Headlines

ಹುಕ್ಕೇರಿ ತಾಲೂಕು ಮತಕ್ಷೇತ್ರದ ಚುನಾವಣೆ ಮುಂದೂಡಿಕೆ

ಬೆಳಗಾವಿ,ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಆಡಳಿತ ಮಂಡಳಿ ಸಾಮಾನ್ಯ ಚುನಾವಣೆಯನ್ನು ದಿನಾಂಕ 19 ಅಕ್ಟೋಬರ್ 2025 ರಂದು ನಡೆಸಲು ನಿಗದಿಯಾಗಿದ್ದರೂ, ಹುಕ್ಕೇರಿ ತಾಲೂಕು ವ್ಯಾಪ್ತಿಯ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳ ಪ್ರತಿನಿಧಿ ಮತಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.ಕರ್ನಾಟಕ ಉಚ್ಚ ನ್ಯಾಯಾಲಯದ ಧಾರವಾಡ ಪೀಠದಲ್ಲಿ ದಾಖಲಾದ ರಿಟ್ ಅರ್ಜಿ ಸಂಖ್ಯೆ 107692/2025 ಪ್ರಕರಣದಲ್ಲಿ, ನ್ಯಾಯಾಲಯವು ಅಕ್ಟೋಬರ್ 17, 2025 ರಂದು ಮಧ್ಯಂತರ ಆದೇಶ ಹೊರಡಿಸಿದ್ದು, ಅದರ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ…

Read More

ಮಾಹಿತಿ ಆಯೋಗದ ರಾಜ್ಯ ಆಯುಕ್ತರಾಗಿ ಹಿರಿಯ ಪತ್ರಕರ್ತ ವಾಳ್ವೇಕರ

ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾಗಿ ಹಿರಿಯ ಪತ್ರಕರ್ತ, ಪ್ರಸ್ತುತ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮಹೇಶ ವಾಳ್ವೇಕರ ನೇಮಕಗೊಂಡಿದ್ದಾರೆ. ಕಳೆದ ೨೪ ವರ್ಷಗಳಿಂದ ವಿದ್ಯುನ್ಮಾನ, ಬಾನುಲಿ ಹಾಗೂ ಮುದ್ರಣ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತ ಡಾ.ಮಹೇಶ ವಾಳ್ವೇಕರ್ ಕಳೆದ ೪ ವರ್ಷ ೯ ತಿಂಗಳಿನಿಂದ , ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿಯವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ…

Read More

ಅಂತಹ ಮಾತುಗಳಿಗೆ ಜಿಎಸ್ಟಿ ಇಲ್ಲ..-ಸತೀಶ್

ರೆಸಾರ್ಟ್ ರಾಜಕೀಯ  ಹೊಸದೇನಲ್ಲ!” — ಸತೀಶ್ ಜಾರಕಿಹೊಳಿ ಎಲ್ಲ ಚುನಾವಣೆಗಳಿಗೂ ‘ರೆಸಾರ್ಟ್ ರೂಮ್’ ಕಾಯ್ದಿರಿಸಿದ ಸಂಸ್ಕೃತಿ – ಸಹಕಾರದಿಂದ ಪಾರ್ಟಿವರೆಗೂ ಎಲ್ಲೆಡೆ ಅದೇ ಆಟ! ಬೆಳಗಾವಿ:ರಾಜಕೀಯ ಬಿಸಿ ಮಾತುಗಳಿಗೆ ಹೆಸರುವಾಸಿಯಾದ ಲೋಕೋಪಯೋಗಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ರಾಜಕೀಯ ಮೈದಾನದಲ್ಲಿ ನಗೆಯ ಚಟಾಕಿ ಹಾರಿಸಿದ್ದಾರೆ.“ನಮ್ಮಲ್ಲಿ ಎಂಎಲ್‌ಎ ಮತ್ತು ಎಂಪಿ ಚುನಾವಣೆಯನ್ನು ಬಿಟ್ಟರೆ ಉಳಿದ ಎಲ್ಲ ಚುನಾವಣೆಯೂ ರೆಸಾರ್ಟ್ ರಾಜಕೀಯದ ಅರೆನಾದಲ್ಲೇ ನಡೆಯುತ್ತವೆ. ಇದು ಈಗ ಬೆಳಗಾವಿಯ ಹೊಸ ನಾರ್ಮಲ್!” ಎಂದು ಅವರು ಹೇಳಿದರು.ಮಾಧ್ಯಮದವರ…

Read More

ಜಾರಕಿಹೊಳಿ ತೆಕ್ಕೆಗೆ ಜಾರಿದ ಕಾಗೆ!

ಸಚಿವ ಸತೀಶ್ ಜಾರಕಿಹೊಳಿ ಮಧ್ಯಸ್ಥಿಕೆ. ಕಾಗವಾಡ ಕ್ಷೇತ್ರದ ಅವಿರೋಧ ಆಯ್ಕೆ – ಶಾಸಕ ಬಾಲಚಂದ್ರ ಜಾರಕಿಹೊಳಿ ಹುಕ್ಕೇರಿ ತಾಲೂಕಿಗೆ ಮಾತ್ರ ಸಿಮೀತವಾದ ಕತ್ತಿ ಪವರ್ ಬೆಳಗಾವಿ:ಜಾರಕಿಹೊಳಿ ಬಣದ ರಾಜಕೀಯ ಕೌಶಲ್ಯ ಮತ್ತೊಮ್ಮೆ ಬೆಳಗಿದೆ. ಜಿಲ್ಲೆಯ ಪಿಡಬ್ಲ್ಯೂಡಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಿಂದ ಕಾಗವಾಡ ಕ್ಷೇತ್ರದಲ್ಲಿ ನಡೆದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಆಯ್ಕೆಯಲ್ಲಿ ಶಾಸಕ ಭರಮಗೌಡ (ರಾಜು) ಕಾಗೆ ಅವರಿಗೆ ಅದೃಷ್ಟ ಒಲಿದಿದೆ.ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅರಭಾವಿ ಶಾಸಕ…

Read More

ಶತಮಾನ ಸಂಭ್ರಮದಲ್ಲಿ RSS ಪಥ ಸಂಚಲನ

ಬೆಳಗಾವಿ:‌ಶತಮಾನೋತ್ಸವದ ಘೋಷಿತ ವರ್ಷದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಬೆಳಗಾವಿ ನಗರ ಘಟಕದ ಪಥಸಂಚಲನವು ಇಂದು ಸಂಜೆ ನಗರದ ಹೃದಯಭಾಗವನ್ನು ಕೇಸರಿ ಬಣ್ಣದಿಂದ ತುಂಬಿತು. ಶಿಸ್ತುಬದ್ಧ ನಡಿಗೆ, ಸದ್ದಿಲ್ಲದ ಕ್ರಮ, ಗಣವೇಷದ ಘನತೆ, ಮತ್ತು ಸಾವಿರಾರು ಸ್ವಯಂಸೇವಕರ ಹೆಜ್ಜೆಗಾಲಿನ ತಾಳ — ಎಲ್ಲವೂ ಸೇರಿ ಅದು ಕೇವಲ ಪಥಸಂಚಲನವಾಗಿರದೆ, ಸಂಘದ ನೂರು ವರ್ಷಗಳ ಶಕ್ತಿಯ ಮತ್ತು ಶ್ರದ್ಧೆಯ ಸಜೀವ ಪ್ರದರ್ಶನವಾಯಿತು. *ಇತಿಹಾಸದ ನೂರು ವರ್ಷಗಳ ನೆನಪು*1925ರಲ್ಲಿ ನಾಗಪುರದಲ್ಲಿ ಹುಟ್ಟಿದ ಆರ್‌ಎಸ್‌ಎಸ್‌ ಇಂದು ನೂರು ವರ್ಷಗಳ ಪಯಣದಲ್ಲಿ ರಾಷ್ಟ್ರಸೇವೆಯ…

Read More

ಜಾರಕಿಹೊಳಿ ಸಿಡಿಲಿಗೆ ಕತ್ತಿ ಬಣ ತತ್ತರ..!!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ ಸಿಡಿಲಿಗೆ ಕತ್ತಿ ಬಣ ತತ್ತರ! — ತಾಲೂಕು ಗೆಲುವು ಸಾಕಾಗಲಿಲ್ಲ, ಜಿಲ್ಲಾ ಡಿಸಿಸಿ ಆರಂಭದಲ್ಲೇ ಹಿನ್ನೆಡೆ ಅನುಭವಿಸಿದ ಕತ್ತಿ ಬಣ. ಬೆಳಗಾವಿ ರಾಜಕೀಯ ಅಂಗಳದಲ್ಲಿ ಮತ್ತೊಮ್ಮೆ “ಜಾರಕಿಹೊಳಿ ಎಫೆಕ್ಟ್” ಸಿಡಿಲಿನಂತೆ ಬೀದಿಯಾಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಮೇಶ್ ಕತ್ತಿ ನೇತೃತ್ವದ ಬಣ ತಾಲೂಕು ಮಟ್ಟದಲ್ಲಿ ಅಲ್ಪ ಮುನ್ನಡೆ ಸಾಧಿಸಿದರೂ, ಜಿಲ್ಲಾ ಮಟ್ಟದಲ್ಲಿ ಜಾರಕಿಹೊಳಿ ಬ್ರದರ್ಸ್ ಬಲಕ್ಕೆ ತತ್ತರಿಸಿ ಹಿನ್ನಡೆ ಕಂಡಿದೆ. ಬಿಜೆಪಿಯ ರಮೇಶ್ ಜಾರಕಿಹೊಳಿ ಮತ್ತು ಕಾಂಗ್ರೆಸ್‌ನ ಸಚಿವ ಸತೀಶ್…

Read More

DCC ಚುನಾವಣೆ- ಜಾರಕಿಹೊಳಿ ಬಣದ ಭರ್ಜರಿ ವಿಶ್ವಾಸ!

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 13 ಅಭ್ಯರ್ಥಿಗಳ ಗೆಲುವು ಖಚಿತ – ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಣೆ *ಜಾರಕಿಹೊಳಿ ಕುಟುಂಬದ ಎರಡನೇ ಪೀಳಿಗೆಯ ರಾಜಕೀಯ ಎಂಟ್ರಿ: ರಾಹುಲ್ ಮತ್ತು ಅಮರನಾಥ್ ವೇದಿಕೆ ಪ್ರವೇಶ!* ಬೆಳಗಾವಿ:“ನಮ್ಮ ಬಣದ ಎಲ್ಲ 13 ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ – ಯಾವುದೇ ಅನುಮಾನವೇ ಇಲ್ಲ!” ಎಂದು ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯ ತಯಾರಿಯ ನಡುವೆ ಶನಿವಾರ ಬ್ಯಾಂಕಿನ ಸಭಾಂಗಣದಲ್ಲಿ ಆರು ಅಭ್ಯರ್ಥಿಗಳು…

Read More

ಡಿಸಿಸಿ ಅಖಾಡಕ್ಕೆ ಜೋಡೆತ್ತು…!

ಗ್ರಹಣ ಬಂದಾಗ ಪೂಜೆ ಮಾಡ್ತೀವಿ, ಆದರೆ ಕಣಕ್ಕಿಳಿಯದೇ ಇರೋದು ನಮಗೆ ಸರಿಯಲ್ಲ!’ — ಲಕ್ಷ್ಮಣ ಸವದಿ ಗುಂಪು ರಾಜಕಾರಣ ಇಲ್ಲ, ಸಹಕಾರ ಕ್ಷೇತ್ರಕ್ಕೆ ಹೊಸ ಉಸಿರು ಕೊಡೋಣ’ — ರಾಜು ಕಾಗೆ ಬೆಳಗಾವಿ:ಡಿಸಿಸಿ ಬ್ಯಾಂಕ್ ಚುನಾವಣೆಯ ರಣಭೇರಿಯಲ್ಲಿ, ಅಥಣಿ–ಕಾಗವಾಡದ ರಾಜಕೀಯ ಜೋಡೆತ್ತು ಮತ್ತೆ ವೇದಿಕೆ ಹಂಚಿಕೊಂಡಿದೆ.ಅಥಣಿಯಿಂದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಹಾಗೂ ಕಾಗವಾಡದಿಂದ ಶಾಸಕ ರಾಜು ಕಾಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದು, ಮಾಧ್ಯಮ ಎದುರು ಇಬ್ಬರೂ ತಮ್ಮದೇ ಶೈಲಿಯಲ್ಲಿ ರಾಜಕೀಯ ಸಂದೇಶ ನೀಡಿದ್ದಾರೆ. ಸೂರ್ಯ, ಚಂದ್ರನಿಗೆ…

Read More

ಜನಸೇವೆಯೇ ಧ್ಯೇಯ ಅಭಿವೃದ್ಧಿಯೇ ಪರಿಚಯ!

ಬೈಲಹೊಂಗಲದ ಹಿರಿಯ ನಾಯಕ , ಮಾಜಿ ಸಚಿವ ಶಿವಾನಂದ ಕೌಜಲಗಿ ಅವರ 86 ನೇ ಜನ್ಮದಿನ ವಿಶೇಷ. ಮಾತಿನಲ್ಲಿ ಮೃದು, ನಡೆಯಲ್ಲಿ ದೃಢತೆ* ರಾಜಕೀಯದಲ್ಲಿ ಶಿಸ್ತಿನ ನಾಯಕ* ಬೈಲಹೊಂಗಲ, ಅ. 9:ಸಾಧನೆಯ ಹಾದಿಯು ಶಾಂತವಾಗಿದ್ದರೂ, ಅದರ ಪ್ರಭಾವ ಜನಮನಗಳಲ್ಲಿ ಆಳವಾಗಿ ಮೂಡಿದೆ. ಬೈಲಹೊಂಗಲದ ರಾಜಕೀಯದಲ್ಲಿ ನಿಜವಾದ ವಿಕಾಸಮುಖಿ ನಾಯಕ ಎಂಬ ಹೆಸರನ್ನು ಗಳಿಸಿರುವ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರು ಇಂದು ತಮ್ಮ 86 ನೇ ಜನ್ಮದಿನವನ್ನು ಸರಳವಾಗಿ, ಕಾರ್ಯಕರ್ತರೊಂದಿಗೆ ಆಚರಿಸಿದರು. *ಶಿವಾನಂದ…

Read More

ಮತ್ತೇ RCU ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ…!

ಬೋರವೆಲ್ ವಾಹನ ಬಿಟ್ಟು ಪಲಾಯನ! RCU ವಿರುದ್ಧ ಠಾಣೆ ಮೆಟ್ಟಿಲು ತುಳಿದ ರೈತರು. *ಶಾಸಕರು ಬರುವಿಕೆಯ ದಾರಿ ಕಾಯ್ದು ಸುಸ್ತಾದ ರೈತರು.* ಬೆಳಗಾವಿ, ಹಿರೇಬಾಗೇವಾಡಿ:ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (RCU) ವಿರುದ್ಧ ಮತ್ತೆ ರೈತರ ಕೋಪ ಭುಗಿಲೆದ್ದಿದೆ.ಇಂದು ಮಧ್ಯಾಹ್ನ ಹಿರೇಬಾಗೇವಾಡಿ ಬಳಿ ರೈತರ ಜಮೀನಿನಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೇ ಬೋರವೆಲ್ ಕೊರೆಸುತ್ತಿದ್ದ RCUದವರು ರೈತರ ಬಆಕ್ರೋಶಕ್ಕೆ ಹೆದರಿ ಸ್ಥಳದಿಂದ ಪಲಾಯನ ಮಾಡಿದ ಘಟನೆ ನಡೆಯಿತು..ಸ್ಥಳಕ್ಕೆ ಧಾವಿಸಿದ ರೈತರು ಸಂಬಂಧಿದಿದವರನ್ನು ಪ್ರಶ್ನಿಸಿದ ಕ್ಷಣವೇ, ಬೋರವೆಲ್ ವಾಹನವನ್ನು ಅಲ್ಲಿಯೇ ಬಿಟ್ಟು ಕೆಲಸಗಾರರು…

Read More
error: Content is protected !!