ಬೆಳಗಾವಿ
ಮಹಾನಗರ ಪಾಲಿಕೆಗೆ ನಾಮನಿರ್ದೇಶಿತ ಸದಸ್ಯರಾಗಿ ಕನ್ನಡ ಹೋರಾಟಗಾರ ರಮೇಶ ಸೋಂಟಕ್ಕಿ ಸೇರಿದಂತೆ 5 ಜನರನ್ನು ನಾಮನುರ್ದೇಶಿತ ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಬೆಳಗಾವಿ ಉತ್ತರ, ದಕ್ಷಿಣ ಮತಕ್ಷೇತ್ರಕ್ಕೆ ಇಬ್ಬರೂ ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಿಂದ ಒಬ್ಬರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಈ ವಿಷಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಜಾಣ ನಡೆ ಅನುಸರಿಸಿದ್ದು ಕಂಡು ಬರುತ್ತದೆ.

, ಡಾ. ದಿನೇಶ್ ನಾಶಿಪುಡಿ, ಮೊಹಮ್ಮದ್ ಸಲೀಂ, ಸಿದ್ರಾಯಿ ಮೇತ್ರಿ, ಮುಸ್ತಾಕ ಮುಲ್ಲಾಂ ಅವರನ್ನೂ ನೇಮಕ ಮಾಡಲಾಗಿದೆ.