ಡಿಸಿಗೆ ಸಚಿವ ಜಾರಕಿಹೊಳಿ ಕೊಟ್ಟ ಸೂಚನೆ ಏನ್ ಗೊತ್ತೆ?

ಡಿಸಿಗೆ ಸೂಚನೆ ನೀಡಿದ ಸಚಿವ ಸತೀಶಅಧಿವೇಶನಕ್ಕೂ ಮುನ್ನ ಸಮಸ್ಯೆಗಳ ಬಗ್ಗೆ ಚರ್ಚೆಬೆಳಗಾವಿ.ಡಿಸೆಂಬರನಲ್ಲಿ ನಡೆಯುವ ಅಧಿವೇಶನಕ್ಕೂ ಮುನ್ನ ಸಮಸ್ಯೆಗಳ ಬಗ್ಗೆಯೇ ಸಂಬಂಧಿಸಿದವರೊಂದಿಗೆ ಸಭೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪ್ರತಿ ಬಾರಿ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನಾಕಾರರು ತಮ್ಮ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬರುತ್ತಾರೆ, ಸಂಬಂಧಿಸಿದ ಸಚಿವರಿಂದಲೇ ಉತ್ತರ ಪಡೆಯಬೇಕೆಂಬುದು ಅವರ ಉದ್ದೇಶವಾಗಿರುತ್ತದೆ,ಆದರೆ ಈ ಬಾರಿ ಅಧಿವೇಶನ ಸುಸೂತ್ರ…

Read More

ಮಕ್ಕಳಿಂದ ನಾಡದ್ರೋಹಿ ಘೋಷಣೆ ಕೂಗಿಸಿದ MES

ಬೆಳಗಾವಿ. ತಾನೂ ಕೆಟ್ಟಿದ್ದಲ್ಲದೇ ಇತರರನ್ಬೂ ಕೆಡಿಸಿತುಎನ್ನುವಂತೆ ನಾಡ್ರದೋಹಿ ಎಂಇಎಸ್‌ನವರು ಕರಾಳ ದಿನದಲ್ಲಿ ಸಷ್ಣ ಮಕ್ಕಳಿಂದ ನಾಡದ್ರೋಹಿ ಘೋಷಣೆ ಕೂಗಿಸಿ ಅಟ್ಟಹಾಸ ಮರೆದರು. ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದೇ ಪರಿಸ್ಥಿತಿಯಲ್ಲಿಯೂ ಎಂಇಎಸ್ಗೆ ಅನುಮತಿ ಇಲ್ಲವೇ ಇಲ್ಲ ಎಂದು ಹೂಂಕರಿಸಿದ್ದ ಪೊಲೀಸ್ ಇಲಾಖೆ ನಾಡದ್ರೋಹಿಗಳ ಸಮ್ಮುಖದಲ್ಲಿ ಕೈಕಟ್ಟಿಕೊಂಡು ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿತು. ನಾಡದ್ರೋಹಿಗಳು ಪೊಲೀಸ್ ಇಲಾಖೆ ಸಮ್ಮುಖದಲ್ಲಿಯೇ ನಾಡವಿರೋಧಿ ಘೋಷಣೆ ಕೂಗುತ್ತ ಸಾಗಿ ಅಟ್ಟಹಾಸ ಮೆರೆದರು,ಬೆಳಿಗ್ಗೆ ಸಂಭಾಜಿವೃತ್ತದಿಂದ ಆರಂಭಗೊಂಡ ಕರಾಳ ದಿನದ ಮೆರವಣಿಗೆಯು ಶಹಾಪುರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕೊನೆಗೆ ಗೋವಾವೇಸ್…

Read More

ಪೊಲೀಸಗೆ ಕೇರ್ ಮಾಡದ ನಾಡದ್ರೋಹಿಗಳು

ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ನವರು ಪೊಲೀಸರ ಆದೇಶಕ್ಕೆ ಕವಡೆ ಕಾಸಿನ ಕಿಮ್ನತ್ತು ಕೊಡದೇ ಕರಾಳ ದಿನ ಆಚರಿಸಿದರು ಕರಾಳ ದಿನಕ್ಕೆ ಅನುಮತಿ ಇಲ್ಲವೇ ಇಲ್ಲ ಎನ್ನುವ ಪೊಲೀಸರೇ ಕಾನೂನು ಬಾಹಿರ ಮೆರವಣಿಗೆಗೆ ಖಡಕ್ ಬಂದೋಬಸ್ತಿ ಮಾಡಿದ್ದರು. ಅಷ್ಟೆ ಅಲ್ಲ ಕನ್ನಡ ರಾಜ್ಯೋತ್ಸವ ಕಗಕೆ ಬರುವವ ಕನ್ನಡಿಗರನ್ನು ತಡೆದ ಪೊಲೀಸರು ಕರಾಳ ದಿನಕ್ಕೆ ಕಿರಿಕ್ ಆಗದಂತೆ ನೋಡಿಕೊಂಡರು. ಅನಗೋಳ ಟಿಳಕವಾಡಿ, ಯದ್ಯಮಬಾಗ ಕಡೆಯಿಂದ ರಾಜ್ಯೋತ್ಸವ ಸಂಭ್ರಮವನ್ನು ಸವಿಯಲು ಬರುವ ಕನ್ನಡಿಗರಿಗೆ ಪೊಲೀಸರ ಅತೀಯಾದ ಬಂದೊಬಸ್ತ್ ಅಡ್ಡಿಯಾಯಿತು.

Read More
error: Content is protected !!