ಬೆಳಗಾವಿಯಲ್ಲಿ ವಿಭಿನ್ನ ಸಂಸ್ಕೃತಿಯ ಶುಭಾರಂಭ

Oplus_16777216

ಬೆಳಗಾವಿ
ಗಡಿನಾಡ ಬೆಳಗಾವಿಯಲ್ಲಿ ನಡೆದ ‘ಶುಭಾರಂಭ’ ಬೃಹತ್ ವಧು-ವರ ಸಮಾವೇಶವು, ಕೇವಲ ಸಂಗಾತಿ ಹುಡುಕುವ ವೇದಿಕೆಯಾಗಿರದೆ, ಸಂಸ್ಕೃತಿ, ಸಹಬಾಳ್ವೆ ಹಾಗೂ ಸಾಮಾಜಿಕ ಜವಾಬ್ದಾರಿ ನೆನೆಪಿಸುವ ಸಾಂಸ್ಕೃತಿಕ ತಳಹದಿಯಾಯಿತು,

ಬೆಳಗಾವಿ ಮಹಾನಗರ ಪಾಲಿಕೆ ಉಪಮೇಯರ್ ವಾಣಿ ಜೋಶಿ ಅವರು ಸಸಿಗೆ ನೀರು ಉಣಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮದುವೆ ಎಂದರೆ ಕೇವಲ ಜೋಡಿ ಅಲ್ಲ. ಅದು ಎರಡು ಕುಟುಂಬಗಳ ಒಗ್ಗೂಡಿಕೆ. ಒಳ್ಳೆಯ ಜೀವನಕ್ಕೆ ಒಳ್ಳೆಯ ಮನಸ್ಸಿನ ಜೊತೆ ಒಳ್ಳೆಯ ಸಂಗಾತಿ ಇರಬೇಕು. ಅದು ಸ್ವರ್ಗದ ದಾರಿಗೆ ಸಮಾನ ಎಂದರು.

ಮದುವೆಯನ್ನು ಗಂಭೀರ ಮತ್ತು ಭವಿಷ್ಯ ನಿರ್ಣಯದ ಬಾಹ್ಯಚಿಹ್ನೆಯಾಗಿ ಅವರು ವಣರ್ಿಸಿದರು. ಇಂದಿನ ಸಮಾಜದಲ್ಲಿ ವಿಚ್ಛೇದನಗಳ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕದ ಸಂಗತಿ. ಆದರೆ ಮದುವೆಯು ಮನಸ್ಸುಗಳ ಸಂಕೋಲೆ ಆಗಬೇಕು. ಮೌನದಲ್ಲಿ ಸಮಜಾಯಿಷಿ, ನೋಟದಲ್ಲಿ ಬಾಂಧವ್ಯ ಮತ್ತು ಮಾತಿನಲ್ಲಿ ಗೌರವ ಇದ್ದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಉಪಮೇಯರ್ ಜೋಷಿ ಹೇಳಿದರು.

ಸಮಾನತೆಗೂ ಸಂಕೇತವಾದ ವೇದಿಕೆ
ಮಂಜುನಾಥ್ ಗಡ್ಡೆನ್ನವರ್ ನೇತೃತ್ವದ ‘ಶುಭಾರಂಭ ವಧು ವರ ವೇದಿಕೆ’ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದು ಸರ್ವಧರ್ಮ ಸಮಾನತೆ, ಸಂಸ್ಕೃತಿ ಸಮನ್ವಯ ಹಾಗೂ ಸಾಮಾಜಿಕ ಹಿತದ ದೃಷ್ಟಿಯಿಂದ ಗಮನ ಸೆಳೆದ ಕಾರ್ಯಕ್ರಮವಾಯಿತು.
ಸಮಾವೇಶದಲ್ಲಿ ನೂರಾರು ಯುವಕ-ಯುವತಿಯರು ಪಾಲ್ಗೊಂಡಿದ್ದು, ತಮ್ಮ ತಮ್ಮ ಜೀವನ ಸಂಗಾತಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆಸಿದರು. ಪಾಲಕರೂ ತಮ್ಮ ಮಕ್ಕಳ ಭವಿಷ್ಯದ ಭದ್ರತೆಗೆ ಧನ್ಯವಾದ ವ್ಯಕ್ತಪಡಿಸಿದರು.
ಸಾಯಿಕುಮಾರ್ ಮಳಲಗಿ, ದೀಪಾ ಜಾಧವ್, ಧನಶ್ರೀ ಧೆಗಾಸ್ಕರ್, ರಾಜು ದಿವಟಗಿ, ಯೋಗೇಶ್ ಹವಳ, ರುದ್ರಪ್ಪ ಬೋಗುರ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಿದ್ದರು.ಸುನಿತಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!