ಆಯುಕ್ತರ ಮುಂದೆ ಅಧಿಕಾರಿಗಳ ಲೇ ಲೇ ಮಾತು..!


ಆಯುಕ್ತರ ಮುಂದೇಯೇ `ಅಧಿಕಾರ’ ರಂಪಾಟ. ಹೊಡೆದಾಟ ಹಂತಕ್ಕೆ ಬಂದಾಗ ಮಧ್ಯ ಪ್ರವೇಶ ಮಾಡಿದ್ದು ಯಾರು ಗೊತ್ತಾ?

ಆರೋಗ್ಯ ಇಲಾಖೆಯ ಇಬ್ಬರು ಅಣದಿಕಾರಿಗಳ ರಂಪಾಟ.

ಹಣಕಾಸಿನ ವಿಷಯಕ್ಕೆ ನಡೀತಾ ಈ ಮಾತಿನ‌ ಚಕಮಕಿ. ಪಾಲಿಕೆಯಲ್ಲಿ ನಿಲ್ಲದ ಸಮರ,

ಜಿಲ್ಲಾ ಮಂತ್ರಿ ಮುಂದೆಯೂ ಹೋಯಿತು ಪಾಲಿಕೆ ಕರಾಮತ್ತು

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಸಮ್ಮುಖದಲ್ಲಿಯೇ ಆರೋಗ್ಯ ಶಾಖೆಯ ಇಬ್ಬರು ಅಧಿಕಾರಿಗಳು ಏಕವಚನದಲ್ಲಿ‌ ಬೈದಾಡಿ ಕೊಂಡ ಘಟನೆ ಇಂದು ನಡೆದಿದೆ.

ಆಯುಕ್ತರ ಕೊಠಡಿಯಲ್ಲಿಯೇ ಈ ಘಟನೆ ನಡೆದಿದೆ.

ಮಹಾನಗರ ಪಾಲಿಕೆಯಲ್ಲಿ ನಿತ್ಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಆಯುಕ್ತರು ಆಧೀನ ಅಧಿಕಾರಿಗಳ ಸಭೆ ಕರೆದ ಸಂದರ್ಭದಲ್ಲಿ ಈ ಇಬ್ಬರು ಅಧಿಕಾರಿಗಳು ರಂಪಾಟ ಮಾಡಿಕೊಂಡಿದ್ದಾರೆ,

ಪರಿಸ್ಥಿತಿ ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಗಿತ್ತು ಎಂದು ಮೂಲಗಳು ತಿಳಿಸಿವೆ.
ಆರೋಗ್ಯ ಶಾಖೆಯ ಡಾ, ನಾಂದ್ರೆ ಮತ್ತು ಅದೇ ವಿಭಾಗದ ಎಇಇ ಕಲಾದಗಿ ನಡುವೆ ಈ ಘಟನೆ ನಡೆದಿದೆ.

ಆರಂಭದಲ್ಲಿ ಮಾತಿನ ಚಕಮಕಿ ನಡೆದು ಕೊನೆಗೆ ಅದು ಕೈ ಕೈ ಮಿಲಾಯಿಸುವ ಮಟ್ಟಕ್ಕೂ ಹೋಯಿತು ಎಂದು ಹೇಳಲಾಗಿದೆ.
ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಟಿಪಿಓ ವಿಭಾಗದ ಅಧಿಕಾರಿಯೊಬ್ಬರು ಅಡ್ಡಲಾಗಿ ಬಂದಿದ್ದರಿಂದ ಹೊಡೆದಾಟ ತಪ್ಪಿತು ಎಂದು ಮೂಲಗಳು ಹೇಳಿವೆ.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಈಗ ಅಧಿಕಾರಕ್ಕೆ ಕತ್ತರಿ ಹಾಕುವ ಕೆಲಸ ನಡೆದಿದೆ, ಈ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ನಡೆದ ಸ್ಥಾಯಿ ಸಮಿತಿ ಸಭೆಯಲ್ಲಿ ತಮಗೆ ಆ ಅಧಿಕಾರ ಇಲ್ಲ ಎನ್ನುವ ವಿಷಯವನ್ನು ಒಬ್ಬರು ಹೇಳಿದ್ದರು.
ಇಂದು ಆಯುಕ್ತರು ಕರೆದ ಸಭೆಯಲ್ಲೂ ಕೂಡ ಇದೇ ವಿಷಯ ಪ್ರಸ್ತಾಪವಾಯಿತು. ಆದರೆ ಇಲ್ಲಿ ಯಾವುದೋ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರು ವಾದ ನಡೆಸಿದರು, ಕೊನೆಗೆ ಅದು ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಯಿತು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!