Headlines

ಲ್ಯಾಪ್ಟಾಪ್ ಗುತ್ತಿಗೆದಾರರ ಜಗಳ- ಪಾಲಿಕೆಗೆ ಕಳಂಕ- ತನಿಖೆಗೆ ಆಯುಕ್ತರ `ಅಸ್ತು’

ಲ್ಯಾಪ್ಟಾಪ್ ಗುತ್ತಿಗೆದಾರರ ಜಗಳ
ಪಾಲಿಕೆಗೆ ಕಳಂಕ- ತನಿಖೆಗೆ ಆಯುಕ್ತರ `ಅಸ್ತು’

ಬೆಳಗಾವಿ.
ರಾಜ್ಯಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎಲ್ಲವೂ ಸರಿಹೋಯಿತು ಎನ್ನುವಷ್ಟರಲ್ಲಿ ಇಬ್ಬರು ಗುತ್ತಿಗೆದಾರರ ಅಂತರಿಕ ಜಗಳ ಪಾಲಿಕೆಯ ಆಡಳಿತ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗುತ್ತಿದೆ.
ಮಹಾನಗರ ಪಾಲಿಕೆಯಲ್ಲಿ ಲ್ಯಾಪ್ಟಾಪ್ ಖರೀದಿಗೆ ಸಂಬಂಧಿಸಿದಂತೆ ಇಬ್ಬರು ಗುತ್ತಿಗೆದಾರರ ನಡುವಿನ ಅಂತರಿಕ ಜಗಳ ಈಗ ಪಾಲಿಕೆ ಆಡಳಿತ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಗಂಭೀರ ದಕ್ಕೆಯನ್ನುಂಟು ಮಾಡಿದೆ. ಈ ಜಗಳ ಕೇವಲ ವೈಯಕ್ತಿಕ ಸ್ವಾರಸ್ಯಗಳ ತರ್ಕವಲ್ಲ. ಸಾರ್ವಜನಿಕ ಸಂಸ್ಥೆಯ ಮೌಲ್ಯಮಾಪನಕ್ಕೂ ಪ್ರಶ್ನೆ ಎಬ್ಬಿಸುವಂತಾಗಿದೆ.

ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಪಾಲಿಕೆ ಆಯುಕ್ತೆ ಶುಭ ಬಿ ಅವರು ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಪಾಲಿಕೆ ಮುಖ್ಯ ಲೆಕ್ಕಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ,

ಆದೇಶದಲ್ಲಿ ಏನಿದೆ..?
ಬೆಳಗಾವಿ ಮಹಾನಗರ ಪಾಲಿಕೆಯ ಶೇ 24.10 ರಡಿ 123 ಲ್ಯಾಪ್ ಟಾಪ್ ಖರೀದಿಸುವ ಕುರಿತು ಮೆ. ರಾಜೇಶ ಎಂಟರ್ಪ್ರೈಜಿಸ್, ಕಾಳಿ ಅಂಬ್ರಾಯಿ ಬೆಳಗಾವಿ ಇವರಿಗೆ ಅದೇಶ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಅವರು ಲ್ಯಾಪ್ ಟಾಪ್ಗಳನ್ನು ಸರಬರಾಜು ಮಾಡಿದ್ದರು. ಆದರೆ ಕಳೆದ ದಿ, 4 ರಂದು ಜರುಗಿದಲೆಕ್ಕಗಳ ಸ್ಥಾಯಿ ಸಮಿತಿ ಸಭೆಯಲ್ಲಿ ಲ್ಯಾಪಟಾಪ್ ಖರೀದಿಯಲ್ಲಿ ಲೋಪವಾಗಿದ್ದರ ಬಗ್ಗೆ ಗಂಭೀರ ಚಚರ್ೆ ನಡೆದಿತ್ತು.
ಇಲ್ಲಿ ಪ್ರತಿಯೊಂದು ಲ್ಯಾಪಟಾಪ್ಗೆ 35,363 ರೂ, ಇದ್ದು, ಅವರು ಅವುಗಳಿಗೆ 48,990 ರೂ ಸಂದಾಯ ಮಾಡಿದ್ದಾರೆ. ಅಷ್ಟೇ ಅಲ್ಲ ಉಪ ಆಯುಕ್ತ (ಆಡಳಿತ) ಇವರ ಶಾಖೆಯಿಂದ ಖರೀದಿ ಮಾಡಲಾದ ಲ್ಯಾಪಟಾಪ್ಗಳ ಬಿಲ್ಲುಗಳ ವೋಚರ್ಸ್ಗಳನ್ನು ಪ್ರಮಾಣೀಕರಿಸಿ ಸಂದಾಯ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಲೋಪದೋಷಗಳಿಂದ ಕೂಡಿರುವ ಮತ್ತು ಖರೀದಿಯಲ್ಲಿ ವ್ಯತ್ಯಾಸವಾಗಿರುವ ಕುರಿತು ಸಂಬಂಧಿತರಿಂದ ಕಡತಗಳನ್ನು ಪಡೆದು ಸಮಗ್ರ ತನಿಖೆ ನಡೆಸಿ ತನಿಖಾ ವರದಿಯನ್ನು ಸಲ್ಲಿಸಬೇಕೆಂದು ಆಯುಕ್ತರು ಆದೇಶ ಪತ್ರದಲ್ಲಿ ವಿವರಿಸಿದ್ದಾರೆ.

ಗುತ್ತಿಗೆದಾರರ ‘ಲ್ಯಾಪ್ಟಾಪ್’ ಒಳಕಚ್ಚಾಟ
ಪಾಲಿಕೆಯಲ್ಲಿ ಲ್ಯಾಪ್ಟಾಪ್ ಖರೀದಿಗೆ ಸಂಬಂಧಿಸಿದ ಗುತ್ತಿಗೆ ಪ್ರಕ್ರಿಯೆಯಲ್ಲಿ ಇಬ್ಬರು ಗುತ್ತಿಗೆದಾರರು ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ಇಳಿದಿದ್ದು ಈಗ ಹೊಸದೇನಲ್ಲ.
ಗಮನಿಸಬೇಕಾದ ಸಂಗತಿ ಎಂದರೆ, ಇಲ್ಲಿ ಗುತ್ತಿಗೆದಾರರು ಪಾಲಿಕೆಯ ಹೆಗಲ ಮೇಲೆ ಬಂದೂಕು ಇಟ್ಟು ಹೊಡೆಯತೊಡಗಿದ್ದಾರೆ, ಇದು ಪಾಲಿಕೆಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಇನ್ನೂ ಅಚ್ಚರಿಯ ಸಂಗತಿ ಎಂದರೆ, ಇಲ್ಲಿ ಈ ಗುತ್ತಿಗೆದಾರರ ಹಿಂದೆ ಕಾಣದ `ಕೈ’ಗಳು ಕೆಲಸ ಮಾಡುತ್ತಿವೆ. ಇಲ್ಲಿ ಕಳೆದ ಕೆಲ ದಿನಗಳ ಹಿಂದೆ ಇದೇ ಹಗರಣಕ್ಕೆ ಸಂಬಂಧಿಸಿದಂತೆ ಕೆಲವರು ಪಾಲಿಕೆಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು, ಅದಾದ ನಂತರ ಇದಕ್ಕೆ ಪ್ರತಿಯಾಗಿ ಒಬ್ಬರ ವಿರುದ್ಧ ಕೆಲವರು ದಾಖಲೆ ಮುಂದಿಟ್ಟುಕೊಂಡು ಗಂಭೀರ ಆರೋಪ ಮಾಡಿದ್ದರು.

ಇಲ್ಲಿ ಎರಡೂ ಕಡೆಯವರು ಪಾಲಿಕೆಯದ್ದೇ ತಪ್ಪು ಎನ್ನುವ ರೀತಿಯಲ್ಲಿ ವಾದ ಮಾಡಿದ್ದು ಈಗ ವಿಭಿನ್ನ ಚರ್ಚೆಗೆ ಕಾರಣವಾಗಿದೆ.

ತಪ್ಪಿತಸ್ಥರ ವಿರುದ್ಧ ಕ್ರಮ..!


ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಾಥಮಿಕ ಹಂತದಲ್ಲಿಯೇ ಪ್ರಕರಣದ ತನಿಖೆಗೆ ಆದೇಶ ಮಾಡಲಾಗಿದೆ. ಆರೋಪಗಳು ಸತ್ಯವೆಂದು ದೃಢಪಟ್ಟರೆ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಹಣದ ಯಾವುದೇ ದುರ್ಬಳಕೆ, ಯಾವುದೇ ರೀತಿಯ ಅವ್ಯವಹಾರಗಳನ್ನು ಸಹಿಸುವುದಿಲ್ಲ. ಪ್ರಾಮಾಣಿಕ ತನಿಖೆಯ ಮೂಲಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು.

ಶುಭ ಬಿ. ಆಯುಕ್ತರು.ಮಹಾನಗರ ಪಾಲಿಕೆ, ಬೆಳಗಾವಿ.

Leave a Reply

Your email address will not be published. Required fields are marked *

error: Content is protected !!