Headlines

ಕತ್ತಿ ಕೋಟೆಯಲ್ಲಿ ಜಾರಕಿಹೊಳಿ ವಿಜಯದ ಘರ್ಜನೆ

“ಕತ್ತಿ ಭದ್ರ ಕೋಟೆ ಕುಸಿತ – ಡಿಸಿಸಿ ನೂ ಹೋಯಿತು.

ಈಗ ಹುಕ್ಕೇರಿ ಕರೆಂಟೂ ಕೈ ಕೊಟ್ಟಿತು.

ಇನ್ನು ಮುಂದೆ ನಿರೀಕ್ಷಿಸಿ.

ಒಂದಾದ ಜಾರಕಿಹೊಳಿ, ಜೊಲ್ಲೆ ಬಣ. ಮುಂಬುರುವ ವಿಧಾನ ಸಭೆಗೆ ಯಾರು? ಶುರುವಾದ ಲೆಕ್ಕಾಚಾರ..

“ಹುಕ್ಕೇರಿಯ ಹೊಚ್ಚ ಬೆಳಕಿನಲ್ಲಿ ಈಗ ರಾಜಕೀಯದ ಹೊಸ ಭಾವಚಿತ್ರವೊಂದು ಅಲೆಯುತ್ತಿದೆ. ಕತ್ತಿ ಕುಟುಂಬ ಕಟ್ಟಿದ ಭದ್ರ ಕೋಟೆಯ ಮೇಲೆ ಜಾರಕಿಹೊಳಿ ಬಣವೆದ್ದು ಹಾರಿಸಿದ ವಿಜಯಧ್ವಜ – ಇದು ಸಾಮಾನ್ಯ ಗೆಲುವಲ್ಲ, ರಾಜಕೀಯ ಪರ್ವತದ ಶೃಂಗಾರೋಹಣ!”

. “ನಮ್ಮ ಬೆನ್ನೆಲುಬಿಗೆ ಧೈರ್ಯ ಕೊಡುವ ನಾಯಕನು ಬಂದಿದ್ದಾನೆ!” ಎಂಬಂತಿತ್ತು ಜನರ ನೋಟ.

ಕತ್ತಿ ಕುಟುಂಬ – ಶಕ್ತಿ, ಐಶ್ವರ್ಯ ಮತ್ತು ಪ್ರಾಬಲ್ಯದ ಪ್ರತೀಕ! ಆದರೆ ಈ ಚುನಾವಣೆ ಅದಕ್ಕೆ ಸಮಾಧಿಯ ಶಿಲಾಶಾಸನವಾಯಿತು. ಭೂಗರ್ಭದಂತಹ ಸ್ಥಿರವಿರುವ ಪ್ರಭಾವ, ಜನಪರಿಧಿಯಿಂದ ಹೊರಹೊಮ್ಮಿದ ಜಾರಕಿಹೋಳಿಯ ಕಾರ್ಯಪಟುತೆಯ ಹನಿಗಳ ಮುಂದೆ ಕರಗಿದ ತುಪ್ಪವಾಯಿತು.

ಈ ಜಯ, ಸಹಕಾರ ಸಂಘದ ಗಡಿಯಾಚೆಯದೇ ಹೊಸ ಚಾಪ್ಟರ್ ಓಪನ್ ಮಾಡುತ್ತಿದೆ –

ಜಾರಕಿಹೊಳಿ ಎಂದರೆ ಕೇವಲ ನಾಯಕನ ಹೆಸರು ಅಲ್ಲ, ಅದು ಹೊಸ ಭವಿಷ್ಯಕ್ಕೆ ಕರೆದ ಹೆಸರು.”

ಹುಕ್ಕೇರಿಯಲ್ಲಿ ಈಗ ಮಾತು ಕೇಳುತ್ತಿರುವದು – ‘ಕತ್ತಿಯ ಕಾಲ ಮುಗಿದ ಅಧ್ಯಾಯ. ಇನ್ನೇನಿದ್ದರೂ ಜಾರಕಿಹೊಳಿಯ ಉದಯೋನ್ಮುಖ ಸೂರ್ಯೋದಯ!’”

, ಈ ಚುನಾವಣೆಯ ರಾಜಕೀಯ ಗಾಳಿಯು ಹುಕ್ಕೇರಿಯ ಬವಿತವನ್ನೇ ಬದಲಾಯಿಸಲಿದೆ. ಮುಂದಿನ ಬೆಳವಣಿಗೆಗಳು ಈಗ ಎಲ್ಲರ ಕಣ್ಣಲ್ಲಿವೆ – ಜಾರಕಿಹೋಳಿಯ ನೇತೃತ್ವದಲ್ಲೇ ರಾಜಕೀಯ ನವ ಚರಿತ್ರೆ ಬರೆಯಲಾಗುತ್ತಿದೆ!


Leave a Reply

Your email address will not be published. Required fields are marked *

error: Content is protected !!