Headlines

ರುದ್ರೇಶ್ ಆತ್ಮಹತ್ಯೆ ತನಿಖಾಧಿಕಾರಿ ಬದಲು?

ಬೆಳಗಾವಿ. ಇಡೀ ರಾಜ್ಯವ್ಯಾಪಿ ಕೋಲಾಹಲ ಸೃಷ್ಡಿಸಿದ್ದ ಬೆಳಗಾವಿ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ರುದ್ರೇಶ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ತನಿಖಾಧಿಕಾರಿ ಈಗ ಹಠಾತ್ ಬದಲಾಗಿದ್ದಾರೆ. ಖಡೇಬಜಾರ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿತ್ತು.‌ಸಹಜವಾಗಿ ಇದನ್ನು ಅಲ್ಲಿನ ಸಿಪಿಐ ಶ್ರೀಶೈಲ ಗಾಬಿ ತನಿಖೆ ನಡೆಸುತ್ತಿದ್ದರು. ಆದರೆ ಪ್ರಕರಣದ ಗಂಭೀರತೆಯನ್ನು ಮನಗಂಡ ಪೊಲೀಸ್ ಆಯುಕ್ತರು ತನಿಖೆ ಹೊಣೆಯನ್ನು ಎಸಿಪಿ ಶೇಖರ್ ಅವರಿಗೆ ವಹಿಸಿದ್ದಾರೆ. ಈ ಆತ್ಮಹತ್ಯೆ ಪ್ರಕರಣದಲ್ಲಿ ಗೆಜೆಟೆಡ್ ಅದಿಕಾರಿಯಾಗಿರುವ ತಹಶೀಲ್ದಾರ ಬಸವರಾಜ ನಾಗರಾಳ, ರಾಜ್ಯದ ಪ್ರಭಾವಿ ಸಚಿವೆ…

Read More

ಯಳ್ಳೂರು -ಕಾಮಗಾರಿ ಲೂಟಿ- ದೂರು

ಬೆಳಗಾವಿಯಳ್ಳೂರು ಗ್ರಾಪಂನ ಪ್ರಸಕ್ತ ಸಾಲಿನಲ್ಲಿ 29 ಕಾಮಗಾರಿಯನ್ನು ಮಾಡದೆ ಸುಮಾರು 54 ಲಕ್ಷ 29 ಸಾವಿರ ರೂ. ಹಣವನ್ನು ಲೂಟಿ ಮಾಡಲು ಇಲ್ಲಿನ ಗ್ರಾಪಂ ಅಧ್ಯಕ್ಷೆ ಅಕ್ರಮವಾಗಿ ಠರಾವ್ ಪಾಸ್ ಮಾಡಿ ಆದೇಶ ಮಾಡಿರುವುದು ಸರಕಾರದ ಹಣ ಕೊಳ್ಳೆ ಹೊಡೆಯುವ ಯತ್ನ ಮಾಡಿದ್ದಾರೆ ಎಂದು ನ್ಯಾಯವಾದಿ ಸುರೇಂದ್ರ ಉಗಾರೆ ಆರೋಪಿಸಿದರು. ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೊರೊನಾ ಸಂದರ್ಭದಲ್ಲಿ 29 ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಯಳ್ಳೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಮಾಸೇಕರ ತನ್ನ ಪತಿಯ ಹೆಸರಿನಲ್ಲಿ ಗುತ್ತಿಗೆದಾರ…

Read More

ಆತ್ಮಹತ್ಯೆ ಕೇಸ್- ಸಂಕಷ್ಟ ಗ್ಯಾರಂಟಿ..!?

ತನಿಖೆ ನಡೆದರೆ ಎಲ್ಲರಿಗೂ ಸಂಕಷ್ಟ ಗ್ಯಾರಂಟಿ. ಮಾಲೀಕರಿಲ್ಲದ ಮತ್ತು ಸರ್ಕಾರಿ ಜಮೀನು ಮೇಲೆ ಕಣ್ಣು ಬಿದ್ದಿತ್ತಾ? ಅದಕ್ಕೆ ಸಹಕರಿಸದ್ದಕ್ಕಾಗಿ ರುದ್ರೇಶ ಎತ್ತಂಗಡಿ ಮಾಡಲಾಯಿತಾ? ತಹಶೀಲ್ದಾರ ಅಷ್ಟೇ ಅಲ್ಲ ಎಲ್ಲ ಸರ್ಕಾರಿ ಕಚೇರಿ ಮೇಲೆ ಡಿಸಿ ಹದ್ದಿನ ಕಣ್ಣು. ರುದ್ರೇಶ ಆತ್ಮಹತ್ಯೆ.. ಎಸಿಯಿಂದ ತನಿಖೆಗೆ ಅಸ್ತು. ಬೆಳಗಾವಿ.ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ನಡೆದ ದ್ವಿತೀಯ ದರ್ಜೆ ಸಹಾಯಕ ) ರುದ್ರೇಶ್ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ ತನಿಖೆಯ ಸಮಯದಲ್ಲಿ ಹೆಚ್ಚಿನ ಅನಿರೀಕ್ಷಿತ ಬೆಳವಣಿಗೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.ಪ್ರಕರಣದ…

Read More

ರುದ್ರೇಶ ಆತ್ಮಹತ್ಯೆ ಬೆಳಗಾವಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

ಬೆಳಗಾವಿ.ಸರಕಾರಿ ನೌಕರನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ನಾಳೆ ದಿ 7 ರಂದು ಬೆಳಿಗ್ಗೆ 11 ಕ್ಕೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ರುದ್ರೇಶ ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದಶರ್ಿ ಪಿ. ರಾಜೀವ್, ಶಾಸಕರು, ಸಂಸದರು, ಜಿಲ್ಲಾಧ್ಯಕ್ಷರು, ಪಕ್ಷದ ಎಲ್ಲ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ,

Read More

ಕುಡಚಿ ರೈಲು ನಿಲ್ದಾಣದಲ್ಲಿ ʻವಂದೇ ಭಾರತ ರೈಲುʼ ನಿಲುಗಡೆಗೆ ಸಂಸದೆ ಪ್ರಿಯಾಂಕಾ ಮನವಿ

ಕುಡಚಿ ರೈಲು ನಿಲ್ದಾಣದಲ್ಲಿ ʻವಂದೇ ಭಾರತ ರೈಲುʼ ನಿಲುಗಡೆಗೆ ಸಂಸದೆ ಪ್ರಿಯಾಂಕಾ ಮನವಿ ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲನ್ನು (ನಂ.20669) ನಿಲುಗಡೆ ಮಾಡಬೇಕೆಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಮನವಿ ರವಾನಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ ಅವರು, ಹುಬ್ಭಳ್ಳಿಯಿಂದ ಪುಣೆಗೆ ತೆರಳುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (ನಂ.20669) ರಾಯಬಾಗ ತಾಲೂಕು ಕುಡಚಿ…

Read More

ಕರ್ಮ RETURNS..! ಅಂದ್ರೆ ಇದೇ ಅಲ್ಲವಾ?

ಇದನ್ನು ಬಿಡಿ .ಸಚಿವೆ ಹೆಬ್ಬಾಳಕರ ಅವರ ಹಿಡಿತದಲ್ಲಿರುವ ಇಲಾಖೆಯಲ್ಲಿ ಎಲ್ಲವೂ ಕಾನೂನು ಪ್ರಕಾರವಾಗಿ ನಡೆಯುತ್ತಿವೆಯೇ ಎಂದು ಕೇಳಿದರೆ, ಕರ್ಮಕಾಂಡದ ನಾಲ್ಕುನೂರಕ್ಕೂ ಹೆಚ್ಚು ದಾಖಲೆಗಳು ಮುಂದೆ ಬಂದು ಬೀಳುತ್ತವೆ. ಅವು ಅಧಿಕೃತ ವಾದ ದಾಖಲೆಗಳು‌. ಹೀಗಾಗಿ ತಹಶೀಲ್ದಾರ ಕಚೇರಿಯ ರುದ್ರೇಶ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕಾದ ಅನುವಾರ್ಯತೆ ಇದೆ. ಅದು ಆದರೆ ಮಾತ್ರ ರುದ್ರೇಶನ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇಲ್ಲದಿದ್ದರೆ.ಇಂದು ರುದ್ರೇಶ..ನಾಳೆ.. ಎನ್ನುವ ಆತಂಕ ಇದ್ದೇ ಇದೆ.

Read More

ಆತ್ಮಹತ್ಯೆ- ಸಚಿವೆ ಪಿಎ ಮೇಲೂ ಕೇಸ್.!

ಬೆಳಗಾವಿ. ತಹಶೀಲ್ದಾರ ಕಚೇರಿ ಎಸ್ ಡಿಸಿ ರುದ್ರೇಶ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಹೆಬ್ಬಾ ಳಕರ ಆಪ್ತ ಎನ್ನಲಾದ ಸೋಮು ದೊಡವಾಡ ಸೇರಿದಂತೆ ಮೂವರ ಮೇಲೆ ಕೇಸ್ ದಾಖಲಾಗಿದೆ. ತಹಶೀಲ್ದಾರ ನಾಗರಾಳ ಮತ್ತು ಅಶೋಕ ಕಬ್ಬಲಿಗಾರ ವಿರುದ್ಧ ಕೇಸ್ ದಾಖಲಾಗಿದೆ. ಖಡೇಬಜಾರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Read More

ಆತ್ಮಹತ್ಯೆಗೆ ಆ ಸಚಿವರ ಆಪ್ತ ಕಾರಣನಾ?

ಬೆಳಗಾವಿಬೆಳಗಾವಿ ತಹಶಿಲ್ದಾರ ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ರದ್ರಣ್ಣ ಯಡವಣ್ಣವರ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತಹಶಿಲ್ದಾರರ ಕಚೇರಿಯಲ್ಲಿಯೇ ನೇಣು‌ ಬಿಗುದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಬ್ಬಂದಿಗಳು ‌ದೂರಿದ್ದಾರೆ. ಈ ಆತ್ಮಹತ್ಯೆ ಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ಆದರೆ ಒಬ್ಬ ಪ್ರಭಾವಿ ಸಚಿವರ ಆಪ್ರ ಎಂದು ಕರೆಯಿಸಿಕೊಳ್ಳುವ ಸೋ… ಎಂಬುವರೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.ರುದ್ರಣ್ಣ ಅವರಿಗೆ ಬೆಳಗಾವಿ ತಹಶಿಲ್ದಾರರ ಕಚೇರಿಯಿಂದ ಸವದತ್ತಿ ಯಲ್ಲಮ್ಮನ ದೇವಸ್ಥಾನದ…

Read More

ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಸಚಿವ ಎಚ್.ಕೆ. ಭೇಟಿ ನ.5 ರಂದು

ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ: ಸಚಿವ ಎಚ್.ಕೆ.ಪಾಟೀಲ ಭೇಟಿ ನ.5 ರಂದು ಬೆಳಗಾವಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಿತಿಯ ಅಧ್ಯಕ್ಷರೂ ಆಗಿರುವ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ ಅವರು ಮಂಗಳವಾರ(ನ.5) ಬೆಳಗಾವಿಗೆ ಭೇಟಿ ನೀಡಿ, ಶತಮಾನೋತ್ಸವ ಆಚರಣೆ ಕುರಿತು ಸಭೆಯನ್ನು ನಡೆಸಲಿದ್ದಾರೆ. 1924 ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಅಧಿವೇಶನಕ್ಕೆ ಸಾಕ್ಷಿಯಾದ ಸ್ಥಳಗಳಿಗೆ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಎಚ್‌.ಕೆ.ಪಾಟೀಲ, ಗೌರವ…

Read More

ಪಿಎಂಜಿಎಸ್ ವೈ ರಸ್ತೆ ಪರಿಶೀಲಿಸಿದ ಜಿಪಂ ಸಿಇಒ ರಾಹುಲ್ ಶಿಂಧೆ

ಬೆಳಗಾವಿ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ (ಪಿಎಂಜಿಎಸ್ ವೈ) ನಿರ್ಮಿಸಲಾಗುತ್ತಿರುವ ರಸ್ತೆಗೆ ಅಡೆತಡೆ ಮಾಡದೇ ಸ್ಥಳೀಯವಾಗಿ ರೈತರು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಸಲಹೆ ನೀಡಿದರು. ಹುಕ್ಕೇರಿ ತಾಲೂಕಿನ ಉ.ಖಾನಾಪುರ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಅವರು ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ ರೈತರೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಪಿಎಂಜಿಎಸ್ ವೈ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಎಲ್ಲ ರೈತರು ಸಹಕಾರ ನೀಡಬೇಕು. ಅಂದಾಗ ಮಾತ್ರ ಉತ್ತಮ ರಸ್ತೆ…

Read More
error: Content is protected !!