ಅಧಿವೇಶನದೊಳಗೆ ಪತ್ರಕರ್ತರ ಭವನ ಕಾಮಗಾರಿ ಆರಂಭ

Oplus_16908288

ಪತ್ರಕರ್ತರ ಭವನಕ್ಕೆ 9 ಕೋಟಿ 90 ಲಕ್ಷ ರೂ ಮಂಜೂರು ಮಾಡಿಸಿದ ಸಚಿವ ಸತೀಶ ಜಾರಕಿಹೊಳಿ.

ವಾರ್ತಾ ಇಲಾಖೆ ಅಧೀನದಲ್ಲಿ ಪತ್ರಕರ್ತರ ಭವನ ನಿರ್ಮಾಣ.

ಡಿಸೆಂಬರ ಅಧಿವೇಶನ ಸಂದರ್ಭದಲ್ಲಿ ಸಿಎಂರಿಂ ಕಾಮಗಾರಿಗೆ ಪೂಜೆ

ಸಚಿವ ಜಾರಕಿಹೊಳಿ ಅವರನ್ನು ಅಭಿನಂದಿಸಿದ ಬೆಳಗಾವಿ ಪತ್ರಕರ್ತರ ( ಮುದ್ರಣ) ಸಂಘ.

ಬೆಳಗಾವಿ

ಬೆಳಗಾವಿ ಪತ್ರಕರ್ತರ ಭವನಕ್ಕೆ 9 ಕೋಟಿ 90 ಲಕ್ಷ ರೂ ಮಂಜೂರಾತಿ ಸಿಕ್ಕಿದ್ದು, ಅಧಿವೇಶನದಲ್ಲೇ‌ ಕಟ್ಟಡ ಕಾಮಗಾರಿ ಆರಂಭಿಸುವಂತೆ ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಬೆಳಗಾವಿ ಪತ್ರಕರ್ತರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಸನ್ಮಾನಿಸಲಾಯಿತು.

ಪತ್ರಕರ್ತರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಪತ್ರಕರ್ತರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ವಿಲಾಸ ಜೋಶಿ, ನೌಶಾದ್ ಬಿಜಾಪುರ, ಶ್ರೀಶೈಲ ಮಠದ, ಮುನ್ನಾ ಬಾಗವಾನ, ರವೀಂದ್ರ ಉಪ್ಪಾರ, ಲೂಯಿಸ್ ರಾಡ್ರಿಗ್ಸ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!