ಬೆಳಗಾವಿ
ಚಿಕ್ಕೋಡಿ ತಾಲ್ಲೂಕಿನ ಸದಲಗಾ ಪಟ್ಟಣದ ಹೊರವಲಯದಲ್ಲಿ ದೂಧಗಂಗಾ ನದಿ ದಡದಲ್ಲಿ, ಹಿಂದೆ ಮಣ್ಣಲ್ಲಿ ಹುದುಗಿದ್ದ ರಾಮ ಮಂದಿರ ಪತ್ತೆಯಾಗಿದೆ.
.ಎರಡು ತಲೆಮಾರುಗಳ ಹಿಂದೆ ನದಿ ದಡದಲ್ಲಿ ರಾಮ ಮಂದಿರ ಇತ್ತು. ಪ್ರವಾಹದ ವೇಳೆ ಮುಳುಗಿತ್ತು ಎಂದು ಹಿರಿಯರು ಹೇಳುತ್ತಿದ್ದರು.

ಅಯೋಧ್ಯೆಯಲ್ಲಿ ರಾಮನ ಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನೆಲೆಯಲ್ಲಿ ಯುವಕರು ಸೋಮವಾರ ಇಡೀ ದಿನ ಜೆಸಿಬಿ ನೆರವಿನಿಂದ ದೇವಸ್ಥಾನಕ್ಕೆ ಶೋಧ ನಡೆಸಿದರು. ಸಂಜೆ ಪತ್ತೆಯಾಯಿತು’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಶಾಸಕಿ ಶಶಿಕಲಾ ಜೊಲ್ಲೆ ಸ್ಥಳಕ್ಕೆ ಭೇಟಿ ನೀಡಿದರು. .