ಬೆಂಗಳೂರು.
ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮಂಗೇಶ್ ಪವಾರ್ ಮತ್ತು ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿ ತಡೆಯಾಜ್ಞೆ ಮತ್ತೇಮುಂದುವರೆದಿದೆ.

ಹೈಕೋರ್ಟ್ ನಲ್ಲಿ ಇಂದು ನಡೆದ ವಿಚಾರಣೆ ನಂತರ ತಡೆಯಾಜ್ಞೆ ಯನ್ನು ಬರುವ ದಿ.28 ರವರೆಗೆ ವಿಸ್ತರಣೆ ಯಾಗಿದೆ.
ರಾಜ್ಯ ಸರ್ಕಾರದ ಪರ ಹಾಜರಾಗಿದ್ದ ವಕೀಲರು ಆಕ್ಷೇಪಣೆ ಸಲ್ಲಿಸಲು ಸಮಯ ಕೇಳಿದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ಬು ಮುಂದೂಡಿದರು. ಈ ಹಿನ್ನೆಲೆಯಲ್ಲಿ ಬ ಬೆಳಗಾವಿ ಮೇಯರ್ ಮತ್ತು ನಗರಸೇವಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಮೇಯರ್ ಮತ್ತುನಗರಸೇವಕರಪರವಾಗಿ ಹೈಕೋರ್ಟ ನ್ಯಾಯವಾದಿ ಶಾಂತನಗೌಡರ ಮತ್ತು ಬೆಳಗಾವಿ ಹಿರಿಯ ವಕೀಲ ರವಿರಾಜ ಪಾಟೀಲ ವಕಾಲತ್ತು ವಹಿಸಿದ್ದರು.

