September 10, 2023

ಪಾಲಿಕೆ ಆಯುಕ್ತರ ದೌಡ..!
ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಅವರ ಬೆಳ್ಖಂ ಬೆಳಿಗ್ಗೆ ಸಿಟಿರೌಂಡ್ ಹಾಕಿದರು. ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ತೆರಳಿ, ಚಾಲಕರ ಹಾಜರಾತಿ ಪರಿಶೀಲನೆ ಮಾಡಿದರು. ನಂತರ ಅಂಬೇಡ್ಕರ್ ಗಾರ್ಡನ್ ಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿ ಅಲ್ಲಿರುವ ನೀರಿನ ಟ್ಯಾಂಕರ ಸ್ವಚ್ಛತೆಯನ್ನು ಕಾಪಾಡಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು.. ಕೊತವಾಲಗಲ್ಲಿಯ ಭಾಜಿ ಮಾರ್ಕೆಟ್ ಅಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಿದರು.ಅಷ್ಟೇ ಅಲ್ಲ ಪೌರಕಾರ್ಮಿಕರಿಗೆ ಸುರಕ್ಷಿತ ಪರಿಕರಣಗಳನ್ನು ನಿರಂತರ ಉಪಯೋಗಿಸಬೇಕೆಂದು ನಿರ್ದೇಶನ ನೀಡಿದರು. ಪ್ರತಿದಿನ ರಾತ್ರಿ ತರಕಾರಿ ತ್ಯಾಜ್ಯವನ್ನು ತೆರವುಗೊಳಿಸಬೇಕೆಂದು…

ಯತ್ನಾಳ, ಕಾಶಪ್ಪನವರ ಯಾಕೆ ಬರಲಿಲ್ಲ?
ಬೆಳಗಾವಿ. ರಾಜ್ಯದಲ್ಲಿ ಈಗಮತ್ತೇ 2 ಎ ಮೀಸಲಾತಿಗೆ ಪಂಚಮಸಾಲಿ ಹೋರಾಟ ಮುನ್ನಲೆಗೆ ಬರ್ತಿದೆ. ಆದರೆ ಈ ಹಿಂದೆ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಗೈರು ಹಾಜರಿ ವಿಭಿನ್ನ ಚರ್ಚೆಗೆ ಕಾಣವಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೊನೆಗೊಂಡ ಈ ಮೀಸಲಾತಿ ಹೋರಾಟ ಕಳೆದ ದಿನ ನಿಪ್ಪಾಣಿಯಲ್ಲಿ ಇಷ್ಟಲಿಂಗ ಪೂಜೆ ಮೂಲಕ ಆರಂಭಗೊಂಡಿತು. ಈ ಸಂದರ್ಭದಲ್ಲಿ ಇವರಿಬ್ಬರ ಗೈರು ಎದ್ದು ಕಂಡಿತು. ಹಿಂದಿನ ಹೋರಾಟ ದಲ್ಲಿ ವೀರಾವೇಶದ…

ಪತ್ರಕರ್ತರ ಸಹಕಾರಿ ಸಂಘಕ್ಕೆ ಆಯ್ಕೆ
ಬೆಂಗಳೂರು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಚುನಾವಣೆಯಲ್ಲಿ ಸಂಯುಕ್ತ ಕರ್ನಾಟಕದ ಕೆ.ವಿ ಪರಮೇಶ ಸೇರಿದಂತೆ 13 ಜನ ಆಯ್ಕೆಯಾಗಿದ್ದಾರೆ. ಇದರಲ್ಲಿ 5 ಜನ ಅವಿರೋಧ ಆಯ್ಕೆಯಾಗಿದ್ದಾರೆ. ಆನಂದ ಪರಮೇಶ್ವರ ಬೈದನಮನೆ, ರಮೇಶ ಎಂ (ಪಾಳ್ಯ}. ಧ್ಯಾನ ಪೂನಚ್ಚ, ಮೋಹನಕುಮಾರ ಬಿಎನ್. ಕೃಷ್ಣಕುಮಾರ ಪಿಎಸ್, ವಿನೋದ್ ಕುಮಾರ್ ಬಿನಾಯಕ್, ಸೋಮಶೇಖರ್ ಎಸ್, ಎಂ ಎಸ್ ರಾಜೇಂದ್ರ ಕುಮಾರ್, ರಮೇಶ್ ಬಿ, ದೊಡ್ಡಬೊಮ್ಮಯ್ಯ, ಪರಮೇಶ್ ಕೆವಿ, ನೈನಾ ಎಸ್ ವನಿತಾ ಎನ್ ಆಯ್ಕೆಯಾದವರು

ಪಂಚಮಸಾಲಿ ಮೀಸಲಾತಿ- ಸಿಎಂಗೆ ಮನವರಿಕೆ
ಪಂಚಮಸಾಲಿ ಮೀಸಲಾತಿ ಕುರಿತು ಮಂಗಳವಾರ ಸಿಎಂ ಜೊತೆ ಚರ್ಚೆ – ಲಕ್ಷ್ಮೀ ಹೆಬ್ಬಾಳಕರ್ನಿಪ್ಪಾಣಿ: ಸಮಾಜದ ಯಾವುದೇ ಕೆಲಸದಲ್ಲಿ ನಾನು ಸಮಾಜದ ಮಗಳಾಗಿ ನಿರಂತರ ಇರುತ್ತೇನೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಸ್ವಾಮಿಗಳ ಅಪೇಕ್ಷೆಯಂತೆ ಸಮಾಜ ಮತ್ತು ಸರಕಾರದ ಕೊಂಡಿಯಾಗಿ ಕೆಲಸ ಮಾಡುತ್ತೇನೆ. ಮಂಗಳವಾರ ಈ ಕುರಿತು ಮುಖ್ಯಮಂತ್ರಿಗಳ ಜೊತೆ ಸಮಗ್ರವಾಗಿ ಚರ್ಚಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ. ನಿಪ್ಪಾಣಿಯಲ್ಲಿ ಭಾನುವಾರ 2 ಎ ಮೀಸಲಾತಿ ಸಂಬಂಧ…