Headlines

L and Tಗೆ 21 ಕೋಟಿ ದಂಡ

ದಂಡ ವಿಧಿಸಿದ ಮಹಾನಗರ ಪಾಲಿಕೆ. ಪಾಲಿಕೆ ಆಯುಕ್ತರ ದಿಟ್ಟ ನಿರ್ಧಾರ. ಬುದ್ದಿ ಹೇಳಿದರೂ ಸುಧಾರಿಸದ ಕಂಪನಿ. ಕಳಪೆ ಕಾಮಗಾರಿಯ ಆರೋಪ ಬೆಳಗಾವಿ.ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸದವರಿಗೆ ಸರಿಯಾದ ರೀತಿಯಲ್ಲಿ ಬುದ್ದಿ ಕಲಿಸುವ ಕೆಲಸವನ್ನು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಮಾಡಿದ್ದಾರೆ. ಬೆಳಗಾವಿಗೆ ನಿರಂತರ ಕುಡಿಯುವ ನೀರು ಪೂರೈಕೆ ಜವಾಬ್ದಾರಿ ಹೊತ್ತ ಎಲ್ ಆ್ಯಂಡ್ ಟಿ ಕಂಪನಿಗೆ ಮಹಾನಗರ ಪಾಲಿಕೆಯು ಬರೊಬ್ಬರಿ 21 ಕೋಟಿ 46 ಲಕ್ಷ ರೂ ದಂಡ ವಿಧಿಸಿದೆ. ನಿಗದಿತ ಅವಧಿಯಲ್ಲಿ ಗುರಿಸಾಧನೆ…

Read More

ಪ್ರದೀಪ ಶೆಟ್ಟಿ ಇನ್ನಿಲ್ಲ

ಬೆಳಗಾವಿ. ಸದಾ ನಗುಮುಖದ ವ್ಯಕ್ತಿತ್ವ ಹೊಂದಿದ್ದ ಪ್ರದೀಪ ಶೆಟ್ಟಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಳೆದ ದಿನ ಮಧ್ಯರಾತ್ರಿ‌ ನಿಧನರಾದರು ಮೃತರು ಶಾಸಕ‌ ಅಭಯ ಪಾಟೀಲರ ಆತ್ಮೀಯರಲ್ಲಿ ಒಬ್ಬರಾಗಿದ್ದರು. ಸಂತಾಪ. ಪ್ರದೀಪ ಶೆಟ್ಟಿ ನಿಧನಕ್ಕೆ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ ಸೇರಿದಂತೆ ನಗರಸೇವಕರು, ಹಿತೈಷಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಇಲ್ಲಿ ದುಡ್ಡೇ ದೊಡ್ಡಪ್ಪ.!

ಬೆಳಗಾವಿ. ನೀವು ಮನೆಯಲ್ಲಿ ಕುಳಿತುಕೊಂಡು ಸರ್ಕಾರಿ ಸಂಬಳ ಪಡೆಯಬೇಕೆ? ಮತ್ತು ಸರ್ಕಾರಿ ಸಂಬಳದ ಜೊತೆಗೆ ಗಿಂಬಳವೂ ಬೇಕೆ? ಹಾಗಿದ್ದರೆ ನೀವು ಉಳಿದ ಜಿಲ್ಲೆಗಿಂತ ಬೆಳಗಾವಿಗೆ ಬಂದರೆ ಈ ಸೌಲಭ್ಯ ನಿಮಗೂ ಸಿಗಬಹುದು. ಅದನ್ನು ಬಿಟ್ಟು ಸರ್ಕಾರಿ ಸಂಬಳದ ಜೊತೆಗೆ ಗಿಂಬಳವೂ ಬೇಕು ಎಂದರೆ ನೀವು ಕಚೇರಿ ತುಂಬ ಏಜೆಂಟರನ್ನು ಇಟ್ಟುಕೊಂಡಿರಬೇಕು. ಆದರೆ ಈಗ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಏಜೆಂಟರ ಹಾವಳಿ ತುಂಬಿಕೊಂಡಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇಲ್ಲಿ ಸರ್ಕಾರ ಎಷ್ಟೇ ONLINE ವ್ಯವಸ್ಥೆ ಮಾಡಿದರೂ ಕೂಡ ಸರ್ಕಾರಿ…

Read More

ಸಚಿವ ಸುಧಾಕರ ವಜಾಕ್ಕೆ ಬ್ರಾಹ್ಮಣ ಮಹಾಸಭಾ ಆಗ್ರಹ

ಬೆಂಗಳೂರು.ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ ಡಿ ಸುಧಾಕರ್ ಅವರನ್ನು ಸಚಿವ ಪದವಿಯಿಂದ ವಜಾ ಮಾಡುವಂತೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಗ್ರಹಿಸಿದೆ.ಈ ಬಗ್ಗೆ ಮಹಾಸಬಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಸಚಿವ ದಿನೇಶ ಗುಂಡೂರಾವ್ ಅವರಿಗೆ ಮನವಿ ಪತ್ರವನ್ನು ಕಳಿಸಿಕೊಟ್ಟಿದ್ದಾರೆ, ಆದರೆ ಈಗ ಸಚಿವರು ನಡೆದುಕೊಳ್ಳುತ್ತಿರುವ ರೀತಿ ಸಂಪೂರ್ಣ ತದ್ವಿರುದ್ಧವಾಗಿದೆ. ಆದ್ದರಿಂದ ಮುಖ್ಯಮಂತ್ರಿಗಳು ತಕ್ಷಣ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಮನವಿ…

Read More

ಕಿತ್ತೂರು- ಧಾರವಾಡ ರೈಲು ಮಾರ್ಗ. ಸರ್ವೇ ಆರಂಭಿಸಿ

ಕಿತ್ತೂರು – ಧಾರವಾಡ ರೈಲು ಮಾರ್ಗಭೂ ಸಮೀಕ್ಷೆಗೆ ಸಂಸದೆ ಮನವಿಬೆಳಗಾವಿಕಿತ್ತೂರ-ಧಾರವಾಡ ನಡುವೆ ನೂತನ ರೈಲು ಮಾರ್ಗ ನಿಮರ್ಾಣಕ್ಕೆ ಅವಶ್ಯವೆನಿಸಿರುವ ಕಿತ್ತೂರ-ಬೆಳಗಾವಿ ನಡುವಿನ ಮಾರ್ಗದಲ್ಲಿ ಭೂಸ್ವಾಧೀನ ಸಮೀಕ್ಷೆ ಕಾರ್ಯವನ್ನು ಕೂಡಲೆ ರೇಲ್ವೆ ಇಲಾಖೆ ಅಧಿಕಾರಿಗಳು ಪ್ರಾರಂಭಿಸುವಂತೆ ಬೆಳಗಾವಿ ಸಂಸದೆ ಶ್ರೀಮತಿ ಮಂಗಲ ಸುರೇಶ ಅಂಗಡಿ ಹುಬ್ಬಳ್ಳಿಯ ನೈರುತ್ಯ ವಲಯ ರೇಲ್ವೆ ಮಹಾ-ಪ್ರಬಂಧಕ ಸಂಜೀವ ಕಿಶೋರಿ ಅವರಿಗೆ ಮನವಿ ಮಾಡಿಕೊಂಡರು, ಬೆಳಗಾವಿ-ಕಿತ್ತೂರ-ಧಾರವಾಡ ನಡುವಿನ ಸುಮಾರು 73 ಕಿ ಮೀ ಉದ್ದಕ್ಕೆರೈಲು ಮಾರ್ಗ ನಿರ್ಮಾಣ ಕ್ಕೆ ಕೇಂದ್ರ ಸರಕಾರವು ಸೆಪ್ಟೆಂಬರ್-2019 ರಲ್ಲಿ…

Read More

ಪಾಲಿಕೆ ಆಯುಕ್ತರ ದೌಡ..!

ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಅವರ ಬೆಳ್ಖಂ ಬೆಳಿಗ್ಗೆ ಸಿಟಿರೌಂಡ್ ಹಾಕಿದರು. ಸದಾಶಿವ ನಗರದಲ್ಲಿನ ವಾಹನ ಶಾಖೆಗೆ ತೆರಳಿ, ಚಾಲಕರ ಹಾಜರಾತಿ ಪರಿಶೀಲನೆ ಮಾಡಿದರು. ನಂತರ ಅಂಬೇಡ್ಕರ್ ಗಾರ್ಡನ್ ಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸಿ ಅಲ್ಲಿರುವ ನೀರಿನ ಟ್ಯಾಂಕರ ಸ್ವಚ್ಛತೆಯನ್ನು ಕಾಪಾಡಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು.. ಕೊತವಾಲಗಲ್ಲಿಯ ಭಾಜಿ ಮಾರ್ಕೆಟ್ ಅಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಿದರು.‌ಅಷ್ಟೇ ಅಲ್ಲ ಪೌರಕಾರ್ಮಿಕರಿಗೆ ಸುರಕ್ಷಿತ ಪರಿಕರಣಗಳನ್ನು ನಿರಂತರ ಉಪಯೋಗಿಸಬೇಕೆಂದು ನಿರ್ದೇಶನ ನೀಡಿದರು. ಪ್ರತಿದಿನ ರಾತ್ರಿ ತರಕಾರಿ ತ್ಯಾಜ್ಯವನ್ನು ತೆರವುಗೊಳಿಸಬೇಕೆಂದು…

Read More

ಯತ್ನಾಳ, ಕಾಶಪ್ಪನವರ ಯಾಕೆ ಬರಲಿಲ್ಲ?

ಬೆಳಗಾವಿ. ರಾಜ್ಯದಲ್ಲಿ ಈಗ‌ಮತ್ತೇ 2 ಎ ಮೀಸಲಾತಿಗೆ ಪಂಚಮಸಾಲಿ ಹೋರಾಟ ಮುನ್ನಲೆಗೆ ಬರ್ತಿದೆ. ಆದರೆ ಈ ಹಿಂದೆ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಗೈರು ಹಾಜರಿ ವಿಭಿನ್ನ ಚರ್ಚೆಗೆ ಕಾಣವಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೊನೆಗೊಂಡ ಈ ಮೀಸಲಾತಿ ಹೋರಾಟ ಕಳೆದ ದಿನ ನಿಪ್ಪಾಣಿಯಲ್ಲಿ ಇಷ್ಟಲಿಂಗ ಪೂಜೆ ಮೂಲಕ ಆರಂಭಗೊಂಡಿತು. ಈ ಸಂದರ್ಭದಲ್ಲಿ ಇವರಿಬ್ಬರ ಗೈರು ಎದ್ದು ಕಂಡಿತು. ಹಿಂದಿನ‌ ಹೋರಾಟ ದಲ್ಲಿ ವೀರಾವೇಶದ…

Read More

ಪತ್ರಕರ್ತರ ಸಹಕಾರಿ ಸಂಘಕ್ಕೆ ಆಯ್ಕೆ

ಬೆಂಗಳೂರು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಚುನಾವಣೆಯಲ್ಲಿ ಸಂಯುಕ್ತ ಕರ್ನಾಟಕದ ಕೆ.ವಿ ಪರಮೇಶ ಸೇರಿದಂತೆ 13 ಜನ ಆಯ್ಕೆಯಾಗಿದ್ದಾರೆ. ಇದರಲ್ಲಿ 5 ಜನ ಅವಿರೋಧ ಆಯ್ಕೆಯಾಗಿದ್ದಾರೆ. ಆನಂದ ಪರಮೇಶ್ವರ ಬೈದನಮನೆ, ರಮೇಶ ಎಂ (ಪಾಳ್ಯ}. ಧ್ಯಾನ ಪೂನಚ್ಚ, ಮೋಹನಕುಮಾರ ಬಿಎನ್. ಕೃಷ್ಣಕುಮಾರ ಪಿಎಸ್, ವಿನೋದ್ ಕುಮಾರ್ ಬಿನಾಯಕ್, ಸೋಮಶೇಖರ್ ಎಸ್, ಎಂ ಎಸ್ ರಾಜೇಂದ್ರ ಕುಮಾರ್, ರಮೇಶ್ ಬಿ, ದೊಡ್ಡಬೊಮ್ಮಯ್ಯ, ಪರಮೇಶ್ ಕೆವಿ, ನೈನಾ ಎಸ್ ವನಿತಾ ಎನ್ ಆಯ್ಕೆಯಾದವರು

Read More

ಪಂಚಮಸಾಲಿ ಮೀಸಲಾತಿ- ಸಿಎಂಗೆ ಮನವರಿಕೆ

ಪಂಚಮಸಾಲಿ ಮೀಸಲಾತಿ ಕುರಿತು ಮಂಗಳವಾರ ಸಿಎಂ ಜೊತೆ ಚರ್ಚೆ – ಲಕ್ಷ್ಮೀ ಹೆಬ್ಬಾಳಕರ್ನಿಪ್ಪಾಣಿ: ಸಮಾಜದ ಯಾವುದೇ ಕೆಲಸದಲ್ಲಿ ನಾನು ಸಮಾಜದ ಮಗಳಾಗಿ ನಿರಂತರ ಇರುತ್ತೇನೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಸ್ವಾಮಿಗಳ ಅಪೇಕ್ಷೆಯಂತೆ ಸಮಾಜ ಮತ್ತು ಸರಕಾರದ ಕೊಂಡಿಯಾಗಿ ಕೆಲಸ ಮಾಡುತ್ತೇನೆ. ಮಂಗಳವಾರ ಈ ಕುರಿತು ಮುಖ್ಯಮಂತ್ರಿಗಳ ಜೊತೆ ಸಮಗ್ರವಾಗಿ ಚರ್ಚಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ. ನಿಪ್ಪಾಣಿಯಲ್ಲಿ ಭಾನುವಾರ 2 ಎ ಮೀಸಲಾತಿ ಸಂಬಂಧ…

Read More
error: Content is protected !!