾದ ಕುಣಿಗೆ ತಿರುಗೇಟು ಬೇಕು! ಪೆಹಲ್ಗಾಮದಲ್ಲಿ ಅಮರ್‌ನಾಥ್ ಯಾತ್ರಿಕರ ಮೇಲೆ ನಡೆದ ಭೀಕರ ದಾಳಿ, ಇದು ಕೇವಲ ಒಂದು ಭಯೋತ್ಪಾದಕ ಕೃತ್ಯವಲ್ಲ — ಇದು ಭಾರತೀಯ ರಾಷ್ಟ್ರದ ಮನಸ್ಸಿನ ಮೇಲೆ ಹೊಡೆದ ಬಾರಿಯಾಗಿದೆ….

Read More

ಬೆಳಗಾವಿಗೂ ವಂದೇ ಭಾರತ…!

ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಬೆಳಗಾವಿ ಜನರ ಬಹುದಿನಗಳ ಕನಸು ಈಗ ನನಸಾಗಿದೆ. ಈ ವಿಚಾರವಾಗಿ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಪ್ರತಿಕ್ರಿಯೆ ನೀಡಿದ್ದು, ನಮ್ಮ ಬೆಳಗಾವಿ ಜನತೆಯ ಕನಸನ್ನು ಸತತ ಪ್ರಯತ್ನದಿಂದ ನನಸು ಮಾಡಿದ ಸಂತೃಪ್ತ ಭಾವ, ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು‌ ತಿಳಿಸಿದ್ದಾರೆ. ಬೆಳಗಾವಿ ಮತ್ತು ಬೆಂಗಳೂರಿನ ನಡುವೆ ವಂದೇ‌ ಭಾರತ್ ರೈಲು ಸಂಚಾರದಿಂದ ಪ್ರಯಾಣ ಮತ್ತಷ್ಟು ಸುಗಮವಾಗುವುದಲ್ಲದೇ, ಸಮಯವೂ ಉಳಿತಾಯವಾಗಲಿದೆ. ಅಲ್ಲದೇ, ಬೆಳಗಾವಿಯ…

Read More

ಬಿ. ಎ. ಕ್ಹುಟಿನೋ ನಿಧನ

ಬೆಳಗಾವಿ: ಜನಪ್ರಿಯ, ದಕ್ಷ ಐಎಎಸ್ ಅಧಿಕಾರಿ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ವಿಭಾಗದ ಡಿವಿಜನಲ್ ಕಮಿಷನರ್ ಸಹ ಆಗಿದ್ದ ಬೆವಿಸ್ ಅಂಗೆಲೊ ಕ್ಹುಟಿನೊ(ಬಿ. ಎ. ಕ್ಹುಟಿನೊ) ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಅವರು ತಮ್ಮ ಹನುಮಾನ ನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಭಾರತೀಯ ಆಡಳಿತಾತ್ಮಕ ಸೇವೆಗೆ ದಕ್ಷತೆ ಮತ್ತು ಹೆಚ್ಚಿನ ಅರ್ಥ ತಂದುಕೊಟ್ಟಿದ್ದ ಜನಪ್ರಿಯ ಅಧಿಕಾರಿ ಆಗಿದ್ದರು. ನಿವೃತ್ತಿ ನಂತರ ಬೆಳಗಾವಿ ಹನುಮಾನ ನಗರದಲ್ಲಿ ವಾಸವಾಗಿದ್ದರು.

Read More

ಕವಟಗಿಮಠರಿಗೆ ಉಜ್ವಲ ಭವಿಷ್ಯವಿದೆ ಎಂದ ಬಿಎಸ್ವೈ

ಬೆಳಗಾವಿ.ಸಹಕಾರಿ ಕ್ಷೇತ್ರ ಎಲ್ಲರಿಗೂ ಒಲಿಯುವುದಿಲ್ಲ. ಆದರೆ, ಕವಟಗಿಮಠರ ಮನೆತನ ಮೂರು ತಲೆಮಾರಿನಿಂದ ಸಹಕಾರಿ ಕ್ಷೇತ್ರದಲ್ಲಿ ಬೆಳೆದು ಬಂದಿರುವುದನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಅವರಿಗೆ ಉಜ್ವಲ ಭವಿಷ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು,ಸವದತ್ತಿಯಲ್ಲಿ ಮಹಾಂತೇಶ ಕವಟಗಿಮಠ ಪೌಂಡೇಶನ್ ಉದ್ಘಾಟನೆ, ಮಹಾಂತೇಶ ಕವಟಗಿಮಠರ 58 ನೇ ಜನ್ಮದಿನಾಚರಣೆ ಮತ್ತು ಸದನದೊಳಗೆ, ಹೊರಗೆ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು, ಮುಂಬೈ-ಕನರ್ಾಟಕ ಭಾಗದಲ್ಲಿ ಸಹಕಾರಿ ಕ್ಷೇತ್ರಕ್ಕೆ ಮುನ್ನುಡಿ ಬರೆದಿರುವ ಕವಟಗಿಮಠ ಮನೆತನದ ಕೊಡುಗೆ ಅಪಾರ. ತಂದೆಯವರ ಸಾಮಾಜಿಕ ಸೇವೆಯನ್ನು ಮುಂದುವರಿಸಿಕೊಂಡು…

Read More

ಜಾತಿ ಗಣತಿ, ರಾಜಕೀಯ ಲೆಕ್ಕಾಚಾರದ ಹೊಸ ಆಯಾಮ.

ಇಂದು ನಡೆಯಲಿರುವ ಕರ್ನಾಟಕ ರಾಜ್ಯದ ಸಚಿವ ಸಂಪುಟ ಸಭೆ, ಸಾಮಾಜಿಕ ನ್ಯಾಯದ ಕ್ಷಿತಿಜದಲ್ಲಿ ಪ್ರಮುಖ ಹೆಜ್ಜೆಯ ಸಂಕೇತವಾಗಿದೆ. ಒಂದು ದಶಕದ ನಂತರ, ಬಹುಕೋಟಿ ವೆಚ್ಚದಲ್ಲಿ ಸಿದ್ಧವಾದ 2015ರ ಜಾತಿಗಣತಿ ವರದಿಯು ಹದಿನಾಲ್ಕು ವರ್ಷದ ನಿದ್ರೆ ಮುಗಿಸಿ, ರಾಜಕೀಯ ದರ್ಜೆಗೆ ಕಾಲಿಡಲು ಸಜ್ಜಾಗಿದೆ. ಈ ವರದಿ ಯಾರಿಗೋ ಧ್ವನಿ ನೀಡಬಲ್ಲದು. ಹಾಗೆಲ್ಲರಿಗೂ ಅಸ್ಪಷ್ಟತೆಯ ಕನ್ನಡಿ ಕೂಡ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿರುವ ವರ್ಗಗಳಿಗೆ ಇದು ಅಂಕಿ-ಅಂಶಗಳ ಬೆಂಬಲವಾಗಿ ಬಲ ನೀಡಬಹುದು. ಆದರೆ ಮತ್ತೊಂದೆಡೆ, ವರದಿ ತಿರುಚಿದ ಅಕ್ಷರಗಳ ಹಿಂದೆ…

Read More

ಇಕೋಫಿಕ್ಸ್ ತಂತ್ರಜ್ಞಾನ ರಸ್ತೆ ನಿರ್ವಹಣೆಗೆ ಪರಿಸರ ಸ್ನೇಹಿ

ಬೆಳಗಾವಿ. ಸಿಎಸ್ ಐಆರ್, ಸಿಆರ್ ಆರ್ ಐಸ್ಟೀಲ್ ಸ್ಲ್ಯಾಗ್ ಆಧಾರಿತ ಇಕೋಫಿಕ್ಸ್ ತಂತ್ರಜ್ಞಾನವು ಕರ್ನಾಟಕ ರಾಜ್ಯಕ್ಕೆ ಪರಿಸರ ಸ್ನೇಹಿ ಸುಸ್ಥಿರ ರಸ್ತೆ ನಿರ್ವಹಣೆಗೆ ಭರವಸೆಯ ಪರಿಹಾರವನ್ನು ಒದಗಿಸುತ್ತಿದೆ ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹೇಳಿದರು. ಬೆಳಗಾವಿಯ -ಸುತಗಟ್ಟಿಯಲ್ಲಿ ಗುಂಡಿಗಳ ತ್ವರಿತ ದುರಸ್ತಿಗಾಗಿ ಉಕ್ಕು ಸ್ಲ್ಯಾಗ್ ಆಧಾರಿತ ಇಕೋಫಿಕ್ಸ್ ತಂತ್ರಜ್ಞಾನದ ಯಶಸ್ವಿ ಪ್ರದರ್ಶನ ಪ್ರಯೋಗಕ್ಕೆ ಅವರು ಸಾಕ್ಷಿಯಾದರು. ಇಕೋಫಿಕ್ಸ್ ತಂತ್ರಜ್ಞಾನದ ಸಂಶೋಧಕ ಸತೀಶ್ ಪಾಂಡೆ ನೇತೃತ್ವದ ತಾಂತ್ರಿಕ ಪ್ರದರ್ಶನದ ಸಮಯದಲ್ಲಿ, ಯಾವುದೇ ನಿರ್ಜಲೀಕರಣದ ಅಗತ್ಯವಿಲ್ಲದೇ…

Read More

ಸತೀಶ್ ಪೌಂಡೇಶನ್ ದಿಂದ ಕಸವಿಲೇವಾರಿ ವಾಹನ ವಿತರಣೆ

ಬೆಳಗಾವಿ ದಕ್ಷಿಣ, ಉತ್ತರ ಕ್ಷೇತ್ರಕ್ಕೆ ಉಚಿತ ನೀರಿನ ಟ್ಯಾಂಕರ್, ಕಸ ವಿಲೇವಾರಿ ವಾಹನ ವಿತರಿಸಿದ ರಾಹುಲ್‌ ಜಾರಕಿಹೊಳಿ ಬೆಳಗಾವಿ: ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರದ ಜನತೆಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ವತಿಯಿಂದ ಉಚಿತ ನೀರಿನ ಟ್ಯಾಂಕರ್, ಕಸ ವಿಲೇವಾರಿ ವಾಹನ ವಿತರಿಸಲಾಗುತ್ತಿದೆ ಎಂದು ಯುವ ನಾಯಕ ರಾಹುಲ್‌ ಜಾರಕಿಹೊಳಿ ಅವರು ತಿಳಿಸಿದರು. ಬೆಳಗಾವಿ ನಗರದ ಮಹಾನಗರ ಪಾಲಿಕೆ ಕಚೇರಿ ಆವರಣದಲ್ಲಿ ಸತೀಶ್‌ ಜಾರಕಿಹೊಳಿ ಫೌಂಡೇಶನ್ ನಿಂದ ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರದ ಜನರಿಗೆ…

Read More

ಕ್ರೀಡೆಗೆ ಪ್ರೋತ್ಸಾಹ- ಚನ್ನರಾಜ

ಬೆಳಗಾವಿ :ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿಯಲ್ಲಿ ಪ್ರಿಮಿಯರ್ ಲೀಗ್ ಸಿಸನ್ 4ರ ಕ್ರಿಕೆಟ್ ಹಾಪ್ ಪಿಚ್ ಪಂದ್ಯಾವಳಿಯನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು. ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಗ್ರಾಮೀಣ ಕ್ರೀಡೆಗಳಿಗೆ ನೆರವು ನೀಡಲಾಗುತ್ತಿದೆ ಎಂದು ಚನ್ನರಾಜ ಹಟ್ಟಿಹೊಳಿ ಈ ಸಂದರ್ಭದಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಫಕೀರಪ್ಪ ಅಮರಾಪುರ, ಮಹೇಶ ಸುಗ್ನೆಣ್ಣವರ, ಬಸನಗೌಡ ಪಾಟೀಲ, ಬಸಯ್ಯ ಹಿರೇಮಠ, ಸಿದ್ದಯ್ಯ ಮನತುರಗಿಮಠ, ತಿಪ್ಪಣ್ಣ ಲೋಕರೆ, ಸಂಭಾಜಿ…

Read More

ಸ್ಥಾಯಿ ಸಮಿತಿಗೆ ಅವಿರೋಧ ಆಯ್ಕೆ!

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಇಂದು ಅವಿರೋಧ ಆಯ್ಕೆ ನಡೆಯಿತು. ಆಡಳಿತ ಗುಂಪಿನಿಂದ 5 ಮತ್ತು ವಿರೋಧ ಪಕ್ಷದಿಂದ ತಲಾ ಇಬ್ಬರನ್ನು ಪ್ರತಿಯೊಂದು ಸಮಿತಿಗೆ ತೆಗೆದುಕೊಳ್ಳಲಾಯಿತು. ಆರೋಗ್ಯ ಕಮಿಟಿ. ಶ್ರೀಶೈಲ ಕಾಂಬಳೆ, ರೂಪಾ ಚಿಕ್ಕಲದಿನ್ಬಿ, ದೀಪಾಲಿ ಟೋಪಗಿ, ರಾಜು ಭಾತಖಾಂಡೆ ಮತ್ತು ಮಾಧುರಿ ರಾಘೋಚೆ.ಅಸ್ಮಿತಾ ಪಾಟೀಲ, ಲಕ್ಷ್ಮೀ ಲೋಕರಿ. ಪಿಡಬ್ಲುಡಿ ಕಮಿಟಿ. ಅಭಿಜಿತ್ ಜವಳಕರ, ಸಂತೋಷ ಪೇಡ್ನೆಕರ , ರವಿರಾಜ ಸಾಂಬ್ರೆಕರ, ಜಯತೀರ್ಥ ಸವದತ್ತಿ ಮತ್ತು ಉದಯ ಉಪರಿ. ಬಸವರಾಜ ಮೊದಗೇಕರ,…

Read More
error: Content is protected !!