ಬೆಳಗಾವಿ.
ನೆನೆಗುದಿಗೆ ಬಿದ್ದಿರುವ ಶಿಕ್ಷಕರ ಕೆಲವು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ರಾಣಿ ಚನ್ನಮ್ನ ವಿಶ್ವವಿದ್ಯಾಲಯ ದ ಶಿಕ್ಷಕರ ಸಂಘಟನೆ ಆಗ್ರಹಿಸಿದೆ.
ಈ ಸಂಬಂಧ ವಿವಿಯ ಕುಲಸಚಿವರು ಮತಗತು ಕುಲಪತಿಗಳಿಗೆ ಮನವಿ ಪತ್ರವನ್ಬು ಸಂಘ ಅರ್ಪಿಸಿದೆ.
ಹಲವಾರು ವಿಶ್ವವಿದ್ಯಾಲಯಗಳು ಏಕರೂಪ ಭತ್ಯೆಯನ್ನು ಜಾರಿಗೊಳಿವೆ ಆದರೆ ವಿಶ್ವವಿದ್ಯಾಲಯ ತಮಗೆ ಅನುಕೂಲವಾಗುವಂತೆ ಮಾಡಿಕೊಂಡಿದೆ ಎಂದು ದೂರಿದೆ.
ಏಕರೂಪ ಟಿ.ಎ ಮತ್ತು ಡಿ.ಎ, ಪರೀಕ್ಷಾ ಆಂತರಿಕ ಮೇಲ್ವಿಚಾರಕ ಭತ್ಯೆ ಸಮಸ್ಯೆಯನ್ನು ಪರಿಹರಿಸಬೇಕೆಂದು ಮನವಿ ಪತ್ರದಲ್ಲಿ ಕೇಳಿಕೊಳ್ಳಲಾಗಿದೆ.

ಈ ಹಿಂದೆ ಹಲವಾರು ಸಲ ಮನವಿ ಮಾಡಕೊಂಡಿದ್ದರೂ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ
ಬೇಡಿಕೆಗಳೇನು?
ಪ್ರಾಂಶುಪಾಲರ ಆಂತರಿಕ ಪರೀಕ್ಷಾ ಭತ್ಯೆ
ಬಾಹ್ಯ ಉಪಅಧೀಕ್ಷಕರ ಪರೀಕ್ಷಾ ಭತ್ಯೆ.ಬಿ.ಒ.ಇ ಸದಸ್ಯರ ಟಿ.ಎ, ಡಿ.ಎ ಭತ್ಯೆ, ಬಿ.ಒ.ಎಸ್ ಸದಸ್ಯರ ಟಿ.ಎ, ಡಿ.ಎ ಭತ್ಯೆ, ವಿಚಕ್ಷಕ ದಳದ ಸದಸ್ಯರ ಟಿ.ಎ, ಡಿ.ಎ ಭತ್ಯೆ., ಪರೀಕ್ಷಾ ಕೊಠಡಿಯ ಮೇಲ್ವಿಚಾರಕರ ಭತ್ಯೆ. ಕಛೇರಿ ಸಿಬ್ಬಂದಿಯವರ ಭತ್ಯೆ, ಪ್ರಾಯೋಗಿಕ ಪರೀಕ್ಷೆಗಳ ಭತ್ಯೆ. ಇನ್ನುಳಿದ ಪರೀಕ್ಷೆಗೆ ಸಂಬಂಧಿಸಿದ ಭತ್ಯೆ ಹೆಚ್ಚಳಕ್ಜೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ರವಿವಾರ ಮತ್ತು ರಜಾ ದಿನಗಳಂದು ಪರೀಕ್ಷೆಗಳನ್ನು ನಡೆಸದಿರುವಂತೆ ಮನವಿ ಮಾಡಿದಾಗ ಸಕಾರಾತ್ಮಕವಾಗಿ ಸ್ಪಂದಿಸಲಾಗಿತ್ತು. ಆದರೆ ಕಾರ್ಯಗತವಾಗಿರುವುದಿಲ್ಲ. ಆದ್ದರಿಂದ
ಈ ಬೇಡಿಕೆಗಳನ್ನು ತುರ್ತಾಗಿ ಪರಿಹರಿಸಿ ಮುಂಬರುವ ಪರೀಕ್ಷಾ ಕಾರ್ಯಗಳು ಸುಗಮವಾಗಿ ನಡೆಸಿಕೊಂಡು ಹೋಗಲು ಅನುವು ಮಾಡಿ ಕೊಡಬೇಕೆಂದು ಕೇಳಿಕೊಳ್ಳಲಾಗಿದೆ.
ಇದರ ಜೊತೆಗೆ ಜೇಷ್ಟತೆಯ ಆಧಾರದ ಮೇಲೆ ವಿಚಕ್ಷಕದಳ ಮತ್ತು ಬಾಹ್ಯ ಉಪಅಧೀಕ್ಷಕರನ್ನು ನೇಮಿಸಲು ಹಲವಾರು ಬಾರಿ ವಿಶ್ವವಿದ್ಯಾಲಯದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಮುಂಬರುವ ಪರೀಕ್ಷೆಯಲ್ಲಿ ಜೇಷ್ಟತೆ ಆಧಾರದ ಮೇಲೆ ವಿಚಕ್ಷಕ ದಳ ಹಾಗೂ ಪರೀಕ್ಷಾ ಬಾಹ್ಯ ಉಪಅಧೀಕ್ಷಕರ ನೇಮಕಾತಿಯನ್ನು ಮಾಡಬೇಕೆಂದು ಕೋರಲಾಗಿದೆ.