ದಡ್ಡ’ ಎನ್ನುವ ಲೇಬಲ್‌ಗೆ ಧಿಕ್ಕಾರ: ಮಕ್ಕಳಲ್ಲಿ ಚೈತನ್ಯದ ಚಿಲುಮೆ!

Oplus_16777216

ದಡ್ಡ’ ಎನ್ನುವ ಲೇಬಲ್‌ಗೆ ಧಿಕ್ಕಾರ: ಮಕ್ಕಳಲ್ಲಿ ಚೈತನ್ಯದ ಚಿಲುಮೆ!”

ಮಾನಸಿಕ ಸರಪಳಿಯನ್ನು ಮುರಿದು… ಕಲ್ಯಾಣ ಮಕ್ಕಳಿಗೆ ಚೇತನದ ಕರೆ!”

  • ವಿಶೇಷ ವರದಿ

“ನಮ್ಮ ಮಕ್ಕಳು ದಡ್ಡರಲ್ಲ! ದೌರ್ಬಲ್ಯದ ಈ ಬಿರುಕು ನಿಮ್ಮಲ್ಲಲ್ಲ, ಈ ವ್ಯವಸ್ಥೆಯೊಳಗೆ!” ಎಂದು ಡಾ. ಗುರುರಾಜ ಕರಜಗಿ ಅವರು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.
‘ಸಂಯುಕ್ತ ಕರ್ನಾಟಕ’ ಕಲಬುರ್ಗಿ ಆವೃತ್ತಿಯ ಬೆಳ್ಳಿಹಬ್ಬ ಕಲ್ಯಾಣ ಸಿರಿ’*ಯ ಅಂಗವಾಗಿ ಆಯೋಜಿಸಲಾಗಿದ್ದ ‘ನಮ್ಮ ಮಕ್ಕಳು – ನಮ್ಮ ಭವಿಷ್ಯ’ ವಿಚಾರಗೋಷ್ಠಿಯಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಅತ್ಯಂತ ಮನೋವೈಜ್ಞಾನಿಕ, ಚೈತನ್ಯಮಯ ಸಂವಾದ ನಡೆಸಿದರು.

Oplus_16777216

“ಅಯ್ಯೋ ಮಾರಾಯಾ… ಹಿಂದುಳಿದ ಜಿಲ್ಲೆಯ ಮಾತು ಕೇಳಿ ಕೇಳಿ ಕಿವಿಗೆ ಕೊಳೆ! ಶೈಕ್ಷಣಿಕ ಹಿಂದುಳಿತವೆಂಬ ತಗೆಯೇ ತಪ್ಪು. ಇದು ನೀವು ನಂಬಬಾರದ ಸುಳ್ಳು. ಇದು ನಿಮ್ಮಲ್ಲಿರುವ ಶಕ್ತಿ ಅಡಗಿಸುವ ಸರಪಳಿಯೊಂದು!” — ಡಾ. ಕರಜಗಿ

ಸರಪಳಿಯಿಂದ ಕಟ್ಟಲಾದ ಆನೆ ಕಥೆ

*ಕರಜಗಿ ಅವರು ಮಾತನಾಡುವ ಶೈಲಿ ವಿದ್ಯಾರ್ಥಿಗಳಲ್ಲಿ ಮನಸೂರೆಗೊಳ್ಳುತ್ತಲೇ ಹೀಗೆ ಒಂದು ಕಥೆ ಹೇಳಿದರು:

“ಒಂದು ಆನೆ ಮರಿ, ಸರಪಳಿಯಿಂದ ಕಟ್ಟಲ್ಪಟ್ಟಿತ್ತು. ಅಷ್ಟರಲ್ಲಿ ಅದು ತಲೆದುಡಿದು ಬಿಡುವ ಯತ್ನ ಮಾಡಿತು. ಆಗಲಿಲ್ಲ. ಸಮಯ ಕಳೆದಂತೆ ಅದು ಬೆಳೆದರೂ ಸರಪಳಿಯ ಭಯದಿಂದ ಮುಂದೆ ಹೋಗಲಿಲ್ಲ. ಕೇವಲ ಹಗ್ಗಕ್ಕೂ ಬದ್ದವಾಯ್ತು! ನಿಜಕ್ಕೂ ಅದು ಈಗ ಮುಕ್ತ, ಆದರೆ ತಲೆಗಿದ್ದ ಬಂಧನ ಅದು ಮುಂದೆ ನಡೆಯದಂತೆ ತಡೆಸಿತ್ತು!”

“ಇದೇ ಸ್ಥಿತಿಗೆ ಕಲ್ಯಾಣ ಕರ್ನಾಟಕದ ಮಕ್ಕಳು ಒಳಗಾಗಬಾರದು,” ಎಂದು ಅವರು ಉತ್ಸಾಹಪೂರಿತ ಉದಾಹರಣೆಗಳ ಮೂಲಕ ಮನಸ್ಸಿಗೆ ಮುದ್ರೆಯಾಗುವಂತೆ ಸಮರ್ಥಿಸಿದ ಮಾತುಗಳು ಅಬ್ಬರಗೊಂಡವು.
ವಿದ್ಯಾರ್ಥಿಗಳ ಪ್ರಶ್ನೆಗೆ ಸಾತ್ವಿಕ ಸಿಟ್ಟು!

ಪಿಯುಸಿ ವಿದ್ಯಾರ್ಥಿ ರೇವಣಗೌಡ ಪಾಟೀಲ ಅವರ ‘ಶೈಕ್ಷಣಿಕ ಹಿಂದುಳಿತ’ದ ಪ್ರಶ್ನೆ ಕೇಳುತ್ತಿದ್ದಂತೆಯೇ, ಡಾ. ಕರಜಗಿ ಅವರ ಕಣ್ಣು ಜ್ವಲಿಸಿದವು. ಅವರು ಈ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. “ಈ ತರಹದ ಅರ್ಥಹೀನ ಟ್ಯಾಗ್‌ಗಳನ್ನು ತಳ್ಳಿ ಹಾಕಿ, ಹೊಸ ಹಾದಿಗೆ ಬನ್ನಿ ಎಂದು ಕರೆ ನೀಡಿದರು.

ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ ಹಾರನಹಳ್ಳಿ, ಧರ್ಮದರ್ಶಿಗಳಾದ ಯು.ಬಿ. ವೆಂಕಟೇಶ್ ಮತ್ತು ಡಿ.ಆರ್. ಪಾಟೀಲ ಹಾಜರಿದ್ದರು. ಸಂಪಾದಕೀಯ ಸಲಹೆಗಾರ ಹುಣಸವಾಡಿ ರಾಜನ್ ಕಾರ್ಯಕ್ರಮ ನಿರೂಪಿಸಿದರು.

ಕಲ್ಯಾಣ ಕರ್ನಾಟಕದ ಮಕ್ಕಳಿಗೆ ‘ಹಿಂದುಳಿದ’ ಎಂಬ ಕಲ್ಪಿತ ಲೇಬಲ್ ಹಚ್ಚುವ ದುರ್ಬುದ್ಧಿಯಿಂದ ಮುಕ್ತಗೊಳ್ಳಲು ಈ ವಿಚಾರಗೋಷ್ಠಿಯು ಪ್ರೇರಣೆಯ ಬೆಳಕು ಹೊತ್ತಿತ್ತು.
ಡಾ. ಕರಜಗಿಯ ಮಾತು ಶಬ್ದವಲ್ಲ — ಅದು ಮನಸ್ಸಿಗೆ ಹೊಕ್ಕಿರುವ ಎಚ್ಚರಿಕೆಗೆ ಸಮಾನ.


Leave a Reply

Your email address will not be published. Required fields are marked *

error: Content is protected !!