ಹೈದರಾಬಾದ್. ಕರ್ನಾಟಕದ ಬೆಳಗಾವಿ ದಕ್ಷಿಣ ಮತಕ್ಷೇತ್ರ ಶಾಸಕ ಅಭಯ ಪಾಟೀಲರು ಹೈದ್ರಾಬಾದ್ ನಲ್ಲೂ ಹವಾ ಮಾಡುತ್ತಿದ್ದಾರೆ.
ಪಕ್ಷದ ಆದೇಶದಂತೆ ತೆರಳಿರುವ ಅವರು ಅಲ್ಲಿನ ಮುಖಂಡರೊಂದಿಗೆ ಚರ್ಚೆ ನಡೆಸಿಬಚುನಾವಣೆ ರಣನೀತಿ ರೂಪಿಸುತ್ತಿದ್ದಾರೆ.
ಅವರು ಇಂದು ಹೈದರಾಬಾದ್ನಲ್ಲಿರುವ ಬಿಜೆಪಿ ಶಾಸಕ ರಾಜಾಸಿಂಗ್ ಅವರ ನಿವಾಸದಲ್ಲಿ ಭೇಟಿಯಾಗಿ, ಮುಂಬರುವ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚಿಸಿದರು

ನಿರ್ಮಲ್ ಶಾಸಕ ಹಾಗೂ ಬಿಜೆಪಿ ಮುಖಂಡ ಅಲೆಟಿ ಮಹೇಶ್ವರ ರೆಡ್ಡಿ, ಹೈದರಾಬಾದ್ ಲೋಕಸಭಾ ಪ್ರಭಾರಿ ಅಟ್ಲೂರಿ ರಾಮಕೃಷ್ಣ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

ಇದೆ ವೇಳೆ ಅಭಯ ಪಾಟೀಲರು ಮಾಧ್ಯಮದವರೊಂದಿಗೆ ಮಾತನಾಡಿ ತೆಲಂಗಾಣ ರಾಜ್ಯದಲ್ಲಿ ಮುಂಬರುವ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸಲಿದೆ ಎಂದು ಭವಿಷ್ಯ ನುಡಿದರು