Headlines

ಖಾಸಗಿ ಶಿಕ್ಷಣ ಸಂಸ್ಥೆಗಳ ಬಾಡಿಗೆ ರಹಸ್ಯ ಬಿಚ್ಚಿಟ್ಟ ಉಪಮೇಯರ್ ..!

ಭೂಮಿಯ ಲಾಭ, ಪಾಲಿಕೆಗೆ ನಷ್ಟ!”

ಖಾಸಗಿ ಶಿಕ್ಷಣ ಸಂಸ್ಥೆಗಳ ‘ರಹಸ್ಯ’ ಬಾಡಿಗೆ ತಪ್ಪು; ಕ್ರಮಕ್ಕೆ ದಿಟ್ಟ ಸೂಚನೆ

ಬೆಳಗಾವಿ:

ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಿಕೆಗೆ ಭೂ ಬಾಡಿಗೆ (Ground Rent) ಪಾವತಿಸದೆ, ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿ ಲಾಭ ಮಾಡಿಕೊಳ್ಳುತ್ತಿರುವ ಬಗ್ಗೆ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

ಉಪಮೇಯರ್ ವಾಣಿ ಜೋಶಿ ಅವರು ತಮ್ಮ ವಾರ್ಡ್‌ನ ಮೂರು ಸಂಸ್ಥೆಗಳ ಉದಾಹರಣೆ ನೀಡಿ, “ಇದು ಕಾನೂನುಬಾಹಿರ. ಇವುಗಳಿಗೆ ನೋಟಿಸ್ ನೀಡಿ ಕ್ರಮ ತೆಗೆದುಕೊಳ್ಳಬೇಕು ಎಂದರು.. ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕೇ ಅವರು, “ಇದೇ ಹಾದಿಯಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳ ಚರಿತ್ರೆ ಪರಿಶೀಲಿಸಿದರೆ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ಆದಾಯ ಬರುವ ಸಾಧ್ಯತೆ ಇದೆ,” ಎಂದು ಅಭಿಪ್ರಾಯಪಟ್ಟರು.

ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಅವರು ಈ ಪ್ರಸ್ತಾಪವನ್ನು ಬೆಂಬಲಿಸಿ, “ಇಂತಹ ನಿರ್ಲಕ್ಷ್ಯದಿಂದ ಪಾಲಿಕೆ ಬಡ ಪಾಲಿಕೆಯಾಗುತ್ತಿದೆ,” ಎಂದರು . ಅಂತಿಮವಾಗಿ ಮೇಯರ್ ಅವರು, ಪಾಲಿಕೆ ವ್ಯಾಪ್ತಿಯ ಎಲ್ಲಾ ಶಿಕ್ಷಣ ಸಂಸ್ಥೆಗಳ ಭೂ ಬಾಡಿಗೆ ದಾಖಲೆ ಪರಿಶೀಲನೆ ಮಾಡಿ, ತೆರಿಗೆ ತಪ್ಪು ಪತ್ತೆಯಾದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಕುಂಟ ಕುದುರೆ ಕೊಟ್ಟು ಯುದ್ಧ ಗೆಲ್ಲೋಣವೆ?”

ಇದೇ ಸಭೆಯಲ್ಲಿ ಅಧಿಕಾರಿಗಳ ದೌರ್ಬಲ್ಯತೆಯ ಬಗ್ಗೆ ತೀವ್ರವಾಗಿ ಟೀಕಿಸಿದ ಹನುಮಂತ ಕೊಂಗಾಲಿ, ಟಿಳಕವಾಡಿ ಕ್ಲಬ್ ವಿವಾದದ ಹೊಣೆಗೆ, “ಕುಂಟ ಕುದುರೆ ಕೊಟ್ಟು ಯುದ್ಧ ಗೆಲ್ಲೋಣವೆ?” ಎಂಬ ವ್ಯಂಗ್ಯವ್ಯಾಖ್ಯಾನ ನೀಡಿದರು. ಅಧಿಕಾರಿಗಳ ಸಮರ್ಥನೆಯ ಕೊರತೆಯಿಂದ ಪಾಲಿಕೆಗೆ ಕಾನೂನು ಹೋರಾಟದಲ್ಲಿಯೂ ನಷ್ಟವಾಗುತ್ತಿದೆ ಎಂಬ ಸಂದೇಶವನ್ನು ಅವರು ನೀಡಿದರು.

Leave a Reply

Your email address will not be published. Required fields are marked *

error: Content is protected !!