Headlines

ಸತ್ಯಾತ್ಮತೀರ್ಥರಿಂದ. ಅನುಗ್ರಹ ಸಂದೇಶ

Oplus_131104

ಬೆಳಗಾವಿ:

ಇಲ್ಲಿನ ಮಾಳಮಾರುತಿ ಬಡಾವಣೆಯಲ್ಲಿ ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ
ರಾಘವೇಂದ್ರ ಸ್ವಾಮಿಗಳ ಶ್ರೀಮದ್ ಟೀಕಾಕೃತ್ಪಾದರ ಮತ್ತು ಶ್ರೀ ರಾಮಾಂಜನೇಯರ
ಸನ್ನಿಧಾನದ ೧೧ನೇ ವರ್ಧಂತಿ ಮಹೋತ್ಸವ ಹಾಗೂ ಜ್ಞಾನಸತ್ರ ಕಾರ್ಯಕ್ರಮಗಳು ನಡೆದವು.

Oplus_131072

ಮುಂಜಾನೆ ೭.೩೦ರಿಂದ ೮.೩೦ರ ತನಕ ಶ್ರೀಪಾದಂಗಳವರ ಪಾದಪೂಜೆ,೯ರಿಂದ ೧೦.೩೦ರ ವರೆಗೆ ತಪ್ತ ಮುದ್ರಾಧಾರಣೆ ನಂತರ ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಿತು.

Oplus_131072


ಸಂಸ್ಥಾನ ಪೂಜೆ, ಮಧ್ಯಾಹ್ನ ೧.೩೦ಕ್ಕೆ ತೀರ್ಥ ಪ್ರಸಾದ ಮತ್ತು ಫಲ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಅಧಿಕಾರಿ ವಿ.ಎನ್.ಪಾಟೀಲ, ಉದ್ಯಮಿ ರಾಜೇಂದ್ರ ಪಾಟೀಲ ಸೇರಿದಂತೆ ಮತ್ತಿತರರು ಹಾಜರಿದ್ದರು..

Leave a Reply

Your email address will not be published. Required fields are marked *

error: Content is protected !!