ಧಿಕ್ಕಾರ ಅಂದವರಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಸಿಪಿ ಶೇಖರ

ಬೆಳಗಾವಿ.ಛತ್ರಪತಿ ಸಂಭಾಜಿ‌ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಆಗಮಿಸಿದ್ದರಿಗೆ ಧಿಕ್ಕಾರ ಘೋಷಣೆ ಕೂಗು್ತಿದ್ದವರಿಗೆ ಎಸಿಪಿ ಶೇಖರಪ್ಪ ಖಡಕ್ ಎಚ್ಚರಿಕೆ ಕೊಟ್ಡು ಕಳಿಸಿದರು. ಶಾಸಕ ಅಭಯ ಪಾಟೀಲರು ಸಿದ್ಧತೆ ಪರಿಶೀಲನೆಗೆ ಆಗಮಿಸಿ ವಾಪಸ್ಸು ಹೋಗುವ ಸಂದರ್ಭದಲ್ಲಿ ಭಜಂತ್ರಿ ಗಲ್ಲಿಯ ಬಳಿ ನಿಂತಿದ್ದ ಕೆಲವರು ಧಿಕ್ಕಾರ ಘೋಷಣೆ ಕೂಗಿದರು. ಅಷ್ಟೆ ಅಲ್ಲ ಕುಂಭ ತೆಗೆದುಕೊಂಡು ಹೋಗುತ್ತಿದ್ದವರಿಗೂ ಘೋಷಣೆ ಕೂಗುತ್ತಿದ್ದರು. ಇದನ್ನು ಗಮನಿಸಿದ ಎಸಿಪಿ ಶೇಖರಪ್ಪ ಅವರು ಘೋಷಣೆ ಕೂಗುತ್ತಿದ್ದವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ವಾಪಸ್ಸು ಕಳಿಸಿದರು. ನಂತರ ಪೊಲೀಸ್ ಆಯುಕ್ತ ಇಡಾ…

Read More

ಸಂಭಾಜಿ ಮೂರ್ತಿ ಅನಾವರಣ-ಗೆದ್ದ ಶಾಸಕರ ತಂಡ

ಬೆಳಗಾವಿ.ಕೊನೆಗೂ ಅನಗೋಳ‌ ನಾಕಾ ಬಳಿ ಪ್ರತಿಷ್ಠಾಪುಸಲಾಗಿದ್ದ ಸಂಭಾಜಿ‌ ಮಹಾರಾಜರ ಪ್ರತಿಮೆ ಅನಾವರಣ ಪೊಲೀಸ್ ಬಂದೋಬಸ್ತಿ‌ ನಡುವೆಯೇ ನಡೆಯಿತು. ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ, ನಗರಸೇವಕರಾದ ವಾಣಿ ಜೋಶಿ, ಅಭಿಜಿತ್ ಜವಳಕರ, ನಿತಿನ್ ಜಾಧವ ಗಿರೀಶ ಧೋಂಗಡಿ ಮುಂತಾದವರ ಸಮ್ಮುಖದಲ್ಲಿ ಮೂರ್ತಿ ಮೇಲಿನ ಬಟ್ಟೆ ತೆರವು ಮಾಡಲಾಯಿತು. ಆರಂಭದಲ್ಲಿ ಮೇಯರ್ ಸೇರಿದಂತೆ ಮುಂತಾದವರು ಪಾಲಿಕೆ ಸಿಬ್ಬಂದಿ ಕಡೆಯಿಂದ ಮಧ್ಯದಲ್ಲಿ ಹಾಕಲಾಗಿದ್ದ ತಗಡು ಸೇರಿದಂತೆ ಸ್ವಚ್ಚತೆ ಮಾಡಬೇಕು ಎಂದು ಸೂಚನೆ ನೀಡಿದರು. ಆದರೆ ಅಲ್ಲಿ ಹಾಜರಿದ್ದ ಪಾಲಿಕೆ…

Read More

ಸಂಭಾಜಿ ಮಹಾರಾಜರ ಪ್ರತಿಮೆ ವಿವಾದ- ಪೂಜಾ+ ಬಂದೋಬಸ್ತ್

ಬೆಳಗಾವಿ. ಅನಗೋಳ ನಾಕಾದಲ್ಲಿ ಸಂಭಾಜಿ‌ ಮಹಾರಾಜರ ಪ್ರತಿಮೆ ಅನಾವರಣದ ಸಿದ್ಧತೆ ಒಂದು ಕಡೆ ನಡೆದಿದ್ದರೆ, ಮತ್ತೊಂದು ಕಡೆಗೆ ಪೊಲೀಸ್ ಬಂದೋಬಸ್ತ್ ಲೆಕ್ಕಾಚಾರಗಳು ಜೋರಾಗಿ‌ ನಡೆದಿವೆ ಹೀಗಾಗಿ ಅನಗೋಳ ಪರಿಸರದ ವಾರಾವರಣ ಒಂದು ರೀತಿಯಲ್ಲಿ ಬೂದಿ ಮುಚ್ಚಿದ ಕೆಂಡವಾಗಿದೆ. ಯಾವುದೇ ಪರಿಸ್ಥಿತಿಯಲ್ಲಿ ಮೂರ್ತಿ ಅನಾವರಣ ಮಾಡೇ ತೀರಬೇಕು ಎನ್ನುವ ಉದ್ದೇಶದಿಂದ ಅಲ್ಲಿ ಕೆಲವರು ಪೂಜಾ ಸಿದ್ಧತೆಯನ್ನು ಮಾಡುತ್ತಿದ್ದಾರೆ. ಆದರೆ ಮತ್ತೊಂದು ಕಡೆಗೆ ಕ್ಷಣ ಕ್ಷಣಕ್ಕೂ ಪೊಲೀಸ್ ಬಂದೋಬಸ್ತಿಯ ಲೆಕ್ಕಾಚಾರಗಳು ಬದಲಾಗುತ್ತಿವೆ. ಈಗಾಗಲೇ ಸ್ಥಳದಲ್ಲಿ ನಾಲ್ಕೈದು ಜನ ಪೊಲೀಸ್ ಇನ್ಸಪೆಕ್ಟರಗಳು…

Read More

ಅನುಮತಿ‌ ಇಲ್ಲ -ಡಿಸಿ ಕಾರ್ಯಕ್ರಮ ನಿಲ್ಲಲ್ಲ- ಅಭಯ

ಸಂಭಾಜಿ ಮೂರ್ತಿ ಅನಾವರಣ- ತಾರಕಕ್ಕೇರಿದ ಗೊಂದಲ. ಮೂರ್ತಿ ಅನಾವರಣ ನಿಲ್ಲಲ್ಲ ಎಂದ ಅಭಯ ಯಾರೂ ಮನೆಯಿಂದ ಹೊರಬರಬೇಡಿ ಎಂದ ಡಿಸಿ ಶುರುವಾಯಿತು ಚಲೋ ಅನಗೋಳ. ಬೆಳಗಾವಿ.ನಾಳೆ ದಿನಾಂಕ 5 ರಂದು ನಿಗದಿಯಾಗಿದ್ದಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅನುಮತಿ‌ ನಿರಾಕರಿಸಿದ್ದಾರೆಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈಗ ಜಾಗೋ ಹಿಂದು ಜಾಗೋ ಸೇರಿದಂತೆ ಚಲೋ ಅನಗೋಳ ಅಭಿಯಾನ ಶುರುವಾಗಿ ಬಿಟ್ಟಿದೆ. ಅನಗೋಳ ನಾಕಾದಲ್ಲಿ ಮೂರ್ತಿ ಕೂಡಿಸಿದ ಸ್ಥಳಕ್ಕೆ ಭೆಟ್ಟಿ ನೀಡಿದ ಸಂದರ್ಶನದಲ್ಲಿ ಜಿಲ್ಲಾಧಿಕಾರಿ‌ ಮೊಹಮ್ಮದ…

Read More

ಮಹಾ ಸಿಎಂಗೆ ಆಹ್ವಾನ ಕೊಟ್ಟ ಹಾರನಹಳ್ಳಿ

ಮುಂಬಯಿ. ಬೆಂಗಳೂರಿನಲ್ಲಿ ಇದೇ 18 ಮತ್ತು‌ 19 ರಂದು ಎರಡು ದಿನಗಳ ಕಾಲ ನಡೆಯಲಿರುವ ಆಖಿಲ ಕರ್ನಾಟಕ ಬ್ರಾಹ್ಮಣ ಸಮಾವೇಶಕ್ಕೆ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿಯವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿದ್ದತೆಯಲ್ಲಿ ತೊಡಗಿದ್ದಾರೆ. ಈಗಾಗಲೇ ದೆಹಲಿಗೆ ತೆರಳಿ ಕೇಂದ್ರ ಸಚಿವ ನಿತಿನ್ ಗಡ್ಕರಿ, ರಾಜನಾಥ ಸಿಂಗ್, ಪ್ರಲ್ಹಾದ ಜೋಶಿ, ಬಿ.ಎಲ್. ಸಂತೋಷ ಸೇರಿದಂತೆ ಇನ್ನೂ ಹಲವಾರು ಗಣ್ಯಾತಿ ಗಣ್ಯರಿಗೆ ಖುದ್ದು ಭೆಟ್ಡಿಯಾಗಿ ಆಮಂತ್ರಣ ಕೊಟ್ಡು ಬಂದಿದ್ದಾರೆ. ಇಂದು ಬೆಳಿಗ್ಗೆ ಮುಂಬಯಿಗೆ…

Read More

ಸಿದ್ದಲಿಂಗ ಕೈವಲ್ಯಾಶ್ರಮದ ಜಾತ್ರಾ ಮಹೋತ್ಸವ

ಮೂಡಲಗಿ: ಘಟಪ್ರಭೆಯ ಪುಣ್ಯ ನದಿ ತೀರದಲ್ಲಿ ಶೋಭಿಸುತ್ತಿರುವ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ ನಿಜಗುಣ ದೇವ ಮಹಾಸ್ವಾಮಿಗಳು ಸಿದ್ದಲಿಂಗ ಕೈವಲ್ಯಾಶ್ರಮ ನಿರ್ಮಿಸಿ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕøತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮದೇಯಾದ ವಿಶಿಷ್ಠ ಸೇವೆಯನ್ನು ಸಲ್ಲಿಸುವ ಮೂಲಕ ಈ ಭಾಗದಲ್ಲಿ ಅಧ್ಯಾತ್ಮಿಕ ಸಂಘಟನೆಯನ್ನು ಕೈಗೊಂಡು ಹುಣಶ್ಯಾಳ ಪಿ.ಜಿಯನ್ನು ಸುಕ್ಷೇತ್ರವನ್ನಾಗಿಸಿದ್ದಾರೆಂದು ಶಾಸಕ ಮತ್ತು ಜಿಲ್ಲಾ ಹಾಲು ಒಕ್ಕೂಟ(ಬೆಮ್ಯುಲ್)ದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಿಜಗುಣ ದೇವರ ಸೇವಾ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಶುಕ್ರವಾರದಂದು ತಾಲೂಕಿನ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿ ನಡೆಯುತ್ತಿರುವ…

Read More

ಕಾರ್ಯಕ್ರಮ ಮುಂದೂಡಿ.. ಮೇಯರ್ ಗೆ ಆಯುಕ್ತರ ಪತ್ರ

ಬೆಳಗಾವಿ. ಗಡಿನಾಡ ಬೆಳಗಾವಿ ನಗರದಲ್ಲಿ ತೀವೃ ಚರ್ಚೆಗೆ ಗ್ರಾಸವಾಗಿರುವ ಛತ್ರಪತಿ ಸಂಭಾಜಿ‌ ಮಹಾರಾಜರ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಮುಂದೂಡಬೇಕೆಂದು ಪಾಲಿಕೆ ಆಯುಕ್ತರು ಮೇಯರ್ ಗೆ ಪತ್ರವನ್ಬು ಬರೆದಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರುಈ ವಿಷಯ ತಿಳಿಸಿದರು. ಈ‌ ಮೂರ್ತಿ ಸ್ಥಾಪನೆಗೆ ಪಾಲಿಕೆ ಅನುದಾನ ನೀಡಿದೆ. ಅದನ್ಬು ಇನ್ನಷ್ಟು ಅದ್ದೂರಿ ಮಾಡಬೇಕು ಎನ್ನುವುದು ಆ ಭಾಗದ ಜನರ ಆಶಯ. ಮೇಲಾಗಿ ಈ ವಿಷಯದಲ್ಲಿ ಕೋರ್ಟನ ನಿರ್ದೇಶನದ‌ ಜೊತೆಗೆ ಶಿಷ್ಟಾಚಾರವನ್ನು ಪಾಲಿಸಬೇಕು. ಆದ್ದರಿಂದ ಅದನ್ನು ಕೆಲ…

Read More

ಡಿಕೆಶಿಗೆ ಟಕ್ಕರ್ ಕೊಡಲು ಸತೀಶ ರಣತಂತ್ರ

ಡಿಸಿಸಿ ಅಧ್ಯಕ್ಷ ಗಾದಿಗೆ ಗುದ್ದಾಟಬೆಳಗಾವಿ ರಾಜಕಾರಣ `ಸರ್ಕಾರಕ್ಕೆ ಕಂಟಕ ? ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಎಂಟ್ರಿ.ಸತೀಶ್ ಉಗ್ರ. ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಸತೀಶ್ ಕೋಟೆ ಮುರಿಯಲು ಹೆಬ್ಬಾಳಕರ ಮೂಲಕ ತಂತ್ರಗಾರಿಕೆ. ಸಿಟಿ ರವಿ ಪ್ರಕರಣದಲ್ಲೂ ಸತೀಶ್ ಮಾತು ಕೇಳದೇ ಯಡವಟ್ಟು ಮಾಡಿಕೊಂಡ ಪೊಲೀಸರು. ಬೆಳಗಾವಿ. ಬೆಳಗಾವಿ ಜಿಲ್ಲೆಯವ ಕಾಂಗ್ರೆಸ್ ರಾಜಕಾರಣದಲ್ಲಿ ನಡೆದಿರುವ ಬೆಳವಣಿಗೆ ಎಲ್ಲರಿಗೂ ಗೊತ್ತಿಲ್ಲ ಎಂದಿಲ್ಲ. ಸಧ್ಯ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸಚಿವರ ನಡುವೆ ಗುದಮುರಿಗೆ ನಡೆದಿದೆ. ಮೂಲಗಳ ಪ್ರಕಾರ…

Read More

ಪತ್ರಕರ್ತ ನೌಶಾದ್ ಸೇರಿ 14 ಜನರಿಗೆ ಪ್ರಶಸ್ತಿ

2017 ರಿಂದ 2023 ಅವಧಿಯ ಅಭಿವೃದ್ಧಿ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳು ಪ್ರಕಟ ಬೆಂಗಳೂರುಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರ ಕ್ಯಾಲೆಂಡರ್ ವರ್ಷಗಳ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಪ್ರಶಸ್ತಿಗಳನ್ನು ಸರ್ಕಾರವು 2001ನೇ ಸಾಲಿನಿಂದ…

Read More
error: Content is protected !!