ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ ಸಂಧಾನ ರಾಜಕೀಯ ಯಶಸ್ವಿ

ಬೆಳಗಾವಿ:

ಜಿಲ್ಲೆಯ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್ ಚುನಾವಣೆಯನ್ನು ತೀವ್ರಗಂಭೀರವಾಗಿ ಪರಿಗಣಿಸಿರುವ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, “ಅವಿರೋಧ ಆಯ್ಕೆ” ಎಂಬ ಗುರಿಯನ್ನು ಸಾಧಿಸಲು ರಾಜಕೀಯ ಆಟವಾಡುತ್ತಿದ್ದಾರೆ.
ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಮಹತ್ವದ ಸಂಧಾನ ಸಭೆಯಲ್ಲಿ ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅವರೊಂದಿಗೆ ಬಾಲಚಂದ್ರ ಜಾರಕಿಹೊಳಿ ಸುದೀರ್ಘ ಚರ್ಚೆ ನಡೆಸಿದರು.

ಅಕ್ಟೋಬರ್ 19ರಂದು ನಡೆಯಲಿರುವ ಈ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ ಕನಿಷ್ಠ 12 ಸ್ಥಾನಗಳನ್ನು ಗೆಲ್ಲಿಸುವ ದಿಟ್ಟ ತಂತ್ರ ಅವರು ಹಾಕಿಕೊಂಡಿದ್ದಾರೆ.
ಅವಿರೋಧ ಆಯ್ಕೆಗೆ ತೂಕ
ಖಾನಾಪುರ ಕ್ಷೇತ್ರದಲ್ಲಿ ಹಾಲಿ ನಿರ್ದೇಶಕ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲರನ್ನು ಅವಿರೋಧವಾಗಿ ಆಯ್ಕೆ ಮಾಡಿಸುವ ಉದ್ದೇಶದಿಂದ, ಸ್ಪರ್ಧೆಗೆ ಅಂತ್ಯ ಹಾಕಲು ಹಟ್ಟಿಹೊಳಿ ಅವರನ್ನು ಮನವೊಲಿಸುವಲ್ಲಿ ಬಾಲಚಂದ್ರ ಮತ್ತು ಸಚಿವ ಸತೀಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಸಂಘರ್ಷಕ್ಕಿಂತ ಸಂಧಾನವೇ ಮೇಲುಗೈ ಸಾಧಿಸಿದೆ.

ಪಕ್ಷಾತೀತ ಬಾಂಧವ್ಯ
ಚುನಾವಣೆಯ ಸ್ವರೂಪ ಪಕ್ಷಾತೀತವಾದರೂ, ತಮ್ಮ ಬಣದ ಅಭ್ಯರ್ಥಿಗಳನ್ನು ಗೆಲ್ಲಿಸುವ ಧ್ಯೇಯದಿಂದ ಬಾಲಚಂದ್ರ ಜಾರಕಿಹೊಳಿ ಇತರೆ ಪಕ್ಷಗಳ ಮುಖಂಡರ ಸಹಕಾರ ಪಡೆಯುತ್ತಿದ್ದಾರೆ. ಹಲಗೇಕರ ಮತ್ತು ಹಟ್ಟಿಹೊಳಿ ಮನಸ್ಸು ಗೆದ್ದ ಅವರು, ಅರವಿಂದ ಪಾಟೀಲರ ಅವಿರೋಧ ಆಯ್ಕೆಗೆ ಕಾರಣರಾಗಿದ್ದಾರೆ..
ಈ ಮಹತ್ವದ ಚರ್ಚೆಗೆ ಖಾನಾಪುರ ಬ್ಲಾಕ್ ಬಿಜೆಪಿ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ, ಮುಖಂಡರಾದ ಪ್ರಮೋದ ಕೋಚಾರಿ, ಸಂಜಯ ಕೊಬಲ, ಧನಶ್ರೀ ಸರದೇಸಾಯಿ ಸೇರಿದಂತೆ ಪಿಕೆಪಿಎಸ್ ಅಧ್ಯಕ್ಷರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!