Headlines

ಬೆಳಗಾವಿ ಬಿಜೆಪಿ ಬಿ ಫಾರ್ಮಮಾಲಿಕ ನಾನಲ್ಲ..!

ಬೆಳಗಾವಿ.
ಕರಿಮಣಿ ಮಾಲಿಕ ನಾನಲ್ಲ ಎನ್ನುವಂತೆ ಜನಪ್ರೀಯ ಹಾಡಿನಂತೆ ಬೆಳಗಾವಿ ಲೋಕಸಮರದ ಬಿಜೆಪಿಯ ಆ ಬಿ ಫಾರ್ಮನ ಮಾಲಿಕನನ್ನು ಬದಲಾಯಿಸಿ ಎನ್ನುವ ಕೂಗನ್ನು ಎಬ್ಬಿಸಿದ್ದಾರೆ.
ಸಧ್ಯ ಬೆಂಗಳೂರಿನವರು ಗೊತ್ತು ಮಾಡಿದ ಬಿ ಫಾರ್ಮ ಮಾಲಿಕನನ್ನು ಬೆಳಗಾವಿಗರು ಒಪ್ಪುವುದಿಲ್ಲ. ಆದ್ದರಿಂದ ಬೆಳಗಾವಿಗರನ್ನೇ ಅದರ ಮಾಲಿಕರನ್ನಾಗಿ ಮಾಡಿ ಎನ್ನುವ ಧ್ವನಿಯನ್ನು ಬೆಂಗಳುರು ಮತ್ತು ದೆಹಲಿಗೆ ಮುಟ್ಟಿಸುವ ಕೆಲಸ ಮಾಡುತ್ತಿದ್ದಾರೆ,

ಬೆಳಗಾವಿ ಲೋಕಸಮರದಲ್ಲಿ ಬಿಜೆಪಿಯ ಬಿ ಫಾರ್ಮನ ಮಾಲಿಕನ ಆಯ್ಕೆಗೆ ಕೊನೆ ಕ್ಷಣದ ಕಸರತ್ತು ನಡೆದಿದೆ, ಬೆಳಗಾವಿಯ ತಿನಿಸು ಕಟ್ಟೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ, ಕಳೆದ ದಿನವಷ್ಟೇ ಬಿಜೆಪಿ ಸೇರ್ಪಡೆಗೊಂಡ ಬೈಲಹೊಂಗಲದ ವಿಶ್ವನಾಥ ಪಾಟೀಲ ಮುಂತಾದವರು ಸೇರಿ ಆ ಮಾಲಿಕನ ಬಗ್ಗೆಯೇ ತಲೆಕೆಡಿಸಿಕೊಂಡಿದ್ದಾರೆ,

ಎಲ್ಲೆಡೆ ಬೆಳಗಾವಿ ಲೋಕಸಮರಕ್ಕೆ ಹುಬ್ಬಳ್ಳಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಂತಿಮ ಎನ್ನುವಾಗಲೇ ಅದು ಇನ್ನೂ ಪಕ್ಕಾ ಅಲ್ಲ ಎನ್ನುವ ಮಾಹಿತಿಯೂ ಹೊರಬಿದ್ದಿದೆ..

Leave a Reply

Your email address will not be published. Required fields are marked *

error: Content is protected !!