Headlines

ಇಂದು ಪಾಲಿಕೆ ಮುಖ್ಯ‌ಕಚೇರಿಗೆ ಲೋಕಾ ದಾಳಿ!?

ಬೆಳಗಾವಿ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ನ್ಯಾಯಮೂರ್ತಿಗಳು ಇಂದು ಬೆಳಿಗ್ಗೆ ೧೦.೩೦ ರ ಸುಮಾರಿಗೆ ಪಾಲಿಕೆಯ ಲೋಕಾಯುಕ್ತ ಕಚೇರಿಗೆ ಭೆಟ್ಟಿ ನೀಡಲಿದ್ದಾರೆ.

ಕಳೆದ ದಿನ ಪಾಲಿಕೆಯ ಅಶೋಕ‌ನಗರದ ಕಚೇರಿಗೆ ಭೆಟ್ಟಿ ನೀಡಿ ಕೆಲ ಮಹತ್ವದ ದಾಖಲೆ ತೆಗೆದುಕೊಂಡಿದ್ದರು.

ಇಂದು ಕೆಲವೇ ನಿಮಿಷಗಳಲ್ಲಿ ಪಾಲಿಕೆಯ ಮುಖ್ಯ ಕಚೇರಿಗೆ ಭೆಟ್ಟಿ ನೀಡಲಿದ್ದಾರೆ. ಬಹುಶಃ ಪಾಲಿಕೆಯಲ್ಲಿ ಭ್ರಷ್ಟ ಶಾಖೆ ಎಂದೇ ಹೆಸರಾದ ಕಂದಾಯ ಶಾಖೆಯ ದಾಖಲೆಗಳನ್ನು ಲೋಕಾಯುಕ್ತರು ಜಾಲಾಡುವ ಸಾಧ್ಯತೆಗಳವೆ.

ಈ ಹಿಂದೆ ಇದೇ ಶಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ತೆರಿಗೆ ವಂಚನೆ ಪ್ರಕರಣದ ಮೇಲೆ ಲೋಕಾಯುಕ್ತ ನ್ಯಾಯಮೂರ್ತಿಗಳು ಬೆಳಕು ಚೆಲ್ಲುವ ನಿರೀಕ್ಷೆ ಇದೆ.

ಈಗಾಗಲೇ ಈ ಪ್ರಸರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಕೌನ್ಸಿಲ್ ಲೋಕಾಯುಕ್ತ ತನಿಖೆಗೆ ಠರಾವ್ ಮಾಡಿತ್ತು. ಅದರ ಬೆನ್ನ ಹಿಂದೆಯೇ ಪಾಲಿಕೆ ಆಯುಕ್ತರು ತೆರಿಗೆ ವಂಚನೆ ಸಂಬಂಧ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ಪತ್ರ ಬರೆದಿದ್ದನ್ನು ಇಲ್ಲಿ ಸ್ಮರಿಸಬಹುದು.

Leave a Reply

Your email address will not be published. Required fields are marked *

error: Content is protected !!