
10 ದಿನದಲ್ಲಿ ಹಾಲು ಪೂರೈಕೆದಾರರಿಗೆ ಬಿಲ್ ಪಾವತಿ- ಬಾಲಚಂದ್ರ
10 ದಿನದಲ್ಲಿ ಹಾಲು ಪೂರೈಕೆದಾರರಿಗೆ ಬಿಲ್ ಪಾವತಿ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ: ಬೆಮೂಲ್ ತನ್ನ ಹಾಲು ಉತ್ಪಾದಕ ಸದಸ್ಯರ ಹೈನುಗಾರಿಕೆಯನ್ನು ಅಭಿವೃದ್ಧಿಗೊಳಿಸಿ, ಉತ್ಪಾದಿತ ಗುಣಮಟ್ಟದ ಹಾಲಿಗೆ ನಿರಂತರ ಮಾರುಕಟ್ಟೆ ದೊರಕಿಸುವ ಮೂಲಕ ತಕ್ಕ ಪ್ರತಿಫಲ ನೀಡಲಾಗುವುದು. ಅಲ್ಲದೆ, ಹಾಲು ಪೂರೈಕೆದಾರರಿಗೆ 10 ದಿನದಲ್ಲಿ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ…